Saturday, May 16, 2009



ಸಿಂಗ್ ಈಸ್ ಕಿಂಗ್....ಕಿಂಗ್ ಈಸ್ ಸಿಂಗ್...

ಚುನಾವಣೆಗಳ ಪಲಿತಾಂಶ ಬರುತ್ತಾ ಇವೆ, ಕೆಲಸದ ಒತ್ತಡ ತುಂಬಾ ಇದೆ ಆದರು ಈಗಲೇ ಇದನ್ನು ಈಗಲೇ ಬರೆಯಬೇಕು,ನಿಮಗೆ ಹೇಳಿಬಿಡಬೇಕು ಎಂಬ ಕಾತರ, ಅದಕ್ಕೆ ಅತ್ಯಂತ ಕಡಿಮೆ ಪದಗಳಲ್ಲಿ ಹೇಳಬೇಕಿದ್ದನ್ನು ಹೇಳುತ್ತೇನೆ.
ಈಗ ರಾಜೀನಾಮೆ 'ಕೊಡಬೇಕಿಲ್ಲದ' ಮನಮೋಹನ್ ಸಿಂಗ್ ಇದ್ದಾರಲ್ಲ ಅವರು ೨೦೦೪ ಕ್ಕೂ ಮುಂಚೆ ಹೇಗಿದ್ದರೂ ಏನಾಗಿದ್ದರು ಅನ್ನೋ ಬಗ್ಗೆ ಪತ್ರಕರ್ತ ಗೆಳೆಯ, ಸಹೋದ್ಯೋಗಿ ಪ್ರಶಾಂತ ಹೇಳಿದ ಕತೆಯಿದು.
ಟಿವಿ ಹಿಂದಿ ವಾಹಿನಿಗಳಲ್ಲಿ ದಿನಾ ರಾತ್ರಿ " ಸುರ್ಕಿಯೋಸೆ ಆಗೇ " ಅನ್ನೋ ಕರಂಟ್ ಅಪೇರ್ಸ್ ಕಾರ್ಯಕ್ರಮ ಬರುತ್ತೆ , ದಿನದ ಬಹುಮುಖ್ಯ ಸುದ್ದಿಯನ್ನ ಹಿಡಿದು ಅದರ ಮಹತ್ವದ ಬಗ್ಗೆ, ಹಿನ್ನೆಲೆ, ಮುನ್ನೆಲೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡೋ ಕಾರ್ಯಕ್ರಮ, ಕನ್ನಡದಲ್ಲಿ "ಸುದ್ದಿಗಿಂತ ಆಚೆ" ಅನ್ನೋ ಕಾರ್ಯಕ್ರಮ ಅಂದುಕೊಳ್ಳಿ.
ಕಾರ್ಯಕ್ರಮದ ಪೂರ್ತಿ ಉಸ್ತುವಾರಿ ಪ್ರಶಾಂತ್ ನದು, ಎಂಥಾ ತಲೆಬಿಸಿಯ ಕೆಲಸ ಅಂದರೆ ದಿನಕ್ಕೆ ಅರ್ಧ ಗಂಟೆ ಕಾರ್ಯಕ್ರಮವನ್ನ ಇಬ್ಬರೇ ತಯಾರು ಮಾಡಬೇಕು, ದೇಶ ಅತ್ಯಂತ ಶಾಂತ ವಾಗಿ, ಸುಖವಾಗಿ ಇರೋ ಕಾಲದಲ್ಲೂ ಏನಾದ್ರೂ ಮಾಡಿ ಪ್ರೋಗ್ರಾಂ ಕೊಡಲೇ ಬೇಕು ತಪ್ಪಿಸಿಕೊಳ್ಳೋಕೆ ಸಾದ್ಯವೇ ಇಲ್ಲದ ಮಾತು ಬಿಡಿ, ಸುದ್ದಿಮನೆಗಳಲ್ಲಿ ಕೆಲವೊಂದು ದಿನ ಏನೂ ಮಹತ್ವದ ಸುದ್ದಿ ಸಿಗದೇ ಒದ್ದಾಡುವುದು ಉಂಟು, ಕಷ್ಟವಾದರೂ ಮಾಡಲೇಬೇಕಲ್ಲ, ಅಂತ ಸಂಧರ್ಭದಲ್ಲಿ ಕಿಲಾಡಿ ಪತ್ರಕರ್ತರು, ಆರ್ಥಿಕ ಹಿಂಜರಿತ, ಪಾಕಿಸ್ತಾನ, ಅಮೇರಿಕಾ ಅರ್ಥಿಕ ಪರಿಸ್ಥಿತಿ ಮತ್ತು ಭಾರತ ಅನ್ನೋ ರೀತಿ ಯಾವುದೋ ಕಿಲಾಡಿ ಐಡಿಯಾ ರೆಡಿ ಮಾಡಿ, ಅತ್ಯಂತ ಸರಳವಾಗಿ ಸಿಗೋ, ಯುನಿವೆರ್ಸಿಟಿ ಪ್ರೊಪೆಸರ್, ರಿಟೈರ್ಡ್ ಆಪಿಸರ್,
ರಿಟೈರ್ಡ್ ಪತ್ರಕರ್ತರನ್ನ ಒಟ್ಟಿನಲ್ಲಿ ಖಾಲಿ ಹೊಡೀತಾ ಕುಳಿತವರ ಬೈಟ್ ಗಳನ್ನ ಸೇರಿಸಿ ಸ್ಟೋರಿ ಒಂದನ್ನ ಕೊಟ್ಟು ಅಪ್ಪಯ್ಯಾ ಅಂತ ನಿಟ್ಟುಸಿರು ಬಿಡುತ್ತಾರೆ.
ಇಲ್ಲಿ ಆಗಿದ್ದು ಅದೇ ಅವತ್ತು ಪ್ರಶಾಂತ ಯಾವುದೋ ಸ್ಟೋರಿ ಮಾಡಬೇಕಿತ್ತು, ಬೈಟ್ ಯಾರದಪ್ಪ ಅನ್ನೋ ಯೋಚನೆ ಮಾಡಿದ ತಕ್ಷಣ ಮಾಜಿ ಅರ್ಥ ಸಚಿವ ಮನಮೋಹನ್ ಸಿಂಗ್ ಇದಾರಲ್ಲ ಅಂತ ನೇರವಾಗಿ ಅವ್ರಿಗೆ ಕರೆ ಮಾಡಿ ಮನೆಗೇ ಬರ್ತೀನಿ ಸಾರ್, ಒಂದು ಬೈಟ್ ಬೇಕು ಆರ್ಥಿಕತೆ ಬಗ್ಗೆ ಅಂದನಂತೆ, ಯಾವಾಗೂ ಖಾಲಿ ಇರುವ ಎಲ್ಲರ ಕೈಗೂ ಸಿಗುವ ಮಾಮೂಲಿಯಾಗಿ ಟಿವಿಯವರಿಗೆ ಇಲ್ಲಾ ಎನ್ನದ ಮನಮೋಹನ್ ಸಿಂಗ್ ಬನ್ನಿ ಪ್ರಶಾಂತ್ ಸಫ್ದರ್ ಜಂಗ್ ರಸ್ತೆ ಮನೆಯಲ್ಲೇ ಇರ್ತಿನಿ ಅಂದರಂತೆ. ಇವನು ಕ್ಯಾಮರಾ ಮ್ಯಾನ್ ನನ್ನ ಕರೆದುಕೊಂಡು ಅವರ ಮನಗೆ ಹೋದಾಗ ಅವರ ಮನೆಯವರು ಹೇಳಿದರಂತೆ ಸಾಹೇಬರು ಇಲ್ಲೇ ಎಲ್ಲೋ ಹೋದರು ಹತ್ತೇ ನಿಮಷದಲ್ಲಿ ಬಂದು ಬಿಡ್ತಾರಂತೆ, ನಿಮಗೆ ಸ್ವಲ್ಪ ಸಮಯ ಕಾಯಕ್ಕೆ ಹೇಳಿ ಅಂತ ಹೇಳಿದಾರೆ ಅಂದರಂತೆ, ಪ್ರಶಾಂತ ಕಾಯುತ್ತಾ ಕೂತು ಒಂದು ಗಂಟೆ ಆಗಿರಬೇಕು.
ಕಮಾಂಡೋ ಪಡೆಗಳು, ಬ್ಲಾಕ್ ಕ್ಯಾಟ್ ಗಳು ಅವರ ಮನೆ ಮುಂದೆ ಬಂದು ಇಳಿದವಂತೆ, ಮನಮೋಹನ್ ಮನೆಯನ್ನ ಸುತ್ತುವರಿದು ಕ್ಲಿಯರೆನ್ಸ್ ಮಾಡಲು ಮುಂದಾದರಂತೆ, ಮನಮೋಹನ್ ಹೆಂಡತಿಗೂ ಗಾಭರಿ ಆಯಿತಂತೆ, ಅಲ್ಲೇ ಬೈಟ್ ಗಾಗಿ ಕಾಯುತ್ತಾ ಇದ್ದ ಇವನಿಗೆ ತಲೆಬಿಸಿ ಆಗಿ ವಿಚಾರಿಸಿದರೆ ಸರ್ ಮನಮೋಹನ್ ಸಿಂಗ್ ಮುಂದಿನ ಪ್ರಧಾನ ಮಂತ್ರಿ, ಈಗ ಇಲ್ಲಿಗೆ ಬರ್ತಾ ಇದಾರೆ ಜಾಗ ಕಾಳಿ ಮಾಡಿ ಅಂದನಂತೆ ಕಮಾಂಡೋ....
ತಲೆ ಕೆಟ್ಟು ಹೋಗಿ ಚೆಕ್ ಮಾಡಿದರೆ, ಹೌದು ಮನಮೋಹನ್ ಸಿಂಗ್ ಪ್ರಧಾನಿ ಅನ್ನೋ ವಿಷಯ ಕನ್ಫರ್ಮ್ ಆಗದ್ದರಿಂದ ಅದೇ ಪ್ರಶಾಂತ ನಮ್ಮ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟನಂತೆ, ಎಂತ ಅದೃಷ್ಟ ಅಲ್ಲವಾ, ಇಬ್ಬರದು....
ಪ್ರಶಾಂತ್ ಬೈಟ್ ಗಾಗಿ ಕಾಯದೆ ಜಾಗ ಖಾಲಿ ಮಾಡಿದಂತೆ....
ವಿದೇಶಿ ಮಹಿಳೆ, ವಿದೇಶಿ ಮಹಿಳೆ ಅಂತ ಬಿಜೆಪಿ ಎಬ್ಬಿಸಿದ ಬಿರುಗಾಳಿಯಿಂದ ರೋಸಿಹೋದ ಸೋನಿಯಾ ತನ್ನ ಇಬ್ಬರು ಮಕ್ಕಳಾದ. ಪ್ರಿಯಾಂಕ, ಮತ್ತು ರಾಹುಲ್ ಜೊತೆ ಮಾತನಾಡಿ ತನಗೆ ಯಾಕೋ ಪ್ರಧಾನಿ ಆಗೋಕೆ ಮನಸು ಒಪ್ಪುತಾ ಇಲ್ಲಾ ಅಂದರಂತೆ, ಯಾರನ್ನು ಪ್ರಧಾನಿ ಮಾಡೋದು ಅಂತ ಯೋಚಿಸಿ, ಮೂವರು ಕೂಡಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ ಮನೆಗೇ ಬನ್ನಿ ಅಂತ ಕರೆದು ನೀವೇ ನಮ್ಮ ಪ್ರಧಾನಿ, ನಾಳೆಗೆ ಒಥ್ ತಗೋಳಿ ಅಂದರಂತೆ. ಯಾರು ನಿರೆಕ್ಷಿಸದ, ಸ್ವತ ಮನಮೋಹನ್ ಸಿಂಗ್ ನಿರೀಕ್ಷಿಸದ, ಮೀಡಿಯಾ ದವರಿಗೆ ಬೈಟ್ ಕೊಡುತ್ತಾ ಖಾಲಿ ಹೊಡೆಯುತ್ತಿದ್ದ ಮಾಜಿ ಅರ್ಥ ಸಚಿವ. ಆರ್. ಬಿ. ಗವರ್ನರ್ ೨೦೦೪ ರಲ್ಲಿ ಪ್ರದಾನಿಯಾದ ಕತೆ.
ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ , ವೇಸ್ಟ್
ಪ್ರೈಂ ಮಿನಿಸ್ಟರ್ ಅಂತ ರೇಗಿಸುತ್ತಿದ್ದ ಅಡ್ವಾಣಿ ಕತೆ ಈಗ ಅದ್ವಾನವಾಗಿಹೋಗಿದೆ.....ಮನಮೋಹನ ಸಿಂಗ್ ಗೆಲುವಿನ ಜಾದುಗಾರ ಆಗಿ ಹೊರ ಹೊಮ್ಮಿದ್ದಾರೆ....

ಓದಿ ಕಾಮೆಂಟ್ ಮಾಡದೆ ಹಾಗೆ ಹೋದರೆ ನಾನು ನಿಮ್ಮನ್ನ ಕ್ಷಮಿಸೋಲ್ಲ ಆಯ್ತಾ.

9 comments:

  1. ಅದೃಷ್ಟ ಅಂದ್ರೆ , ಅಣೆಬರಹ ಅಂದ್ರೆ ಅದೇ ಅನ್ನೋದು , ಯಾವ ವ್ಯಕಿಯ್ನೆ ಆಗಲಿ ನೆಗಲೆಟ್ ಮಾಡಬಾರದು ಅನ್ನೋದಿಕ್ಕೆ ಮನಮೋಹನ್ ಸಾಕ್ಷಿ

    ReplyDelete
  2. manmohan singh is weak in his speech not in his action.one of the briliant minds behind india's emerging and booming economy is singh's.he has taken only one salary when india at recesession when he was RBI GOVERNER.
    HE IS ALSO ONE OF THE KYE FACTORS IN CONGRESS MAKE THE PARTU TO REACH 2OO SEATS IN THIS ELECTION.......SO ENJOY SING IS KING........SING IS KING

    ReplyDelete
  3. Sing is King now.. Atleast this poll outcome has prevented a hung parliament.

    ReplyDelete
  4. With Great Power,comes in great responsibility.

    ReplyDelete
  5. ಭಾರತಕ್ಕೆ ಮುಕ್ತ ಆರ್ಥಿಕ ಉದಾರೀಕರಣ ನೀತಿಯನ್ನು ತೆರೆದಿಟ್ಟ ಮನಮೋಹನ್ ಸಿಂಗ್ ಆರ್ಥಿಕ ತಜ್ಞರಾಗಿ ಎತ್ತರಕ್ಕೆ ನಿಲ್ಲುತ್ತಾರೆ ವಿನಹ, ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿಯುವ ಆಡಳಿತಗಾರನಾಗಿ ಅಲ್ಲ. ದೇಶಕ್ಕೆ ಒಬ್ಬ ಪ್ರಧಾನಿ ಇದ್ದಾರೆಂದೇ ನಮಗೆ ಅನಿಸುತ್ತಿಲ್ಲ ಬದಲಿಗೆ ಲೆಕ್ಕದ ಗುಮಾಸ್ತನೊಬ್ಬ ಕಾರ್ಯ ನಿರ್ವಹಿಸುತ್ತಿರುವಂತಿದೆ. ಈ ಬಾರಿ ಚುನಾವಣೆಯಲ್ಲಿ ಕಾಗ್ರೆಸ್ ಯಶಸ್ಸು ಪಡೆದಿದ್ದರೆ ಅದು ಚಡ್ಡಿ (ಬಿಜೆಪಿ)ವಿರೋದಿ ಧೋರಣೆ ಹಾಗೂ ಗಾಂಧಿ ಮನೆತನದ ಪ್ರಭಾವಳಿ. ಇರ್ಲಿ ಗೌಡ್ರೆ ನಿನ್ನೆ ಅರಕಲಗೂಡು ಸೂರ್ಯ ಪ್ರಕಾಶ್ ಮತ್ತು ದಿನೇಶ್ ಅಮೀನ್ ಮಟ್ಟು ಜೊತೆ ಮೂಡಿ ಬಂದ ನಿಮ್ಮ ಸಂವಾದ ಚೆನ್ನಾಗಿತ್ತು, ಇವತ್ತು ಮುನಿಯಪ್ಪನ ಜೊತೆ ಮಾತಾಡಿದ್ದನ್ನು ನೋಡಿದೆ ಎಲ್ಲವೂ ಸಕಾಲಿಕವಾಗಿದೆ.ಸಂವಾದ ದಂತಹ ಕಾರ್ಯಕ್ರಮವನ್ನು ಬೇಸರವಾಗದಂತೆ ನಿರೂಪಿಸುತ್ತೀರಿ ಅಂತ ತಿಳೀತು. ಅರಕಲಗೂಡು ಸೂರ್ಯ ಪ್ರಕಾಶ್ ಬಗ್ಗೆ ಮತ್ತು ಮನಮೋಹನ್ ಸಿಂಗ್ ಗೆ ಬೈಪಾಸ್ ಶಸ್ತ್ರ ಚಿಕಿತ್ಸೆ ಮಾಡಿದ ಡಾ|ಅರಕಲಗೂಡು ರಾಮದಾಸ್ ಬಗ್ಗೆ ಬರೀರಿ...... ಸಿ. ಜಯಕುಮಾರ್, ಅರಕಲಗೂಡು

    ReplyDelete
  6. Ha..ha.. bale... adusta andare heegirbeku.. alwa goudre.. ;)

    ReplyDelete
  7. ಮಂ(ಸಿಂ)ಗನ ಕೈಲಿ ಮಾಣಿಕ್ಯ ಸಿಕ್ಕಿತಲ್ಲಾ, ಎರಡನೇ ಬಾರಿಗೆ!

    ReplyDelete
  8. idra melela comments madovashtu bayake mattu knowledge nanagila sorry.any how all the best to singh.

    ReplyDelete
  9. nimma blog tumba maja ide.
    - Hani

    ReplyDelete