Wednesday, September 23, 2009

'ಅರ್ಧ ದೆಲ್ಲಿಯ ಮಾಲೀಕ'

ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲಾ ಬಿಡ್ರಿ, ಅದೆಲ್ಲಾ ಯಾಕೆ ಅಂತ ಅನ್ನುತ್ತೀರೇನೋ...

ಪತ್ರಕರ್ತ, ಇತಿಹಾಸಕಾರ, ಸಾಹಿತಿ ಹೀಗೆ ಏನೆಲ್ಲಾ ಆಗಿರುವ ಖುಷ್ವಂತ್ ಸಿಂಗ್ ರ ಅಪ್ಪ ಶೋಭಾ ಸಿಂಗ್ ನ್ಯೂಡೆಲ್ಲಿ ಅಂತ ಕರೆಯಲ್ಪಡುವ ದೆಹಲಿಯ ಪ್ರಮುಖ ಆಕರ್ಷಣೆಗಳಾಗಿರುವ ರಾಷ್ಠ್ರಪತಿ ಭವನ(ಕೆಲವು ಭಾಗ), ಇಂಡಿಯಾಗೇಟ್, ಕನ್ನಾಟ್ ಪ್ಲೇಸ್ , ರೆಡ್ ಕ್ರಾಸ್ ಬಿಲ್ಡಿಂಗ್, ಸೌಥ್ ಬ್ಲಾಕ್ ಸೇರಿದಂತೆ ಹತ್ತಾರು ಹಲವು ಆಕರ್ಷಣೀಯ ಸ್ಮಾರಕಗಳು ಮತ್ತು ಕಟ್ಟಡ ನಿರ್ಮಾಣಗಳ ಕಂಟ್ರಾಕ್ಟರ್ ಆಗಿದ್ದವರು.

1911 ರಲ್ಲಿ ಆಗಿನ ವೈಸ್ ರಾಯ್ ಸರ್ಕಾರ ಕಲ್ಕತ್ತಾದಿಂದ ದೆಹಲಿಗೆ ರಾಜದಾನಿ ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಾಗ ಇಂಗ್ಲೇಂಡಿನಲ್ಲಿ ಹೆಸರುವಾಸಿಯಾಗಿದ್ದ, ಎಡ್ವಿನ್ ಲೂಟಿಯಾನ್, ಮತ್ತು ಹಬ್ಬರ್ ಬೇಕರ್ ಎಂಬ ಆರ್ಕಿಟೆಕ್ಚ್ ಗಳನ್ನು ಕರೆಸಿ ಹೊಚ್ಚ ಹೊಸ, ಅದ್ಬುತ ರಾಜಧಾನಿ ಕಟ್ಟುವ ಸೂಚನೆ ನೀಡಿದರು. ಅದರ ನಿರ್ಮಾಣದ ಗುತ್ತಿಗೆ ಸಿಕ್ಕಿದ್ದು ತಂದೆ ಮಕ್ಕಳಾದ ಸುಜಾನ್ ಸಿಂಗ್ ಮತ್ತು ಶೋಭಾ ಸಿಂಗ್ ಗೆ. ಸುಜಾನ್ ಸಿಂಗ್ ಹಿಂದಿನಿಂದಲೂ ಹೆಸರುವಾಸಿ ಕಂಟ್ರಾಕ್ಟರ್ ಆಗಿದ್ದರಂತೆ.

ಈಗಿನ ರಾಷ್ಠ್ರಪತಿ ಭವನ ಕಟ್ಟಿದ್ದು ಆಗಿನ ವೈಸ್ ರಾಯ್ ವಾಸಕ್ಕಾಗಿ, ಸೌಥ್ ಬ್ಲಾಕ್ ನಾರ್ಥ್ ಬ್ಲಾಕ್, ಎಲ್ಲವೂ ನಿರ್ಮಾಣವಾಗಿದ್ದು ಬ್ರಿಟೀಷರ ಸೌಖ್ಯಕ್ಕಾಗಿಯೇ, ರಾಷ್ಠ್ರಪತಿ ಭವನ ನಿರ್ಮಾಣಕ್ಕೆ 17 ವರ್ಷ ಹಿಡಿಯಿತು, ಬಹುಶ ಆಂಗ್ಲರಿಗೆ ತಾವು ಒಂದಲ್ಲಾ ಒಂದು ದಿನ ಭಾರತವನ್ನು ಬಿಟ್ಟು ಮನೆಗೆ ನಡೆಯಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಗುಲಾಮಿ ಬಾರತದಲ್ಲಿ ತಮ್ಮ ಅಧಿಕಾರ ನಿರಂತರ ಎಂಬ ಕಲ್ಪನೆ ಇದ್ದಿದ್ದರಿಂದಲೇ ಬ್ರಿಟೀಷರು ಇಂತಹ ನಿರ್ಮಾಣಕ್ಕೆ ಕೈ ಹಾಕಿದ್ದರು ಎನ್ನಲಾಗುತ್ತದೆ.340 ವಿವಿಧ ಹಾಲ್ ಗಳುಳ್ಳ ರಾಷ್ಠ್ರಪತಿ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ ರಾಷ್ಟ್ರಪತಿ ಭವನ ನಿರ್ಮಾಣಕ್ಕೆ ತಗುಲಿದ ವೆಚ್ಚ 14 ಮಿಲಿಯನ್ ಪೌಂಡ್ ಗಳು. ರಾಷ್ಠ್ರಪತಿ ಭವನದ ಕ್ಲೀನಿಂಗ್ ನಿಂದ ಹಿಡಿದು ಉಸ್ತುವಾರಿ ತನಕ ಎಲ್ಲಕ್ಕೂ 2000 ಮಂದಿ ಕೆಲಸಕ್ಕೆ ಇದ್ದರಂತೆ.

ರಾಷ್ಠ್ರಪತಿ ಭವನ ಮತ್ತು ಹೊಸ ದೆಹಲಿಯ ಪ್ರಮುಖ ಪ್ಲಾನರ್ ಆಗಿದ್ದ ಎಡ್ವಿನ್ ಲೂಟಿಯಾನ್ ಗೆ ವೈಸ್ ರಾಯ್ ಭವನ ನಿರ್ಮಾಣಕ್ಕೆ ಭಾರತೀಯ ಶೈಲಿ ಬಳಸಲು ಕೊಂಚವೂ ಇಷ್ಟ ಇರಲಿಲ್ಲವಂತೆ ಆದರೆ ಆಗಿನ ವೈಸ್ ರಾಯ್ ಹಾರ್ಡಿಂಗ್ ಕನಿಷ್ಠ ವೈಸ್ ರಾಯ್ ಮನೆಯ ಹೊರ ವಿನ್ಯಾಸವಾದರೂ ಭಾರತೀಯ ಶೈಲಿಯಲ್ಲಿರಬೇಕು ಎಂದು ಪಾರ್ಮಾನು ಹೊರಡಿಸಿದ್ದರಿಂದ ಹೊರವಿನ್ಯಾಸ ದೇಸಿ, ಒಳವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿದೆ.

ಖುಷ್ವಂತ್ ಸಿಂಗರ ಅಪ್ಪ ಶೋಭಾ ಸಿಂಗ್ ನನ್ನ(ಆದಾ ದಿಲ್ಲಿ ಕಾ ಮಾಲಿಕ್) ಅರ್ಧ ಡೆಲ್ಲಿಯ ಓಡೆಯ ಅಂತ ಕರೆಯುತ್ತಿದ್ದರಂತೆ, ಆಗಿನ ಕಾಲಕ್ಕೆ ದೇಶದಲ್ಲೇ ಶ್ರೀಮಂತನಾಗಿದ್ದ ಆತ ಪ್ರತಿ ಅಡಿ ಜಮೀನಿಗೆ 2 ರೂಪಾಯಿ ರೇಟಿಗೆ ಅರ್ಧ ದೆಹಲಿಯನ್ನೇ ಕೊಂಡುಕೊಂಡಿದ್ದನಂತೆ.

ನಾನು ದೆಹಲಿಗೆ ಬಂದು ಇನ್ನೇನು ಒಂದು ವರ್ಷ ಆಗುತ್ತಾ ಬರುತ್ತಿದೆ, ಬಂದ ದಿನದಿಂದ ಇಲ್ಲಿಯವರೆಗೆ ದೆಹಲಿ ಎಂಬ ಬೆಡಗನ್ನು ಬೆರಗಿನಿಂದ ನೋಡುತ್ತಾ ಇದ್ದೇನೆ, ಯಾಕಪ್ಪಾ ಇದೇ ಊರನ್ನು ಕ್ಯಾಫಿಟಲ್ ಸಿಟಿ ಮಾಡಿದರು ಅನ್ನುವುದರಿಂದ ಹಿಡಿದು. 10 ಜನಪತ್ ನ ವೈಶಿಷ್ಠ ಏನು, ಚಾಂದಿನಿ ಚೌಕ್ ನಲ್ಲಿ ವಿಶೇಷವಾಗಿ ಏನು ಸಿಗುತ್ತೆ ಅನ್ನುವ ತನಕ ಕುತೂಹಲದಿಂದ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿಕೊಂಡಿದ್ದೇನೆ. ಕೆಲವಕ್ಕೆ ಉತ್ತರ ಸಿಕ್ಕಿವೆ ಇನ್ನು ಕೆಲವಕ್ಕೆ ಸಿಕ್ಕಿಲ್ಲ
ಇಂತಹ ಹಲವು, ವೈಶಿಷ್ಠ್ಯಗಳನ್ನು, ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಿದೆ.

Sunday, September 6, 2009

ಉಳ್ಳವರು ಆಗುವರೇನಯ್ಯಾ....?



ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪತ್ರಕರ್ತರು ಜೀವಮಾನ ಪೂರ್ತಿ ಪ್ರಶ್ನೆ ಹಾಕಿಕೊಂಡೇ ಮಜವಾಗಿ ಇರ್ತಿರಿ ಅಂದ. ನಾನು ನಕ್ಕು 'ಹೌದು ಅನೀಲ್ ಪತ್ರಕರ್ತರಿಗೆ ಸಿಗೋ ಅತಿದೊಡ್ಡ ಸೌಭಾಗ್ಯವೇ ಪ್ರಶ್ನೆ ಹಾಕೋದು. ಈ ವೃತ್ತಿಯಿಂಜ ಕನಿಷ್ಟ ನಮ್ಮ 'ಇಗೋ' ನಾದರೂ ತೃಪ್ತಿಯಾಗುತ್ತೆ' ಅಂದೆ. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್ 'ಮೊನ್ನೆ ದೆಹಲಿಗೆ ಬಂದಿದ್ದಾಗ ನೋಡಿದೆ ಕಣಪ್ಪಾ, ನೀನು ಕ್ಯಾಬಿನೆಟ್ ಧರ್ಜೆಯ ಮಂತ್ರಿಯೊಬ್ಬನಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಏನ್ರೀ ಸಮಾಚಾರ ಅಂತ ಕೇಳಿದ್ದು' ಅಂದ. ಅದಕ್ಕೆ ನಾನು ಹೇಳಿದೆ. I am Journalist because I enjoy More Demacracy with in Democracy ' ಅಂಥ.

ಭಾನುವಾರದ ಮುಂಜಾನೆಯೇ ಅನಿಲ್ ನೊಂದಿಗಿನ ನನ್ನ ಸಂಭಾಷಣೆ ನನ್ನೊಳಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಕೆಲವಕ್ಕೆ ಉತ್ತರ ಸಿಗದೆ ಗೊಂದಲಕ್ಕೆ ಬಿದ್ದೆ ಅವನ್ನ ಇಲ್ಲಿ ಹರವಿದ್ದೇನೆ.

ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ?
ಯಾರಾದರೂ ರಾಜಕಾರಣಿಗಳ ಮಕ್ಕಳು ಪತ್ರಕರ್ತರು ಇದ್ದಾರಾ?
ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರು ಆಗಿದ್ದಾರಾ?
ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ ?
ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರು ಆಗಿದ್ದಾರ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆಯನ್ನನನಗೆ ನಾನೇ ಕೇಳಿಕೊಂಡೆ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಬಲ್ಲ, ನನಗೆ ಗೊತ್ತಿರುವ ವಲಯದಲ್ಲಿ ಯಾರೂ ಅಂತಹವರು ಇರುವುದು ನನಗೆ ಗುರುತು ಸಿಗಲಿಲ್ಲ.
ಕಡೆಗೆ ನಾನು ಓದಿದ ಕಾಲೇಜುಗಳಲ್ಲಿ ಜರ್ನಲಿಸಂ ಅನ್ನು ನನ್ನ ಜೊತೆಗೆ ಕಲಿತವರನ್ನು, ವೃತ್ತಿಯ ಬಗ್ಗೆ ಒಂತರಾ ಪ್ಯಾಸಿನೇಟ್ ಆಗಿದ್ದವರ ಬಗ್ಗೆ ಯೋಚಿಸಿದೆ. ಬಹುತೇಕರು ಇಲ್ಲಿ ಸಿಗುವ ಅನುಭವಕ್ಕಾಗಿ ಕೆಲಕಾಲ ಕೆಲಸ ಮಾಡಿ ಬೇರೆ ಕೆಲಸ ಹುಡುಕಿಕೊಂಡರು. ಮತ್ತೆ ಕೆಲವು ಹುಡುಗಿಯರು ವಿದೇಶಗಳಲ್ಲಿ ಕೆಲಸದಲ್ಲಿರುವ ಹುಡುಗರೊಂದಿಗೆ ಮದುವೆಯಾಗಿ ಹೋದರು.

ನನ್ನ ಖಾಸಗಿ ವಲಯದಲ್ಲಿ ಅನುಭವಕ್ಕೆ ಬಂದತೆ ಉಳ್ಳವರು ಮಾದ್ಯಮದ ಉದ್ಯೋಗಗಳಲ್ಲಿ ತೊಡಗುವುದು ಕಡಿಮೆ.
ನಿಮ್ಮ ವಲಯದಲ್ಲಿ ಅಂತವರೂ ಇದ್ದರೂ ಇರಬಹುದು. ಆದರೆ ಅಂತಹ ಉದಾಹರಣೆಗಳು ತೀರಾ ಕಡಿಮೆ ಅನ್ನೊದು ನನ್ನ ನಂಬಿಕೆ.

ಯಾಕೆ ಹೀಗೆ, ಪತ್ರಕರ್ತರು ಕೇವಲ ಬಡವರು, ಮದ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ. ವ್ಯವಸ್ಥೆಯ ಮೇಲೆ ಕೋಪ ಬೇರೆಯವರಿಗೆ ಯಾಕೆ ಬರೋದಿಲ್ಲಾ ಅಂಥ. ಈ ಸಮಾಜ ಎಲ್ಲರಿಗೂ ಸೇರಿದ್ದು ಅಲ್ಲವಾ. ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು,
ಆದರೆ ಇವರೇ ಶ್ರೀಮಂತರು, ಮಾದ್ಯಮದ ಉದ್ಯಮಿಗಳಾಗುತ್ತಾರೆ ಯಾಕೆ,

ಇವತ್ತು ಸಣ್ಣದೊಂದು ಮಾದ್ಯಮ ಸಂಸ್ಥೆಯನ್ನು ಹುಟ್ಟುಹಾಕುವುದೂ ನೂರಾರು ಕೋಟಿ ವಿಚಾರ. ಬಡ ಉದ್ಯೋಗಿಗಳು ಇಂತಹ ಸಾಹಸ ಮಾಡುವುದು ಸಾದ್ಯವಾ ಹೇಳಿ, ಸತ್ಯ, ನಿಷ್ಠೆ. ಪ್ರಾಮಾಣಿಕತೆ, ಇವೆಲ್ಲವೂ ಈಗ ಅಶಕ್ತರ ಸ್ವತ್ತುಗಳಾಗಿ ಬದಲಾಗಿದ್ದಾರೂ ಹೇಗೆ. ಯಾವ ಮಾದ್ಯಮದ ಒಡೆಯ ತನ್ನ ಪತ್ರಿಕೆಯ ನೌಕರ ಇಂತ ಕೆಲಸ ಮಾಡಿದ್ದಾನೆ, ಎಷ್ಟು ದೊಡ್ಡ ವ್ಯಕ್ತಿಗೆ ಪ್ರಶ್ನೆ ಕೇಳಿ ದಬಾಯಿಸಿದ್ದಾನೆ ಎಂಬ ಕಾರಣಕ್ಕಾಗಿ ಭಲೆ, ವರದಿಗಾರ ಭಲೆ ಅಂತ ಬೆನ್ನು ತಟ್ಟುತ್ತಾನೆ ಹೇಳಿ.

ಹಾಗೆ ನೋಡಿದರೆ ಮಾದ್ಯಮದಲ್ಲಿ ದುಡಿಯುವ ಮಂದಿಗೆ ಪತ್ರಿಕೋದ್ಯಮ ಆದರ್ಶವಾಗಿದ್ದರೂ, ಅದರ ಓಡೆಯರಿಗೆ ಅದೊಂದು ಲಾಭ ತರುವ ಉದ್ಯಮ ಮಾತ್ರ ಆಗಿರಲಿಕ್ಕೆ ಸಾಕು. ನಮ್ಮೆಲ್ಲ ಪತ್ರಕರ್ತರ ಸತ್ಯ ಆದರ್ಶ, ನಿಷ್ಟೆ, ಸಾಮಾಜಿಕ ಜವಾಬ್ಧಾರಿ, ಎಲ್ಲವೂ ಕೂಡ ಮಾದ್ಯಮ ಉದ್ಯಮಿಯೊಬ್ಬನ ಬಂಡವಾಳದ ಒಂದು ಬಾಗ ಆಗಿರುತ್ತದೆ, ಎಷ್ಟೊಂದು ಒಳ್ಳೆಯ, ಚುರಾಕಾದ, ಪ್ರಕಾಂಡ, ಬುಂದಿವಂತ ಪತ್ರಕರ್ತರು ಇದ್ದಾರೆ ಅನ್ನೊದು ಆಯಾ ಮಾದ್ಯಮದ ಬಂಡವಾಳದ ಪರಿದಿಯಲ್ಲೆ ಅಡಗಿದೆ ಅನಿಸುತ್ತದೆ.

ಕಾನೂನಿನ ಪ್ರಕಾರ ಯಾರೊಬ್ಬರಿಗೂ ಪತ್ರಿಕಾ ಉದ್ಯಮದಲ್ಲಿ ತೊಡಗುವ ಸ್ವಾತಂತ್ರ ಇದೆ, ಆದರೂ ಅದು ವಾಸ್ತವ ಸುಲಭದ ಸಂಗತಿ ಅಲ್ಲ ಅನ್ನೊದನ್ನ ಬಹುತೇಕರು ಒಪ್ಪುವ ಸಂಗತಿ. ಪತ್ರಿಕೊದ್ಯಮವನ್ನು ನೊಬೆಲ್ ಪ್ರೊಫೆಷನ್ ಅನ್ನುವ ಕಾಲ ಕಳೆದು ಹೊಗಿದೆ ಅಂತ ಅನಿಸುತ್ತೆ. ಗಾಂಧಿ, ಅಂಬೇಡ್ಕರರು ಪತ್ರಿಕೊದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡ ಕಾಲ ಮತ್ತೆ ಬರುತ್ತದಾ ಅನ್ನೊ ಅನುಮಾನಗಳು ಇವೆ.

ಸಮಾಜದ ಅಶಕ್ತರು, ಬಡವರು, ಮದ್ಯಮ ವರ್ಗದವರಿಗೆ ಮಾತ್ರ ಪತ್ರಿಕೊದ್ಯಮವೊಂದು ಪ್ರಭಾವಿ ನೌಕರಿ ಅನ್ನಿಸುತ್ತಿದೆ, ಬೇರೆ ಯಾರಿಗೂ ಅಲ್ಲ ಅನ್ನೊದು ನನ್ನ ಬಲವಾದ ನಂಬಿಕೆ, ಬಹುಶ ನಿಮಗೂ ಹಾಗೆ ಅನ್ನಿಸುತ್ತೆ ಅನ್ನೊದು ನನ್ನ ಗ್ರಹಿಕೆ.
ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ, ನಮ್ಮೊಂದಿಗೆ ನಿಂತು, ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಅವತ್ತು ಮಾದ್ಯಮ ವೃತ್ತಿಯನ್ನ ಆದರ್ಶದ ವೃತ್ತಿ ಅಂತ ನಾವೆಲ್ಲ ಒಪ್ಪಬಹುದೇನೋ......!!

Tuesday, September 1, 2009

ಕಡೇ ಗುಳಿಗಿ.



ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ಒಳಗಾದಂತೆ ಅನ್ನಿಸುವ ಸಮಯಕ್ಕೆ ಮತ್ತೆ ಬಿಜೆಪಿಯಲ್ಲಿ ಎದ್ದ ಅಂತರಿಕ ಕಲಹದಿಂದ ಮತ್ತೆ ರಾಜಕೀಯ ರಂಗೇರಿತ್ತು.

ಈಗ ಎಲ್ಲೆಲ್ಲೂ ಬಿಜೆಪಿಯದೇ ಸುದ್ದಿ, ಹೇಗಿದ್ದ ಪಕ್ಷಕ್ಕೆ ಏನಾಯ್ತಪ್ಪ ಅನ್ನೋ ಚರ್ಚೆ.

ಚುನಾವಣೆಗಳಲ್ಲಿ ಸೋತ ಪಕ್ಷದಲ್ಲಿ ಇಂತ ಪ್ರಕ್ರಿಯೆಗಳು ಆಗೋದು ಸಹಜ. ಸೋತಾಗಲೇ ವಾಸ್ತವ ಗೊತ್ತಾಗೋದು ಅನ್ನೊದಕ್ಕೆ ಈಗಿನ ಬಿಜೆಪಿಯೇ ಉದಾಹರಣೆ, ಹೊಟ್ಟೆ ಒಳಗಿನ ಕ್ಯಾನ್ಸರ್ ಎಷ್ಠು ದಿನಾ ಅಂಥ ಗೊತ್ತಾಗದೇ ಇರುತ್ತೇ ಹೇಳಿ.

ಮೊದಲೇ ಮಸಾಲ ಸುದ್ದಿಯೇ ಇಲ್ಲದೆ ಬೇಜಾರಾಗಿದ್ದ ಮೀಡಿಯಾಗಳಿಗೆ ಈಗ ಬಿಜೆಪಿ ಒಳ್ಳೇ ಅಹಾರ ಒದಗಿಸುತ್ತಿದೆ. ಸ್ವೈನ್ ಪ್ಲೂ ಭೂತವನ್ನು ಸಿಕ್ಕಾಪಟ್ಟೆ ದುರುಪಯೋಗ ಮಾಡುತ್ತಿದ್ದ ಮಾದ್ಯಮಗಳ ಕಣ್ಣು, ಜಸ್ವಂತ್ ಸಿಂಗ್ ಬಿಟ್ಟ ಜಿನ್ನಾ ಭೂತದ ಕಡೆಗೆ ಹೊರಳಿದ್ದು ಒಳ್ಳೆಯದೇ ಆಯ್ತು ಅನ್ನಿ.

ಬಿಜೆಪಿ ಚುನಾವಣೆಗಳಲ್ಲಿ ಅಕರಾಳ ವಿಕರಾಳವಾಗಿ ಸೋತಾಗಲೇ, ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನ ಟೇಕ್ ಓವರ್ ಮಾಡುತ್ತೆ ಅನ್ನೊ ಚರ್ಚೆ ಎದ್ದಿತ್ತು. ಆದರೆ ಅದನ್ನ ಈಗ ಆರ್ ಎಸ್ ಎಸ್ ಈಗ ಮಾಡುತ್ತಿದೆ. ಹಾಗೆ ಮಾಡೋದರಲ್ಲಿ ತಪ್ಪೇನು ಇರಲಾರದು. ಆದರೆ ಎಲ್ಲವನ್ನೂ ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತಲೇ, 'ಸಂಘಕ್ಕೊ ಬಿಜೆಪಿಗೂ ಸಂಭಂದವಿಲ್ಲ', 'ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ರಾಜಕೀಯ ಮಾಡೋಲ್ಲ' ಅಂತೆಲ್ಲಾ ಪುಂಗಿ ಊದಿದರೇ ಆಗೋ ಲಾಭ ಅದೇನೋ ನನಗೆ ತಿಳಿಯೋಲ್ಲ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಚುನಾವಣೆಗಳು ಮುಗಿದ ಮೂರು ತಿಂಗಳಿಗೆ ಪಕ್ಷದಲ್ಲಿ ಅಂತರಿಕ ಕಲಹ ಬೀದಿಗೆ ಬಂದಿರೋದು ಕಾಂಗ್ರೆಸ್ ಪಾಲಿಗೆ ಕೆಟ್ಟ ಬೆಳವಣಿಗೆಯೇ ಸರಿ. ಮುಂದೆ ಚುನಾವಣೆಗಳು ಬರೋದು ಐದು ವರ್ಷಕ್ಕೆ ಆದರಿಂದ ಈಗಲೇ ಅಂತರಿಕ ಬಿಕ್ಕಟ್ಟು ಶಮನವಾಗಿ ಬಿಜೆಪಿ ಪಕ್ಷ ಚೇತರಿಸಿಕೊಂಡು ಮತ್ತೆ ಪ್ರಭಲ ಆಗಬಹುದು.

ಅದೆಲ್ಲ ಒತ್ತಟ್ಟಿಗೆ ಇರಲಿ, ಬಿಜೆಪಿ ಪಕ್ಷ ಮೀಡಿಯಾ ಕ್ರಿಯೇಟೆಡ್ ಪಕ್ಷ ಅದನ್ನ ಮೀಡಿಯಾದವರೇ ಹಾಳುಮಾಡುತ್ತಾರೆ ಅಂತ ಹೇಳುತ್ತಾರೆ. ಹಿಂದೊಮ್ಮೆ ಅರುಣ್ ಶೌರಿಯೇ ಬಿಜೆಪಿ ಪಕ್ಷ ಆರು ಜನ ಪತ್ರಕರ್ತರಿಂದ ನಿಯಂತ್ರಿಸಲ್ಪಡುತ್ತಿದೆ ಅಂತ ಟೀಕೆ ಮಾಡಿದ್ದರು. ಹಾಗೆ ನೊಡಿದರೆ ಬಿಜೆಪಿಯಲ್ಲಿದ್ದಷ್ಟು ಮಾಜಿ ಪತ್ರಕರ್ತರು, ಅಥವಾ ನ್ಯೂಸ್ ರೂಂಗಳಲ್ಲಿ ಕುಳಿತೇ ಬಿಜೆಪಿಯನ್ನು ಅಂತರಸಾಕ್ಷಿಯಿಂದ ಬೆಂಬಲಿಸುವ ಪತ್ರಕರ್ತರು ದೇಶದ ಯಾವ ಪಕ್ಷಕ್ಕೂ ಇರಲಿಕ್ಕಿಲ್ಲ. ಆರ್ ಎಸ್ ಎಸ್ ಮೂಲದಿಂದ ಬಂದ ಸಾವಿರಾರು ಮಂದಿ ಸುದ್ದಿ ಮನೆಗಳಲ್ಲಿ ಕುಳಿತು ಸದ್ದಿಲ್ಲದೆ ಸುದ್ದಿ ಮಾಡುತ್ತಾರೆ.

ಅದಕ್ಕೆ ನನಗೆ ಸಿಕ್ಕ ಸಾಕ್ಷ ಏನಪ್ಪಾ ಅಂದರೆ, ಮೊನ್ನೆ ಬಿಜೆಪಿಯಲ್ಲಿ ಗದ್ದಲ ತೀರ್ವಗೊಂಡಿದ್ದಾಗ ಪತ್ರಕರ್ತ ಮಿತ್ರನೊಬ್ಬನ ಮೊಬೈಲ್ ಗೆ ಆರ್ ಎಸ್ ಎಸ್ ಕೇಂದ್ರ ಕಚೇರಿಯಿಂದ ಒಂದು ತುರ್ತು ಸಂದೇಶ ಬಂತು.
ಸಂದೇಶ ಏನಪ್ಪಾ ಅಂದರೆ. 'ಎಲ್ಲಾ ಸ್ವಯಂ ಸೇವಕ ಪತ್ರಕರ್ತರೂ ಸಂಜೆ 3 ಗಂಟೆಗೆ ಸಂಘದ ಕಚೇರಿಗೆ ಬನ್ನಿ ಬಹುಮುಖ್ಯವಾದ ವಿಷಯ ಚರ್ಚಿಸಬೇಕಿದೆ' ಅಂತ.

ನನಗಂತೂ ಸಂದೇಶ ನೋಡಿ ಅಚ್ಚರಿಯಾಯ್ತು, ಹೇಗೆ ಆರ್ ಎಸ್ ಎಸ್ ಕಬಂದಬಾಹುಗಳು ಹರಡಿವೆ ಅಂತ ಯೋಚಿಸುವಂತಾಯಿತು. 'ಸ್ವಯಂ ಸೇವಕ' ಪತ್ರಕರ್ತರಿಗೆ ಆರ್ ಎಸ್ ಎಸ್ ಪಂಡಿತರು ಏನೇನು ಹೇಳಿದರು, ಕಲಿಸಿಕೊಟ್ಟರು ಅನ್ನೊ ಕುತೂಹಲ ಈಗ ನನಗೆ ಹೆಚ್ಚಾಗಿದೆ. ಸ್ವಯಂ ಸೇವಕರು ಅದನ್ನೆಲ್ಲಾ ಬಿಚ್ಚಿ ಹೇಳುತ್ತಾರಾ ಗೊತ್ತಿಲ್ಲ.

ಕಡೇ ಗುಳಿಗಿ.
ಕೆಲವರು ಬೆಳೆಯುತ್ತಾ ಬೆಳೆಯುತ್ತಾ ಚಡ್ಡಿ ಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೇ ಹುಟ್ಟಿರುತ್ತಾರೆ...!!

Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

ಉತ್ತರ ಪ್ರದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.

ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.

ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.


ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.
ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,
ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.
ಜವಹರ್ ಲಾಲ್ ರೋಜಗಾರ್ ಯೋಜನೆ.
ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.
ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ
ಅನ್ನೊದು ಸೂರ್ಯಪ್ರಕಾಶ್ ವಾಧ.

ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.

ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.

ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.
ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.
ಲಿಂಕ್ ಇಲ್ಲಿವೆ.
http://www.asuryaprakash.com/



Wednesday, August 12, 2009

'ಡಾನ್ ಆಪ್ ಪಾವರ್ಟಿ’


ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು. ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!

ಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಏಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಭಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿಧಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ 'ಪ್ರದಾನ್' ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಬಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು. ಅವರ ಸಂದರ್ಶನವನ್ನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.

ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಖಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು. ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಆದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಬಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.

ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಬನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. 'For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.
' ಅಂತ.
ದೀಪ್ ಅವರ 'ಪ್ರದಾನ್ 'ನಲ್ಲಿ ಯಾರೂ ಸ್ವಯಂ ಸೇವಕರಲ್ಲ. ಅಲ್ಲಿ ಎಲ್ಲರೂ ನೌಕರರೇ... ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರದಾನ್ ಕ್ಯಾಂಪಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಎಂ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗಿ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ. ಸದ್ಯಕ್ಕೆ ಒಂದು ಸಾವಿರ ಮಂದಿಯನ್ನು ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ
ಅಂದರೆ ನಂಬಲಾಗುತ್ತಿದೆಯೇ...?

ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಖಂಡ್,ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಇವರ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷಧಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಗಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ವಾಸ್ತವಿಕವಾಗಿ ಉಪಯೋಗಿಸುತ್ತಾರೆ.

ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ, ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಭಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ. ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.

ಪ್ರಶಸ್ತಿ ಬಂದ ನಿಮಿಶಕ್ಕೆ ಅದನ್ನು ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ. ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹೀರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಟು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರದಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ, ಯುವಕರಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆಗೆ ಜೋಶಿ ಸಲಹೆಗಾರರು ಮಾತ್ರ.

ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.
ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು
ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ, ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ, ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದವು..

ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು. ಇಂಟರ್ನೆಟ್ ನಲ್ಲಿ ಹುಡುಕಾಡಿದೆ, ಅಲ್ಲೂ ಮಾಹಿತಿ ಇರಲಿಲ್ಲ. ಕೌಲಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು.
ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಭಾ ಪಾಟೀಲ್ ಒಂದೆರಡು ಸರ್ಕಾರಿ ಹೇಳಿಕೆ ಕೊಟ್ಟರು ಶಹಬಾಶ್ ಅಂದರು ಅಷ್ಟೇ ಮತ್ತೇನಿಲ್ಲ.

ಕಟ್ಟ ಕಡೆಗೆ ನಾನು ಸಂದರ್ಶನದಲ್ಲಿ ಕೇಳಲು ಆಗದೇ ಹೋಗಿದ್ದ, ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ. 'ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ...?' ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ' ಡಾನ್ ಆಪ್ ಪಾವರ್ಟಿ’ ಅಂದೆ. ಅವರು ನಕ್ಕರು.


ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ. www.pradan.net ಮತ್ತು
http://www.rmaf.org.ph/pdf/2-2009-Magsaysay-Awardees.pdf









Saturday, August 8, 2009

ಬಿಡಿ ಬಿಡಿ ಚಿತ್ರಗಳು.


ಮಹಾರಾಜ ಕಾಲೇಜು ಕ್ಯಾಂಟೀನಿನ ಟೆಂಡರನ್ನ ಆ ವರ್ಷ ಕನ್ನೇಗೌಡನ ಕೊಪ್ಪಲಿನ ಗಣೇಶ್ ಎಂಬುವವರೊಬ್ಬರು ಪಡೆದು ಆರಂಭಿಸಿದ್ದರು. ಕ್ಲಾಸಿಗಿಂತಲೂ ರೌಂಡ್ ಟೇಬಲ್ ಕ್ಯಾಂಟೀನಿನನ್ನೇ ಅಡ್ಡಾ ಮಾಡಿಕೊಂಡಿದ್ದ ನಾವು, ದಿನದ ಬಹುತೇಕ ಸಮಯ ಅಲ್ಲೇ ಇರುತ್ತಿದ್ದೆವು.ಕಾಲೇಜಿಗೆ ರಜಾ ಇದ್ದರೂ ಕ್ಯಾಂಟೀನಿನ ಕಡೆ ಹೋಗದೆ ಇದ್ದರೆ ಆ ದಿನ ಯಾಕೋ ಖಾಲಿ ಖಾಲಿ ಅನ್ನಿಸುತ್ತಿತ್ತು. ನಾವು ಅಲ್ಲೇ ಸಾಹಿತ್ಯದ ಚಟ ಹತ್ತಿಸಿಕೊಂಡಿದ್ದು, ಬೇರೆ ಬೇರೆ ಸಬ್ಜೆಕ್ಟ್ ಕಲಿಯುತ್ತಿದ್ದ ಸುನೀಲ್ ಬಾದ್ರಿ, ಸತೀಶ ಶಿಲೆ, ನಂದೀಶ್ ಅಂಚೆ, ವಿನಯ್ ಅವರೆಲ್ಲ ತಾವು ಓದಿಕೊಂಡು ಬಂದಿದ್ದನ್ನೆಲ್ಲಾ ನಾವೆಲ್ಲಾ ಬೆರಗಾಗುವಂತೆ ಹೇಳುತ್ತಿದ್ದರು. ನಾವು ಹುಬ್ಬೇರಿಸಿ ಕೇಳಿಸಿಕೊಳ್ಳುತ್ತಿದ್ದೆವು.

ನಾವಾದರೂ ಓದಿದ್ದಕಿಂತ ಅವರಿವರು ಹೇಳಿದ್ದನ್ನ ಕೇಳಿಯೇ ಪುಸ್ತಕ ಓದಿದ್ದೇವೆ ಅಂತ ತಿಳಿದುಕೊಳ್ಳುತ್ತಿದ್ದೆವು. ಅವರು ಕೋಟ್ ಮಾಡಿದ ವಿಶಯಗಳನ್ನೇ ಕಾಫಿ ಮಾಡಿ, ನಮಗಿಂತ ದಡ್ಡ ಶಿಕಾಮಣಿಗಳಾಗಿದ್ದ ಹಾಸ್ಟೆಲ್ ಹುಡುಗರಿಗೆ ಹೇಳಿ ಗಾಭರಿ ಹುಟ್ಟಿಸುತ್ತಿದ್ದೆವು. ನಾವು ಪ್ರಕಾಂಡ ಪಂಡಿತರೆಂಬಂತೆ ಬೀಗುತ್ತಿದ್ದೆವು.
ನಾನಂತೂ ಕ್ಯಾಂಟೀನ್ ನಡೆಸುತ್ತಿದ್ದ ಗಣೇಶ್ ಗೆ ನಮ್ಮ ಗ್ಯಾಂಗ್ ಕಾಲೇಜಿನಲ್ಲಿ ತುಂಬಾ ನಟೋರಿಯಸ್ ಜೊತೆಗೆ ನಮ್ಮ ಪ್ಯಾಮಿಲಿಯೇ ನಟೋರಿಯಸ್ ಅಂತ ನಂಬಿಸಿ, ಇಲ್ಲಸಲ್ಲದ ಕಥೆಗಳನ್ನೆಲ್ಲಾ ಹೇಳಿದ್ದೆ.. ಅವನು ನಮಗೆ ವಿಪರೀತ ಗೌರವಿಸುತ್ತಿದ್ದ . ದಿನಾಪೂರ್ತಿ ಅವನ ಕ್ಯಾಂಟೀನಿನಲ್ಲಿ ಬೇಕಾದ್ದನ್ನೆಲ್ಲಾ ತಿಂದು, ಕುಡಿದು ಇಪ್ಪತ್ತೋ ಮೂವತ್ತೊ ರೂಪಾಯಿ ಕೊಟ್ಟು ಯಾಮಾರಿಸುತ್ತಿದ್ದೆ.

ಮಹಾರಾಜ ಹಾಸ್ಟೆಲ್ ನಲ್ಲಿ ಕಿಟ್ಟಿ ಎಂಬ ಪೈಲ್ವಾನ್ ಒಬ್ಬ ಮೆಸ್ ನಡೆಸುತ್ತಿದ್ದ. ಹಾಸ್ಟೆಲ್ ನಲ್ಲಿರುತ್ತಿದ್ದ 450 ಹೆಚ್ಚು ಮಂದಿ ಹುಡುಗರನ್ನು ಸಂಬಾಳಿಸೋದು ತೀರಾ ಪ್ರಯಾಸದ ಕೆಲಸವಾಗಿತ್ತು. ಆಗಿನ ಕಾಲಕ್ಕೆ 650 ರೂಪಾಯಿ ಮೆಸ್ ಹಣ ಕಟ್ಚಬೇಕಿತ್ತು ನಾನು ಸೇರಿದಂತೆ ಬಹುತೇಕರು 300 ಅಥವಾ 350 ರೂಪಾಯಿ ಕೊಡುತ್ತಿದ್ದೆವು. ನಮ್ಮ ನಮ್ಮ ಮದ್ಯೆ ಅಗ್ರಿಮೆಂಟ್ ಏನೆಂದರೆ ಊಟ ಚೆನ್ನಾಗಿಲ್ಲಾ ಅಂತ ಗಲಾಟೆ ಎಬ್ಬಿಸಬಾರದು. ಅನ್ನ, ಸಾರು, ಪಲ್ಯಗಳನ್ನ ಚೆಲ್ಲಬಾರದು ಅನ್ನೊದು.
ಆತನ ಊಟ ಎಷ್ಟು ಭಯಾನಕ ಆಗಿರುತ್ತಿತ್ತು ಅಂದರೆ ಅನ್ನ, ಸಾರು, ಪಲ್ಯ ಉಪ್ಪಿನಕಾಯಿ, ಮಜ್ಜಿಗೆ, ಉಪ್ಪು ಎಲ್ಲವನ್ನ ಮಿಕ್ಸ್ ಮಾಡಿಕೊಂಡರೂ ಒಂಚೂರು ರುಚಿ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಯಾವತ್ತಾದರೂ ರುಚಿಯಾಗಿ ಸಾಂಬಾರ್ ಮಾಡಿದ್ದರೆ ಅಡಿಗೆ ಇನ್ ಚಾರ್ಜ್ ಹನುಮಂತನಿಗೆ ಕಿಟ್ಟಿ ಸಿಕ್ಕಾಪಟ್ಟೆ ಭೈಯುತ್ತಿದ್ದ. ಯಾಕಂದರೆ ಅವತ್ತು ಅಕ್ಕಿ ಸಿಕ್ಕಾಪಟ್ಟೆ ಖರ್ಚಾಗಿರುತ್ತಿತ್ತು.

ನಮಗೆ ಪರಿಚಯವಿದ್ದ ಗೆಳೆಯರ ಒತ್ತಾಯ ಮತ್ತು ಆಮಿಶಕ್ಕೆ ಬಿದ್ದು ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ದೃವನಾರಾಯಣ್ ಎಂಬುವರ ಪರ ಪ್ರಾಕ್ಸಿ ಓಟ್ ಹಾಕಲು ಹೋಗಿದ್ದೆವು. ರಾತ್ರಿಯೆಲ್ಲಾ ಪಾರ್ಟಿ ಮಾಡಿದ್ದ ನಮಗೆ ಬೆಳಿಗ್ಗೆ ಕಳ್ಳ ಓಟು ಹಾಕಲು ಸಿಕ್ಕಾಪಟ್ಟೆ ದಿಗಿಲಾಗಿತ್ತು. ಕರೆದುಕೊಂಡು ಹೋಗಿದ್ದ ನಾನೇ ದೈರ್ಯ ಮಾಡಿ ಯಾರೋ ನಾರಾಯಣ ಶಾಸ್ತ್ರಿ ಎಂಬುವರ ಹೆಸರಿನಲ್ಲಿ ಓಟು ಹಾಕಲು ಹೋಗಿದ್ದೆ. ನನ್ನ ಬೆರಳಿಗೆ ಇಂಕು ಹಾಕುವಾಗ ನನ್ನ ಅವರಿಗೆ ಕಾಣುವಂತೆ ಕೈಗಳು ಗಡ ಗಡ ಅಂತ ನಡುಗುತ್ತಿದ್ದವು.ಆದರೂ ಅವರು ಏನೂ ಕೇಳಲಿಲ್ಲ. ನನ್ನ ಗೆಳಯರಿಗೆಲ್ಲಾ ವಾಪಸ್ಸು ಬಂದು ಹೇಳಿದೆ 'ಯಾರೂ ಕೇಳಲ್ಲಾ, ಏನೂ ಆಗಲ್ಲಾ ತುಂಬಾ ಈಸಿ ಕಣ್ರೋ, ನೀವು ಹೋಗ್ರಿ' ಅಂತ. ಎಲ್ಲಾರು ಓಟು ಮಾಡಿ ಬಂದರು. ಅವತ್ತಿನ ಗಡಿಬಿಡಿ ಮತ್ತು ಆತಂಕದಲ್ಲಿ ಸ್ಪಲ್ಪ ದುಡ್ಡು ಕಳೆದುಕೊಂಡಿದ್ದೆ.

ಡಿಗ್ರಿಯ ಮೊದಲ
ವರ್ಷ ನಾನಿದ್ದ ರೂಂ ನಂಬರ್ 105 ರ ಪಕ್ಕ ಮಣಿಪುರದಿಂದ ಬಂದ ನಾಲ್ಕೈದು ಮಂದಿ ಸ್ನೇಹಿತರಿದ್ದರು, ಅವರ ಆಹಾರ ಪದ್ದತಿಯೇ ವಿಚಿತ್ರವಾಗಿತ್ತು, ದಿನದ ಮುಕ್ಕಾಲು ಬಾಗ ಅಡಿಗೆ ಸಿದ್ದಮಾಡಿ ತಿನ್ನೊದರಲ್ಲಿಯೇ ಕಳೆಯುತ್ತಿದ್ದರು. ಮಾಂಸಹಾರ ಅವರಿಗೆ ಸಿಕ್ಕಾಪಟ್ಟೆ ಪ್ರಿಯವಾಗಿತ್ತು. ಮಣಿಪುರಕ್ಕೆ ಹೊಗಿ ಬಂದವರು ಅದೇನೇನೂ ಹುಳಿ ಹುಳಿ ಚೀಪುವ ಕಡ್ಡಿಗಳನ್ನು ತರುತ್ತಿದ್ದರು. ನನಗೂ ಆಗಾಗ ಕೊಡುತ್ತಿದ್ದರು. ನಮ್ಮ ಹಾಸ್ಟೆಲ್ ನಲ್ಲಿರುತ್ತಿದ್ದ ಹತ್ತಾರು ನಾಯಿಮರಿಗಳಲ್ಲಿ ಕೆಲವು ಆಗಾಗ ಕಾಣೆಯಾಗುತ್ತಿದ್ದವು. ಅವು ರಾತ್ರೋರಾತ್ರಿ ಇವರ ಹೊಟ್ಟೆ ಸೇರಿದ್ದವು ಅನ್ನೊ ಗುಸು ಗುಸು ಹಬ್ಬಿತ್ತು.

ಹಾಸ್ಟೆಲ್ಲಿನ ರೂಮುಗಳಲ್ಲಿ ಸೋಪು, ಪೌಡರು, ಪೆನ್ನು, ನೋಟ್ ಬುಕ್ಕು, ಪೇಸ್ಟು ಇಂತಹ ವಸ್ತುಗಳ ಯಾವಾಗಲೂ ಕಾಣೆಯಾಗುತ್ತಿದ್ದವು. ಅವರ ಬಗ್ಗೆ ಇವರು ಇವರ ಬಗ್ಗೆ ಅವರಿಗೆ ಡೌಟು ಬರುವಂತಾಗಿತ್ತು. ರೂಮಿನ ಸಹಬಾಗಿಗಳೇ ಅನುಮಾನ ಪಡುವಂತಾಗಿತ್ತು. ಕಡೆಗೆ ಸೈಕಾಲಜಿ, ಕ್ರಿಮಿನಾಲಜಿ ಓದುತ್ತಿದ್ದ ಸುದಾಕರ್ ಎಂಬ ಹುಡುಗನ ಸೂಟ್ ಕೇಸ್ ನಲ್ಲಿ ಎಲ್ಲಾ ವಸ್ತುಗಳು ಪತ್ತೆಯಾದವು. ಆತ ಅವನ್ನೆಲ್ಲಾ ಊರಿಗೆ ಹೋದಾಗ ತೆಗೆದುಕೊಂಡು ಹೊಗುತ್ತಿದ್ದನಂತೆ. ಒಂದು ಬಾರಿ ಸಿಕ್ಕಿಕೊಂಡಮೇಲೂ ಸುಮ್ಮನಾಗದ ಅವನು ಮತ್ತೊಮ್ಮೆ ಹಾಗೆ ಕದ್ದು ಸಿಕ್ಕಿಕೊಂಡಿದ್ದ.

ಮಹಾರಾಜ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ತುಂಬಾ ಕಮ್ಮಿ ಇತ್ತು 3000 ಹುಡುಗರು 20 ಹುಡುಗಿಯರು ಇರಬೇಕೇನೋ ಕೆಲವೇ ಕೆಲವು ವಿಶಯಗಳಿಗೆ ಮಾತ್ರ ಅಡ್ಮೀಷನ್ ಕೊಡುತ್ತಿದ್ದರು. ಪಾಪ ಆ ಹುಡುಗಿಯರ ಮೇಲೆ ಕಾಲೇಜಿನ ಹುಡುಗರು ಸಿಕ್ಕಾಪಚಟ್ಟೆ ರೂಮರುಗಳನ್ನು ಹಬ್ಬಿಸೋರು, ಗೋಡೆಗಳ ಮೇಲೆ ಏನೇನೋ ಬರೆಯುತ್ತಿದ್ದರು. ಒಬ್ಬೆ ಒಬ್ಬ ಹುಡುಗಿಯನ್ನ ನೂರಾರು ಜನ ಪ್ರೀತಿಸೋರು, ಒನ್ ಸೈಡ್. ಆ ಹುಡುಗಿಯರೆಲ್ಲ ಕಾಲೇಜು ಬಿಡುವಹೊತ್ತಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ಗಟ್ಟಿ ಆಗಿರುತ್ತಿದ್ದರು ಅಂತ ನಂಗೆ ಈಗಲೂ ಅನಿಸುತ್ತೆ.

ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದ ರಘು ಎಂಬ ಗೆಳೆಯನೊಬ್ಬ ಗಣಿತ ಮತ್ತು ಕೆಮಿಸ್ಟ್ರಿಯಲ್ಲಿ ಯಾವಾಗಲೂ 90 ಕ್ಕೂ ಕಡಿಮೆ ಅಂಕ ಪಡೆಯುತ್ತಿರಲಿಲ್ಲ. ಆದ ದಿನಪೂರ್ತಿ ಓದುತ್ತಲೇ ಇರುತ್ತಿದ್ದ. ಆ ವರ್ಷದ ಬೇಸಿಗೆ ರಜಕ್ಕೆ ಆತ ಊರಿಗೇ ಹೋಗಿರಲ್ಲ. ನಾನು ವಾಪಸ್ಸು ಬಂದ ಮೇಲೆ ಆತನನ್ನ ಊಟಕ್ಕೆ ಏನು ಮಾಡ್ತಾ ಇದ್ದೆಯೋ ಅಂತ
ಕೇಳಿದೆ, ಅದಕ್ಕೆ ಅವನು ಹೆಚ್ಚು ಮಾತನಾಡದೇ ಅವನ ಮಂಚದ ಕೆಳಗೆ ನೋಡು ಅಂತ ಸನ್ನೆ ಮಾಡಿದ. ಬಗ್ಗಿ ನೋಡಿದಾಗ ಅಲ್ಲಿ ತಾಂಬೂಲಕ್ಕೆ ಕೊಡುವ ತೆಂಗಿನಕಾಯಿಗಳಿದ್ದವು. ನನಗೆ ಅರ್ಥ ಆಗಲಿಲ್ಲ. ಕಡೆಗೆ ಗೊತ್ತಾಯಿತು, ಅತ ಹುಡುಕಿ ಹುಡುಕಿ ಮದುವೇ ಛತ್ರಗಳಿಗೆ ಹೋಗ್ತಾ ಇದ್ದನಂತೆ... 'ಯಾರಿಗೂ ಸಿಕ್ಕಕೊಳ್ಳಲಿಲ್ಲವೇನೋ. ಅಂದೆ ಅದಕ್ಕೆ ಅವನು 'ಇಲ್ಲ ಕಣಮ್ಮಾ ಗಂಡಿನ ಕಡೆಯವನೂ ಅಂಥ ಹೆಣ್ಣಿನ ಕಡೆಯವರು. ಹೆಣ್ಣಿನ ಕಡೆಯವರು ಗಂಡಿನಕಡೆಯವರೂ ಅಂಥ ಸುಮ್ಮನೇ ಇರ್ತಾರೆ ಯಾರನ್ನೂ ಕೇಳಲ್ಲಾ' ಅಂದ. ನಾನು 'ಯಲಾ ಇವನಾ' ಅಂದು ಕೊಂಡೆ.
ಹೀಗೆ ಮಹಾರಾಜ ಕಾಲೇಜೆಂಬುದು ನನ್ನ ನೆನಪಿನ ಪುಟಗಳಲ್ಲಿ ಹಲವು ಬಿಡಿ ಬಿಡಿ ದಾಖಲಾಗಿ ಹೋಗಿವೆ. ಅವನ್ನ ಆಗಾಗ ಬರೆಯೋಣ ಅಂತ.





Tuesday, August 4, 2009

ಶಿವರಾಜ್ ಪಾಟೀಲ್ ಇನ್ ಮೇಕಿಂಗ್..



ಇವತ್ತು ಡಿಫೆನ್ಸ್ ಮಿನಿಸ್ಟ್ರಿಯಲ್ಲಿ ಯುವ ಎಂಪಿ ಗಳಿಗಾಗಿ ಪ್ರಯೋಜಿಸಿದ್ದ ಟೆರಿಟೋರಿಯಲ್ ಆರ್ಮಿಗೆ ಸಂಭಂದಿಸಿದ ಕಾರ್ಯಾಗಾರಕ್ಕೆ ಸೌಥ್ ಬ್ಲಾಕ್ ಗೆ ಹೋಗಿದ್ದೆ, ನಿಮಗೆ ತಿಳಿದಿದೆಯೋ ಇಲ್ಲವೋ ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಾದ, ಪ್ರೈಂ ಮಿನಿಸ್ಟರ್ ಆಫೀಸ್(ಪಿಎಂಓ), ಡಿಪೆನ್ಸ್, ಮತ್ತು ವಿದೇಶಾಂಗ ಖಾತೆ ಸೌಥ್ ಬ್ಲಾಕ್ ನಲ್ಲಿವೆ. ನಾರ್ಥ್ ಬ್ಲಾಕ್ ನಲ್ಲಿ ಅರ್ಥ ಸಚಿವಾಲಯ ಮತ್ತು ಗೃಹ ಖಾತೆಗಳ ಕಚೇರಿಗಳಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಸೂಕ್ಷ್ಮ, ಜವಾಬ್ದಾರಿಯುತ, ಘನತೆ ಉಳ್ಳ ಇಲಾಖೆಗಳು.. ರಾಷ್ಠ್ರಪತಿ ಭವನದ ಎದುರು ಕಾಣುವ ಉದ್ದನೆಯ ರಸ್ತೆಯ ಆಜುಬಾಜಿನಲ್ಲಿ ಹರಡಿರುವ ಸುಂದರ ಕಟ್ಟಡಗಳಲ್ಲಿ ಈ ಇಲಾಖೆಗಳು ಇವೆ. ಸಾಮಾನ್ಯವಾಗಿ ಟಿವಿಯಲ್ಲಿ ದೆಹಲಿ ಸುದ್ದಿಗಳು ಬಂದಾಗ ಇವನ್ನ ನೋಡಿರುತ್ತೀರಿ.

ಈ ಇಲಾಖೆಗಳನ್ನ ನಿಭಾಯಿಸೋದು, ಅಥವಾ ಈ ಇಲಾಖೆಗಳ ಮಂತ್ರಿಗಳಾಗೋದು ಅಷ್ಟೇನು ಸುಲಭದ ವಿಚಾರವಂತೂ ಅಲ್ಲ. ದೇಶವನ್ನು ಮುನ್ನಡೆಸುವ, ಅಥವಾ ಹಿನ್ನಡೆಸುವ ಶಕ್ತಿ ಈ ಇಲಾಖೆಗಳ ಮೇಲಿದೆ. ಆಡಳಿತದಲ್ಲಿ ನಿಪುಣರು, ಅನುಭವಿಗಳು, ಚಾಣಾಕ್ಷ ಮಂದಿ ಇಂತಹ ಇಲಾಖೆಗಳ ಮಂತ್ರಿಯಾಗಿ ಆಯ್ಕೆಯಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಗಮನಿಸಿ ನೋಡಿ, ಈ ಬಾರಿ ಇಂತಹ ಪ್ರಮುಖ ಮೂರು ಖಾತೆಗಳನ್ನು ನಿಭಾಯಿಸುತ್ತಿರುವ ಮೂರು ಮಂದಿ ದಕ್ಷಿಣ ಬಾರತೀಯರು, ಇನ್ನೊಬ್ಬರು ಬಂಗಾಳಿ.
ಗೃಹ ಇಲಾಖೆ ತಮಿಳುನಾಡಿನ ಚಿದಂಬರಂ, ಭದ್ರತಾ ಇಲಾಖೆ ಕೇರಳದ ಎ.ಕೆ. ಆಂಟನಿ. ವಿದೇಶಾಂಗ ಖಾತೆ ಕನ್ನಡಿಗ ಎಸ್.ಎಂ.ಕೃಷ್ಣ. ಉಳಿದದ್ದು ಹಣಕಾಸು ಬಂಗಾಳಿ ಪಂಡಿತ ಪ್ರಣಬ್ ಮುಖರ್ಜಿ ಕೈಯಲ್ಲಿದೆ.
ಇಲ್ಲಿ ಉತ್ತರ ಬಾರತದವರು ಯಾರೂ ಇಲ್ಲ ಅನ್ನೊದು ಚರ್ಚೆಯ ವಿಷಯ ಕೂಡ. ಅದೇ ವಿಚಾರಕ್ಕೆ ಉತ್ತರ ಭಾರತದ ಹಲವು ಕಾಂಗ್ರೆಸ್ ನಾಯಕರ ಹೊಟ್ಟೆ ಕೆಂಪಾಗಿರೋದರಲ್ಲಿ ಅಚ್ಚರಿಪಡುವುದೇನೂ ಇಲ್ಲ .

ನಾನು ಹೇಳಬೇಕಾಗಿರುವ ಗುಟ್ಟು ದೆಹಲಿ ರಾಜಕೀಯದ ಕಾರಿಡಾರುಗಳಲ್ಲಿ ಹೊರಳಾಡುತ್ತಿರುವ, ಪತ್ರಕರ್ತ ಸಮೂಹದಲ್ಲಿ ಚರ್ಚೆಗೆ ಒಳಗಾಗಿರುವ ವಿಶಯ ನಮ್ಮವರೊಬ್ಬರಿಗೆ ಸಂಭದಿಸಿದ್ದು. ದೆಹಲಿಯ ಬಿರುಬಿಸಿನಲ್ಲಿ ಆರಂಭವಾದ ಮೊದಲ ಅಧಿವೇಶನ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ಹೊಸ ಮಂತ್ರಿಗಳು ಹೊಸ ಹೊಸ ಬಿಲ್ಲು, ಚರ್ಚೆ. ಅಂತೆಲ್ಲಾ ಮಿಂಚಿದ್ದಾರೆ, ಕೆಲವರು ತಮ್ಮ ಶಕ್ತಿಯನ್ನ, ಬುದ್ದಿವಂತೆಕೆಯನ್ನ ಪ್ರದರ್ಶನ ಇಟ್ಟಿದ್ದಾರೆ. ಕೆಲವರು ಗುಡ್ ಅನಿಸಿಕೊಂಡರೇ ಕೆಲವರೂ ಇನ್ನೂ ವೀಕ್ ಅನ್ನಿಸಿಕೊಂಡಿದ್ದಾರೆ.

ಈ ಮದ್ಯೆ ಎಸ್.ಎಂ. ಕೃಷ್ಣ ಅವರ ಬಗ್ಗೆ ರಾಜಕೀಯದ ಕಾರಿಡಾರುಗಳಲ್ಲಿ ಗುಸು ಗುಸು ಆರಂಭವಾಗಿದೆ, ಅವರನ್ನ ಮುಖ್ಯಮಂತ್ರಿಯಾಗಿ ನೋಡಿದ್ದವರಿಗೆ ಅರ್ಥವೇ ಆಗದಷ್ಟು ಎಸ್.ಎಂ.ಕೃಷ್ಣ ಪೇಲವವಾಗಿ ಕಾಣುತ್ತಾ ಇದ್ದಾರೆ, ಅವರು ಓಥ್ ತೆಗೆದುಕೊಂಡ ದಿನದ ಉತ್ಸಾಹ ಯಾಕೋ ಕಾಣುತ್ತಾ ಇಲ್ಲ. ರಾಜಕೀಯದಲ್ಲಿನ ಅವರ ಅಗಾಧ ಅನುಭವ ಅವರ ನೆರವಿಗೆ ಬಂದಂತೆ ಕಾಣುತ್ತಾ ಇಲ್ಲಾ ಅನ್ನೊದು ಅವರನ್ನು ಬಹಳ ವರ್ಷಗಳಿಂದ ಬಲ್ಲವರ ಅಭಿಪ್ರಾಯ.

ಅದರೇ ಅವರ ವಿರೋಧಿಗಳು, ಅವರನ್ನ ಕಳೆದ ಲೋಕಸಭೆಯಲ್ಲಿ ಗೃಹ ಮಂತ್ರಿಯಾಗಿ ಮುಂಬೈ ದಾಳಿಯ ನಂತರ ರಾಜೀನಾಮೆ ಕೊಟ್ಟ ಶಿವರಾಜ ಪಾಟೀಲರಿಗೆ ಕೃಷ್ಣರನ್ನು ಹೋಲಿಸುತ್ತಿದ್ದಾರ . He is not impressive , he is Shivraaj patil in making ಅಂಥ ಮಾತಾಡಿಕೊಳ್ಳುತ್ತಾ ಇದ್ದಾರೆ.

ಶಿವರಾಜ್ ಪಾಟೀಲರು ಮುಂಬೈ ದಾಳಿ ಆದ ದಿನವೂ ನಾಲ್ಕು ಬಾರಿ ಡ್ರೆಸ್ ಚೇಂಜ್ ಮಾಡಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದರಂತೆ. ಸದಾ ಸುಮಂಗಲಿ ತರಹ ನೀಟಾಗಿ ಡ್ರೆಸ್ ಮಾಡುತ್ತಿದ್ದ ಅವರು ಶೋಕಿವಾಲ. ಮುಂಬೈ ದಾಳಿ ಆದ ದಿನ ಶಿವರಾಜ್ ಪಾಟೀಲರೂ ನಾಲ್ಕು ಬಾರಿ ಬಟ್ಟೆ ಬದಲಾಯಿಸಿದ್ದನ್ನೇ ಸೂಕ್ಷ್ಮ ಗ್ರಹಿಕೆಯ ಪತ್ರಕರ್ತನೊಬ್ಬ ವರದಿ ಮಾಡಿದ್ದ. ಅದೇ ಶಿವರಾಜ್ ಪಾಟೀಲರಿಂದ ಕಾಂಗ್ರೇಸ್ ರಾಜೀನಾಮೆ ಕೇಳಲಿಕ್ಕೆ ಕಾರಣ ಅಂಥ ಕೂಡ ಹೇಳುತ್ತಾರೆ.

ಈಗ ತಾನೆ ಎಸ್.ಎಂ.ಕೃಷ್ಣ ವಿರುದ್ದ ದೆಹಲಿಯಲ್ಲಿ ಅಭಿಪ್ರಾಯ ರೂಪುಗೊಳ್ಳುತ್ತಾ ಇದೆ, ವಿದೇಶಾಂಗ ಖಾತೆಯನ್ನು ಪಡೆದಿರುವ ಅವರು ಈವರೆಗೆ ಒಂದೇ ಒಂದು ಸಾರಿ ಇಂಪ್ರೆಸ್ ಮಾಡುವ ರೀತಿ ಮಾತಾಡಿಲ್ಲ, ಅಹಾ ಕೃಷ್ಣ ಎಷ್ಟು ಚಾಲಾಕು ಗುರು ಅಂತ ಹೇಳುವಂತೆಯೂ ಇಲ್ಲ, ಅನುಭವ ಎಲ್ಲಿ ಹೋಯಿತೋ ಗೊತ್ತಾಗುತ್ತಾ ಇಲ್ಲ.
ಎಲ್ಲಾಪ್ಪಾ ಮಾಯವಾಯಿತು ಇವರ ಅನುಭವ, ಚಾಲಾಕು ತನ ಅನ್ನೊ ಅನುಮಾನ ಬರುವಂತೆ ಆಗಿದೆ.


ಅವರು ಅಧಿಕಾರಕ್ಕೆ ಬಂದ ದಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಮೊದಲ ದಿನ ಇಲಾಖೆ ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಓದಿ, ನಾನು ಈ ಇಲಾಖೆಗೆ ಹೊಸಬ ಮುಂದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದಾಗ ಪತ್ರಕರ್ತರಿಗೂ ಖುಷಿಯಾಗಿತ್ತು. ನಾವು ಅಂದುಕೊಂಡಿದ್ದೆವು ಕೃಷ್ಣ ಅವರಿಗೆ ತಕ್ಕ ಇಲಾಖೆ ಸಿಕ್ಕಿದೆ ಅಂತ, ಆದರೆ ಈಗ ಏನಾಗಿದೆ ನೋಡಿ ಕೃಷ್ಣ ಇನ್ನೂ ಅಧಿಕಾರಿಗಳು ಬರೆದುದ್ದನ್ನೇ ಓದುತ್ತಾ ಇದ್ದಾರೆ, ಪಾರ್ಲಿಮೆಂಟಿನಲ್ಲಿ ಪದೇ ಪದೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇದ್ದಾರೆ ಕನಿಷ್ಠ ಹತ್ತು ನಿಮಿಶವೂ ಸ್ವಂತಕ್ಕೆ ಸ್ಪಾಂಟೇನಿಯಸ್ ಆಗಿ ಮಾತಾಡೋಕೆ ಆಗಿಲ್ಲ.

ಬಿಜೆಪಿಯ ಘಟಾನು ಗಟಿಗಳು ಈಗ ಕೃಷ್ಣಾ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಅವರ ತಂತ್ರಕ್ಕೆ ಮೊದಲ ಬಲಿ ಇವರನ್ನೇ ಮಾಡೋಕೆ ತಂತ್ರ ಹೆಣೆದಿದ್ದಾರೆ.

ಹಿಲರಿ ಕ್ಲಿಂಟನ್ ಬಂದಾಗ ಅವರಿಗೆ ಸರಿಸಾಟಿಯಾಗಿ ಕೃಷ್ಣ ಮಿಂಚಲಿಲ್ಲ, ಕಂಡಲೆಲ್ಲ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಹಿಲರಿಯ ಡಿಪ್ಲೋಮಸಿ ಕೃಷ್ಣ ನಡುವಳಿಕೆಯಲ್ಲಿ ಕಾಣಲಿಲ್ಲ ಅಂತ ಪರ್ತಕರ್ತರೂ ಮಾತಾಡಿಕೊಳ್ಳುತ್ತಾ ಇದ್ದಾರೆ. ಯಾವಾಗಲೂ ಕೃಷ್ಣ ಗೆಲುವಿನಿಂದ ಕಾಣಿಸಲೇ ಇಲ್ಲ, ಬಲೂಚಿಸ್ಥಾನದ ಪ್ರಕರಣವನ್ನು ನಿಭಾಯಿಸಲು ಕೃಷ್ಣ ಹೆಣಗುತ್ತಿದ್ದಾರೆ, ಪ್ರಣಬ್ ಈಗ ಕೃಷ್ಣ ನೆರವಿಗೆ ಬರಬೇಕಾಗಿದೆ. ಅಧಿಕಾರಿಗಳು ಬರೆದುಕೊಟ್ಟಿದ್ದನೇ ಬಗ್ಗಿ ಬಗ್ಗಿ ಓದೋಕೆ ಕೃಷ್ಣಾ ಬೇಕಿಲ್ಲ ಅಲ್ಲವಾ..

ವಿದೇಶಾಂಗ ಇಲಾಖೆಯನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಭಾಯಿಸಿದ ಪ್ರಣಬ್ ನಡವಳಿಕೆ ನೋಡಿರಬೇಕು, ಆ ಬಂಗಾಳಿ ಮುದುಕ ಬಾರಿ ಚಾಲಾಕು. ಅಗ್ರೆಸೀವ್, ಮತ್ತು ಅನುಭವಿ . ಮುಂಬೈ ಧಾಳಿ ನಡೆದಾಗ ಪಾಕಿಸ್ತಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದನ್ನು ನೀವು ನೋಡಿರಬಹುದು, ಆದರೆ ಅಂತಹದೇ ಸಂದರ್ಭ ಬಂದರೆ ಕೃಷ್ಣ ಹೇಗೆ ನಿಭಾಯಿಸುತ್ತಾರೋ ನೋಡಬೇಕು.

ಅದೇ ಮಲ್ಲಿಕಾರ್ಜುನ ಖರ್ಗೆ ಪಾರ್ಲಿಮೆಂಟಿನಲ್ಲಿ ಮಿಂಚಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ಸಿಪಿಎಂ ನ ಗುರುದಾಸ್ ಗುಪ್ತಾ ಅವರಿಗೆ ನೀಡಿದ ಉತ್ತರ ಮತ್ತು ಮಾತಾಡಿದ ಪರಿಗೆ ಸೋನಿಯಾಗಾಂದಿ ಕಣ್ಣು ಮಿಟುಕಿಸಿ ಚೆನ್ನಾಗಿದೆ ಅಂದರಂತೆ, ಅದೇ ಅಲ್ಲ ಮನಮೋಹನ ಸಿಂಗ್ ಖರ್ಗೆ ಅವರಿಗೆ ಕರೆ ಮಾಡಿ ಭೇಷ್ ಅಂದರಂತೆ.

ಸದ್ಯಕ್ಕೆ ಅತೀ ಸೂಕ್ಷ್ಮ ವಿಷಯಗಳಾದ ಪಾಕಿಸ್ಥಾನ, ಚೀನಾ. ಅಮೇರಿಕಾ. ಆಸ್ಟ್ರೇಲಿಯಾ ಕುರಿತು ತರೋ ಆಗಿ ತಿಳಿದುಕೊಳ್ಳೊಕೆ ಕೃಷ್ಣ ಅವರಿಗೆ ಎಷ್ಠು ದಿನಬೇಕಾಗಿದೆಯೋ ಗೊತ್ತಿಲ್ಲ.
ಮೀಡಿಯಾಗಳಿಗೆ ಮಾತಾಡುವ ಅವರ ಕಲೆ ಅವರಿಗೆ ಮರೆತುಹೊಯಿತಾ ಗೊತ್ತಿಲ್ಲಾ..

ವಿದೇಶಾಂಗ ಖಾತೆಯನ್ನು ದಿನವೂ ಕವರ್ ಮಾಡುವ ಹಿಂದಿ ಚಾನಲ್ಲಿನ ಗೆಳಯನೊಬ್ಬ ಇವತ್ತು ನನ್ನ ಕೇಳಿದ 'ವಾಟ್ ಹ್ಯಾಪನ್ಡ್ ಟು ಯುವರ್ ಕೃಷ್ಣ, ವೈ ಹಿ ಈಸ್ ಸೋ ಅನ್ ಇಂಪ್ರಸೀವ್, ಹಿ ಈಸ್ ಶಿವರಾಜ್ ಪಾಟೀಲ್ ಇನ್ ಮೇಕಿಂಗ್, ಹಿ ಈಸ್ ಗೋಯಿಂಗ್ ಲೂಸ್ ಇಸ್ ಮಿನಿಷ್ಟ್ರೀ ಶಾರ್ಟಲಿ'. ಅಂದ.

ನಾನು 'ಯಾಕಪ್ಪ' ಅಂದೆ. 'ಅದಕ್ಕೆ ಅವನು ನಾನೇಳೋದನ್ನ ಬರೆದಿಟ್ಟುಕೋ. ಕೃಷ್ಣ ಹಿಂಗೆ ಮುಂದುವರೆದರೆ ನಾಲ್ಕು ತಿಂಗಳಲ್ಲಿ ಮನೆಗೆ ಹೋಗ್ತಾರೆ' ಅಂದ. 'ಇಲಾಖೆಯಲ್ಲಿ ಪಳಗಿರೋ ಅಧಿಕಾರಿಗಳಿಗೇ ಉತ್ಸಾಹ ಹೋಗಿದೆ, ಕೃಷ್ಣ ಅವರ ಬಗ್ಗೆ ಅವರು ಬಂದಾಗ ಇದ್ದ ಒಪಿನಿಯನ್ ಈಗ ಇಲ್ಲವಾಗಿದೆ. ಅವರು ಪಾರಿನ್ ಅಲ್ಲಿ ಕಲಿತದ್ದು ಎಲ್ಲಾ ಎಲ್ಲಿಹೋಯಿತು ಅಂಥ ಅಧಿಕಾರಿಗಳಿಗೆ ತಿಳಿತಾ ಇಲ್ಲಾ' ಅಂದ.

ಕಡೆಗೆ 'ಅದ್ಯಾರೋ ಕೃಷ್ಣಾ ಅವರಿಗೆ ಅಡ್ವೈಸರ್ ಆಗಿ ರಾಘವೇಂದ್ರ ಶಾಸ್ತ್ರಿ ಇದಾರಲ್ಲ ಅವರಿಂದಲೇ ಇದೆಲ್ಲ ಆಗಿರೋದು, ಇಲಾಖೆಯಲ್ಲಿ ಪಳಗಿರೋ ಮಹಾನ್ ಬುದ್ದಿವಂತ ಅಧಿಕಾರಿಗಳನ್ನೇ ಆತ ಕೃಷ್ಣರಿಂದ ದೂರ ಇಟ್ಟಿದ್ದಾನೆ. ಯಾರನ್ನೂ ಕೃಷ್ಣ ಅವರ ಹತ್ತಿರ ಸುಳಿಯೋಕು ಬಿಡುತ್ತಾ ಇಲ್ಲ. ಎಲ್ಲೋ ಪೇಜಸ್ ನಲ್ಲಿದ್ದವ ವಿದೇಶಾಂಗ ಖಾತೆ ನೋಡಿಕೊಂಡ್ರೇ ಏನುಗುತ್ತೇ ಹೇಳಿ. ಆತ ಕೃಷ್ಣ ಅವರ ಒಂದು ಕಿವಿಯನ್ನ ಆತ ಹೈಜಾಕ್ ಮಾಡಿದ್ದಾನೆ. ಇನ್ನೊಂದು ಕಿವಿ ಸರಿಯಾಗಿ ಕೇಳೋಲ್ಲ' ಅಂತ ಹೇಳಿ ನಕ್ಕ. ಜೊತೆಗೆ ರಾಘವೇಂದ್ರ ಶಾಸ್ತ್ರಿ ಯ ಕಾರಣಕ್ಕೆ ಕೃಷ್ಣ ವೈಪಲ್ಯ ಆದರೂ ಅಚ್ಚರಿ ಇಲ್ಲಾ ನೋಡಿ, ಅಂಥ ಹೇಳಿ ಕಡೆಗೆ
ನನ್ನನ್ನೇ ಪ್ರಶ್ನಿಸಿದ ವಾಟ್ ಯ್ಯಾಪನ್ಡ್ ಟು ಕೃಷ್ಣಾ ಅಂತ. ನನಗೂ ಏನು ಹೇಳಬೇಕೋ ತಿಳಿಯದೇ ಐ ಡೋಂಟ್ ನೋ ಅಂದೆ.



Friday, July 31, 2009

ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ...!!



ದೇಶದಲ್ಲಿರೋ ಎಪ್ಪತೈದು ಪರ್ಸೆಂಟು ರೈತರು ನಾವು 6 ತಿಂಗಳೂ ಏನೂ ಬೆಳಿಯೋದಿಲ್ಲ, ವೀ ಆರ್ ಬ್ಲೀಡಿಂಗ್, ವಿ ಆರ್ ಡೈಯಿಂಗ್, ವಿ ಡೋಂಟ್ ಕಾಲಿಟ್ ಯಾಸ್ ಸ್ಟ್ರೈಕ್. ಇಟ್ ಈಸ್ ಜಸ್ಟ್ ಟು ಕಾಲ್ ದ ಅಟೆನ್ ಶನ್ ಆಪ್ ಗೌರ್ನಮೆಂಟ್ ಅಂಥ,
ವಿಶ್ವಕ್ಕೆ ಅರ್ಥ ಆಗೋ ಆಂಗ್ಲ ಭಾಷೆಯಲ್ಲಿ ಹೇಳಿದ್ರೆ ಏನಾಗಬಹುದು ಅಂತ ನಂಗೆ ಯೋಚನೆ ಬಂದಿದೆ.

ಯಾಕಂದ್ರೆ ನಿನ್ನೆ ಕಿಂಗ್ ಫಿಷರ್ ನ ವಿಜಯ್ ಮಲ್ಯ, ಜಟ್ ಏರ್ ವೇಸ್ ನ ನರೇಶ್ ಗೋಯಲ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಅದನ್ನೇ ಹೇಳುತ್ತಿದ್ದರು.ಖಾಸಗಿ ವಿಮಾನ ಯಾನ ಸಂಕಷ್ಠದಲ್ಲಿದೆ, ನಾವು ಸಾಯ್ತಾ ಇದ್ದೇವೆ, ದಿನಾ ಕೋಟಿ,ಕೋಟಿ ನಷ್ಟ ಆಗ್ತಾ ಇದೆ .ವಿಮಾನಕ್ಕೆ ಪೆಟ್ರೋಲ್ ಹಾಕಿಸಕ್ಕೆ ಕಾಸಿಲ್ಲ, ಬ್ಯಾಂಕ್ ನಲ್ಲಿ ಸಾಲ ತಂದ್ರೆ ಮಾತ್ರ ವಿಮಾನ ಓಡಿಸೋಕೆ ಇಲ್ಲಾ ಅಂದ್ರೆ ಆಗಲ್ಲ. ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಆದ್ರೂ ಪ್ಯಾಕೇಜ್ ಕೊಡಬೇಕು ಇಲ್ಲಾ ಅಂದ್ರೆ. ಆಗಸ್ಟ್ 18 ಕ್ಕೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸುತ್ತೇವೆ, ಅಂತ ಓಕ್ಕೊರಲಿನಿಂದ ಸರ್ಕಾರಕ್ಕೆ ಧಮಕಿ ಹಾಕಿದ್ದಾರೆ.

ಅವರೆಲ್ಲ ಧಮಕಿ ಹಾಕಿದಂತೆ ದೇಶದ ರೈತರೂ ಯಾವತ್ತಾದರೂ ಧಮಕಿ ಹಾಕಿದ್ದಾರಾ. ಹಾಕಿದ್ರೆ ಏನು ಆಗುತ್ತೆ ಅಂತ ಯೋಚನೆ ಮಾಡ್ತಾ ಇದ್ದೇನೆ.
ನಮ್ಮ ರೈತರದು ಬರೀ ಬ್ಲೀಡಿಂಗ್ ಅಲ್ಲ. ಹುಟ್ಟಿದಾಗಲಿಂದಲೇ ಡೈಯಿಂಗ್, ಸಾಲ ಮಾಡದೇ ನಮ್ಮ ರೈತರು ಎಲ್ಲಿ ಬೆಳೆಹಾಕಿದ್ದಾರೆ ಹೇಳಿ, ನಮ್ಮ ಜೀವನವೇ ಸಾಲ, ಅವ ಸತ್ತ ಮೇಲೆ ಮಕ್ಕಳ ಮೇಲೆ ಸಾಲ, ಸಾಲವೇ ನಮ್ಮ ಬದುಕು, ಸಾಲವೇ ಜೀವನ ಸಾಕ್ಷಾತ್ಕಾರ.

ಇಲ್ಲಿ ಡೆಲ್ಲಿಗೆ ಆಗಾಗ ರೈತರು ನಿಯೋಗ ಮಾಡಿಕೊಂಡು ಬರುತ್ತಾ ಇರುತ್ತಾರೆ, ನಮಗೆ ಪರಿಹಾರ ಕೊಡಿ. ಅಡಿಕೆ ಬೆಲೆ ಕುಸಿದಿದೆ ಬೇರೇ ದೇಶದಿಂದ ಆಮದು ಮಾಡಿಕೊಳ್ಳಬೇಡಿ. ಕೊಬ್ಬರಿಗೆ ಕನಿಷ್ಠ (ಧರ್ಮದ) ಬೆಲೆಕೊಡಿ, ನಮ್ಮ ಷುಗರ್ ಪ್ಯಾಕ್ಟರಿಗಳು ಸಾಯ್ತ ಇವೆ ಸಹಾಯಹಸ್ತಕೊಡಿ. ಕಾಫಿಯನ್ನ ಯಾರೂ ಕೇಳ್ತಾ ಇಲ್ಲ, ನೆರವುಕೊಡಿ ಅಂತ. ಬಂದವರು ತಮಗೆ ಗೊತ್ತಿರುವ ಮಂತ್ರಿಗಳನ್ನು ಹಿಡಿದುಕೊಂಡು, ಸಂಭಂದ ಪಟ್ಟ ಮಂತ್ರಿಗಳನ್ನ ಭೇಟಿಯಾಗಿ ಮನವಿ ಕೊಟ್ಟು ಬರುತ್ತಾರೆ.
ಮಂತ್ರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಠ ಹೇಳಿಕೊಂಡಿದ್ದಕ್ಕೆ, ಆತ ಅದನ್ನು ಸಾವಾಕಾಶವಾಗಿ ಕೇಳಿದ್ದಕ್ಕೆ, ನಮ್ಮ ರೈತ ಮುಖಂಡರು ಅತೀವ ಸಂತೋಷದಿಂದ ಬೀಗುತ್ತಾರೆ. ಮಾದ್ಯಮದವರನ್ನ ಕರೆದು ಹೇಳುತ್ತಾರೆ, ನಮಗೆ ಭರವಸೆ ಸಿಕ್ಕಿದೆ, ಮಂತ್ರಿಗಳು ಇನ್ನೆರಡು ವಾರಗಳಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರಂತೆ. ಅದು ಟಿ.ವಿ ಮತ್ತು ಪೇಪರಿನಲ್ಲಿ ಒಂದು ಸಣ್ಣ ಸುದ್ದಿಯಾಗಿ ಬರುತ್ತೆ.

ಕೆಲವು ತಿಂಗಳ ನಂತರ ಅದೇ ನಿಯೋಗದ ರೈತರು ಮತ್ತೆ ರೈಲು ಹತ್ತಿ ಮತ್ತೆ ಡೆಲ್ಲಿಗೆ ಬರುತ್ತಾರೆ, ಅದೇ ಸಮಸ್ಯೆ, ಅದೇ ಮಂತ್ರಿ, ಅದೇ ಭರವಸೆ, ಮತ್ತು ಅದೇ ಮಾದ್ಯಮ ಮಿತ್ರರಿಗೆ ಪೋನು ಬರುತ್ತೆ ಸಾರ್ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಮಾಡ್ತೀವಿ ಅಂತ.ನಾವು ಹೋಗುತ್ತೇವೆ, ರೈತಮುಖಂಡರೂ ಹಳೇದನ್ನೇ ಹೆಳುತ್ತಾರೆ.
ಆದರೆ ಅವರು ಕೇಂದ್ರ ಮಂತ್ರಿಗೇ ಆಗಲಿ, ಸರ್ಕಾರಕ್ಕೆ ಆಗಲಿ ಧಮಕಿ ಹಾಕಿದ್ದೇವೆ ಸಾರ್ ವ್ಯವಸಾಯ ಮಾಡೋದನ್ನ ನಿಲ್ಲಿಸ್ತೇವೆ ಅಂತ ಹೇಳಲ್ಲ.

ಆದೇ ಸಂಘಟಿತವಾಗಿರುವ ಈ ವಿಮಾನ ಕಂಪನಿಗಳು, ತಮ್ಮ ತೆವಲಿಗಾಗಿ, ಲಾಭಕ್ಕಾಗಿ ಕಂಪನಿಗಳನ್ನು ತೆಗೆದಿವೆ. ಒಂದಲ್ಲಾ ಹತ್ತು ಬಿಜಿನೆಸ್ ನಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲಿನ ನೌಕರರಿಗೆ ಲಕ್ಷಾಂತರ ರೂಪಾಯಿ ಸಂಭಳ ಕೊಡ್ತಾರೆ, ತಮ್ಮ ವಿಮಾನಗಳಲ್ಲಿ ಅತಿ ಸುಂದರಿಯರೇ ಬೇಕಂತ ಕಂಪನಿಯ ಒಡೆಯನೇ ಪರ್ಸನಲ್ ಆಗಿ ಏರ್ ಹೋಸ್ಟಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಕುದುರೆ ರೇಸು, ಕಾರ್ ರೇಸು, ಕ್ರಿಕೆಟ್ ಟೀಮು, ಕತ್ರೀನ ಕೈಪು, ಅಂತೆಲ್ಲ ಯಾವ್ಯಾವುದೋ ತಲೆಕೆಟ್ಟ ಐಡಿಯಾಗಳಲ್ಲೆ ಹಣ ತೊಡಗಿಸುತ್ತಾರೆ. ಲೋಕದ ಜನ ಇವರನ್ನ ಗ್ರೇಟು ಸಾರ್ ಗ್ರೇಟು ಅಂತಾರೆ, ಜೊತೆಗೆ ಇಂಟರ್ ನ್ಯಾಷನಲ್ ವಲಯದಲ್ಲಿ ಅವರ ಹೆಸರು ರಾರಾಜಿಸುತ್ತೆ.
ಅಲ್ಲಾ ರೀ, ಲಾಭ ಬಂದಾಗ ಯಾರಿಗಾದ್ರೂ ಈ ಜನ ಹಂಚಿದ್ದಾರಾ, ಅಥವಾ ದೇಶದ ಕೃಷಿ ಕ್ಷೇತ್ರ ಸಂಕಷ್ಠದಲ್ಲಿ ಇದೆಯಪ್ಪಾ ಅವರ ನೆರವಿಗೆ ದಾವಿಸೋಣ ಅಂದಿದ್ದಾರಾ...

ಆದರೆ ಈಗ ನಾವು ಕಟ್ಟಿದ ತೆರಿಗೆ ಹಣದಿಂದ ಇವರನ್ನು ರಕ್ಷಿಸಬೇಕಂತೆ, ಬ್ಲೀಡಿಂಗ್ ಆಗ್ತಾ ಇದೆಯಂತೆ, ಸರ್ಕಾರ ಅದನ್ನ ಒರೆಸಬೇಕಂತೆ, ಇದನ್ನೆಲ್ಲ ಕೇಳಿದ್ರೇನೆ ತಲೆಕೆಡುತ್ತೆ, ಲಾಸ್ ಆದ್ರೇ ಬಾಗಿಲು ಹಾಕಲಿ, ಅವರಪ್ಪನ ಹಣನಾ ಅಡ ಇಡಲಿ.
ಇಲ್ಲಾ, ನಮ್ಮ ರೈತರ ಕಡೇ ಅಸ್ತ್ರ ಇದೆಯಲ್ಲಾ 'ಆತ್ಮ ಹತ್ಯೆ' ಅದನ್ನ ಮಾಡಿಕೊಳ್ಳಲಿ ಅಲ್ವಾ...

ವ್ಯವಸಾಯದ ಹಿನ್ನೆಲೆಯಲ್ಲಿ ಬಂದ ನಮ್ಮತವರಿಗೆ ಅದೇ ವ್ಯವಸಾಯದಲ್ಲಿ ಲಾಭ ಇದ್ದಿದ್ದರೇ ಈ ಖಾಸಗೀ ಕಂಪನಿಗಳಲ್ಲಿ ಯಾಕಾಗಿ ಕೂಲಿ ಮಾಡ್ತಾ ಇದ್ದೆವು ಅಂತ ಅನ್ನಿಸುತ್ತೆ. ಯಾಕೋ ಇವರ ಹೇಳಿಕೆಗಳನ್ನೆಲ್ಲಾ ಕೇಳಿಕೆ ಮನಸು ರೋಸಿಹೊಗಿದ್ದಕ್ಕೆ ಇದನ್ನೆಲ್ಲಾ ಬರೀಬೇಕಾಯ್ತು.
ಸರ್ಕಾರ ಏನು ಮಾಡುತ್ತೋ ನೊಡೋಣ.

Sunday, July 26, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!



ಆಗಿನ್ನೂ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.
ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ್ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...




Thursday, July 23, 2009

ಕಮಾನ್ ಮೋಹನ್ ಕುಮಾರ್ ಕಮಾನ್...


ಥ್ರೀ ಸೆವೆಂಟಿ ಸೆವೆನ್ ಎಂಬ ತಲೆ ಬರಹ ಇದ್ದ ಖಾಸಗಿ ಡೈರಿಯ ಬರಹಕ್ಕೆ ಬೇರೆ ಬೇರೆ ಮೂಲೆಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ, ಸಾಮಾನ್ಯವಾಗಿ ಬ್ಲಾಗ್ ಓದುವ ಮಂದಿ ಕಾಮೆಂಟ್ ಬರೆಯುವುದಿಲ್ಲ, ಬೇರೇನೋ ಕೆಲಸದ ಒತ್ತಡ, ಕನ್ನಡದಲ್ಲಿ ಬರೆಯುವ ಹಿಂಸೆ, ಸುಲಭವಾಗಿ ಸ್ಪಂದಿಸದ ಕಂಪ್ಯೂಟರ್ ಏನೇನೂ ಸಮಸ್ಯೆ ಇರ್ತವೇ, ಅದಕ್ಕೆ ಕಿರಿಕಿರಿ ಬೇಡ ಅಂತ ಕೆಲವರು ಮೇಸೆಜು ಕಳಿಸಿ ಇಲ್ಲಾ ಟೆಲಿಪೋನಿನಲ್ಲಿ ಅಭಿಪ್ರಾಯ ಹೇಳ್ತಾರೆ.

ಆದರೆ ಸಿರಿಯಸ್ಸಾಗಿ ಯೋಚಿಸುವ ಕೆಲವು ಮಂದಿ ಕಷ್ಟವಾದರೂ ಬಿಡದೇ ತಮ್ಮ ತಲೆಯನ್ನೆಲ್ಲಾ ಉಪಯೋಗಿಸಿ ಕಾಂಮೆಟಿಸುತ್ತಾರೆ, ಬ್ಲಾಗ್ ಬರೆಯೋರಿಗೆ ಇದು ತುಂಬಾ ಖುಷಿ ಕೊಡುತ್ತೆ, ಈ ಮದ್ಯೆ ಮೋಹನ್ ಕುಮಾರ್ ಎಂಬ ಹೆಸರಿನ ಗೆಳೆಯರೊಬ್ಬರು ಚಿಂತನೆಗೆ ಹಚ್ಚುವ ಕಾಮೆಂಟು ಕಳಿಸಿದ್ದಾರೆ ಓದಿ.

Anonymous ಮೋಹನ್ ಕುಮಾರ್ said...

ಗೌಡ್ರೆ! ನೀವು ಹೇಳೋದೆಲ್ಲ ಒಪ್ಕಂಡೆ. ಆದ್ರೆ ಅದು ಹಿಂದೂ ಇತ್ತು. ಇಮದೂ ಇದೆ. ಮುಂದೂ ಇರುತ್ತೆ ನಿಜ. ಆದ್ರೆ ನಿಸರ್ಗಕ್ಕೆ ವಿರುದ್ಧವಾಗಿರೋದಕ್ಕೆ ಕಾನೂನಿನ ಮುದ್ರೆ ಬೇಕೇ? ಫೌಂಡೇಷನ್ ಗೆ ಹೋಗಿ ಬಂದ ಬಗ್ಗೆ ಮನ ಕಲಕಿತು ಎಂದಿರಿ! ಆದ್ರೆ ಆ ಫೌಂಡೇಷನ್ ವಿದೇಶದ ಯಾವ ಯಾವ ೇಜೆನ್ಸಿಯಿಂದ ೆಷ್ಟೆಷ್ಟು ಪಂಡ್ ತರಿಸಿಕೊಳ್ತಿದೆ? ಈ ನಾಟಕ ೆಲ್ಲಾ ಏಕೆ ಮಾಡ್ತು ಎಂದು ನಿಜವಾದ ಗಂಡಸು ಪತ್ರಕತ್ತನಾಗಿದ್ರೆ ಮಾಡಿ.
ಹಾಗೆಯೇ ಹೆಣ್ಣು ಗಂಡಿನ ನಡುವೆ ಸೆಕ್ಸ್ ಸಾಮಾನ್ಯ. ಅದು ಸಹ ನೈಸರ್ಗಿಕ. ಹಾಗಂತ ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು! ಇಂಥಾ ಇನ್ಸೆಸ್ಟ್ ಗೆ ಕಾನೂನಿನ ಮಾನ್ಯತೆ ಬೇಕು ಎಂದು ಈ ಪವಂಡೇಷನ್, ದುಡ್ಡ ಮಾಡೋಕೆ ಕಾದಿರೋ ಎನ್ ಜಿ ಓ ದವರು ಪ್ರಯತ್ನಿಸಿದರೆ ಅದನ್ನು ಬೆಂಬಲಿಸ್ತೀರಾ? ಇಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಊಹಿಸಿಕೊಳ್ಳಲು ಸಿದ್ಧರಿದ್ದೀರಾ? ಯಾಕೆಂದರೆ ಅದೂ ಸಹಜ ತಾನೆ! ವೈ ಡೋಂಟ್ ಯೂ ಟ್ರೈ! ಈಗ ಕಾನೂನಿನ ಬಗ್ಗೆ ಮಾತನಾಡಿ ಗೌಡ್ರೆ! ಇದಕ್ಕೂ ಕಾನೂನಿನ ಮನ್ನಣೆ ಕೊಡೋಣವೇ?
ಅಂದಹಾಗೆ ಮತ್ತೊಂದು ಪ್ರಶ್ನೆ! ನಿಮ್ಮ ನಿಮ್ಮ ಅಮ್ಮ , ಅಕ್ಕ, ಸಿಸ್ಟರ್ ಗಳು ಲೆಸ್ಬಿಯನ್, ಅಪ್ಪ , ಅಣ್ಣ ಗೇ ಅಂತ ಗೊತ್ತಾದ್ರೆ ಆಗಲೂ ಇದೇ ರೀತಿ ಬರೀತೀರಾ? ಅಂತದ್ದನ್ನು ಅರಗಿಸಿಕೊಳ್ಳೋಕೆ ನೀವು ಸಿದ್ದರಿದ್ದೀರಾ? ನಿಮ್ಮ ಮನೆ, ಕುಟುಂಬ, ಸಂಸಾರ, ಪ್ರೀತಿ, ವಿಶ್ವಾಸ, ನಿಮ್ಮ ಅಪ್ಪ-ಅಮ್ಮನ ಸಂಬಂಧ ಇವೆಲ್ಲವುಗಳ ಪವಿತ್ರ ಸಂಬಂಧದ ಬಗ್ಗೆ ಮೊದಲು ಯೋಚಿಸಿ. ನಂತರ ಕಾನೂನಿನ ಬಗ್ಗೆ. ಜಿ.ಎನ್.ಮೋಹನ್ ಗೆ ಬಕೆಟ್ ಹಿಡಿಯುವ ನೀವು, ಬುದ್ದಿ ಜೀವಿಯಾಗುವ ಪೋಜ್ ಕೊಡಬೇಕಿಲ್ಲ.


ಪ್ರಿಯ ಮೋಹನ್ ಕುಮಾರ್.
ನಿಮ್ಮ ಕಾಮೆಂಟ್ ಗೆ ಸ್ವಾಗತ ಈ ಪೋಸ್ಟ್ ಅನ್ನು ಬರೆಯುವಾಗಲೇ ತುಂಬಾ ಟೀಕೆ ಬರಬಹುದು, ಚರ್ಚೆ ಆಗಬಹುದು ಅಂಥ ನಿರೀಕ್ಷೆ ಮಾಡಿದ್ದೆ, ಆದರೆ ತುಂಬಾ ಮಂದಿ ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿ ಬರೀತೀರಿ ಅಂದ್ರು, ಕೆಲವ್ರೂ ನೋ ಕಾಂಮೆಂಟ್ಸ್ ಅಂದರು, ಆದರೆ ನಾನು ನಿರೀಕ್ಷೆ ಮಾಡಿದಂತೆ ನೀವು ಟೀಕೆ ಮಾಡಿದ್ದೀರಿ ಸ್ವಾಗತ.

ಅದರೆ ಕಾಮೆಂಟ್ ಬರೆಯುವಾಗ ಅಲ್ಲಲ್ಲಿ ಸಿಕ್ಕಾಪಟ್ಟೆ ಗಂಡಸುತನ ಪ್ರದರ್ಶನ ಮಾಡಿದ್ದೀರಿ, ಅಪ್ಪ, ಅಮ್ಮ, ತಂಗಿ, ಬಕ್ಕೆಟ್ಟು ಅಂತ ಅಸಂಭದ್ದ ವಾಕ್ಯಗಳನ್ನ ಸೇರಿಸಿ ನನ್ನನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದೀರಿ ಅದ್ಯಾಕೆ ನಿಮಗೆ ನನ್ನ ಮೇಲೆ ಸಿಟ್ಟು ಬಂದ ಹಾಗಿದೆಯಲ್ಲಾ....
ಇದರ ಮದ್ಯ ನೀವು ಕೇಳಿರುವ ಪ್ರಶ್ನೆಗಳಿಗೆ ನನ್ನ ಸಮಾಜಾಯಿಸಿ ಏನು ಎಂಬಂತೆ ಪ್ರಶ್ನಾರ್ಥಕಗಳನ್ನು ಹಾಕಿ 'ಹೀರೋ' ಆಗಿದ್ದೀರಿ, ಅದಕ್ಕೆ ದನ್ಯವಾದ.

ಏಡ್ಸ್ ಪೀಡಿತ ಮಕ್ಕಳಿಗಾಗಿ ಅವರ ಬದುಕಿಗಾಗಿ ವಿದೇಶದ ಪಂಡು ತಗೊಂಡರೇ ನಿಮ್ಮ ಮೇಲೆ ಆಗೋ 'ವ್ಯತಿರಿಕ್ತ' ಪರಿಣಾಮ ಏನಂತ ನಂಗೆ ತಿಳಿಸಿ.
ನಾಜ್ ಪೌಂಡೇಶನ್ ಹಾಕಿರುವ ಕೇಸಲ್ಲಿ ಗೆದ್ದರೆ ಹೊಮೊಸೆಕ್ಸ್ ನಲ್ಲಿ ತೊಡಗೋ ಮಂದಿ ನಾಜ್ ಗೆ ಕಾಸು ಕಳಿಸಿಕೊಡ್ತಾರೇನ್ರಿ, ಏಡ್ಸ್ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡೋ ಸಂಸ್ಥೆ ಅದು ಅಂಥ ಹೇಳಿದ್ದಿನಲ್ಲಾ...

ಎನ್ ಜಿ ಓ ಗಳಿಗೆ ಪಾರಿನ್ ಪಂಡು ಬರುತ್ತೆ ಅಂತ ಹೇಳುವ ಹಳೆೇ ತಗಡು ಪ್ರಶ್ನೆಯನ್ನ ಕೆಲವರು ಹಾಕ್ತಾರೆ ನೀವೂ ಹಾಕಿದ್ದೀರಿ, ಹಾಗಾದರೆ ಪಂಡನ್ನ ಎನ್ ಜಿ ಒ ಗಳೇ ಪ್ರಿಂಟು ಮಾಡಕೋಬೇಕಾ.

ಆಮೇಲೆ ನಾಜ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿರೋದು ಐಪಿಸಿ 337 ಕಾನೂನನ್ನ ಮರುಪಶೀಲನೆ ಮಾಡಿ ಅಂಥ, ತಿದ್ದಿ, ಅಂತ ಅಲ್ಲ. ಕೋರ್ಟ್ ಗೆ ಹಾಗೆ ಮಾಡೋಕೆ ಬರಲ್ಲ. ಡೆಲ್ಲಿ ಹೈಕೋರ್ಟ್ ಜಡ್ಜ್ ಗಳು ಏನೂ ಪೆದ್ದರೂ ಅಲ್ಲ ಅಥವಾ ಹೋಮೋಸೆಕ್ಸ್ ಳೂ ಅಲ್ಲ, ನಿಮ್ಮಂತರಿಗೆ ಹಾಗೆ ಅನ್ನಿಸಿದರೇ ಯಾರಾದರೂ ಪತ್ರಕರ್ತರಿಗೆ ತನಿಖೆ ಮಾಡಲು ಹೇಳಿ ಇಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿ ಪರೀಕ್ಷೆ ಮಾಡಿಸಿ. ನಿಮ್ಮಂತಾ ಕೆಲವರಿಗೆ ಹೀಗೂ ಯೋಚನೆ ಮಾಡುವ ಬ್ರಿಲಿಯನ್ಸಿ ಇರತ್ತೇ.

ನಾರ್ಮಲ್ಲಾಗಿರುವ ನಿಮ್ಮಂತವರೇ ಅನೈಸರ್ಗಿಕವಾದ ರೇಪು, ಅತ್ಯಾಚಾರ, ಕೊಲೆ, ಮಕ್ಕಳ ದುರುಪಯೋಗ ಮಾಡುತ್ತಿರುತ್ತಾರೆ ಅವರನ್ನು ಏನು ಮಾಡೋದು ಸ್ವಾಮಿ. ನಿಸರ್ಗ ಕೂಡ ತಪ್ಪು ಮಾಡಬಹುದಲ್ಲಾ ಹೋಮೋಗಳ ಕೇಸಲ್ಲೂ ಅದೇ ಅಲ್ಲವಾ ಆಗಿರೋದು, ನಿಸರ್ಗ ಮಾಡಿರೋ ಲೋಪವನ್ನ ಹೇಗಪ್ಪಾ ಸರಿಮಾಡೋದು.
ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು. ಅಂತ ನೀವು ಪ್ರಶ್ನೆ ಕೇಳಿದ್ದೀರಿ ಇಂತ ಪ್ರಶ್ನೆ ಹಾಕೋ ಮನಸು ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡದೆ ಯ್ಯಾಗಾದರೂ ಗೆದ್ದುಬಿಡಬೇಕು ಎಂಬ ಕಿರಾತಕ ಮನಸುಗಳಲ್ಲಿ ಹುಟ್ಟಲಿಕ್ಕೆ ಸಾದ್ಯ, ಅದಕ್ಕೆ ಉತ್ತರಕೊಡೋದಕ್ಕಿಂತ ಕೇಳಿದ್ದು ಸರಿಯಾ ತಪ್ಪಾ ಅಂತ ಮೋಹನ್ ಕುಮಾರ್ ಯೋಚಿಸಬೇಕು.

ಪ್ರಕೃತಿಗೆ ವಿರುದ್ದವಾದ ಕ್ರಿಯೆಗೆ ಕಾನೂನಿನನ ಮುದ್ರೆ ಯಾಕೆ ಸ್ವಾಮಿ ಅನ್ನೊ ಪ್ರಶ್ನೆ ಕೇಳಿದ್ದೀರಿ, ಅದೇ ಚರ್ಚೆ ಅಲ್ಲವಾ ಈಗ ನಡೀತೀರೋದು, ಕಮಾನ್ ಮಹೇಶ್ ಕುಮಾರ್ ಮತ್ತೊಮ್ಮೆ ಮಗದೊಮ್ಮೆ ಪ್ರಶ್ನೆಗಳನ್ನ ಹಾಕಿ.. ಸುಕಾಸುಮ್ಮನೆ ರಕ್ತ ಕಾರಿಕೊಳ್ಳಬೇಡಿ ಸೈಟಿಫಿಕ್ ಆಗಿ ಅದೂ ಕೂಡ ಆರೋಗ್ಯಕ್ಕೆ ಒಳ್ಳೇದಲ್ಲಾ...


ಕೇವಲ ಕಾಮೆಂಟಾಗಿರಬೇಕಿದ್ದ ಮೋಹನ್ ಕುಮಾರ್ ಬರಹವನ್ನು ಬ್ಲಾಗ್ ಗೆ ಹಾಕಿದ್ದೇನೆ, ಚರ್ಚೆ ಆರಂಭವಾದರೆ ಸಂತೋಷ. ಸಿಲ್ಲಿ ಪೈಟ್ಸ್ ಬೇಡ.

Monday, July 20, 2009

ಥ್ರೀ ಸೆವೆಂಟಿ ಸೆವೆನ್.......!!!


ಡೆಲ್ಲಿ ಹೈಕೋರ್ಟ್ ಹೋಮೋ ಸೆಕ್ಸುಯಲ್ ಗಳ ಬಗ್ಗೆ ತೀರ್ಪು ಕೊಟ್ಟಮೇಲೆ ಡಾ.ಲೀಲಾಸಂಪಿಗೆ ಮೇಂಡಂ ಮಾತನಾಡುತ್ತಾ , 'ರೀ ಶ್ರೀನಿವಾಸ್ ಈ ಕೇಸ್ ಬಗ್ಗೆ ಪಾಲೋ ಮಾಡ್ರಿ ಏನಂತೆ ಇವರ ಕತೆ' ಅಂತ ಕೇಳಿದ್ರೂ ಸಬ್ಜೆಕ್ಟ್ ಕುತೂಹಲ ಇದ್ದರಿಂದ ನಾನೂ ಇದೇನು ಅಂತ ತಿಳ್ಕೊಳ್ಳೇ ಬೇಕಲ್ಲಾ ಅಂತ ತೀರ್ಮಾನಿಸಿ ನಮ್ಮ ಚಾನಲ್ಲಿಗೊಂದು ಸ್ಟೋರಿ ಕೂಡಾ ಆಗುತ್ತೆ ಮಾಡೋಣಾ ಅಂತಾ ತೀರ್ಮಾನಿಸಿದೆ.

ದೆಹಲಿಯ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸೈಕಾಲಜಿಸ್ಟ್ ಸಂದೀಪ್ ಓರಾ ಅವರನ್ನ ಭೇಟಿ ಮಾಡಬೇಕಾದರೆ ನಂಗೆ ಸಾಕು ಬೇಕಾಗಿತ್ತು. ಯಾಕಾದ್ರೂ ಈ ಹೋಮೋಸೆಕ್ಸುಯಲ್ ಗಳ ಹಿಂದೆ ಬಿದ್ದೆನಪ್ಪಾ ಅಂಥ ಅಂದುಕೊಂಡೆ. ಆ ಹೊತ್ತಿಗೆ ಸಂದೀಪ್ ಓರಾ ನನಗೆ ಬೈಟ್ ಕೊಡಲು ಒಪ್ಪಿಕೊಂಡರು. ಅಪೋಲೋ ಆಸ್ಪತ್ರೆ ಒಳ್ಳೇ ಪೈವ್ ಸ್ಟಾರ್ ಹೋಟೆಲ್ ಇದ್ದಂಗೆ ಇತ್ತು. ಈ ಪಾಪಿ ಟೆರರಿಸ್ಟ್ ಗಳ ಕಾಟದಿಂದ ಆ ಆಸ್ಪತ್ರೆಯಲ್ಲೂ ಎಕೆ 47 ಹಿಡಿದುಕೊಂಡಿದ್ದ ಭದ್ರತಾ ಪಡೆಯವರಿದ್ದರು. ಅವರಿಂದ ನಾವು ಕ್ಯಾಮರಾ ಸ್ಟಾಂಡ್ ಎಲ್ಲಾ ಚೆಕಪ್ ಮಾಡಿಸಿಕೊಂಡು ಡಾಕ್ಟರ್ ಚೇಂಬರಿಗೆ ತಪುಪಿದೆವು.

ಸಂದರ್ಶನ.


ಯಾರು ಸಾರ್ ಈ ಹೋಮೋಸೆಕ್ಸುಯಲ್ ಗಳು..?
ಡಾಕ್ಟರ್.
ಅವರೇನೂ ಬೇರೆಯವರಲ್ಲ ನಮ್ಮ ಮದ್ಯೆಯೇ ಇರ್ತಾರೆ. ನಮ್ಮಂತೆ ಇರ್ತಾರೆ. ಆದರೆ ಅವರ ಸೆಕ್ಸುಯಲ್ ಓರಿಯಂಟೇಷನ್ ಬೇರೆದಾಗಿರುತ್ತೇ ಈಗ ಒಬ್ಬ ಗಂಡಸು ಇನ್ನೊಬ್ಬ ಗಂಡಸನ್ನ ಇಷ್ಟ ಪಟ್ಟರೆ, ಅವರೊಂದಿಗೆ ಬೆರೆತರೆ 'ಗೇ 'ಅಂತ ಕರೀತೀವಿ. ಹೆಣ್ಣೊಬ್ಬಳಿಗೆ ನಂಗೆ ಹೆಣ್ಣೇ ಬೇಕು ಅಂತ ಅನಿಸಿದರೆ 'ಲೆಸ್ಬಿಯನ್ ' ಅಂತೀವಿ.
ಕೆಲವರಿಗೆ 'ಗಂಡಸೂ' ಬೇಕು 'ಹೆಂಗಸೂ' ಬೇಕು ಅಂತ ಅನ್ನಿಸುತ್ತೆ ಅವರನ್ನ "ಬೈಸೆಕ್ಸುಯಲ್ಸ್" ಅಂತೀವಿ. ನೋಡೋಕೆ 'ಹೆಣ್ಣಿನಂತೆ' ಇದ್ದರೂ ಮನಸು 'ಗಂಡಾಗಿಯೂ, 'ಗಂಡಿನಂತೆ 'ಕಂಡರೂ ಮನಸು 'ಹೆಣ್ಣಿನಂತೆ' ವರ್ತಿಸೋರನ್ನ, ಅದಕ್ಕೆ ತಕ್ಕಂತೆ ಬಯಕೆ ಆಗೋರನ್ನ 'ಟ್ರಾನ್ಸೆಕ್ಸುಯಲ್ಸ್' ಅಂಥ ಕರೀತೀವಿ . 'ಇಟ್ ಈಸ್ ಜಸ್ಚ್ ಎ ಮ್ಯಾಟರ್ ಆಪ್ ವಾಟ್ ಸೆಕ್ಸ್ ಓರಿಯಂಟೇಷನ್ ದೆ ಹ್ಯಾವ್'. ಅಂದರು.

ಸಾರ್ ಈ ಹಿಜಿಡಾ ಗಳು, ಚಕ್ಕಾಗಳು, ಡಬಲ್ ಡೆಕ್ಕರ್ ಗಳು ಅಂದರೇ ಇವರೇನಾ...?
ನೋಡಿ ಹಿಜಿಡಾಗಳಿಗೂ, ಚಕ್ಕಾಗಳು ಬೇರೆ ಇವರಿಗೂ ಹೋಮೋಗಳಿಗೂ ಸಂಭಂದವೇ ಇಲ್ಲ. ಹಿಜಿಡಾಗಳ ಅಂಗರಚನೆಯೇ ಬೇರೆ ತರನಾಗಿರುತ್ತೆ. ಅವ್ರಿಗೆ ಇಂಥದೇ ಅಂತ ಸ್ಪಷ್ಟವಾಗಿ ಹೇಳಕ್ಕೆ ಆಗದಂತ ಲಿಂಗರಚನೆಇರತ್ತೆ. ಅವರನ್ನ ಹೋಮೋಸೆಕ್ಸುಯಲ್ ಗಳ ಜೊತೆ ಸೇರಿಸಬಾರದು, ಜನಾ ಮಾಡೋ ತಪ್ಪೇ ಅದು ನೋಡಿ. ಈ ಹೋಮೋ ಸೆಕ್ಸುಯಲ್ ಗಳು ನಮ್ಮ ,ನಿಮ್ಮಂತೆ. ಹೆಣ್ಣು ಅಥವಾ ಗಂಡಿನಂತೆ ಕಾಣಿಸುತ್ತಾರೆ. ಗುರುತು ಮಾಡೋದು ಕಷ್ಟ.
ಯಾಕೆ ಸಾರ್ ಹೋಮೋ ಸೆಕ್ಸುಯಲ್ ಆಗ್ತಾರೆ.?
ಯಾಕೆ ಆಗ್ತಾರೆ ಅನ್ನೊದರ ಬಗ್ಗೆ ಸಾಕಷ್ಟು ಥಿಯರಿಗಳಿವೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಜೀನ್ಸ್ ನಲ್ಲಿಯೇ ಅಂಥಾ ಸ್ವಭಾವ ಬಂದಿರುತ್ತೆ. ಹಾರ್ಮೋನುಗಳ ವ್ಯತ್ಯಾಸ ಕೂಡ ಈ ಸ್ವಭಾವಕ್ಕೆ ಕಾರಣ. ಜೊತೆಗೆ ಚಿಕ್ಕವರಿದ್ದಾಗ ಬೆಳೆಯುವ ಪರಿಸರ ಪ್ರಭಾವ ಬೀರಬಹುದು. ಕೆಲವು ಪ್ರಕರಣಗಳಲ್ಲಿ ಅನಿವಾರ್ಯವಾಗಿ ಮತ್ತೊಬ್ಬರ ಒತ್ತಡಕ್ಕೆ ಸಿಲುಕಿ ಹೋಮೋಗಳಾಗಿ ನಂತರ ಬದಲಾಗುವ ಸಾದ್ಯತೆ ಇದೆ.
ಇದು ಮೆಂಟಲ್ ಅಥವಾ ಪಿಸಿಕಲ್ ಡಿಸ್ ಆರ್ಡರ್ರಾ...?
ನೋ ನಾಟ್ ಅಟ್ ಆಲ್ . ಅದು ಮೆಂಟಲ್ ಡಿಸ್ ಆರ್ಡರ್ ಅಲ್ಲಾ ಅಥವಾ ಆರೋಗ್ಯದ ಸಮಸ್ಯೆಯೂ ಅಲ್ಲಾ.. ನ್ಯಾಚುರಲ್ ಆದ ಡೊಂಕು. ದೈವ ಮಾಡಿದ ಕಿತಾಪತಿ...

ಹೋಮೋಸೆಕ್ಸುಯಲ್ ಗಳನ್ನ ಚಿಕಿತ್ಸೆಯಿಂದ ಸರಿಮಾಡ ಬಹುದಾ?
ಯಾವುದೇ ಕಾರಣಕ್ಕೂ ಸಾದ್ಯವಿಲ್ಲಾ.
ಕಾಮನ್ ಮ್ಯಾನ್ ಹೋಮೋಸೆಕ್ಸುಯಲ್ ಆಗಿ ಬದಲಾಗಬಹುದಾ...?
ಇಲ್ಲವೇ ಇಲ್ಲಾ, ನಾರ್ಮಲ್ ಮನುಶ್ಯರಿಗೇ ಆಪೋಸಿಟ್ ಸೆಕ್ಸ್ ಬೇಕೆ ವಿನಾ ಸೇಮ್ ಸೆಕ್ಸ್ ಬೇಕಿಲ್ಲ, ಹಾಗೆ ಆಗೋಕೆ ಸಾದ್ಯವೇ ಇಲ್ಲ.
ಮುಂದೇ..
ನೋಡ್ರೀ, ಈ ಹೋಮೋಗಳು ಹಿಂದೇನೂ ಇದ್ರೂ, ಈಗಲೂ ಇದಾರೆ, ಮುಂದೇನೂ ಇರ್ತಾರೆ. ಪ್ರಶ್ನೆ ಏನಂದ್ರೆ ಕಾನೂನು ಪ್ರಕಾರ ಅವರು ಸೇರುವುದು ಕಾನೂನಿನ ಪ್ರಕಾಕ ಕೈಂ, ಅಥವಾ ಅಲ್ಲವಾ ಈಗ ಇರೋ ಕಾನೂನು ಅದನ್ನ ಕ್ರೈಂ ಅನ್ನುತ್ತೆ. ಮುಂದೆ ಬರೋ ಕಾನೂನು ತಪ್ಪಲ್ಲ ಅನ್ನಬಹುದು.
ಅದು ಕಾನೂನಿಗೆ ಸಂಭಂದಿಸಿದ ವಿಷಯ.

ಥ್ಯಾಂಕ್ಸು ಸಾರ್ ಅಂಥ ಹೇಳಿ ಪ್ಯಾಕಪ್ ಆದೆವು....

ಇದನ್ನೆಲ್ಲಾ ಕೇಳಿ ಆದಮೇಲೆ, ಹೋಮೋ ಸೆಕ್ಸುಯಲ್ ಗಳ ಬಗ್ಗೆ ಪಾಪ ಅನ್ನಿಸಿತು. ಪಾಪ ಅವರದೇನು ತಪ್ಪಿಲ್ಲಾ ಎಲ್ಲಾ ದೈವಾನುಗ್ರಹ. ಆಸೆ ಆಗಿದ್ದನ್ನ ಮಾಡಿದ್ರೆ ಕ್ರಿಮಿನಲ್ ಅಪರಾಧ ಆಗುತ್ತೆ .ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತೆ.
ಈಗಿರೋ ಕಾನೂನಿನ ಪ್ರಕಾರ ಇಬ್ಬರೂ ಹೋಮೋಸೆಕ್ಸುಯಲ್ ಸ್ವ ಇಚ್ಚೆಯಿಂದ ಒಪ್ಪಿ ಸೇರಿದ್ರೂ ದಂಢನೀಯ ಅಪರಾದ ಆಗುತ್ತೆ. ಇದೇ ಹೋಮೋಗಳು ಸಾಮಾನ್ಯನೊಬ್ಬನನ್ನ ಪೀಡಿಸಿ ದುರುಪಯೋಗ ಮಾಡಿದ್ರೆ, ಏನೂ ಅರಿಯದ ಮಕ್ಕಳನ್ನ ತಮ್ಮ ತೀಟೆಗೆ ಬಳಸಿಕೊಂಡ್ರೆ ಮರಣದಂಡನೆ ಬೇಕಾದ್ರೋ ಕೊಡಲಿ ಆದರೆ ನೇಚರ್ ಮಾಡಿದ ತಪ್ಪಿಗೆ, ಅದರಿಂದಾಗಿ ಅವರವರು ತೀರಿಸಿಕೊಳ್ಳೋ ತೀಟೆಗೆ ಶಿಕ್ಷೆ ಕೊಡೋದು ತಪ್ಪಾಗಬಹುದು ಅಂತ ಅನ್ನಿಸಿತು.

ದೆಹಲಿ ಹೈಕೋರ್ಟ್ ತೀರ್ಪು ಬಂದಾಗ ಅಹೋ ರಾತ್ರಿ ಫೇಮಸ್ಸಾಗಿದ್ದು ಸಂಸ್ಥೆ ದೆಹಲಿಯ ನಾಜ್ ಪೌಂಡೇಶನ್. ಕೋರ್ಟ್ ನಲ್ಲಿ ದಾವೆ ಹೂಡಿದ್ದೇ ಈ ನಾಜ್ ಪೌಂಡೇಶನ್. ಅಲ್ಲಿಗೆ ಹೋಗಬೇಕು ಅಂಥ ತೀರ್ಮಾನಿಸಿದಾಗ ನಂಗೂ ದಿಗಿಲಾಗಿತ್ತು. ಅಲ್ಲೆಲ್ಲಾ ಹೋಮೋಸೆಕ್ಸುಯಲ್ ಗಳೇ ಇರ್ತಾರೇ. ಪರಿಸ್ಥಿತಿ ಹೇಗೋ ಏನೋ ಅಂಥ ಅಂದುಕೊಂಡು ಅದರ ಅಧ್ಯಕ್ಷೆ ಅಂಜಲಿ ಗೋಪಾಲನ್ ಗೆ ಕರೆಮಾಡಿದಾಗ ಅವರು ದಕ್ಷಿಣಾ ಆಪ್ರೀಕಾದಲ್ಲಿದ್ದರು.
ಬಂದ ಮೇಲೆ ಸಿಕ್ತೇನೆ, ಅಂದರು. ಎರಡು ದಿನ ಕಳೆದ ಮೇಲೆ ಈಸ್ಟ್ ಕೈಲಾಶ್ ನಲ್ಲಿರುವ ನಾಜ್ ಪೌಂಡೇಶನ್ನಿಗೆ ಹೋದೆ. ಮೂರು ಅಂತಸ್ಥಿನ ಹಸಿರು ಹೊದಿಸಿದಂತೆ ಕಾಣಿಸುವ ಬಿಲ್ಜಿಂಗ್ ಅದು. ಮೂರು ನಾಲ್ಕು ಧಡೂತಿ ನಾಯಿಗಳು ಅಲ್ಲಿದ್ದವು. ಬಿಲ್ಡಿಂಗಿನ ತುಂಬಾ ಚಿಕ್ಕ, ಚಿಕ್ಕ ಮಕ್ಕಳೂ ಆಟ ಆಡುತ್ತಿದ್ದರು. ಅಲ್ಲೊಂತರಾ ಸ್ಕೂಲಿನ ವಾತಾವರಣ ಇತ್ತು.

ಕಂಪ್ಯೂಟರ್ ರೂಮಿನಲ್ಲಿ ಪಿಯುಸಿ, ಇಲ್ಲಾ ಡಿಗ್ರಿ ಓದುತ್ತಿರಬಹುದಾದ ನಾಲ್ಕಾರು ಹುಡುಗಿಯರಿದ್ದರು. ಯಾರೋ ಹುಡುಗನಿಗೆ ಸೋಶಿಯಲ್ ನೆಟ್ ವರ್ಕ್ ವೆಬ್ ಸೈಟ್ ಆರ್ಕುಟ್ ನಲ್ಲಿ
ಸ್ಕ್ಯ್ರಾಪ್ ಮಾಡಿ ನಗುತ್ತಾ ಕುಳಿತಿದ್ದರು, ಅಲ್ಲೇ ಹತ್ತಿರದಲ್ಲಿದ್ದ ಆಕರ್ಷಕವಾಗಿ ಡಿಸೈನ್ ಮಾಡಿದ ಡ್ರಾಯಿಂಗ್ ರೂಂ ನಲ್ಲಿ ಅಂಜಲಿ ಗೋಪಾಲನ್ ಇದ್ದರು. ಸಣ್ಣ ತಪ್ಪು ಮಾಡಿದ್ದ ಇಬ್ಬರು ಮಕ್ಕಳಿಗೆ ಹೆದರಿಸುತ್ತಾ ಇದ್ದರೂ.

ನಾವು ಕ್ಯಾಮೆರಾ ಆನ್ ಮಾಡಿ ಅವರನ್ನ ಮಾತಿಗೆಳೆದವು.
ನಾನು ಅವರನ್ನ ಸ್ಪಲ್ಪ ಖುಷಿ ಮಾಡೋದಕ್ಕೆ ಅಂತ ಒಂದು ಜಾಕ್ ಹಾಕಿದೆ. ಏನ್ ಮೇಡಂಮ್ ಓವರ್ ನೈಟ್ ಫೇಮಸ್ ಆಯಿತಲ್ಲಾ ನಿಮ್ಮ ನಾಜ್ ಪೌಂಡೇಶನ್ ಅಂದೆ ಅದಕ್ಕೆ ಅಂಜಲಿ ಅವರು 'ಆಲ್ ಪಾರ್ ದಿ ರಾಂಗ್ ರೀಸನ್.' ಅಂತ ಅನ್ನುತ್ತಾ, ತಮ್ಮ ಗೆಲುವನ್ನ ತಮ್ಮ ನಗುವಿನಲ್ಲಿ ತೋರಿಸಿದ್ರು.

ನೀವು 377 ವಿರುದ್ಧ ಪೈಟ್ ಮಾಡೋಕೆ ಕಾರಣ ಏನು ಮೇಡಂ.?
'ನೋಡಿ ಹೋಮೋ ಸೆಕ್ಸುಯಲ್ ಗಳು ಪಾಪಿಗಳಲ್ಲ ,ನೇಚರ್ ಪ್ರಾಬ್ಲಂಮ್ ನಿಂದ ಅವರು ಹಾಗೆ ಆಗಿದಾರೆ, ಅವರವರ ನಡುವೆ ನಡೆಯೋ ಸೆಕ್ಯ್ಸುಯಲ್ ಓರಿಯಂಟೇಶನ್ ಅನ್ನ ಕಾನೂನು ತಪ್ಪು ಅನ್ನುತ್ತೆ. ಅಲ್ಲದೆ, ಅವರವರು ಒಪ್ಪಿ ಬಾಗಿಯಾದ್ರೂ ಅದಕ್ಕೆ 10 ವರ್ಷ ಶಿಕ್ಷೆ, ಇಂದೆಂತಾ ನ್ಯಾಯ, ಇಂತಾ ಕರಾಳ ನ್ಯಾಯವನ್ನೇ ನಾಜ್ ಪ್ರಶ್ನಿಸಿದ್ದು, ಮುಖ್ಯ ವಿಷಯ ಗೊತ್ತಾ ನಾವು ಕಾನೂನನ್ನ ಬದಲಾಯಿಸಿ ಅಂಥ ಕೇಳಲಿಲ್ಲ ಕೇವಲ ಪರಿಶೀಲಿಸಿ ಅಂತ ಕೇಳಿದ್ದೆವು ಈಗ ತೀರ್ಪು ಬರ್ತಾ ಇದೆ.
ಅಲ್ಲಾ ಸುಮಾರು 10 ವರ್ಷದ ಹಿಂದೆ 2001 ರಲ್ಲೇ ನೀವು ಕೋರ್ಟ್ ನಲ್ಲಿ ಇದನ್ನಾ ಪ್ರಶ್ನೆ ಮಾಡಿದ್ದು ಯಾಕೆ.?

ನಾಜ್ ಪೌಂಡೇಶನ್ ಏಡ್ಸ್ ನಿಯಂತ್ರಣ ಮತ್ತು ಪೀಡಿತರ ಸಂಭಂದ ಕೆಲಸ ಮಾಡುತ್ತೆ. ಕೆಲವೊಮ್ಮೆ ನಮ್ಮ ಮೇಲೆ, ಕಾರ್ಯಕರ್ತರ ಮೇಲೆ ಆ ಕಾನೂನನ್ನ ಪೋಲೀಸರು ಬಳಸ್ತಾ ಇದ್ರೂ ಅದಕ್ಕೆ ಪ್ರಶ್ನೆ ಮಾಡಿದೆವು.
ನಿಮ್ಮದು ಹೋಮೋಸೆಕ್ಸುಯಲ್ ರೈಟ್ಸ್ ಸಂಸ್ಥೆ ಅಲ್ಲವಾ ಹಾಗಾದ್ರೆ..?
ಅಲ್ಲಾ, ನಮ್ಮದು ಎಚ್ಐವಿ ಪೀಡಿತರ ಕುರಿತು ಕೆಲಸ ಮಾಡೋ ಸಂಸ್ಥೆ,ಹೋಮೋ ರೈಟ್ಸ್ ಸಂಸ್ಥೆ ಅಲ್ಲ ಈಗೀಗ ಹಿಜಿಡಾಗಳಿಗೆ, ಹೋಮೋಸೆಕ್ಯ್ಸುಯಲ್ ಗಳಿಗೆ ವೈದ್ಯಕೀಯ ಸೇವೆ ತೆರೆದಿದ್ದೇವೆ.
ಯಾಕೆ ಮೇಡಂ ಇಂತಾ ಕಾನೂನು..?
ಇದು ಬ್ರೀಟೀಷರಿಂದ ಎರವಲು ಪಡೆದ ಕಾನೂನು, ಲಾರ್ಡ್ ಮೆಕಾಲೆ ಕಾಲದ್ದು. ಹಿಂದೂ ಸಂಸ್ಕೃತಿಯಲ್ಲಿ ಎಲ್ಲೂ ಇಂಥದಕ್ಕೆ ವಿರೋದ ಇಲ್ಲಾ. ಮಹಾಭಾರತದಲ್ಲಿ ಅರ್ಜುನ ಶಿಕಂಡಿ ಆಗಿದ್ದ, ಅಯ್ಯಪ್ಪ ಶಿವ ಮತ್ತು ವಿಷ್ಣು ಸೇರಿದ್ದರಿಂದ ಹುಟ್ಟಿದವ, ಕಾಮಸೂತ್ರದಲ್ಲಿ ಹೋಮೋಸೆಕ್ಸ್ ಪ್ರಸ್ತಾಪ ಇದೆ.
ಈ ತೀರ್ಪನ್ನ ನಮ್ಮ ದಾರ್ಮಿಕ ಲೀಡರ್ ಗಳು ವಿರೋಧಿಸಿದ್ದಾರಲ್ಲಾ..?
ಇದನ್ನ ನಾವೆಲ್ಲಾ ನಿರೀಕ್ಷಿಸಿದ್ದೆವು. ಅದರಿಂದ ಅಚ್ಚಿರಿ ಆಗುವಂತದ್ದು ಏನೂ ಇಲ್ಲ ಬಿಡಿ. ಈಗಿನ ಎಷ್ಟೋ ಮಂದಿ ಸಾದು, ಸಂತರು. ರೀಲೀಜಿಯಸ್ ಲೀಡರ್ ಗಳು ಹೋಮೋಗಳು ಅಂತಾರಲ್ಲಾ...ಅದಕ್ಕೇನಂತೀರಿ.
ಅದೆಲ್ಲಾ ಇದ್ದದ್ದೆ, ಹಿಂದೆ ಸರ್ಕಾರ ಕೋರ್ಟಿಗೆ 'ಧರ್ಮ' ಇದನ್ನ ವಿರೋಧಿಸುತ್ತೆ ಅಂತ ಹೇಳಿಕೆ ಕೊಟ್ಟಾಗ ಕೋರ್ಟ್ ಬೈದಿತ್ತು, ನಮ್ಮ ಸಂವಿಧಾನ ಧರ್ಮದ ಆಧಾರದ ಮೇಲೆ ರೂಪಿತವಾಗಿಲ್ಲ.
ನಿಮಗೆ ಕೋರ್ಟ್ ಕೊಟ್ಟ ತೀರ್ಪಿನಿಂದ ಸಂತೋಷಾ ನಾ..?
ಸಹಜವಾಗಿ ಸಂತೋಷ ಆಗಿದೆ, ಒಂದು ಐತಿಹಾಸಿಕ ಬೆಳವಣಿಗೆ ನಾಜ್ ಸಾಕ್ಷಿ ಆಯ್ತಲ್ಲಾ ಅಂತ. ಆದ್ರೂ ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಏನಂತಾವೆ ನೋಡೋಣ.
ಹೇಗಿದೆ ರೆಸ್ಪಾನ್ಸ್.?

ತುಂಬಾ ಚೆನ್ನಾಗಿದೆ, ಗೇ ಕಮ್ಯುನಿಟಿ ಹ್ಯಾಪಿ ಆಗಿದೆ. ದೇವರ ಧಯದಿಂದ ನಮಗೂ ಬದುಕೋ ಹಕ್ಕು ಬಂತಲ್ಲಾ ಅಂತ ಅವರಿಗೆಲ್ಲಾ ಖುಷಿಯಾಗಿದ್ದಾರೆ,ಅವರಿಗೆಲ್ಲಾ ಈಗ ನಿಜವಾದ ಸ್ವಾತಂತ್ರ ಬಂಥಂತೆ ಅಂಥ ನಕ್ಕರು ಅಂಜಲಿ ಗೋಪಾಲನ್..
ಅವರಿಗೂ ಒಂದು ಥ್ಯಾಂಕ್ಸ್ ಹೇಳಿ ಹೊರಡೋಕೆ ಮುಂದಾದೆವು. ಹೊರಡುವ ಮುನ್ನ ನಮ್ಮ ಸಂಸ್ಥೆಯನ್ನ ನೋಡಿ ಹೋಗಿ ಅಂಥ ಹೇಳಿದರು. 'ನೋಡಿ ಇಲ್ಲಿರೋ ಮಕ್ಕಳೆಲ್ಲಾ ಹೆಚ್ ಐ ವಿ ಪೀಡಿತರು, ಟೀಚರ್ ಗಳು ಮತ್ತು ನನ್ನ ಹೊರತಾಗಿ ' ಅಂತ ಗಂಭೀರವಾಗಿ ಹೇಳಿದರು. ಅಲ್ಲಿ ಸ್ವಚ್ಚಂದವಾಗಿ ಆಡಿಕೊಂಡಿದ್ದ ದೇಶದ ವಿವಿಧ ಪ್ರದೇಶದ ಮಕ್ಕಳು ಇದ್ದರು. ಕಿಲಾಕಿಲಾ ಅಂತ ಆಡಿಕೊಂಡಿದ್ದರು. ನಮ್ಮನ್ನ ನೋಡಿ ಹಲೋ, ಹಲೋ ಅಂಕಲ್ ಅಂತ ಅಂತಿದ್ದರು. ನಾನೂ ಅವರನ್ನ ನೋಡಿ ಹಲೋ ಅಂತಿದ್ದೆ. ಯಾಕೋ ಅವರನ್ನ ನೋಡಿ ನೋವಾಗೋದು. ಒಂತರಾ ಕಸಿವಿಸಿ ಆಗೋದು.

ಕಾರು ಹತ್ತಿ ವಾಪಸ್ಸು ಬರುವಾಗ ನಮ್ಮ ಕ್ಯಾಮರಾ ಮನ್ ಪಪ್ಪು "ಆರ್ಕುಟ್ ನೋಡುತ್ತಿದ್ದ ಹುಡುಗಿಯರು ಬಹುತ್ ಅಚ್ಚಾ ತಾ ನಾ... ಅಂದ'. ನಾನು 'ಅಚ್ಚಾತ... ಆದ್ರೆ ಅವರಿಗೆಲ್ಲಾ ಎಚ್ ಐ ವಿ ಇದೆ ಅಂದೆ'. ಹಿಂದಿ ಬಾಷೆಯವನಾದ ಅವನಿಗೆ ನಾನು ಅಷ್ಟೊತ್ತು ಸಂಬಾಷಿಸಿದ್ದ
ಇಂಗ್ಲೀಷ್ ಅರ್ಥ ಆಗಿರಲಿಲ್ಲ. ಯಾವುದೋ ಸ್ಕೂಲ್ ಬಗ್ಗೆ ಸ್ಟೋರಿ ಮಾಡ್ತಾ ಇದ್ದೀವಿ ಅಂತ ತಿಳ್ಕಂಡಿದ್ದ. ಮಕ್ಕಳೆಲ್ಲ ಪೀಡಿತರು ಎಂಬ ವಿಷಯ ತಿಳಿದ ಮೇಲೆ ಗಾಭರಿಯಾದ.

ನಾನು ಏನು ಹೇಳಕ್ಕೆ ಹೊರಟೆ ಅಂತ ಈಗ ಗೊತ್ತಾಯ್ತಾ.. ಆಗಲಿಲ್ಲ ಅಂದ್ರೆ ನಮಗೆ ಅನ್ನಿಸಿದ್ದೇ ಸರಿ ಅಂಥ ತಿಳ್ಕೊಳ್ಳೋದು ತಪ್ಪು. ನಿಮಗೆ ಗೊತ್ತಿರುವ ಡಾಕ್ಟರ್ ಗಳು, ಇಲ್ಲಾ ವಿಷಯದ ಬಗ್ಗೆ ಅರಿತರ ಹತ್ತಿರ ವಿಷಯ ಏನಂತಾ ತಿಳಕೊಂಡು ನಿಮ್ಮದೇ ತೀರ್ಮಾನಕ್ಕೆ ಬನ್ನಿ ಯಾರೋ ಸ್ವಾಮಿ, ಪಾದ್ರಿ, ಮುಲ್ಲಾ ಹೇಳ್ತಾರೆ ಅಂತ ನಾವು ಕನ್ಲೂಕುಶನ್ನಿಗೆ ಬರೋದು ಸೈಂಟಿಫಿಕ್ ಆಗಿ ತಪ್ಪಾಗುತ್ತೇ... ಅಲ್ವಾ...!!



Thursday, July 16, 2009

ಧಿಮಾಕು... ಒಂದು ಟಿಪ್ಪಣಿ.

http://livingincourageonline.com/wp-content/uploads/2008/07/full.jpgಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.
ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.
ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ.

ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.
ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ.
ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...

ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.
ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.

ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.
ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.

ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.

ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.

ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.
ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?



Sunday, July 12, 2009

ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....


ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.
ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.

ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...

ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...
ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.

ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.

ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...
ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.

ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.
ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....

ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...

Friday, July 10, 2009

ಎನ್ಕೌಂಟರ್ ಇನ್ ಆಪ್ರೀಕಾ......!!!


ಎನ್ಕೌಂಟರ್ ವಿಥ್ ಎಲಿಫೆಂಟ್ ಅಂತ ನಾನು ಬರೆದ ಬ್ಲಾಗ್ ಪೋಸ್ಟ್ ಗೆ ನನ್ನ ಗೆಳೆಯ ಜಯಕುಮಾರ್ ರಿಯಾಕ್ಟ್ ಮಾಡಲು ನನಗೆ ಕರೆ ಮಾಡಿದ್ದರು ಆನೆಗಳ ಬಗ್ಗೆ ಮತ್ತಷ್ಟು ಬರೀರಿ ಗೌಡ್ರೆ ಅಂತ ಹೇಳಿದ್ರು... ಜೊತೆಗೆ ಶಿರಾಡಿ ಘಾಟಿಯಲ್ಲಿ ತಾನು ಪ್ರಯಾಣಿಸುತ್ತಿದ್ದಾಗ ದಿಡೀರನೆ ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಬಂದ ಆನೆ ಮಾಡಿದ ಪಜೀತಿ ಬಗ್ಗೆ ಹೇಳಿದ್ರು , ಆನೆ ಕಂಡಾ ಕ್ಷಣ ಮೀಟರ್ ಅಪ್ ಆದ ಡೈವರ್ ಒಂದು ಕಿಲೋಮೇಟರ್ ವರೆಗೆ ಬಸ್ಸನ್ನ ಹಿಂದಕ್ಕೆ ಓಡಿಸಿಕೊಂಡೆು ಹೊದನಂತೆ, ಯಾವ ಯಾವ ಊರಿನಿಂದಲೋ ಬಂದಿದ್ದ ಪ್ರಯಾಣಿಕರು ಕೆಳಗೆ ಇಳಿದು ಓಡಿದರಂತೆ. ಹೀಗೆ ಆನೆ ಮಾಡಿದ ಪಜೀತಿ ಹೇಳುತ್ತಾ ಆನೆಗಳನ್ನು ಖೆಡ್ಡಾಗಳಿಗೆ ಕೆಡುವಲು ಸರ್ಕಾರದಿಂದ ಬರುವ ಹಣವನ್ನ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಹೇಗೆ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ ಅಂತ ವಿವರಿಸಿದರು. ಪಾಪ ಆನೆಗಳನ್ನು ರಕ್ಷಿಸಲು ಥಾಯ್ಲೆಂಡ್ ನಲ್ಲಿರುವಂತೆ ಆನೆದಾಮ ಮಾಡಿದ್ರೆ ಒಳ್ಳೇದು ಅಂತ ಹೇಳಿದ್ರು.....
ಅಮೇಲೆ ಸ್ಪಲ್ಪ ಹೊತ್ತಿಗೆ ಆನೆ ಕೈಗೆ ಸಿಕ್ಕಿಕೊಂಡರೆ ಹೇಗಿರುತ್ತೇ ಅಂತ ನನ್ನ ಪೋಸ್ಟಿಗೆ ಪೂರಕವಾಗಿ ಆಪ್ರೀಕಾ ಕಾಡಿನಲ್ಲಿ ತೆಗೆದ ಒಂದು ಪೋಟೋ ಕಳಿಸಿಕೊಟ್ಟರು ಹಳೇದನ್ನ ನೆನಿಸಿಕೊಂಡ ನನಗೆ ಮತ್ತೊಮ್ಮೆ ಮೈ ಜುಂ ಅಂತ್ತು....


ಪುಂಡಾನೆಗೆ ಕಾರಿನ ಮೇಲೆ ಕಾಲಿಡೋದು ಯಾವ ಲೆಕ್ಕ ನೀವೇ ಯೋಚಿಸಿ ಕಾಮೆಂಟ್ ಹಾಕಿ..

Tuesday, July 7, 2009

ಎನ್ಕೌಂಟರ್ ವಿಥ್ ಎಲಿಪೆಂಟ್....!!


ನನ್ನೂರು ಶುದ್ಧ ಬಯಲು ಸೀಮೆ ಪ್ರದೇಶವಾದ್ದರಿಂದ ನಮ್ಮ ಕಡೆ ಅರಣ್ಯ ಪ್ರದೇಶಗಳು ಕಮ್ಮಿ, ನಮ್ಮ ಕಡೆ ಮಕ್ಕಳು ನೀಲಗಿರಿ ತೋಪುಗಳನ್ನೇ ಕಾಡು ಅಂತ ತಿಳದುಕೊಳ್ಳುವಂತಾ ಪರಿಸ್ಥಿತಿ ಇದೆ, ನಮ್ಮ ಕಡೆಯ ನೀಲಗಿರಿ ಕಾದಿಟ್ಟ ಅರಣ್ಯಗಳಲ್ಲಿ ಕಾಣಿಸೋ ಕಾಡಿನ ಪ್ರಾಣಿಗಳಲ್ಲಿ ಹೆಚ್ಚೆಂದರೆ ನರಿ, ಮೊಲ, ಮುಳ್ಳಂದಿ, ನವಿಲು ಮುಂತಾದವು ಮಾತ್ರ. ನನಗಂತೂ ಕಾಡಿನ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಕುತೂಹಲ, ತೇಜಸ್ವಿ ಅವರ ಕಾಡಿನ ಕಥಾನಕಗಳನ್ನು ಓದಿಕೊಂಡ ಮೇಲಂತೂ ಕಾಡೆಂದರೆ ಹುಚ್ಟು, ಅಲ್ಲಿ ಕಾಡಲ್ಲಿ ಏನೋ ಇಂಟರಸ್ಚಿಂಗ್ ಆಗಿದ್ದು ನಡೀತಾ ಇದೆ ಅದನೆಲ್ಲಾ ತೇಜಸ್ವಿ ಕೂತೂಹಲದಿಂದ ನೋಡ್ತಾ ಇದಾರೆ, ಅದನ್ನೆಲ್ಲಾ ಮಂದಿನ ಬುಕ್ಕಲ್ಲಿ ನಮಗಾಗಿ ಬರೀತಾರೆ ಅಂತ ಇವಾಗಲೂ ಅನ್ನಿಸ್ತಾ ಇರತ್ತೆ. ಅವರು ಈಗ ಇಲ್ಲ ಅಂತ ನನಗೆ ನೆನಪಾಗೋದೆ ಕಮ್ಮಿ.
ಹಾಸನದಲ್ಲಿ ಇದ್ದ ಕಾರಣಕ್ಕೆ ನನಗೂ ಕಾಡಿನ ಅನುಭವಗಳನ್ನು ಅವರಿವರ ಹತ್ತಿರ ಕೇಳಕ್ಕೆ, ಕೆಲವು ಪ್ರಕರಣಗಳನ್ನ ವರದಿ ಮಾಡಕ್ಕೆ ಅವಕಾಶ ಸಿಕ್ಕಿತ್ತು.
ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡು ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚು, ಕಾಡಿನಲ್ಲಿನ ಆಹಾರ ಸಿಕ್ಕದೆ ಹಸಿದು ಹೋಗುವ ಆನೆಗಳು ರೈತರ ತೋಟಗಳಿಗೆ ನುಗ್ಗುತ್ತವೆ, ಆನೆಗಳ ಉಪಟಳದಿಂದ ರೋಸಿ ಹೋಗಿರುವ ಇಲ್ಲಿನ ಜನಕ್ಕೆ ಆನೆ ಅಂದರೆ ರಾಕ್ಷಸ ಇದ್ದ ಹಾಗೆ, ಊರಿನ ಪಕ್ಕದ ಬೆಟ್ಟಕ್ಕೆ ಆನೆ ಬಂದವೆ ಅಂದ್ರೆ ರೈತರಿಗೆ ನಿದ್ದೆ ಹಾರಿ ಹೋಗಿಬಿಡುತ್ತೆ, ಆದರೆ ಟಿವಿಯಲ್ಲಿ ಆನೆ ನೋಡಿರುವ ನಮಗೆ ಆನೆ ಅಂದರೆ ಗಣೇಶ ಇದ್ದಂಗೆ ಶುದ್ಧ ಅಮಾಯಕ ಅಷ್ಠೇ. ಆದರೆ ಆನೆ ಎಷ್ಠು ಪ್ರಳಯಕಾರಿ ಅಂದರೆ ಗುಂಪು ಗುಂಪಾಗಿ ನುಗ್ಗಿದವು ಅಂದರೆ ಬೆಳೆದ ಬೆಳೆಯ ಕೊರಡು, ಕೊನರೂ ಉಳಿಯಲ್ಲಾ ಬೆಳೆಯನ್ನೆ ತಿಂದು, ತುಳಿದು ನಾಶಮಾಡಿ ಹೋಗುತ್ತವೆ.

ಎಲ್ಲಾ ಆನೆಗಳಿಗಿಂತ ಕಾಡಿನಲ್ಲಿ ಪುಂಡೆದ್ದು ಹೋಗಿರುವ ಪುಂಡಾನೆಗಳಂತೂ ಬಾರಿ ಅಪಾಯಕಾರಿ ಅಕಸ್ಮಾತಾಗಿ ಅವುಗಳ ಕೈಗೆ ಮನುಷ್ಯರೇನಾದರೂ ಸಿಕ್ಕಿದರೆ, ಗಿರ ಗಿರ ಅಂತ ಸುತ್ತಿಸಿ ಅಪ್ಪಚ್ಚಿ ಮಾಡಿ ಹಾಕುತ್ತವೆ, ನನ್ನ ಅನುಭವಕ್ಕೆ ಬಂದಂತೆ, ಕೂಲಿಗೆ ಹೋಗುವ ಕಾರ್ಮಿಕರು ವಾಪಸ್ಸು ಬರುವಾಗಲೋ, ಕಾಡಿಗೆ ಅಂತ ಹೋದವರನ್ನೋ, ಶೌಚಕ್ಕೆ ಅಂತ ಬಯಲಿಗೆ ಹೋದವರು ಆನೆ ದಾಳಿಗೆ ಸಿಕ್ಕಿ ಜನ ಸತ್ತಿದ್ದಾರೆ.. ಆದರೆ ಯಾವ ಪ್ರಾಣಿಗೆ ಸಿಕ್ಕಿ ಬದುಕಬಹುದೇನೋ ಆದರೆ ಆನೆ ತುಳಿತಕ್ಕೆ ಸಿಕ್ಕರೆ ಬದುಕುವುದು ಉಂಟಾ.

ಆನೆಗಳಿಗೆ ಸೇಂದಿ ಅಂದರೆ ಇಷ್ಠ ಅಂತ ಕೂಡ ನನಗೆ ಕೆಲವರು ಹೇಳಿದ್ದರು ಸಕಲೇಶಪುರದ, ಮತ್ತು ಕೊಡಗಿನ ಕಾಡುಗಳಲ್ಲಿ ಕಳ್ಳ ಬಡ್ಡಿ ತಯಾರಿಸುವ ಅಡ್ಡಾಗಳಿಗೆ ನುಗ್ಗಿ ಸಮಾ ಕಳ್ಳಬಟ್ಟಿ ಕುಡಿದು, ನಶೆ ಏರಿಸಿಕೊಂಡು ಆನೆಗಳು ರಾಜಾರೋಷವಾಗಿ ಹಳ್ಳಿಗಳಿಗೆ ನುಗ್ಗುವುದು ಉಂಟು.. ಕಳ್ಳಬಟ್ಟಿ ತಯಾರಿಸುವ ಕಳ್ಳ ಅಡ್ಡಾಗಳ ವಾಸನೆಯನ್ನ ಐವತ್ತೂ ಅರವತ್ತೋ ಕಿಲೋಮೀಟರ್ ದೂರದಿಂದಲೇ ಆಘ್ರಾಣಿಸುವ ಶಕ್ತಿ ಆನೆಗಳಿಗಳಿಗೆ ಇದೆಯಂತೆ, ಒಂದು ಸಾರಿ ಅರಕಲಗೂಡಿನ ಹಳ್ಳಿಯೊಂದಕ್ಕೆ ಕಳ್ಳಬಟ್ಟಿ ಕುಡಿದ ಆನೆಯೊಂದು ನುಗ್ಗಿ ದಾಂದಲೇ ಮಾಡಿದ್ದನ್ನ ಅರಕಲಗೂಡಿನ ನನ್ನ ಸ್ನೇಹಿತ ಜಯಕುಮಾರ್ ವರ್ಣಿಸಿದ್ದು ನನಗಿನ್ನೂ ನೆನಪಿದೆ.

ಸೀರಿಯಸ್ಸಾದ ವಿಷಯ ಏನೆಂದರೆ ಆನೆಗಳು ಇರಬೇಕಾದ ಅರಣ್ಯವನ್ನೆಲ್ಲಾ ಜನ ನಾಶ ಮಾಡಿದ್ದಾರೆ, ಇಲ್ಲಾ ಆನೆ ಇರಬೇಕಾದ ಜಾಗಕ್ಕೆ ಜನ ಹೋಗಿದ್ದಾರೆ ಈಗೀಗಂತೂ ಆನೆಗಳು ಇರಲಿಕ್ಕೆ ಅರಣ್ಯಗಳೇ ಇಲ್ಲದಂತೆ ಆಗಿಬಿಟ್ಟಿದೆ ಬಿಡಿ. ರೈತರು ತಮ್ಮ ಬೆಳೆ ಉಳಿಸಿಕೊಳ್ಳೋಕೆ ಅಂತ ವಿದ್ಯುತ್ ಬೇಲಿ ಹಾಕಿ ಹೈ ವೋಲ್ಟೇಜ್ ಕಂರೆಟು ಕೊಡೋದರಿಂದ ವರ್ಷಕ್ಕೆ ಏನಿಲ್ಲಾ ಅಂದರೂ ಇಪ್ಪತ್ತು ಆನೆಗಳು ಸಾಯ್ತಾ ಇವೆ, ಕೆಲವು ಪುಂಡರು ಆನೆಗಳಿಗೆ ಬಂದೂಕಿನಲ್ಲಿ ಸಣ್ಣ ಸಣ್ಣ ಗುಂ
ಡು ಗಳನ್ನ ಹಾಕಿ ಹೊಡೆಯುತ್ತಾಂತೆ ಗುಂಡು ತಗುಲಿದ ಆನೆಗಳು ಅತ್ತ ಸಾಯಲೂ ಆಗದೆ ಇತ್ತ ಬದುಗಲೂ ಆಗದೆ ವಿಪರೀತ ನೋವಿನಿಂದ ರೊಚ್ಚೆ ಹಿಡಿದು ಗಲಾಟೆ ಎಬ್ಬಿಸಿ ನಿದಾನಕ್ಕೆ ಸಾಯುತ್ತವಂತೆ. ಅರಣ್ಯ ಇಲಾಖೆ?ವರು ರೈತರಿಂದ ಒದೆ ಬೀಳುವ ಭಯದಿಂದ ಸರ್ಕಾರಕ್ಕೆ ನಿಜವಾದ ವರದಿ ಸಲ್ಲಿಸದೇ ತಪ್ಪು ವರದಿ ಮಾಡಿ, ಆಹಾರ ವ್ಯಾತ್ಯಾಸದಿಂದ ಆನೆ ಸತ್ತಿದೆ ಅಂತ ಬರೆಯುತ್ತಾರೆ. ಜನ ಆನೆ ಸತ್ತಾಗ ವಿಪರೀತ ಭಕ್ತಿಯಿಂದ, ಆನೆಯನ್ನ ಥೇಟು ಗಣೇಶನಂತೆ ಸಿಂಗರಿಸಿ, ಆನೆ ಹಣೆಗೆ ವಿಭೂತಿ ಬಳಿದು ದಪನ್ ಮಾಡುತ್ತಾರೆ.

ಆನೆ ಬಗ್ಗೆ ನೋಡಿ ಕೇಳಿ ತಿಳಿದಿರುವ ನಮಗೂ ಆನೆಗೂ ಒಮ್ಮೆ ಎನ್ಕೌಂಟರ್ ಆಗಿತ್ತು, ನಾನು, ಈಶ, ಗೋವಿಂದ ಒಮ್ಮೆ ಬೇಜಾರು ಕಳೆಯೂಕೆ ಅಂತ ಕೊಡಗಿಗೆ ಹೋಗಿದ್ದವರು ನಾಗರಹೋಳೆ ಕಾಡಿನಿಂದ ಹೆಗ್ಗಡದೇವನಕೋಟೆಗೆ ಹೋಗೋದು ಅಂತ ತೀರ್ಮಾನ ಮಾಡಿದೆವು ನಾವು ಕೊಡಗಿನ ಕಡೆಯಿಂದ ಕಾಡಿನ ಹಾದಿ ಹಿಡಿಯಲಿಕ್ಕೆ ಸಂಜೆ ಆಗಿಬಿಟ್ಚಿತ್ತು, ಅರಣ್ಯ ಇಲಾಖೆ ಗಾರ್ಡ್ ಒಬ್ಬ ಒಳಗೆ ಬಿಡಲ್ಲಾ ಅಂದರೂ ಬಿಡದ ನಾವು ಅವನ ಕೈಬಿಸಿ ಮಾಡಿ ಕಾಡಿನ ರಸ್ತೆಯಲ್ಲಿ ನಿಧಾನವಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದೆವು, ನಮ್ಮ ಪುಣ್ಯಕ್ಕೆ ಅಲ್ಲಲ್ಲಿ ಜಿಂಕೆಗಳು, ನವಿಲುಗಳು, ಕಾಡೆಮ್ಮೆಗಳು ಕಂಡವು. ಕಾಡೆಂಮ್ಮೆಗಳಂತೂ ತಿಂದು ಕೊಬ್ಬಿ ಭಯ ಹುಟ್ಚಿಸುವ ಆಕಾರದಲ್ಲಿದ್ದವು ನಾವೂ ಭಯ ಮಿಶ್ರತ ಕೂತೂಹಲದಲ್ಲಿ ಮಂದುವರೆದೆವು.. ಬಹುಶ ಕಾಡಿನ ಹಾದಿ ಅರ್ಧ ಸವೆದಿರಬೇಕು ತಟ್ಟನೆ ಸಿಕ್ಕ ಎರಡು ದಾರಿಗಳಲ್ಲಿ ಯಾವಕಡೆ ಹೋಗಬೇಕೋ ತಿಳಿಯದೆ ದಾರಿ ತಪ್ಪಿದೆವು.

ಹಾಗೆ ಮುಂದುವರೆಯುತ್ತಿದ್ದಾ ಹತ್ತಿಪ್ಪತ್ತು ಆನೆಗಳು ಅವುಗಳ ಮರಿಗಳು ಹಿಂಡಾಗಿ ಮೇಯುತ್ತಿದ್ದವು ಅವನ್ನು ಕಂಡ ನಾವು ನೋಡುತ್ತಾ ಮುಂದುವರೆಯುತ್ತಿದ್ದಾಗ ಗುಂಪಿನಲ್ಲಿದ್ದ ಬಾರೀ ಆನೆಯೊಂದು ಓ ಅಂತ ಘೀಳಿಟ್ಟು ನಮ್ನನ್ನ ದಿಟ್ಟಿಸಿತು ನಮಗೆ ಭಯ ಆಯಿತಾದರೂ ಕಾರಿನಲ್ಲಿ ಕುಳಿತಿದ್ದರಿಂದ ದೈರ್ಯದಿಂದ ಇದ್ದೆವು. ಹಾಗೆ ಸ್ಪಲ್ಪ ಮುಂದಕ್ಕೆ ಹೋದ ನಮಗೆ ಎದುರಾದ ಅರಣ್ಯ ಇಲಾಖೆ ಜೀಪಿನ ಡ್ರೈವರ್ ಹತ್ತಿರ ದಾರಿ ವಿಚಾರಿಸಿಕೊಂಡು ಬಂದ ರಸ್ತೆಯಲ್ಲೇ ವಾಪ್ಪಸ್ಸಾಗಬೇಕಾಯಿತು.
ಮತ್ತೆ ಆನೆಗಳ ಹಿಂಡು ಇದ್ದ ಜಾಗಕ್ಕೆ ಬಂದಿದ್ದೆ ತಡ ಮಾರಾಯರೇ, ಹಿಂದೆ ನಮ್ಮನ್ನು ನೋಡಿ ಘೀಳಿಟ್ಟಿದ್ದ ಆನೆ ಮತ್ತೆ ಘೀಳಿಡುತ್ತಾ ನಮ್ಮತ್ತ ನುಗ್ಗಿತು ನನಗೆ ಏನು ಮಾಡಬೇಕೂ ತಿಳಿಯದೇ ಕಾರಿನ ಅಷ್ಠೂ ಆಕ್ಸಿಲೇಟರ್ ಒತ್ತಿ ವಿಪರೀತ ವೇಗದಲ್ಲಿ ಮುನ್ನುಗ್ಗಿದೆ, ಮತ್ತೆ ಹಿಂದಕ್ಕೆ ತಿರುಗಿದರೇ ಆನೆ ನಮ್ಮನ್ನೇ ಅಟ್ಟಾಡಿಸಿಕೊಂಡು ಬರ್ತಾ ಇತ್ತು, ನನ್ನ ಮತ್ತು ನನ್ನ ಗೆಳಯರಿಗೆ ಮೀಟರ್ ಅಪ್ ಅಂತಾರಲ್ಲಾ ಅದಾಗಿತ್ತು...!!
ನಾಸ್ತಿಕರಾಗಿದ್ದ ನಮಗೆ ನಾವು ನಂಬದ ದೇವರುಗಳೆಲ್ಲಾ ನೆನಪಾದರು, ಗಾಭರಿಯಾಗಿದ್ದ ನಾವು ನಾಗಾಲೋಟದಲ್ಲಿ ಹೆಗ್ಗಡದೇವನ ಕೋಟೆ ಕಡೆಗೆ ಪರಾರಿಯಾದೆವು, ಈಗ ನೆನೆಸಿಕೊಂಡರೂ ಮೈ ಜುಂ ಅನ್ನಿಸುತ್ತೆ, ಅವತ್ತೇನಾದರೂ ಆತುರದಲ್ಲಿ ನನ್ನ ಕಾರು ಆಪ್ ಆಗಿತ್ತೋ ಏನಾಗುತ್ತಿತ್ತೋ ಗೊತ್ತಿಲ್ಲಾ.. ಆ ಆನೆಗೆ ಯಾವ ರೀತಿ ರೊಚ್ಚಿಗೆದ್ದಿತ್ತೊ ಗೊತ್ತಿಲ್ಲ, ನಾವೇನಾದರೂ ಸಿಕ್ಕಿಕೊಂಡಿದ್ದರೆ ಕತೆ 'ಕಲಾಸ್' ಆಗುತ್ತಿತ್ತು ಅಂತ ಊಹಿಸಬೇಕಷ್ಟೆೇ.

Tuesday, June 30, 2009


ಅಮರಾವತಿಯಲ್ಲಿ ನೋಡ್ಕಂಡು ಬಂದವರು....

ಇದನ್ನ ಯಾವತ್ತೋ ಬರೆದುಬಿಡಬೇಕು ಅಂತ ಅಂದುಕೊಂಡಿದ್ದೆ ಆದರೆ ಈ ಪ್ರಕರಣ ಕೆಲವರನ್ನ ಬ್ಲಾಕ್ ಮೇಲ್ ಮಾಡಲಿಕ್ಕೆ ಆಗಾಗ ಬಳಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ತಡವಾಗಿ ಹೇಳುಕತ್ತಿದ್ದೇನೆ, ಈ ಘಟನೆ ನಡೆದದ್ದು ನಾನು ಮಾನಸಗಂಗೊತ್ರಿಯಲ್ಲಿ ಓದುತ್ತಿದ್ದ ಕಾಲದಲ್ಲಿ, ಅಲ್ಲಿ ಎಂಎ ಒದುವ ಕಾಲಕ್ಕೆ ನಾವು ಸೀರಿಯಸ್ಸಾಗಿ ಓದಿದ್ದಕ್ಕಿಂದ ವಿಚಿತ್ರ ಪ್ರಯೋಗಗಳನ್ನ ಮಾಡಿದ್ದೇ ಹೆಚ್ಚು. ತೀರಾ ಪುಂಡು ಸ್ವಾಬಾವದ ಹುಡುಗರೇ ಒಂದೆಡೆ ಅಪೂರ್ವ ಸಂಗಮದಂತೆ ಸೇರಿಕೊಂಡಿದ್ದರಿಂದ ಹುಡುಗಾಟಿಕೆಯ ಪರಾಕಾಷ್ಠೆ ತಲುಪಿದ್ದೆವು ಅನ್ನಿ, ನಮ್ಮ ಓದು ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ನಮ್ಮ ಬ್ಯಾಚ್ ಅನ್ನು ಅಲ್ಲಿನ ಉಪಾನ್ಯಾಸಕರೇ ನೆನೆಸಿಕೊಳ್ಳುವ ಮಟ್ಟಕ್ಕೆ ನಾವು ಪೇಮಸ್ಸಾಗಿದ್ದೆವು. ನಮ್ಮನ್ನು ನಾವೇ ಜರ್ನೋ ಬಾಯ್ಸ್ ಅಂತ ಕರೆದುಕೊಳ್ಳುತ್ತಿದ್ದ ನಾವು ಕ್ಲಾಸುಗಳು ಇರಲಿ ಬಿಡಲಿ ದಿನದ ಬಹುತೇಕ ಕಾಲವನ್ನು ಗಾಂಧಿ ಕ್ಯಾಂಟೀನಿನಲ್ಲಿ ಅಥವಾ ಅಥವಾ ಕ್ಯಾಂಪಾಸ್ಸಿನ ಒಳಗೇ ಇದ್ದ ಲೇಡೀಸ್ ಹಾಸ್ಚೆಲ್ ನ ಬೆಚ್ಚಗಿನ ವಾತಾವರಣದಲ್ಲಿ ಕಳೆಯುತ್ತಿದ್ದೆವು. ಲೇಡಿಸ್ ಹಾಸ್ಚೆಲ್ ನ ಎದರು ಇರುತ್ತಿದ್ದ ಕಾಂಪೊಂಡು ನಮ್ಮ ಸಂಜೆ ಹೊತ್ತಿನ ಅಡ್ಡಾ ಆಗಿತ್ತು...

ಮೊದಲೇ ಜರ್ನಲಿಸಂ ಓದುತ್ತಿದ್ದ ನಮ್ಮ ನ್ನು ಬೇರೆ ವಿಶಯ ಓದುತ್ತಿದ್ದ ಹುಡುಗ,ಹುಡುಗಿಯರು ವಿಶೇಷ ಗೌರವದಿಂದ ಕಾಣುತ್ತಿದ್ದರು, ಅದನ್ನೇ ಎಕ್ಸಪ್ಲಾಯ್ಟ್ ಮಾಡಿಕೊಂಡ ನಾವು, ನಾವು ಮಾಡುವುದೆಲ್ಲ ಸರಿ ನಮ್ಮಂತೆ ಎಂಜಾಯ್ ಮಾಡೋರು ಲೋಕದಲ್ಲೇ ಇಲ್ಲ ಅನ್ನೋ ಇಗೋ ದಲ್ಲೇ ಜೀವಿಸುತ್ತಿದ್ದೆವು.

ಅವತ್ತು ಶನಿವಾರ ಅಂತ ಕಾಣುತ್ತೆ, ಯಾವ ಕ್ಲಾಸು ಗಳೂ ಇರಲಿಲ್ಲ ಗಾಂಧಿ ಕ್ಯಾಂಟೀನಿನ ಮುಂದೆ ಪಂಟ್ಟಾಂಗ ಹೊಡೆಯುತ್ತಿದ್ದೆವು, ಸ್ವಲ್ಪ ತಡವಾಗಿ ಬಂದ ನಮ್ಮ ಬ್ಯಾಚಿನಲ್ಲೇ ಪ್ರಳಯಾಂತಕನಂತಿದ್ದ ಪಂಟರ್ ಅಪಾಯಕಾರಿ ಐಡಿಯಾವೂಂದನ್ನು ತಲೆಯಲ್ಲಿಟ್ಚುಕೊಂಡು ಎಕ್ಸಿಕ್ಯೂಟ್ ಮಾಡಲು ಸಿದ್ದವಾಗಿಯೇ ಬಂದಿದ್ದ... ಒಬ್ಬೊಬ್ಬರನ್ನೇ ಪಕ್ಕಕ್ಕೆ ಕರೆದು ನಾನೂರು ರೂಪಾಯಿ ಇದೆಯೇನು ಒಳ್ಳೆ ಮಜಾ ತೋರಿಸ್ತೀನಿ ಅಂತ ಕೇಳುತ್ತಿದ್ದ, ಗುಂಡು ಪಾರ್ಟಿಗಳಿಗಾಗಿ ಸಾಮಾನ್ಯವಾಗಿ ನೂರೋ, ನೂರೈವತ್ತೋ ರೂಪಾಯಿಗಳನ್ನು ಕೇಳುತ್ತಿದ್ದ ಆಸಾಮಿ ಇದ್ದಕ್ಕಿದ್ದಂತೆ ನಾನೂರು ರೂಪಾಯಿ ಕೇಳಿದರೇ ದಂಗಾದ ಗೆಳೆಯರೆಲ್ಲ ಇಲ್ಲಾ ಗುರು ಪಾಪರ್ ಆಗೋಗಿದಿವಿ ಗುರು ರೈಸ್ ಬಾತ್ ಗೂ ಕಾಸಿಲ್ಲ ಅಂತ ಹೇಳಿದರೂ ಬಿಡದ ಆಸಾಮಿ ಇಲ್ಲ ಕಣ್ರೋ ಇಂತ ಚಾನ್ಸ್ ಮತ್ತೆ ಸಿಗಲ್ಲ, ಒಳ್ಳೆ ಪಿಗರ್ ಗಳಂತೆ ನಾರ್ಥ್ ಇಂಡಿಯಾದಿಂದ ಬಂದಿದ್ದಾರಂತೆ ಮಿಸ್ಸಾಯ್ತೂ ಸಿಗೋದಿಲ್ಲ ಅಂತ ಹೇಳಿದ ಇನ್ನು ಕೆಲವರಿಗೆ ಡಗಾರ್ ಗಳ ಮನೆ ಹೆಂಗಿರುತ್ತೋ ಅಂತ ತಿಳುಕೊಳ್ರೋ ಮಕ್ಕಾಳಾ ಅಂತಾ ಕೆಲವರ ಕುತೂಹಲ ಹೆಚ್ಚಿಸಿದ, ನನಗೋ ಇದು ಡೇಂಜರ್ ಐಡಿಯೂ ಅಂತ ಗೊತ್ತಾದ ತಕ್ಷಣವೇ ಜಾಗ ಖಾಲಿ ಮಾಡಿದೆ.

ಪಂಟರ್ ತೋರಿಸಿದ ಆಮಿಶಕ್ಕೆ ಬಿದ್ದ ನಾಲ್ಕೈದು ಮಂದಿ ಯಾಗೋ ಹಣ ಹೊಂದಿಸಿ ಪ್ರಥಮ ಸಹಾಸಕ್ಕೆ ರೆಡೆಯಾಗಿದ್ದಾರೆ, ಟೆರರ್, ಪೆಂಗ, ಪಂಚು, ನೈಸು, ಐಸು ಇತ್ಯಾದಿಗಳು ಕೆಆರ್ಎಸ್ ರಸ್ತೆಯ ಅಮರಾವತಿ ಅತಿಥಿ ಗೃಹಕ್ಕೆ ಹೋಗಿಬಂದಿದ್ದಾರೆ.

ಸೋಮವಾರ ಕ್ಲಾಸಿಗೆ ಬಂದ ಅವರೆಲ್ಲ ಶನಿವಾರ ನಡೆದಿದ್ದನ್ನೆಲ್ಲಾ ನಮಗೆ ಹೇಳದೆ ಕದ್ದು ಮುಚ್ಚಿ ಓಡಾಡುತ್ತಾ ತಪ್ಪಿಸಿಕೊಂಡು ತಿರುಗುತ್ತಿದ್ದರು, ನನಗೂ ಏನಾಗಿರಬಹುದು ಅನ್ನೋ ಕುತೂಹಲ ತಡೆಯಲಾಗದೇ ಒಬ್ಬೊರನ್ನು ವಿಶ್ವಾಸಕ್ಕೆ ತೆಗೆಡುಕೊಂಡು ಬೇರೆ ಬೇರೆ ಸಮಯದಲ್ಲಿ ವಿಚಾರಿಸಿಕೊಂಡೆ..

ಅಗ ತಿಳಿದಿದ್ದೇನಪ್ಪಾ ಅಂದರೆ ಕೆಆರ್ಎಸ್ ಗೆ ಹೋಗುವ ರಸ್ತೆಯಲ್ಲಿರು ಅಮರಾವತಿ ಅತಿಥಿ ಗೃಹಕ್ಕೆ ಹೋದವರೆಲ್ಲ ಅಲ್ಲಿದ್ದ ಕಲರ್ ಕಲರ್ ಹುಡುಗಿಯರಲ್ಲಿ ತಮಗೆ ಬೇಕಾದವರನ್ನು ಅಯ್ಕೆ ಮಾಡಿಕೊಂಡ ತಕ್ಷಣವೇ ಅವರೇ ರೂಮುಗಳೊಳಗೆ ಕರೆದುಕೊಂಡು ಹೋದರಂತೆ...
ಅಮೇಲೇನಾಯಿತು ಅನ್ನೊದೆ ಕುತೂಹಲ ಅಲ್ಲವಾ, ಒಳಗೆ ಹೋದವರೆಲ್ಲಾ ಕೆಲವೇ ನಿಮಿಶಗಳಲ್ಲಿ ಹೋಟೆಲ್ ಹೊರಗೆ ಬಂದು ನಿಂತಿದ್ದರಂತೆ, ಒಬ್ಬರಿಗೊಬ್ಬರು ಕಡಿದು ಕಟ್ಟೆ ಹಾಕಿದವರಂತೆ ಹಾಗಾಯಿತು ಮಗಾ, ಹೀಗಾಯಿತು ಮಗಾ... ಸೂಪರ್ರೂ ಮಗಾ.. ಅಂತ ಹೇಳಿಕೊಳ್ಳುತ್ತಾ ಪೌರುಷದ ಪ್ರದರ್ಶನ ಮಾಡಿಕೊಳ್ಳುತ್ತಾ ವಾಪ್ಪಸ್ಸಾಗಿದ್ದಾರೆ.

ಈ ಅಮರಾವತಿ ಪ್ರಕರಣ ನಡೆದ ಬಹಳ ದಿನಗಳ ಗೊತ್ತಾಗಿದ್ದೇನಪ್ಪಾ ಅಂತರೆ ಮೊದಲೇ ಭಯದಲ್ಲಿದ್ದ ಇವರೆಲ್ಲ ಅತಿಥಿ ಗೃಹದ ಪರಿಸರ ಕಂಡು ಗಾಬರಿಯಾಗಿದ್ದರಂತೆ... ಇವರು ನೋಡು ನೋಡುತ್ತಿದ್ದಂತೆ ಬಟ್ಟೆ ಕಳಚಲು ಆರಂಭಸಿದ ಆ ಹೆಣ್ಣುಗಳನ್ನು ನೋಡಿ ಮತ್ತಷ್ಠು ಗಲಿಬಿಲಿಗೆ ಒಳಗಾಗಿ ಹೆದರಿಹೋಗಿದ್ದಾರೆ, ಕಾಸು ಕೊಟ್ಚಿದ್ದಕ್ಕೆ ಮೋಸ ಆಗಬಾರದು ಅಂತ ಅಮರಾವತಿಗಳನ್ನು ಮುಟ್ಟದೇ ಅವರ ದರ್ಷನ ಮಾಡಿಕೊಂಡು ಬಂದರಂತೆ. ಈ ಪ್ರಕರಣ ಈಗ ರಹಸ್ಯವಾಗೇನು ಉಳಿದಿಲ್ಲ ಅಮರಾವತಿಗೆ ಹೋಗಿ ಬಂದವರೆಲ್ಲ ನಾನು ಏನೂ
ಮಾಡಲಿಲ್ಲಪ್ಪಾ ಸುಮ್ಮನೇ ನೋಡಿಕೊಂಡು ಬಂದೆ ಅಷ್ಠೇ ಹೇಳುತ್ತಿದ್ದಾರೆ.

ಪತ್ರಿಕೊದ್ಯಮಕ್ಕೆ ಕಾಲಿಡುವುದಕ್ಕೂ ಮುನ್ನವೇ ಹೊಸ ಅನುಭವಕ್ಕಾಗಿ ಕಾತರಿಸುತ್ತಿದ್ದ ನನ್ನ ಗೆಳಯರೆಲ್ಲಾ ಸದ್ಯ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ಚಾನೆಲ್ ಗಳಲ್ಲಿ ವರದಿಗಾರರಾಗಿ ಹೆಸರು ಮಾಡಿದ್ದಾರೆ, ಅವರು ಸಿಕ್ಕಾಗಲೆಲ್ಲಾ ಎನ್ರಪ್ಪಾ ಅಮರಾವತಿಗಳೂ ಅಂತ ಕಿಚಾಯಿಸುತ್ತಾ ಇರ್ತೇನೆ... ಬಾಲ ಬಿಚ್ಚಿದಿರೋ ನಿಮ್ಮ ನಿಜವಾದ ಹೆಸರುಗಳನ್ನು ಬರೆಯಬೇಕಾಗುತ್ತದೆ ಅಂತ ಎಚ್ಚr

Monday, June 29, 2009

ರಿಪೋರ್ಟ್ ಟಿಲ್ ಡೆತ್...!!!






ಈ ಪ್ರಕರಣ ನೆನೆಸಿಕೊಂಡಾಗಲೆಲ್ಲ ನನಗೆ ಒಂತಾರ ಕಸಿವಿಸಿಯಾಗುತ್ತೆ, ತಪ್ಪು ನಂದಾ, ಮತ್ತೊಬ್ಬರದಾ, ಆತನ ಸಾವಿಗೆ ನಾನು ಹೊಣೆಯಾ ಇಲ್ಲಾ ವಿಜಯಕರ್ನಾಟಕ ಪತ್ರಿಕೆ ಹೊಣೆಯಾ ಎಂಬ ಗೋಜಲು, ಗೋಜಲು ಯೋಚನೆಗಳು ದುತ್ತನೆ ಬಂದು ನಿಲ್ಲುತ್ತವೆ, ಪತ್ರಕರ್ತ ವೃತ್ತಿಯಲ್ಲಿ ಇಂತವೆಲ್ಲ ಸಹಜ ನನಗೆ ನಾನೇ ಹೇಳಿಕೊಂಡು ಸುಮ್ಮನೇ ಇರಲು ಯತ್ನಿಸಿದರು ನನಗೆ ಈ ಪ್ರಕರಣ ಆಗಾಗ ನೆನಪಾಗುತ್ತಾ, ಸರಿ ತಪ್ಪಿನ ಗೋಜಲಿಗೆ ಮತ್ತೆ ಮತ್ತೆ ಸಿಕ್ಕಿಸುತ್ತದೆ.

ನಿಮಗೆ ನೆನಪಿರಬೇಕು ಹಾಸನ ಜಿಲ್ಲೆಯಲ್ಲಿ ಅಕ್ಕಿ ಹಗರಣ ಎಂಬ ಬೃಹತ್ ಹಗರಣವೊಂದು ಬೆಳೆಕಿಗೆ ಬಂದು ಹತ್ತಾರು ಸರ್ಕಾರಿ ಅಧಿಕಾರಿಗಳು ಜೈಲಿಗೆ ಹೋಗಿ ಮತ್ತೆ ಕೋರ್ಟಿನಿಂದ ಕುಲಾಸೆಯಾದರು, ಸಾಮಾನ್ಯವಾಗಿ ಹಾಸನ ಜಿಲ್ಲೆಯಲ್ಲಿ ನಡೆದ ಬಹುತೇಕ ಹಗರಣ ಮತ್ತು ಕೊಲೆ ಕೇಸುಗಳು ಸಾಕ್ಷಾಧಾರಗಳಿಲ್ಲದೇ ಕುಲಾಸೆಯಾಗುತ್ತವೆ, ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಅಕ್ಕಿ ಹಗರಣ ನಡೆದು ಹೋಗಿ ರಾಜ್ಯದಾದ್ಯಂತ ಬಾರಿ ಸುದ್ದಿಯಾದಮೇಲೂ ಆ ಅಕ್ಕಿ ಹಗರಣ ಮುಂದುವರೆದಿತ್ತು, ಪೋಲೀಸರು, ಆಹಾರ ಇಲಾಖೆ ಅಧಿಕಾರಿಗಳು, ಎಪ್.ಸಿ.ಐ ಗೋಡೌನಿನ ಅಧಿಕಾರಿಗಳು, ವ್ಯಾಪಾರಿಗಳು, ಲಾರಿ ಮಾಲಿಕರು ಸೇರಿ ಬಡವರಿಗೆ ಸೇರಬೇಕಾದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸಿ ಗುಳುಂ ಮಾಡುವುದೇ ಅಕ್ಕಿ ಹಗರಣ, ಈ ದಂದೆ ಮತ್ತು ಅದರ ವಿಸ್ತಾರಕ್ಕೆ ಹೋದರೆ ಕಷ್ಠ ಬಿಡಿ,ಕೊಲೆ ಆಗಬಹುದು, ಹಗರಣದ ಅಕ್ಕಿಯನ್ನು ಮಂಗಳೂರು ಬಂಧರಿನ ಮೂಲಕ ವಿದೇಶಕ್ಕೂ ಸಾಗಿಸುತ್ತಾರೆ ಆದರಿಂದ ಇದೊಂದು ಬಾರಿ ಕಳ್ಶರ, ದುರುಳರ ಸಂತೆ.

ಹಳೆ ಹಗರಣ ಬೆಳಕಿಗೆ ಬಂದು ವರ್ಷ ಕಳೆದ ನಂತರ ಮತ್ತೆ ಬಡವರ ಅಕ್ಕಿಯನ್ನ ಕಳ್ಳ ಮಾರ್ಗಗಳಲ್ಲಿ ಲಪಟಾಯಿಸುತ್ತಿರುವ ಮಾಹಿತಿ ಪಡೆದ ನಾನು ದೃಶ್ಯಗಳ ಸಮೇತ ಈ ಟಿ.ವಿ.ಯಲ್ಲಿ ವರದಿ ಮಾಡಿದೆ, ನನ್ನ ತನಿಖೆಯನ್ನು ಒಂದೇ ಪ್ರಕರಣಕ್ಕೆ ಸೀಮಿತಗೊಳಿಸದೆ ಸರಿ ಸುಮಾರು ಒಂದು ತಿಂಗಳು ನಿರಂತರವಾಗಿ ಅಕ್ಕಿ ದಾಸ್ತಾನಿರುವ ಗೋಡೌನುಗಳ ಮೇಲೆ ಅಧಿಕಾರಿಗಳ ಸಮೇತ ಧಾಳಿ ಮಾಡೋದು, ಲಾರಿಗಳನ್ನ ಸಾಕ್ಷ ಸಮೇತ ಹಿಡಿದು ವರದಿ ಮಾಡುವುದು ನಾನು ಮಾಡಿದ ಕೆಲಸ....ಆರಂಭದಲ್ಲಿ ಅನಾಮಿಕ ವ್ಯಕ್ತಿಯಿಂದ ಬಂದ ಮಾಹಿತಿ ಮೇರೆಗೆ ಶುರುವಾದ ನನ್ನ ಕಾರ್ಯಾಚರಣೆಗೆ ನಂತರದ ದಿನಗಳಲ್ಲಿ ಹಗರಣದಲ್ಲಿ ಪಾಲ್ಗೊಂಡಿದ್ದ ಮಂದಿಯೇ ಅವರವರ ನಡುವಿನ ದ್ವೇಷದಿಂದಾಗಿ ಮಾದ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಹಾಸನ ಸೇರಿದಂತೆ ರಾಜ್ಯದಲ್ಲೇ ಇದು ದೊಡ್ಡ ಸುದ್ದಿಯಾಗಿತ್ತು....

ಬಾರಿ ಹಣ ತೊಡಗಿಕೊಂಡ ಹಗರಣವಾದ್ದರಿಂದ ವರದಿ ಮಾಡಲು ಹೋದ ವರದಿಗಾರರ ಮೇಲೂ ಭ್ರಷ್ಠಾಚಾರದ ಆರೋಪ ಖಂಡಿತಾ ಬರುವುದರಿಂದ ವರಿದಿಗಾರರಿಗೆ ಮಾಹಿತಿ ಸಿಕ್ಕರೂ ಅದರ ತಂಟೆಗೆ ಹೋಗದೆ ಸುಮ್ಮನೆ ಇದ್ದು ಬಿಡುತ್ತಿದ್ದರು.
ಪರಿಸ್ಥಿತಿ ವಿಶಮವಾಗಿದ್ದರು ಅನ್ಯಾಯ ಸಹಿಸಿಕೊಳ್ಳಲಾಗದ ನಾನು ನನಗಿದ್ದ ಸೀಮಿತ ಅವಕಾಶದಲ್ಲೇ ಈ ಹಗರಣಗಳನ್ನ ಮತ್ತೆ ಬೆಳಕಿಗೆ ತಂದೆ, ನನ್ನ ಇಂತಹ ಪ್ರಯತ್ನದಲ್ಲಿ ನನ್ನ ಜೊತೆಗಿದ್ದವರು ವಿಜಯಕರ್ನಾಟಕ ಪತ್ರಿಕೆಯವರು.

ಒಂದು ದಿನ ಏನಾಯಿತೆಂದರೆ ಹಾಸನದ ಸಂತೇಪೇಟೆ ಮೈದಾನದಲ್ಲಿ ವ್ಯಕ್ತಿಯೊಬ್ಬ ಅಕ್ರಮ ದಾಸ್ತಾನು ಮಾಡಿದ್ದಾನೆ ಅಂತ ಸುದ್ದಿ ಸಿಕ್ಕಿದ್ದೇ ತಡ ನಾನು, ವಿಜಯಕರ್ನಾಟಕ ಪತ್ರಿಕೆ ಪ್ರಕಾಶ್ ಸ್ಥಳಕ್ಕೆ ಭಾರಿ ಅಕ್ರಮ ದಾಸ್ತಾನನ್ನು ಹಿಡಿದು ಬಿಟ್ಟವು. ಸ್ಥಳದಲ್ಲೇ ಸಿಕ್ಕಿಕೊಂಡ ವ್ಯಕ್ತಿಯ ಮದ್ಯ ವಯಸ್ಸು ಮೀರಿತ್ತು.
ನಮ್ಮ ಕೈಯಲ್ಲಿ ಸಿಕ್ಕಿಕೊಂಡು ಗಾಬರಿಗೆ ಒಳಗಾಗಿ ನಮಗೆ ಹಣದ ಆಮಿಶ ಒಡ್ಡಿದ, ಅದೆಲ್ಲಕ್ಕೆ ತಲೆಬಾಗದ ನಾವು ವರದಿ ಮಾಡಿದೆವು.

ಹಾಸನದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಹಾಸನದಲ್ಲಿ ಬಾರಿ ಶ್ರೀಮಂತರೂ ಮರ್ಯಾದಸ್ಥ ಕುಟುಂಭದವನಾಗಿದ್ದ ಆತನ ದಂದೆ ಇದಾ.... ಅಂತ ಅಲ್ಲಿನ ಜನಕ್ಕೆ ಗೊತ್ತಾಯಿತು. ನಾನು ಎಂದಿನಂತೆ ಪ್ರಕರಣವನ್ನು ವರದಿ ಮಾಡಿ ಸುಮ್ಮನೇ ಆಗಿಬಿಟ್ಟಿ.

ಆದರೆ ವಿಜಯಕರ್ನಾಟಕದವರು ಅಕ್ಕಿ ಗುಳುಂ ಅಂತ ಪ್ರೋಮೋ ಹಾಕಿಕೊಂಡು ಆತನನ್ನ ಅರೆಸ್ಟ್ ಮಾಡುವವರೆಗೆ ದಿನಾ ಸುದ್ಧಿ ಹಾಕುತ್ತಿದ್ದರು,,, ಅಕ್ಕಿ ಕಳ್ಳನನ್ನು 5 ದಿನವಾದರೂ ಬಂಧಿಸದ ಪೋಲೀಸರು....! 15 ದಿನವಾದರೂ ಬಂಧಿಸಿದ ಪೋಲೀಸರು ಅಂತ, ಕಳ್ಳ ಮತ್ತು ಪೋಲೀಸರ ಹಿಂದೆ ವಿಜಯಕರ್ನಾಟಕದವರು ಬಿದ್ದು ಬಿಟ್ಟರು.... ಪ್ರಕರಣ ನಡೆದು ಒಂದು ತಿಂಗಳ ನಂತರ ವ್ಯಕ್ತಿಯ ಬಂಧನವಾಯಿತು ಅದನ್ನೂ ವಿಜಯಕರ್ನಾಟಕದವರು ಪಲಶೃತಿ ಅಂತ ಬರೆದುಕೊಂಡರು...

ಆತ ಬೇಲ್ ಅಪ್ಲಿಕೇಶನ್ ಹಾಕಿದಾಗ... ಮತ್ತೆ ಬಿಡುಗಡೆಯಾದಾಗ ಪಾಲೋ ಅಪ್ ಸುದ್ದಿಗಳನ್ನು ಪತ್ರಿಕೆಯಲ್ಲಿ ಆತನ ದಪ್ಪ ದಪ್ಪ ಪೋಟೋ ಹಾಕಿ ಅಕ್ಕಿ ಕಳ್ಳನ ಚಡ್ಡಿ ಹರಿದರು... ಆದು ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ ನನಗೇ ಯಾಕೋ ಇವರದು ವಿಕೃತಿ ಅನ್ನಿಸಲಿಕ್ಕೆ ಶುರುವಾಗಿತ್ತು.

ಇದೆಲ್ಲ ನಡೆದು ಎರಡು ತಿಂಗಳಾಗಿರಬೇಕು ನನ್ನ ಸ್ನೇಹಿತ ಗಣೇಶ ನನಗೆ ಬೆಳಿಗ್ಗೆ ಅಷ್ಟೊತ್ತಿಗೆ ಕರೆ ಮಾಡಿ, ಲೋ ಗೌಡ ಅಂತೂ ಇಂತೂ ಅಕ್ಕಿ ಕಳ್ಳನನ್ನೂ ಬಲಿ ತಗೊಂಡ್ರಲ್ಲೋ ಅಂದ. ನಾನು ಗಾಭರಿಯಿಂದ ಯಾಕಪ್ಪಾ ಅಂದೆ ಅದೇ ಕಣೋ ಅಕ್ಕಿ ಹಗರಣದಲ್ಲಿ ದಿನಾಲೂ ಪೇಪರಿನಲ್ಲಿ ಬರ್ತಾ ಇದ್ದನಲ್ಲಾ ಆ ಅಸಾಮಿ, ಆತ ಸತ್ತೋದ ಕಣೋ... ಹೈ ಶುಗರ್ ಇತ್ತಂತೆ.... ಬಿಪಿ ಸಿಕ್ಕಾ ಪಟ್ಟೆ ಹೆಚ್ಚು ಕಮ್ಮಿ ಆಗಿದೆ, ಜೊತೆಗೆ ಹಾರ್ಟ್ ಪೈಲೂರಾಗಿ ಹೋಗಿ ಬಿಟ್ಟಿದ್ದಾನೆ ಗುರೂ..
ನೀವು ಪೇಪರಿನೋರ ಕಾರಣದಿಂದಲೇ ಸತ್ತ ಅಂತ ಜನ ಮಾತಾಡಿಕೊಳ್ತಾ ಇದಾರೆ, ಇದಕ್ಕೆಲ್ಲಾ ಕಾರಣ ವಿಜಯಕರ್ನಾಟಕ ಹಾಸನ ಮುಖ್ಯಸ್ಥ ಮಹೇಶ್ ಚಂದ್ರನಿಗೆ ಈಗ ನೆಮ್ಮದಿ ಸಿಕ್ಕಿರಬೇಕು ಅವನಿಗೆ ಪೋನು ಮಾಡ್ರೋ ಅಂತ ಯಾರೋ ಅವರ ಮನೆ ಹತ್ರ ಮಾತಾಡಿಕೊಂಡರಂತೆ ಅಂತ ಹೇಳಿದ. ಜೊತೆಗೆ ನೀನೂ ಇವತ್ತೊಂದು ದಿನ ಹುಶಾರಾಗಿರು ಗುರು ಯಾಕಂದರೆ ಅವನನ್ನ ಮೊದಲು ಹಿಡಿದೊನೇ ನೀನಲ್ಲವಾ ಅಂದ.

ನನಗೆ ಯಾಕೋ ಬೇಜಾರಾಯಿತು ನಾನು ಆತನನ್ನು ಹಿಡಿದಿದ್ದರಿಂದಲೇ ಅಲ್ವಾ ಆತ ಸತ್ತಿದ್ದು, ಆ ವಿಜಯಕರ್ನಾಟಕದವರು ಆತನನ್ನು ಹುರಿದು ತಿಂದದ್ದು, ಆತ ತಪ್ಪು ಮಾಡಿದ್ದ ನಿಜ ಆದರೂ ಸಾಯೋವಂತಾ ತಪ್ಪಲ್ಲ ಅಂತೆಲ್ಲಾ ಅನ್ನಿಸಲಿಕ್ಕೆ ಶುರುವಾಯಿತು... ಈ ಪ್ರಕರಣದಲ್ಲಿ ನನ್ನ ಪಾತ್ರ ಸರಿನಾ ತಪ್ಪಾ ಅಂತ ಗೊತ್ತಾಗಲೇ ಇಲ್ಲ.

ಅವನ ಸುದ್ಧಿಯನ್ನ ದಿನಾ ಪಾಲೋ ಅಪ್ ಮಾಡುತ್ತಿದ್ದ ವಿಜಯಕರ್ನಾಟಕದವರು ಅವನು ಸತ್ತ ದಿನ ಒಂದೇ ಒಂದು ಶಬ್ಧ ಸುದ್ಧಿ ಬರೆಯಲಿಲ್ಲ ನೋಡಿ.....

Friday, June 26, 2009

"ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ಯಾವ ಇಸ್ಕೂಲು ಗುರು ನೀನು ಓದಿದ್ದು ಅಂತ ಸರ್ಕಾರದ ಹಿರಿಯ ಅಧಿಕಾರಿಯನ್ನು ಕೋಪದಿಂದ ಕೇಳಿದ ಲೋಕೋಪಯೋಗಿ ಸಚಿವ ರೇವಣ್ಣ, ಇಲಾಖೆಯ ಮಂತ್ರಿಯ ಪ್ರಶ್ನೆಯಿಂದ ಆ ಕ್ಷಣಕ್ಕೆ ದಂಗಾದ ಹಿರಿಯ ಅಧಿಕಾರಿ ಮಂತ್ರಿಗಳು ಗರಂ ಆಗಿದ್ದಾರೆ ಅಂತ ಹ್ಯಾಪ ಮೋರೆ ಹಾಕಿಕೊಂಡು ಸುಮ್ಮನೇ ಇದ್ದ, ಮುಂದುವರೆದ ರೇವಣ್ಣ ಅದೇ ಗುರು ಕೇಳಿದ್ದು ಯಾವ ಇಸ್ಕೂಲು ತಾವು ಓದಿದ್ದು ಅಂದ,

"ಸೆಶನ್ ನಲ್ಲಿ ಯಾವನೋ ಪ್ರಶ್ನೆ ಕೇಳಿದ ಅಂತ ನೀನು ಹಿಂಗೆ ಉತ್ತರ ಬರೆದು ಕಳಿಸಿದರೆ ಉತ್ತರ ಕೊಡಬೇಕಾದೋನು ನಾನೋ ನೀನೋ...ನನ್ನ ಸಿಗಾಕಿಸಬೇಕು ಅಂತ ಮಾಡಿದ್ದೀಯೋ ಹೇಗೆ ಅಂತ ಕೇಳಿ , ತಗಬಾ ಇಲ್ಲಿ ಅಂತ ಆಗ ತಾನೆ ನಡೆಯುತ್ತಿದ್ದ ವಿಧಾನಸಭಾ ಕಲಾಪಗಳಲ್ಲಿ ಉತ್ತರ ಕರ್ನಾಟಕದ ಶಾಸಕನೊಬ್ಬ ರಾಜ್ಯ ಹೆದ್ದಾರಿಗಳ ಬಗ್ಗೆ ಕೇಳಿದ್ದ ಪ್ರಶ್ನೆಗೆ ಆ ಅಧಿಕಾರಿ ಬರೆದಿದ್ದ ಉತ್ತರಗಳನ್ನು ತೋರಿಸಿ ಇಂಗೆ ಉತ್ತರ ಬರೆದರೆ ವಿರೋದ ಪಕ್ಷದೋರು ಸುಮ್ಮನೆ ಬಿಡ್ತಾರೆ ಅಂತ ಅಂದುಕೊಂಡೆಯಾ ಅಂತ ಕೇಳಿದ, ಆ ಅಧಿಕಾರಿ ಆಗಲು ಸುಮ್ಮನೇ ಇದ್ದ.

ಅಲ್ಲಿದ್ದ ಪ್ರಶ್ನೆ ಏನಪ್ಪಾ ಅಂದರೆ ಉತ್ತರ ಕರ್ನಾಟಕದ ಇಂತಿತ್ತಾ ರಸ್ತೆ ಅಭಿವೃದ್ದಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ, ಅದಕ್ಕೆ ಸರ್ಕಾರಿ ಅಧಿಕಾರಿ ಸುದೀರ್ಘ ಉತ್ತರ ಬರೆದಿದ್ದ ಇದೇ ರೇವಣ್ಣ ನ ಕೋಪಕ್ಕೆ ಕಾರಣವಾಗಿತ್ತು,

ಈಗ ಬರೆದುಕೋ ಅಂತ ಹೇಳಿದ ರೇವಣ್ಣ ಉತ್ತರ ಕರ್ನಾಟಕ ರಸ್ತೆಗಳ ಅಭಿವೃದ್ದಿ ಮಾಡುವುದಕ್ಕಾಗಿಯೇ ಉತ್ತರ ಕರ್ನಾಟಕ ರಸ್ತೆ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡಿದ್ದು ಅದರ ಮುಖಾಂತರ ಅಭಿವೃದ್ದಿ ಮಾಡಲಾಗುತ್ತಿದೆ ಅಂತ ಬರೆಸಿದ,

ಎರಡನೆ ಪ್ರಶ್ನೆ ಉತ್ತರ ಕರ್ನಾಟಕದಲ್ಲಿ ಬರುವ ರಾಷ್ಠ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರದ ಕ್ರಮ ಏನು ಅಂತ ಅದಕ್ಕೆ ರೇವಣ್ಮ ಬರೆಸಿದ ಉತ್ತರ ರಾಷ್ಠ್ರೀಯ ಹೆದ್ದಾರಿಗಳ ಅಭಿವೃದ್ದಿ ಕೇಂದ್ರ ಸರ್ಕಾರದ್ದಾಗಿದ್ದು ಕೇಂದ್ರ ಹಣ ಬಿಡುಗಡೆ ಮಾಡಿದರೆ ಲೋಕೋಪಯೋಗಿ ಇಲಾಕೆ ಕಾಮಗಾರಿಗಳಿಗೆ ಸಹಯೋಗ ನೀಡುತ್ತದೆ ಆದರಿಂದ ಈ ಪ್ರಶ್ನೆ ಉದ್ಬವಿಸುವುದೇ ಇಲ್ಲ ಅಂತ,

ಬರೆದುಕೊಂಡ ಅಧಿಕಾರಿಯ ಜೊತೆ ನಾನೂ ದಂಗಾಗಿ ಹೋದೆ, ಈ ಪ್ರಶ್ನೆಗಳು ಜೊತೆ ಯಾರಿಗೂ ಅರ್ಥವಾಗದ 500 ಪುಟದ ರಸ್ತೆಗೆ ಸಂಭಂದಿಸಿದ ವಿವರಗಳ ಬುಕ್ ಲೆಟ್ ಸೇರಿಸು ಅಂತ ರೇವಣ್ಣ ತಮ್ಮ ರಾಜಕೀಯ ಚಾಕಚಕ್ಯತೆ ತೋರಿದರು...

ಶಾಸಕ ಹಾಕಿದ ಪ್ರಶ್ನೆಗೆ ತಾತ್ವಿಕ ಉತ್ತರ ಸಿಕ್ಕಂತೆ ಆಗಬೇಕು ತಾನೂ ವಿರೋಧ ಪಕ್ಷದವರ ಕೈಗೆ ಸಿಗಬಾರದು ಅನ್ನೋದು ರೇವಣ್ಣನ ಐಡಿಯಾ....

ದೇವೇಗೌಡರ ಗರಡಿಯಲ್ಲಿ ಸಾಕಷ್ಠು ಪಳಗಿರುವ ಅವರ ಮಕ್ಕಳಲ್ಲಿ ರೇವಣ್ಣ ನಂಬರ್ ಒನ್ ಅಪ್ಪನ ಮಾತನ್ನು ಸತ್ತರೂ ಬಿಟ್ಟುಕೊಡದ ರೇವಣ್ಣನ ಬಗ್ಗೆ ದೇವೇಗೌಡರಿಗೂ ವಿಪರೀತ ಕಾಳಜಿ ಬೇರೆಯವರ ತರ ಸಾಕಷ್ಚು ಓದಿಲ್ಲಾ ಅನ್ನೋ ಕಾರಣಕ್ಕೆ ದೇವೇಗೌಡ ರೇವಣ್ಣನ ಪ್ರತಿ ನಡೆಗೂ ಬೆನ್ನಿಗೆ ನಿಂತಿರುತ್ತಾರೆ, ನಾನು ಹಾಸನದಲ್ಲಿ ವರದಿಗಾರ ಆಗಿದ್ದರಿಂದ ರೇವಣ್ಣನ ರಾಜಕೀಯದ ಕಾರಿಡಾರುಗಳಲ್ಲಿ ಅಡ್ಜಾಡುವ ಅವಕಾಶ ಸಿಕ್ಕಿತ್ತು, ಕುತೂಹಲದ ಗಣಿಯಾಗಿದ್ದ ರೇವಣ್ಣನ ಬಗ್ಗೆ ಜನರಿಗೆ ತಿಳಿದದ್ದು ಕಡಿಮೆ,ಆತನ ನಡೆಗಳೇ ನಿಗೂಡ... ನಾನು ಹೇಳುವುದಾದರೆ ಆತ ದೈತ್ಯ ಪ್ರತಿಭೆ ಆತನಿಗಿರುವ ಕೆಲವೇ ವೀಕ್ ಪಾಯಿಂಟ್ ಬಿಟ್ಟರೆ ಆತ ಅಭಿವೃದ್ದಿ ಕಡೆ ಯೋಚಿಸುವ ರಾಜಕಾರಣಿ,

ನಾನು ಸಾದ್ಯವಾದಾಗಲೆಲ್ಲ ಎಚ್,ಡಿ.ರೇವಣ್ಣನ ಕಾರ್ಯವೈಖರಿಯನ್ನ ಹತ್ತಿರದಿಂದ ನೋಡಿದ್ದೇನೆ,

ಯಾಕಂದರೆ ಕಳೆದ 20,20 ಸರ್ಕಾರದಲ್ಲಿ ಸೂಪರ್ ಸಿಎಂ ಆಗಿದ್ದವರು ಎಚ್.ಡಿ.ರೇವಣ್ಣ. ಆ ಕಡೆ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ, ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೋ ಚರ್ಚೆಯಲ್ಲಿ ಬಿಸಿಯಾಗಿದ್ದರೆ, ರೇವಣ್ಣ ಸರ್ಕಾರದಿಂದ ಹಾಸನಕ್ಕೆ ಏನೇಲ್ಲಾ ಸಿಗುತ್ತೋ ಅದನ್ನೆಲ್ಲಾ ತಗೊಂಡು ಹೋಗೋದು ಅಂತ ಪಣ ತೊಟ್ಟಿದ್ದರು,

ದಿನಕ್ಕೆ 10 ರಿಂದ ಹದಿನೈದು ಪೈಲಿಗೆ ಕುಮಾರಸ್ವಾಮಿಯಿಂದ ಸಹಿಹಾಕಿಸಿಕೊಳ್ಳದಿದ್ದರೇ ಆತನಿಗೆ ನಿದ್ದೆ ಹತ್ತುತ್ತಿರಲಿಲ್ಲ , ಕಂಕುಳಲ್ಲಿ ಏನಾದರೊಂದು ಪೈಲು ಇರದಿದ್ದರೇ ರೇವಣ್ಣನಿಗೆ ಆಗುತ್ತಿರಲಿಲ್ಲ ಕುಮಾರಸ್ವಾಮಿ ಎಲ್ಲೇ ಇರಲಿ ನುಗ್ಗಿ ಒಂದೊಂದೆ ಪೈಲು ತಿರುಗಿಸುತ್ತಾ ಇದ್ದರೆ ಕುಮಾರಸ್ವಾಮಿ ಪೈಲು ಏನಂತ ನೋಡದೇ ಸಹಿ ಹಾಕಬೇಕಿತ್ತು ಏನಣ್ಣಾ ಇವೆಲ್ಲ ಅಂತ ಕುಮಾರಸ್ವಾಮಿ ಏನಾದರೂ ಕೇಳಿದರೆ ಮೊದಲು ಸೈನ್ ಮಾಡು ಆಮೇಲೆ ಇದನ್ನೆಲ್ಲಾ ಓದಿಕೊಳ್ಳೂವಂತೆ ಅನ್ನುತ್ತಿದ್ದ ರೇವಣ್ಣ.

ರಾಜ್ಯ ರಾಜಕೀಯದಲ್ಲಿ ಇರುವ ಕಲರ್ ಪುಲ್ ವ್ಯಕ್ತಿಗಳಲ್ಲಿ ರೇವಣ್ಣ ಒಬ್ಬರು ಅನ್ನೋದರ ಬಗ್ಗೆ ಅನುಮಾನವೇ ಬೇಡ, ಆತ ಏನಾದರೂ ಕೆಲಸ ಹಿಡಿದನೆಂದರೆ ಖಂಡವಿದುಕೋ ಮಾಂಸವಿದುಕೋ ಎಂಬ ತೀರ್ವತೆಯಲ್ಲಿ ಹಿಡಿದ ಕೆಲಸ ಮಾಡಿಮುಗಿಸುತ್ತಾನೆ.

ಆದರೆ ಆತನ ಮನಸು ಮಾತ್ರ ಹಾಸನ ಜಿಲ್ಲೆ ಒಳಗೆ ಗಿರಿಕಿ ಹೊಡೆಯುತ್ತಾ ಇರುತ್ತದೆ ಯಾವ ಯಾವ ಊರಿಗೆ ಏನು ಕೆಲಸ ಆಗಬೇಕು ಅನ್ನೋದರ ಕಡೆಗೆ ಆತನ ಗಮನ, ಕಳೆದ ಸರ್ಕಾರದಲ್ಲೂ ಅಷ್ಟೇ ಹಾಸನಕ್ಕೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್, ಹತ್ತಾರು ಡಿಗ್ರಿ ಕಾಲೇಜು, ಹೈಟೆಕ್ ಬಸ್ ಸ್ಟಾಂಡ್, ವಿಮಾನ ನಿಲ್ದಾಣ, ರಸ್ತೆಗಳು ಸೇರಿದಂತೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಇದ್ದ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ ಲೆಕ್ಕಕ್ಕೆ ಇಡಕ್ಕೆ ಕಷ್ಟ

ತಿಂಗಳಿಗೊಮ್ಮೆ ವಿವಿಧ ಅಭಿವೃದ್ದಿ ಕೆಲಸಗಳ ಉದ್ಘಾಟನಾ ಸಮಾರಂಭ ಮಾಡದೇ ಹೋದರೆ ರೇವಣ್ಣನಿಗೆ ನಿದ್ದೇ ಹತ್ತುತ್ತಿರಲಿಲ್ಲಾ ಕಾಣುತ್ತೇ. ಯಾರಿಗಾದರು ಸಾದ್ಯವಾದರೆ ಹೊಳೆ ನರಸೀಪುರಕ್ಕೆ ಹೋಗಿ ನೋಡಬೇಕು, ಆತ ಆವಾಗ ಮಾಡಿದ ಕೆಲಸಗಳಿಂದಲೇ ಹಾಸನದಲ್ಲಿ ದೇವೇಗೌಡರಿಗೆ ಹತ್ತಿರ ಹತ್ತಿರ ಮೂರು ಲಕ್ಷ ಲೀಡ್ ಬಂದಿದೆ , ಬೇರೆಲ್ಲಾ ಕಡೆ ಜೆಡಿಎಸ್ ಸೋತರು ಹಾಸನದಿಂದ ಏನೂ ಮಾಡಕ್ಕ ಆಗಿಲ್ಲಾ.....

ಇದೆಲ್ಲಾ ಬರಯಕ್ಕೆ ಕಾರಣ ಏನಿಲ್ಲಾ ಮೊನ್ನೆ ಮೊನ್ನೆ ತಾನೆ ರೇವಣ್ಣ ದೆಹಲಿಗೆ ಬಂದಿದ್ದರು, ಮಾತಿಗೆ ಸಿಕ್ಕಿದ್ದರು ಮಾತನಾಡುತ್ತಾ ಇರುವಾಗ ಆತ ಹೇಳಿದ್ದು "ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ರೇವಣ್ಣನ ಮಾತು ಕೇಳಿ ನನಗೆ ಹೌದು ಅನಿಸಿತು... ಅದರ ಜೊತೆಗೆ ಅಧಿಕಾರ ಇಲ್ಲದೆ ಇರುವ ರೇವಣ್ಣನನ್ನ ಅರಗಿಸಿಕೊಳ್ಳೋಕೆ ಕಷ್ಟ ಆಯಿತು...

Thursday, June 18, 2009


ಅಸ್ಟ್ರೋ ಯೋಗಿ ಫಾರ್ ಮಕರ

ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ ಮಾರಾಯರೆ, ಮಾಡಕ್ಕೆ ಏನೂ ಕೆಲಸ ಇಲ್ಲದಾಗ ಇಂಟರ್ ನೆಟ್ ಮುಂದೆ ಕುಳಿತು ಮಾಡವ ಸಾಮಾನ್ಯ ತಪ್ಪನ್ನ ನಾನೂ ಮಾಡಿದ್ದೇನೆ ಸುಮ್ಮ ನೇ ಇರಲಾರದೆ
ಇಂಟರ್ ನೆಟ್ ನಲ್ಲಿ ಮಕರ ರಾಶಿಯವನಾದ ನಾನು ನಿತ್ಯ ಭವಿಷ್ಯ ಏನೆಂದು ತಿಳಿದುಕೊಳ್ಳಲು ಆರಂಭ ಮಾಡಿ ಎರಡು ತಿಂಗಳಾಗುತ್ತಾ ಬರುತ್ತಿದೆ, ಸಾಮಾನ್ಯವಾಗಿ ವಾರ,ದಿನ, ತಿಥಿ, ನಕ್ಷತ್ರ, ಭವಿಷ್ಯ ದಲ್ಲಿ ನಂಬಿಕೆ ಇಡದ ನಾನು ಕಾಲಾತೀತ, ಸಮಯಾತೀತ, ದೇಶಾತೀತ
ಗಿರಲಿಕ್ಕೆ ಇಷ್ಟಪಡುತ್ತೇನೆ, ಯಾವ ಇಕ್ಕಳಕ್ಕೂ ಸಿಕ್ಕಿಕೊಳ್ಳದೆ ಸ್ವಚ್ಚಂದವಾಗಿ ಇರಲಿಕ್ಕೆ ಪ್ರಯತ್ನ ಮಾಡುತ್ತೇನೆ, ಆಗಿದ್ದೆಲ್ಲಾ ಒಳ್ಳೇದಕ್ಕೆ ಆಗಿದೆ, ಆಗಲಿರುವುದು ಒಳ್ಳೇದೆ ಆಗಲಿದೆ ಎಂಬೊ ಕೃಷ್ಣ ಪರಮಾತ್ಮನ ತತ್ವದಲ್ಲಿ ನಂಬಿಕೆ ಹೆಚ್ಚು....
ಆದರೆ ಈಗ ಆಗಿರುವುದೇ ಬೇರೆ ನೋಡಿ. ದಿನ ಭವಿಷ್ಯ ಅನ್ನೊ ವಿಚಿತ್ರ ಭ್ರಮೆಗೆ ಸಿಕ್ಕಿಕೊಂಡಿದ್ದೇನೆ. ಉಚಿತ ದಿನ ಭವಿಷ್ಯ ಹೆಸರಿನ ಅಸ್ಟ್ರೋ ಯೋಗಿ ಎಂಬ ಸೇವೆ ದಿನಾ ಬೆಳಿಗ್ಗೆ ನನ್ನ ಮೊಬೈಲಿಗೆ ಬರುತ್ತಾ ಇವೆ.... ನಿರೀಕ್ಷೆ ಮಾಡದೆ ಇದ್ದರೂ ಸಂದೇಶ ಮಾತ್ರ ಬಂದೆ ಬರುತ್ತದೆ ಮುಂಜಾನೆ ಎದ್ದರೆ ಮೊದಲು ತೆರೆದುಕೊಳ್ಳುವ ಸಂದೇಶವೇ ಅದು... ಆರಂಭದಲ್ಲಿ ಕುತೂಹಲಕ್ಕೆ ಅಂತ ತಿಳಿದುಕೊಳ್ಳಲು ಸಂದೇಶಗಳನ್ನ ಗಮನಿಸುತ್ತಿದ್ದೆ, ಅಸ್ಟ್ರೋ ಯೋಗಿಯ ಸೈಕಾಲಜಿ ಏನು ಅನ್ನೋದನ್ನು ತಿಳಕೊಳ್ಳೊದು ನನಗಿದ್ದ ಚಟ.
ಈ ದಿನ ನೀವು ನೀಲಿ ಬಣ್ಣದ ಬಟ್ಟೆ ಹಾಕಿಕೊಳ್ಳಿ ಇವತ್ತು ನಿಮ್ಮ ದಿನ ಸಂತೋಷದಿಂದ ಕೂಡಿರುತ್ತೆ, ಇವತ್ತು ಕೆಲಸ ಮಾಡುವ ದಿಕ್ಕು ಉತ್ತರಕ್ಕೆ ಇರಲಿ ಬೇರೆ ದಿಕ್ಕು ಅಶುಭ, ಇವತ್ತು ಕಚೇರಿಯಲ್ಲಿ ನಿಮ್ಮ ಬಾಸಿನ ಮನಸ್ಥಿತಿ ಸರಿಯಿಲ್ಲ ಎಚ್ಚರದಿಂದ ಇರಿ ಟ್ರೈ ಟು ಅವಾಯ್ಡ್ ಹಿಮ್...ನಿಮ್ಮ ಕುಟುಂಬದಿಂದ ಇವತ್ತು ನಿಮಗೆ ಶುಭ ಸಂದೇಶ ಬರಲಿದೆ...ಕೀಪ್ ಎ ಎಲ್ಲೋ ರೋಸ್ ಇನ್ ಯುವರ್ ಪಾಕೆಟ್....
ವ್ಯಾಪಾರದಲ್ಲಿ ಲಾಸ್ ಆಗೋ ಸಂಭವ ಇದೆ....ಈ ಧಾಟಿಯ ಸಂದೇಶಗಳು ವ್ಯಾಪಾರ, ಗೀಪಾರ ಮಾಡದ ನಾನು ಅಂತ ಸಂದೇಶಗಳನ್ನು ತಕ್ಷಣ ಡಿಲಿಟ್ ಮಾಡಿಬಿಡುತ್ತೇನೆ, ಇನ್ನು ಕೆಂಪು ಗುಲಾಬಿ ಇಟ್ಚುಕೊಂಡು ಕೆಲಸಕ್ಕೆ ಹೋಗೋಕೆ ಸಾಧ್ಯವಾಗೋ ವಿಷಯ ಅಲ್ಲ ಬಿಡಿ... ನಾನೇನು ಚಾಚಾ ನೆಹರೂನಾ..! ಆದರೆ ನಿಮ್ಮ ಬಾಸಿನ ತಲೆ ಕೆಟ್ಟಿದೆ ಹುಶಾರ್ ಅಂದರೆ ಸುಮ್ಮನೆ ಇರಕ್ಕಾಗುತ್ತಾ...ನೀವು ಇವತ್ತು ಫೇಮಸ್ ಆಗ್ತೀರಾ ಅನ್ನೋ ಸಂದೇಶಗಳನ್ ನೋಡಿದಾಗ ಒಂಥಾರ ತಲೆ ಬಿಸಿ ಆಗೋದಕ್ಕೆ ಶುರುವಾಯಿತು. ಅದೇ ದಿನ ಸಂಜೆ ನಾನು ಎಷ್ಟು ಫೇಮಸ್ ಆದೆ ಅಂತ ಯೋಚಿಸಿದೆ...ಆ ದಿನದ ಘಟನೆಗಳನ್ನ ,ಸಂದೇಶ ದೊಂದಿಗೆ ರಿಲೇಟ್ ಮಾಡಿಕೊಂಡು ತಾಳೆ ಹಾಕಿದೆ. ದರಿದ್ರದ್ದು ಕೆಲವು ಬಾರಿ ಸರಿಯಾಗೆ ಇದೆಯಲ್ಲ ಅನ್ನಿಸಲಿಕ್ಕೆ ಶುರುವಾಯಿತು...
ತಗಳಪ್ಪ ಎರಡೇ ತಿಂಗಳಲ್ಲಿ ಯಾವ ಸ್ಥಿತಿಗೆ ಬಂತು ಎಂದರೆ, ದಿನ ಭವಿಷ್ಯ ನಾನೆ ಹುಡುಕಿ ನೋಡಲು ಶುರುಮಾಡಿದ್ದೇನೆ.
ಇವತ್ತು ಬಂದ ಸಂದೇಶ ಏನಪ್ಪಾ ಅಂದರೆ ನಿಮಗೆ ಸಂಬಂಧಿಸಿದ ವಸ್ತುವೊಂದು ಕಳುವಾಗುವ ಸಾಧ್ಯತೆ ಇದೆ ನಿಮ್ಮ ವಸ್ತುಗಳ ಬಗ್ಗೆ ಕಾಳಜಿಯಿಂದಿರಿ, ಮನೆ, ಕಾರು,ಬೈಕ್ ಲಾಕ್ ಮಾಡಿದ್ದೀರಾ ಚಕ್ ಮಾಡಿಕೊಳ್ಳಿ ಬಿ ಕೇರ್ ಫುಲ್.... ಅನ್ನೋ ತರದ್ದು
ದಿನ ಏನೋ ಮುಗಿದು ಹೋಗಿದೆ. ಆದರೆ ಇಡೀ ದಿನ ಏನಾದರೂ ಕಳಕೊಳ್ಳೋ ಭಯ ಹಚ್ಚಿಕೊಂಡಿದ್ದೇ ಮಾರಾಯರೆ... ಪದೇ ಪದೆ ಎದ್ದು ಹೋಗಿ ಕಾರ್ ಲಾಕ್ ಮಾಡೋದು... ಮನೆ ಕೀ ಹಾಕಿದ್ದೇನಾ ಇಲ್ಲಾವಾ ಅಂತ ಸುಖಾಸುಮ್ಮನೆ ಕನ್ಫ್ಯೂಸ್ ಆಗ್ತಿದ್ದೆ.
ಸುಮ್ಮನೇ ಇರಕ್ಕೆ ಆಗದೆ ಕೆರಕೊಂಡು ಗಾಯ ಮಾಡಿಕೊಂಡರಂತಲ್ಲಾ ಹಾಗೆ...
ಈ "ದಿನ ಭವಿಷ್ಯ"ದ ಸುಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳುವ ಯೋಚನೆ ಈಗ ಶುರುವಾಗಿದೆ...



Wednesday, June 17, 2009


ಟ್ರಾಫಿಕ್
ಜ್ಯಾಮ್ ನಲ್ಲಿ ಮುಗಿದು ಹೋದವರು...

ಕೋಲಾರದ ಕಡೆಯಿಂದ ಬೆಂಗಳೂರು ಕಡೆಗೆ ಬರುವ ನ್ಯಾಷನಲ್ ಹೈವೇ ನಾಲ್ಕನ್ನು ಘನ ಸರ್ಕಾರದವರು ನಾಲ್ಕು ಪಥದ ರಸ್ತೆಯನ್ನಾಗಿ ರೂಪಿಸುತ್ತಿದ್ದಾರೆ ಅಂತ ನನಗೆ ಗೊತ್ತಾಗಿದ್ದು ಮೊನ್ನೆ ನಾನು ಬೆಂಗಳೂರಿಗೆ ಬಂದಾಗ, ನನಗೆ ಯಾವಾಗಲೂ ಹೊಸ ರಸ್ತೆ ಆಗುತ್ತಿದೆ, ಇನ್ನೇನು ಆರಾಮಾಗಿ ಸಂಚರಿಸಬಹುದು ಅಂತ ಆದಾಗ ಒಂಥರಾ ಖುಷಿಯಾಗುತ್ತೆ, ಯಾವಾಗ ಸಿದ್ದ ಆಗುತ್ತೋ ಅಂತ ಕುತೂಹಲದಿಂದ ಕಾಯುತ್ತಿರುತ್ತೇನೆ, ಅದರಲ್ಲೂ ಬೆಂಗಳೂರಿಗೆ ಹೊಂದಿಕೊಂಡಂತೆ ಯಾವುದಾದರು ರಸ್ತೆ ಸಿದ್ದವಾದರೆ ಈ ಊರಿನ ಮಂದಿಗೆ ಆಗೋ ಖುಷಿನೇ ಬೇರೆ ಬಿಡಿ...

ಹೊಸ ರಸ್ತೆ ರೆಡಿ ಏನೋ ಆಗುತ್ತಿದೆ ಆದರೆ ಅದನ್ನು ನಿರ್ಮಿಸುತ್ತಿರರುವ ರೀತಿ ಮಾತ್ರ ರಕ್ಕಸವಾಗಿದೆ ಅಂತ ಮಾತ್ರ ಹೇಳಬಲ್ಲೆ ಕೆ.ಆರ್.ಪುರಂ ಬಿಟ್ಟ ನಂತರ ಸ್ವಲ್ಪದದರಲ್ಲೇ ಆರಂಭವಾಗಿರುವ ತುಂಡು ತುಂಡು ಕಾಮಗಾರಿಗಳು ಹಳೆ ರಸ್ತೆಯ ವಾಹನ ಸಂಚಾರವನ್ನೇ ದಿಕ್ಕೆಡಿಸಿಬಿಟ್ಟಿದೆ, ಕಾಮಗಾರಿ ನಡೆಯುವ ಒಂದು ಸ್ಥಳದಲ್ಲಿ ಚಾಲಕರಿಗೆ ಎಚ್ಚರಿಸುವ ಒಂದೇ ಒಂದು ಸೂಚನಾ ಪಲಕವಿಲ್ಲ, ಎಲ್ಲೆಂದರಲ್ಲಿ ಹಳೆ ರಸ್ತೆ ಯನ್ನ ದಿಕ್ಕು ಬದಲಾಸಲಾಗಿದೆ, ಮನುಷ್ಯರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಮಾತ್ರ ಹೀಗೆ ಮಾಡಬಹುದು ಅನಿಸುತ್ತೆ,
ನಾನೇ ಗ್ರಹಿಸಿದ ಲೆಕ್ಕದಲ್ಲಿ ಅ ರಸ್ತೆ ಕಾಮಗಾರಿ ಮುಗಿಯುವ ವರೆಗೆ ಕನಿಷ್ಠ ನೂರು ಮಂದಿ ರಸ್ತೆಯ ಹೆಸರಲ್ಲಿ ಬಲಿಯಾಗುವುದರಲ್ಲಿ ಅನುಮಾನವೇ ಬೇಡ ಅಂದುಕೊಂಡೆ.. ಇದಕ್ಕೆ ಇಂಬುಕೊಡುವಂತೆ ಅದಾಗಲೇ ಹತ್ತಕ್ಕೂ ಹೆಚ್ಚು ಜನ ಇದೇ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳಲ್ಲಿ ಸತ್ತಿದ್ದಾರಂತೆ. ಇನ್ನೂ ಜನ ಸಾಯುವುದರಲ್ಲಿ ಅನುಮಾನವೇ ಬೇಡ.

ಸರ್ಕಾರದ ಅಧಿಕಾರಿಗಳು ಇರುವ ನಿಯಮಗಳನ್ನು ಗುತ್ತಿಗೆದಾರರ ಮೇಲೆ ಯಾಕಾಗಿ ಹೇರುವುದಿಲ್ಲವೂ ನನಗೆ ಗೊತ್ತಾಗುವುದಿಲ್ಲ , ಇವರು ಮಾಡುವ ಪಾಪದಿಂದ ಮತ್ಯಾರೋ ಸಾಯುವುದನ್ನು ನೆನೆಸಿಕೊಂಡರೆ ನನಗೆ ಕಳವಳ ಆಗುತ್ತೆ ನಾನಂತೂ ಇಂತದೊಂದು ಪರಿಸ್ಥಿತಿಗೆ ಸಿಕ್ಕಿ, ಯಾರೋ ಮಾಡಿದ ತಪ್ಪಿನಿಂದ ಅನ್ಯಾಯವಾಗಿ ಸಾಯುವುದನ್ನು ಕಲ್ಪಿಸಿಕೊಳ್ಳಲಾರೆ....
ಹೀಗೆಲ್ಲ ಆಗೋದನ್ನ ನೋಡಿದಾಗ ಒಳಗೆ ಆಕ್ರೋಶ ಮೂಡುತ್ತೆ, ಹೀಗೆಲ್ಲಾ ಆಗೋಕೆ ಕಾರಣರಾದವರನ್ನ ಸಾಮೂಹಿಕವಾಗಿ ಗುಂಡಿಕ್ಕೆ ಕೊಲ್ಲ ಬೇಕು ಅನಿಸುತ್ತೆ , ಸ್ವಲ್ಪವೇ ಹೊತ್ತಿನಲ್ಲಿ ನನ್ನನ್ನು ಸೇರಿದಂತೆ ಎಲ್ಲಾರನ್ನ ಕೊಲ್ಲಬೇಕಾಗುತ್ತೆ ಅಂತಾ ಸುಮ್ಮನಾದೆ..

ಇನ್ನೂ ಒಂದು ಬೆಂಗಳೂರು ಮೆಟ್ರೋ ಹೆಸರಿನಲ್ಲಿ ಕಾಮಗಾರಿ ನಡೀತಾ ಇದೆ , ಅದಕ್ಕಾಗೇ ಬೆಂಗಳೂರನ್ನ
ಮತ್ತಷ್ಟು ನರಕ ಮಾಡಿದ್ದಾರೆ, ನಾನು ಗುರುತಿಸಿದಂತೆ ಮೆಟ್ರೋ ಕೆಲಸ ಎಲ್ಲೂ ಕೆಲಸ ವೇಗವಾಗಿ ನಡೀತಾ ಇಲ್ಲ, ಅಲ್ಚರ್ ನೇಟ್ ರಸ್ತೆಗಳು ಕೆಟ್ಟದಾಗಿವೆ. ಈ ಮೆಟ್ರೋ ಹೋಗುತ್ತಿರುವ ವೇಗ ನೋಡಿದರೆ ಇನ್ನು ಹತ್ತು ವರ್ಷಕ್ಕೂ ರೈಲು ಬಿಡುವ ಸಾದ್ಯತೆ ಇಲ್ಲ, ಬೆಂಗಳೂರಿನ ಜನ ತಮ್ಮ ಜೀವಮಾನದ ಬಹುಮುಖ್ಯ ಸಮಯವನ್ನ ಟ್ರಾಫಿಕ್ ನಲ್ಲಿ ಕಳೆಯಬೇಕಲ್ಲಾ... ಇರೋ ಐವತ್ತೋ ಚಿಲ್ಲರೆ ವರ್ಷದಲ್ಲಿ ಅರ್ದ ಬದುಕು ಟ್ರಾಪಿಕ್ ಜಾಮ್ ನಲ್ಲೇ ಕಳೆದು ಹೋಗುತ್ತಾಲ್ಲ ಅನ್ನೋದನ್ನ ನೆನೆಸಿಕೊಂಡರೆ ಎಲ್ಲಾದರೂ ಓಡಿ ಹೋಗೋಣ ಅಂತ ಅನಿಸುತ್ತದೆ.....

ಮೆಟ್ರೋ ವಿಷಯದಲ್ಲಾಗಲಿ, ರಸ್ತೆ ಸಂಚಾರದ ಬಗ್ಗೆ ಆಗಲಿ, ನಮ್ಮ ಸರ್ಕಾರ, ಮತ್ತು ನಾಗರೀಕರು
ದೆಹಲಿಯಿಂದ
ಸಾಕಷ್ಠು ಕಲಿಯಬೇಕಿದೆ ಅಂತ ಹೇಳಿ ಮುಗಿಸುತ್ತೇನೆ...
ಕಡೆ ಮಾತು...
ಗೆಳೆಯರೇ ಸದ್ಯಕ್ಕೆ ದೆಹಲಿಯಿಂದ ನನ್ನೂರು ಮಲ್ಲಸಂದ್ರಕ್ಕೆ ಬಂದಿದ್ದೇನೆ ಜುಲೈ ತಿಂಗಳ 5 ರವರೆಗೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ, ಕೊಡಗು, ಹುಬ್ಬಳ್ಳಿ ನಗರಗಳ ನಡುವೆ ಗಿರಕಿ ಹೊಡೆಯುತ್ತಿರುತ್ತೇನೆ ಸಿಗೋಣ...