Monday, May 4, 2009

ಟ್ರೆಂಡ್ ಏನಿದೆ ಗೌಡ್ರೆ.
ಕೃಷ್ಣೆಗೌಡ ಅಂತ ಒಬ್ಬರಿದ್ದಾರೆ, ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್. ನನಗೆ ಯಾವಾಗಲು ಫೋನ್ ಮಾಡ್ತಾ ಇರ್ತಾರೆ, ಅದರಲ್ಲೂ ಚುನಾವಣೆಗಳು ಬಂದಾಗ ಫೋನ್ ಗಳು ಜಾಸ್ತಿ. ನಾನು ಮಲಗಿರಲಿ.ಆಪೀಸಿನಲ್ಲಿರಲಿ, ಸ್ನಾನ ಮಾಡ್ತಾ ಇರ್ಲಿ ತಪ್ಪದೆ ಬಂದೆ ಬರುತ್ತೆ ಅವರ ಪೋನು.
ಅವರ ಫೋನ್ ಬಂದಾಗ ನಂಗೆ ಸಿಟ್ಟು ಬಂದರು ತೋರಿಸಿಕೊಳ್ಳದೆ ಹೇಳಿ ಗೌಡ್ರೆ, ಏನ್ ಸಮಾಚಾರ ಅಂತ ಕೇಳಿದ ಒಡನೆ ಹೇಗಿದೆ ಸಾರ್ ಎಲೆಕ್ಷನ್ ಟ್ರೆಂಡು, ಅಂತ ಕೇಳ್ತಾರೆ, ನಾನೂ ಎಚ್ಚರದಿಂದ ನಿಮಗೆ ಗೊತ್ತಿಲ್ದೆ ಇರೋದು ಯಾವುದು ಗೌಡ್ರೆ,ಅಲ್ಲಿ ಟ್ರೆಂಡ್ ಏನಿದೆ ಅಂತ ನೀವೇ ಹೇಳ್ಬೇಕು ಅನ್ನುತ್ತಾ ಅವ್ರ ತಲೆಗೆನೆ ಕಟ್ಟಲು ಪ್ರಯತ್ನಿಸುತ್ತೇನೆ.
ಅಸಾಮಿ ಬಿಡೋಲ್ಲ ನೀವು ಟಿವಿಯವರಿಗೆ ಗೊತ್ತಿಲ್ದೆ ಇರೋದು ಏನು ಸರ್ ನಿಮಗೆ ಎಲ್ಲಾ ಗೊತ್ತಿರುತ್ತೆ, ಬೆಂಗಳೂರು ಸೌತ್ ನಲ್ಲಿ ಏನಾಗುತ್ತೆ ಸರ್ ಅಂತಾನೆ, ನಾನು ಅಲ್ಲಿ ಟಫ್ ಫೈಟ್ ಇದೆ ರೀ ಅಂತೇನೆ ನಂತರ ಸರ್ ನಾರ್ತ್ ಹೇಗಿದೆ ಸಾರ್ ಜಾಫರ್ ಷರೀಫ್ ಗೆಲ್ತಾರಂತೆ ಅಂತ ಕೇಳ್ತಾರೆ, ನಾನು ಇರ್ಬೋದು ಅಂತೇನೆ. ಸರ್ ರುರಲ್ಲೂ ಅಂತಾ ಕೇಳಿದ ಒಡನೆ ಕುಮಾರಸ್ವಾಮಿನೆ ಅಂತೇನೆ...


ಅದು ಮುಗಿದ ಕೂಡಲೇ ಸರ್ ಬಿಜಾಪುರ ಹೇಗಿದೆ ಸಾರ್ ಅನ್ನೋದಾ, ನಂಗೆ ಗೊತ್ತಿಲ್ಲ ಸರ್ ಅಂತೀನಿ, ಸರ್ ಬಂಗಾರಪ್ಪ ಗೆಲ್ತಾರಾ ಸರ್ ಅಂತಾನೆ ನಾನು ಗೆಲ್ಲಬಹುದು ಆದ್ರೆ ಸ್ವಲ್ಪ ಕಷ್ಟ ಇದೆ ಅಂತ ಡಿಪ್ಲೋಮಾಟಿಕ್ ಆಗಿರೋಕೆ ಪ್ರಯತ್ನ ಪಡ್ತೀನಿ....

ಈ ಮದ್ಯೆ ಈ ಚಾಲಾಕು ಮನುಷ್ಯ ನನ್ನ ಹೆಸರನ್ನು ನನ್ನ ಎದುರೇ ಅಕ್ರಮವಾಗಿ ಬಳಸಿಕೊಂಡು ಅದೇ ಸಾರ್ ನೀವ್ ಹೇಳಿದಂಗೆ ಖರ್ಗೆ ಗೆಲ್ತಾರೆ, ಧರ್ಮಸಿಂಗ್, ಪುಜಾರಿ ಗೆಲ್ತಾರೆ, ರಾಥೊಡ್, ಮೊಯ್ಲಿ , ಮುನಿಯಪ್ಪ , ವಿಶ್ವನಾಥ್, ಗೆದ್ದುಬಿಟ್ಟರೆ ಬಿಜೆಪಿಗೆ ಕಷ್ಟ ಆಗುತ್ತೆ ಅಲ್ವಾ ಸಾರ್ ಅನ್ನೋದಾ....

ನೀವೇ ಹೇಳ್ದಂಗೆ, ಕಾಂಗ್ರೆಸ್ ಗೆ ೧೦ ರಿಂದ ೧೨ , ಜೆಡಿಎಸ್ ೪ ರಿಂದ ೫, ಬಿಜೆಪಿ ೧೨ ರಿಂದ ೧೩ ಸೀತ ಬರುತ್ತೆ ಅಲ್ವಾ ಸಾರ್ ಏನೋ ಮ್ಯಾಜಿಕ್ ಆಗುತ್ತೆ ಬಿಡಿ ಸಾರ್ ಚುನಾವಣಾ ಅನ್ನೋದೇ ವಿಚಿತ್ರ ಅಂದು ಕಟ್ಟಕಡೆಗೆ
ನೀವ್ ಹೇಳೋದು ಕರೆಕ್ಟ್ ಸಾರ್ ಬಿಜೆಪಿಗೆ ಕಷ್ಟ ಅಂತ ಮಾತು ಮುಗಿಸೋ ವೇಳೆಗೆ ಒಂದು ರೀತಿ ಚುನಾವಣಾ ಸಮೀಕ್ಷೆ ಆಗಿರುತ್ತೆ, ನಾನು ಹೇಳದೆ ಇದ್ದಿದ್ದನು ನೀವ್ ಹೇಳ್ದಂಗೆ ಅಂತ ಪದೇ ಪದೇ ನಂಗೆ ತಿರುಗಿಸಿ ಮಜಾ ತಗೋತಾನೆ...


ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ದಿನಾ ಫೋನ್ ಮಾಡೋದು ಕೇಳಿದ್ದನ್ನೇ ಮತ್ತೆ ಮತ್ತೆ ಕೇಳೋದು, ನಾನು ಹೇಳಿದ್ದನ್ನೇ ಹೇಳೋದು ೧೬ ನೆ ತಾರೀಕು ಎಣಿಕೆ ಮುಗಿಯೋವರೆಗೆ ನನ್ನ ಪಾಡು ಚಿತ್ರ್ರಾನ್ನ, ನನಗೆ ಸಿಕ್ಕಿರುವ ಈ ಟ್ರೆಂಡಿನ ಗಿರಾಕಿ ಯಿಂದ ನನಗೆ ಚುನಾವನೆನೆ ಬೇಡ ಅನ್ನಿಸಿಬಿಟ್ಟಿದೆ.

ನೀವ್ ಹೇಳ್ದಂಗೆ ಬಿಜೆಪಿಗೆ ಕಷ್ಟ ಅಂತ ಮಾತು ಮುಗಿಸೋಕೆ ಒಂದು ಗಂಟೆಯಾದರೂ ಬೇಕು ಗೊತ್ತಾ....

ಎಲೆಕ್ಷನ್ ಸಂದರ್ಬದಲ್ಲಿ ವರದಿಗಾರರಿಗೆ ಇಂತ ಫೋನ್ ಗಳು ಬರೋದು ಮಾಮೂಲಿ, ದೇಶದಲ್ಲಿ ನಡಿಯೋ ಎಲ್ಲಾನು ನಮಗೆ ತಿಳಿದಿರುತ್ತೆ ಅನ್ನೋದು ಕೆಲವರ ಅಭಿಪ್ರಾಯ ಅಂತ ಕಾಣುತ್ತೆ. ನಾವು ಹೇಳಿದೆವು ನೋಡಿ ಅಂತ ಎಲ್ಲರಿಗು ತಮ್ಮ ಅಭಿಪ್ರಾಯ ಹೇಳೋದು ಅವ್ರ ಚಟ.

ಇದೇ ತರದ ಇನ್ನೊಂದು ಪಾರ್ಟಿ ಆಸ್ಕರ್ ಪರ್ನಾಂಡಿಸ್ ಅವ್ರ ಮನೆಯಲ್ಲಿ ಇದಾನೆ, ಅವನು ಕಾಂಗ್ರೆಸ್ ಟಿಕೆಟ್ ಹಂಚೋ ಸಂಧರ್ಬದಲ್ಲಿ ಫೋನ್ ಮಾಡ್ತಾ ಇದ್ದ, ಸಾರ್ ಬಿಜಾಪುರಕ್ಕೆ ಯಾರಿಗೆ ಸಾರ್ ಟಿಕೆಟ್ , ರಾಯಚೂರಿಗೆ ಯಾರಿಗೆ ಸಾರ್ , ಚಿತ್ರದುರ್ಗಕ್ಕೆ ಯಾರಿಗೆ ಸಾರ್ ಅಂತಿದ್ದ. ನಾನು ನಂಗೆ ಗೊತ್ತಿರೋ ಹೆಸರು ಹೇಳಿದ್ದಕ್ಕೆ ಹೋಗಿ ಸಾರ್ ನಿಮಗೆ ರಾಜಕೀಯನೆ ಗೊತ್ತಿಲ್ಲ ನೀವು ಹೇಳೋರೆಲ್ಲ ರೇಸ್ ನಲ್ಲೆಇಲ್ಲ ಅನ್ನೋದಾ... ನಾನಾದರು ಅರೆ ನನ್ನ ಮಗನೆ ಅಂದುಕೊಂಡೆ. ಆದರೆ ನನಗೆ ಇರೋ ಮಾಹಿತಿ ತಪ್ಪು ಅಂತ ಗೊತ್ತಾದ ಮೇಲು ಯಾಕಪ್ಪಾ ಮತ್ತೆ ಫೋನ್ ಮಾಡ್ಬೇಕು, ಮತ್ತೆ ಅದೇ ಪ್ರಶ್ನೆ ಕೇಳಿದ ನಾನು ಅಷ್ಟೊತ್ತಿಗೆ ಹುಶಾರಾಗಿಬಿಟ್ಟೆ ಅವ್ನಿಗೆ ಬೇಕಾಗಿದ್ದವರು ಯಾರು ಅಂತ ತಿಳಿದುಕೊಂಡು, ಅವ್ರ ಹೆಸರೇ ರೇಸ್ ನಲ್ಲಿ ಜೋರಾಗಿ ಓಡ್ತಾ ಇದೇ ಅಂತ ಹೇಳಿದೆ.. ಅದಕ್ಕೆ ಅವನು ಅಲ್ವಾ..ಸಾರ್, ಅಲ್ವಾ ಸಾರ್ ಅಂತ ಖುಷಿ ಪಟ್ಟ.
ಕಡೆಗೆ ಅವನಿಗೆ ಬೇಕಾದವರಿಗೆ ಟಿಕೆಟ್ ಸಿಗಲಿಲ್ಲ.
ಇಂತದೇ ಇನ್ನೊಂದು ಕೇಸು ಸಿದ್ದರಾಮಯ್ಯನವರದು, ಅವ್ರಿಗೆ ಬಾರಿ ಅಭಿಮಾನಿಗಳ ಬಳಗ ಇದೇ ಸಿದ್ದರಾಮಯ್ಯ ದೆಹಲಿಗೆ ಬಂದ್ರೆ ಕನಿಷ್ಟ ೧೫ ರಿಂದ ೨೦ ಜನ ಸುತ್ತ ಮುತ್ತ ಬಂದೆ ಬರ್ತಾರೆ...ಅವರಲ್ಲಿ ಬಹುತೇಕರು ನನಗೆ ಗೊತ್ತು, ಸಿದ್ದರಾಮಯ್ಯನವರನ್ನ ವಿರೋಧ ಪಕ್ಷದ ನಾಯಕ ಮಾಡದೆ ಕಾಂಗ್ರೆಸ್ ನವರು ಆಟ ಅಡಿಸ್ತಾ ಇದಾರಲ್ಲ ಅದ್ರ ಬಗ್ಗೆ ತಲೆ ಕೆಡಿಸಿಕೊಂದಿರೋ ಅವರು ಸಾರ್ ಸಿದ್ದರಾಮಯ್ಯನವರದು ಆಯ್ತಾ ಸಾರ್, ಯಾವಾಗ ಮಾಡ್ತಾರೆ ಸಾರ್, ಅಂತ ಕೇಳ್ತಾ ಇರ್ತಾರೆ ನಾನು, ನಾಳೆ ಮಾಡಬಹುದು, ನಾಡಿದ್ದು ಮಾಡಬಹುದು ಮುಂದಿನ ವಾರ ಮಾಡಬಹುದು ಅಂತ ಹೇಳ್ತಾ ಇರ್ತೇನೆ, ಮಾಡ್ತಾರೋ ಬಿಡ್ತಾರೋ ನಂಗೇನು ಗೊತ್ತು ಅದು ಅವ್ರ ಪಕ್ಷದ ವಿಚಾರ..

ನಾನ ಮಾಡೋದು ಅಂತ ಕೆಲವರಿಗೆ ಹೇಳಿದೆ ಆದರು ಬಿಟ್ಟಿಲ್ಲಾ ಫೋನ್ ಬಂದೆ ಬರ್ತವೆ.

ಇದು ಯಾರದು ತಪ್ಪಲ್ಲ ಜನ ಕೇಳ್ತಾ ಕೇಳ್ತಾ ಇರ್ತಾರೆ ನಾವು ಹೇಳ್ತಾ ಇರಬೇಕು ಅದರಲ್ಲೂ ವರದಿಗಾರರು ಯಾವಾಗಲು ತಮ್ಮ ಇನ್ಫಾರ್ಮೆಂಟ್ ಗಳು ಯಾವಾಗಲೂ ಸಂತೋಷ ದಿಂದ ಇರುವಂತೆ ನೋಡಿಕೊಳ್ಳಬೇಕಾಗುತ್ತೆ ನಾವು ನಮಗೆ ಗೊತ್ತಿಲ್ಲ ಅಂದ್ರು ಏನೋ ಗೊತ್ತಿದೆ ಅಂತ ನಟಿಸಬೇಕು. ಅಥವಾ ಅವ್ರಿಗೆ ಏನು ಬೇಕು ಅಂತ ಗೊತ್ತು ಮಾಡಿಕೊಳ್ಳಬೇಕು.
ಪೀಲ್ ಗುಡ್ ಫ್ಯಾಕ್ಟರ್ ಅಂತಾರಲ್ಲ ಹಾಗೆ...

3 comments:

  1. Obba samanya prajeyinda hididu obba bahu mukhya nayaka annisikolluvavana varevige..oliyuava naliyuva mate beku hagiddaga Patrakartanige Suddi sigutte..Hage badukinalloo alavadisikondavanige Mudde sigutte.Ottepadige alve ella..Adroo e politicsu yarannu bidalla...

    ReplyDelete
  2. raajakiya maadoke ellrigu thumba ista namma deshadalli avakaasha illadavaru adara bagge maatanaadi aadi tamma aase pooraisikoltaare antavara madyadalli paapa nimmanta patrakartarige swalpa toondare adjust maadikolli........please

    ReplyDelete
  3. ಹು ಹ ಹ ಹಃ ಹಃ ನಿಂಗೆ ನೀನೆಲ್ದಂಗೆ ಒಳ್ಳೆ ಟ್ರೆಂಡ್ ಗಿರಕಿ ಸಿಕ್ಕ್ಕಿದಾನೆ... ಪತ್ರಕರ್ತರ್ನಾಗಿರುವುದಕ್ಕೆ ನಿಂಗೆ ಎಂತ ಎಂತ ಜನ ಮಾತಿಗೆ ಸಿಕ್ತಾರೆ.... ನಿರೂಪಣೆ ಚೆನ್ನಾಗಿದೆ.

    ReplyDelete