Friday, June 26, 2009

"ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ಯಾವ ಇಸ್ಕೂಲು ಗುರು ನೀನು ಓದಿದ್ದು ಅಂತ ಸರ್ಕಾರದ ಹಿರಿಯ ಅಧಿಕಾರಿಯನ್ನು ಕೋಪದಿಂದ ಕೇಳಿದ ಲೋಕೋಪಯೋಗಿ ಸಚಿವ ರೇವಣ್ಣ, ಇಲಾಖೆಯ ಮಂತ್ರಿಯ ಪ್ರಶ್ನೆಯಿಂದ ಆ ಕ್ಷಣಕ್ಕೆ ದಂಗಾದ ಹಿರಿಯ ಅಧಿಕಾರಿ ಮಂತ್ರಿಗಳು ಗರಂ ಆಗಿದ್ದಾರೆ ಅಂತ ಹ್ಯಾಪ ಮೋರೆ ಹಾಕಿಕೊಂಡು ಸುಮ್ಮನೇ ಇದ್ದ, ಮುಂದುವರೆದ ರೇವಣ್ಣ ಅದೇ ಗುರು ಕೇಳಿದ್ದು ಯಾವ ಇಸ್ಕೂಲು ತಾವು ಓದಿದ್ದು ಅಂದ,

"ಸೆಶನ್ ನಲ್ಲಿ ಯಾವನೋ ಪ್ರಶ್ನೆ ಕೇಳಿದ ಅಂತ ನೀನು ಹಿಂಗೆ ಉತ್ತರ ಬರೆದು ಕಳಿಸಿದರೆ ಉತ್ತರ ಕೊಡಬೇಕಾದೋನು ನಾನೋ ನೀನೋ...ನನ್ನ ಸಿಗಾಕಿಸಬೇಕು ಅಂತ ಮಾಡಿದ್ದೀಯೋ ಹೇಗೆ ಅಂತ ಕೇಳಿ , ತಗಬಾ ಇಲ್ಲಿ ಅಂತ ಆಗ ತಾನೆ ನಡೆಯುತ್ತಿದ್ದ ವಿಧಾನಸಭಾ ಕಲಾಪಗಳಲ್ಲಿ ಉತ್ತರ ಕರ್ನಾಟಕದ ಶಾಸಕನೊಬ್ಬ ರಾಜ್ಯ ಹೆದ್ದಾರಿಗಳ ಬಗ್ಗೆ ಕೇಳಿದ್ದ ಪ್ರಶ್ನೆಗೆ ಆ ಅಧಿಕಾರಿ ಬರೆದಿದ್ದ ಉತ್ತರಗಳನ್ನು ತೋರಿಸಿ ಇಂಗೆ ಉತ್ತರ ಬರೆದರೆ ವಿರೋದ ಪಕ್ಷದೋರು ಸುಮ್ಮನೆ ಬಿಡ್ತಾರೆ ಅಂತ ಅಂದುಕೊಂಡೆಯಾ ಅಂತ ಕೇಳಿದ, ಆ ಅಧಿಕಾರಿ ಆಗಲು ಸುಮ್ಮನೇ ಇದ್ದ.

ಅಲ್ಲಿದ್ದ ಪ್ರಶ್ನೆ ಏನಪ್ಪಾ ಅಂದರೆ ಉತ್ತರ ಕರ್ನಾಟಕದ ಇಂತಿತ್ತಾ ರಸ್ತೆ ಅಭಿವೃದ್ದಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ, ಅದಕ್ಕೆ ಸರ್ಕಾರಿ ಅಧಿಕಾರಿ ಸುದೀರ್ಘ ಉತ್ತರ ಬರೆದಿದ್ದ ಇದೇ ರೇವಣ್ಣ ನ ಕೋಪಕ್ಕೆ ಕಾರಣವಾಗಿತ್ತು,

ಈಗ ಬರೆದುಕೋ ಅಂತ ಹೇಳಿದ ರೇವಣ್ಣ ಉತ್ತರ ಕರ್ನಾಟಕ ರಸ್ತೆಗಳ ಅಭಿವೃದ್ದಿ ಮಾಡುವುದಕ್ಕಾಗಿಯೇ ಉತ್ತರ ಕರ್ನಾಟಕ ರಸ್ತೆ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡಿದ್ದು ಅದರ ಮುಖಾಂತರ ಅಭಿವೃದ್ದಿ ಮಾಡಲಾಗುತ್ತಿದೆ ಅಂತ ಬರೆಸಿದ,

ಎರಡನೆ ಪ್ರಶ್ನೆ ಉತ್ತರ ಕರ್ನಾಟಕದಲ್ಲಿ ಬರುವ ರಾಷ್ಠ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರದ ಕ್ರಮ ಏನು ಅಂತ ಅದಕ್ಕೆ ರೇವಣ್ಮ ಬರೆಸಿದ ಉತ್ತರ ರಾಷ್ಠ್ರೀಯ ಹೆದ್ದಾರಿಗಳ ಅಭಿವೃದ್ದಿ ಕೇಂದ್ರ ಸರ್ಕಾರದ್ದಾಗಿದ್ದು ಕೇಂದ್ರ ಹಣ ಬಿಡುಗಡೆ ಮಾಡಿದರೆ ಲೋಕೋಪಯೋಗಿ ಇಲಾಕೆ ಕಾಮಗಾರಿಗಳಿಗೆ ಸಹಯೋಗ ನೀಡುತ್ತದೆ ಆದರಿಂದ ಈ ಪ್ರಶ್ನೆ ಉದ್ಬವಿಸುವುದೇ ಇಲ್ಲ ಅಂತ,

ಬರೆದುಕೊಂಡ ಅಧಿಕಾರಿಯ ಜೊತೆ ನಾನೂ ದಂಗಾಗಿ ಹೋದೆ, ಈ ಪ್ರಶ್ನೆಗಳು ಜೊತೆ ಯಾರಿಗೂ ಅರ್ಥವಾಗದ 500 ಪುಟದ ರಸ್ತೆಗೆ ಸಂಭಂದಿಸಿದ ವಿವರಗಳ ಬುಕ್ ಲೆಟ್ ಸೇರಿಸು ಅಂತ ರೇವಣ್ಣ ತಮ್ಮ ರಾಜಕೀಯ ಚಾಕಚಕ್ಯತೆ ತೋರಿದರು...

ಶಾಸಕ ಹಾಕಿದ ಪ್ರಶ್ನೆಗೆ ತಾತ್ವಿಕ ಉತ್ತರ ಸಿಕ್ಕಂತೆ ಆಗಬೇಕು ತಾನೂ ವಿರೋಧ ಪಕ್ಷದವರ ಕೈಗೆ ಸಿಗಬಾರದು ಅನ್ನೋದು ರೇವಣ್ಣನ ಐಡಿಯಾ....

ದೇವೇಗೌಡರ ಗರಡಿಯಲ್ಲಿ ಸಾಕಷ್ಠು ಪಳಗಿರುವ ಅವರ ಮಕ್ಕಳಲ್ಲಿ ರೇವಣ್ಣ ನಂಬರ್ ಒನ್ ಅಪ್ಪನ ಮಾತನ್ನು ಸತ್ತರೂ ಬಿಟ್ಟುಕೊಡದ ರೇವಣ್ಣನ ಬಗ್ಗೆ ದೇವೇಗೌಡರಿಗೂ ವಿಪರೀತ ಕಾಳಜಿ ಬೇರೆಯವರ ತರ ಸಾಕಷ್ಚು ಓದಿಲ್ಲಾ ಅನ್ನೋ ಕಾರಣಕ್ಕೆ ದೇವೇಗೌಡ ರೇವಣ್ಣನ ಪ್ರತಿ ನಡೆಗೂ ಬೆನ್ನಿಗೆ ನಿಂತಿರುತ್ತಾರೆ, ನಾನು ಹಾಸನದಲ್ಲಿ ವರದಿಗಾರ ಆಗಿದ್ದರಿಂದ ರೇವಣ್ಣನ ರಾಜಕೀಯದ ಕಾರಿಡಾರುಗಳಲ್ಲಿ ಅಡ್ಜಾಡುವ ಅವಕಾಶ ಸಿಕ್ಕಿತ್ತು, ಕುತೂಹಲದ ಗಣಿಯಾಗಿದ್ದ ರೇವಣ್ಣನ ಬಗ್ಗೆ ಜನರಿಗೆ ತಿಳಿದದ್ದು ಕಡಿಮೆ,ಆತನ ನಡೆಗಳೇ ನಿಗೂಡ... ನಾನು ಹೇಳುವುದಾದರೆ ಆತ ದೈತ್ಯ ಪ್ರತಿಭೆ ಆತನಿಗಿರುವ ಕೆಲವೇ ವೀಕ್ ಪಾಯಿಂಟ್ ಬಿಟ್ಟರೆ ಆತ ಅಭಿವೃದ್ದಿ ಕಡೆ ಯೋಚಿಸುವ ರಾಜಕಾರಣಿ,

ನಾನು ಸಾದ್ಯವಾದಾಗಲೆಲ್ಲ ಎಚ್,ಡಿ.ರೇವಣ್ಣನ ಕಾರ್ಯವೈಖರಿಯನ್ನ ಹತ್ತಿರದಿಂದ ನೋಡಿದ್ದೇನೆ,

ಯಾಕಂದರೆ ಕಳೆದ 20,20 ಸರ್ಕಾರದಲ್ಲಿ ಸೂಪರ್ ಸಿಎಂ ಆಗಿದ್ದವರು ಎಚ್.ಡಿ.ರೇವಣ್ಣ. ಆ ಕಡೆ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ, ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೋ ಚರ್ಚೆಯಲ್ಲಿ ಬಿಸಿಯಾಗಿದ್ದರೆ, ರೇವಣ್ಣ ಸರ್ಕಾರದಿಂದ ಹಾಸನಕ್ಕೆ ಏನೇಲ್ಲಾ ಸಿಗುತ್ತೋ ಅದನ್ನೆಲ್ಲಾ ತಗೊಂಡು ಹೋಗೋದು ಅಂತ ಪಣ ತೊಟ್ಟಿದ್ದರು,

ದಿನಕ್ಕೆ 10 ರಿಂದ ಹದಿನೈದು ಪೈಲಿಗೆ ಕುಮಾರಸ್ವಾಮಿಯಿಂದ ಸಹಿಹಾಕಿಸಿಕೊಳ್ಳದಿದ್ದರೇ ಆತನಿಗೆ ನಿದ್ದೆ ಹತ್ತುತ್ತಿರಲಿಲ್ಲ , ಕಂಕುಳಲ್ಲಿ ಏನಾದರೊಂದು ಪೈಲು ಇರದಿದ್ದರೇ ರೇವಣ್ಣನಿಗೆ ಆಗುತ್ತಿರಲಿಲ್ಲ ಕುಮಾರಸ್ವಾಮಿ ಎಲ್ಲೇ ಇರಲಿ ನುಗ್ಗಿ ಒಂದೊಂದೆ ಪೈಲು ತಿರುಗಿಸುತ್ತಾ ಇದ್ದರೆ ಕುಮಾರಸ್ವಾಮಿ ಪೈಲು ಏನಂತ ನೋಡದೇ ಸಹಿ ಹಾಕಬೇಕಿತ್ತು ಏನಣ್ಣಾ ಇವೆಲ್ಲ ಅಂತ ಕುಮಾರಸ್ವಾಮಿ ಏನಾದರೂ ಕೇಳಿದರೆ ಮೊದಲು ಸೈನ್ ಮಾಡು ಆಮೇಲೆ ಇದನ್ನೆಲ್ಲಾ ಓದಿಕೊಳ್ಳೂವಂತೆ ಅನ್ನುತ್ತಿದ್ದ ರೇವಣ್ಣ.

ರಾಜ್ಯ ರಾಜಕೀಯದಲ್ಲಿ ಇರುವ ಕಲರ್ ಪುಲ್ ವ್ಯಕ್ತಿಗಳಲ್ಲಿ ರೇವಣ್ಣ ಒಬ್ಬರು ಅನ್ನೋದರ ಬಗ್ಗೆ ಅನುಮಾನವೇ ಬೇಡ, ಆತ ಏನಾದರೂ ಕೆಲಸ ಹಿಡಿದನೆಂದರೆ ಖಂಡವಿದುಕೋ ಮಾಂಸವಿದುಕೋ ಎಂಬ ತೀರ್ವತೆಯಲ್ಲಿ ಹಿಡಿದ ಕೆಲಸ ಮಾಡಿಮುಗಿಸುತ್ತಾನೆ.

ಆದರೆ ಆತನ ಮನಸು ಮಾತ್ರ ಹಾಸನ ಜಿಲ್ಲೆ ಒಳಗೆ ಗಿರಿಕಿ ಹೊಡೆಯುತ್ತಾ ಇರುತ್ತದೆ ಯಾವ ಯಾವ ಊರಿಗೆ ಏನು ಕೆಲಸ ಆಗಬೇಕು ಅನ್ನೋದರ ಕಡೆಗೆ ಆತನ ಗಮನ, ಕಳೆದ ಸರ್ಕಾರದಲ್ಲೂ ಅಷ್ಟೇ ಹಾಸನಕ್ಕೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್, ಹತ್ತಾರು ಡಿಗ್ರಿ ಕಾಲೇಜು, ಹೈಟೆಕ್ ಬಸ್ ಸ್ಟಾಂಡ್, ವಿಮಾನ ನಿಲ್ದಾಣ, ರಸ್ತೆಗಳು ಸೇರಿದಂತೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಇದ್ದ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ ಲೆಕ್ಕಕ್ಕೆ ಇಡಕ್ಕೆ ಕಷ್ಟ

ತಿಂಗಳಿಗೊಮ್ಮೆ ವಿವಿಧ ಅಭಿವೃದ್ದಿ ಕೆಲಸಗಳ ಉದ್ಘಾಟನಾ ಸಮಾರಂಭ ಮಾಡದೇ ಹೋದರೆ ರೇವಣ್ಣನಿಗೆ ನಿದ್ದೇ ಹತ್ತುತ್ತಿರಲಿಲ್ಲಾ ಕಾಣುತ್ತೇ. ಯಾರಿಗಾದರು ಸಾದ್ಯವಾದರೆ ಹೊಳೆ ನರಸೀಪುರಕ್ಕೆ ಹೋಗಿ ನೋಡಬೇಕು, ಆತ ಆವಾಗ ಮಾಡಿದ ಕೆಲಸಗಳಿಂದಲೇ ಹಾಸನದಲ್ಲಿ ದೇವೇಗೌಡರಿಗೆ ಹತ್ತಿರ ಹತ್ತಿರ ಮೂರು ಲಕ್ಷ ಲೀಡ್ ಬಂದಿದೆ , ಬೇರೆಲ್ಲಾ ಕಡೆ ಜೆಡಿಎಸ್ ಸೋತರು ಹಾಸನದಿಂದ ಏನೂ ಮಾಡಕ್ಕ ಆಗಿಲ್ಲಾ.....

ಇದೆಲ್ಲಾ ಬರಯಕ್ಕೆ ಕಾರಣ ಏನಿಲ್ಲಾ ಮೊನ್ನೆ ಮೊನ್ನೆ ತಾನೆ ರೇವಣ್ಣ ದೆಹಲಿಗೆ ಬಂದಿದ್ದರು, ಮಾತಿಗೆ ಸಿಕ್ಕಿದ್ದರು ಮಾತನಾಡುತ್ತಾ ಇರುವಾಗ ಆತ ಹೇಳಿದ್ದು "ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ರೇವಣ್ಣನ ಮಾತು ಕೇಳಿ ನನಗೆ ಹೌದು ಅನಿಸಿತು... ಅದರ ಜೊತೆಗೆ ಅಧಿಕಾರ ಇಲ್ಲದೆ ಇರುವ ರೇವಣ್ಣನನ್ನ ಅರಗಿಸಿಕೊಳ್ಳೋಕೆ ಕಷ್ಟ ಆಯಿತು...

4 comments:

  1. ಹಾಸನದ ರಾಜಕೀಯದಲ್ಲಿ ಒಂದು ವಿಸ್ಮಯ ರೇವಣ್ಣ... ಗೌಡ ಇದು ಬರವಣಿಗೆಯಲ್ಲಿ ಚೆನ್ನಾಗಿದೆ.

    ReplyDelete
  2. ಹಾಸನದ ರಾಜಕೀಯದಲ್ಲಿ ಒಂದು ವಿಸ್ಮಯ ರೇವಣ್ಣ... ಗೌಡ ಇದು ಬರವಣಿಗೆಯಲ್ಲಿ ಚೆನ್ನಾಗಿದೆ.

    ReplyDelete
  3. baribekendaagalella inta aakasmika vishayagalanna baredu kechhakabeku kananna aamele enaytado.....adella aagali...

    ReplyDelete
  4. YEsterday itself, we, the staff in the college discussing about Revanna's firm attituin implementing development works. One of my colleguewho is from Hassan was praising him for his commitment to works..u, at the same time unfolding beautiful stories about Revanna with humour touch that will not allow anybody to forget them. Thanks to all. Keep wriabout the otherside of all....

    ReplyDelete