Thursday, May 14, 2009


ಕೆಟ್ಟ ಕಾಲೇ..ಮಂಕು ಬುದ್ದಿ.
ರಾಜ್ಯದ ಮುಖ್ಯಮಂತ್ರಿಯಾಗಿ ಸೈ ಎನಿಸಿಕೊಂಡ ಕುಮಾರಸ್ವಾಮಿ ಸೋನಿಯಾಗಾಂಧಿ ಮನೆಗೆ ಹೋಗುವಾಗ ಯಾಕಾಗಿ ಮುಖ ಮುಚ್ಚಿಕೊಂಡರೋ ಗೊತ್ತಿಲ್ಲ, ಸೋನಿಯಾಗಾಂಧಿ ಮನೆಗೆ ಹೋಗೋದು ಅಪರಾಧವೇನು ಆಗಿರಲಿಲ್ಲ ರಾಜಕೀಯದಲ್ಲಿರೋ ಮಂದಿ ರಾಜಕೀಯ ಮಾಡದೇ ಕಡಲೇಪುರಿ ತಿನ್ನುತ್ತಾ ಕುಳಿತುಕೊಳ್ಳಲೂ ಆಗೋಲ್ಲ.
ಅಷ್ಟಕ್ಕೂ ಸೋನಿಯಾಗಾಂಧಿ ಮತ್ತು ಕುಮಾರಸ್ವಾಮಿ ಚುನಾವಣೆಗೂ ಮುಂಚಿನಿಂದ ಸಂಪರ್ಕದಲ್ಲಿರುವುದು ಗೊತ್ತಿರುವ ವಿಚಾರ. ಕರ್ನಾಟದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದು ಬಹಿರಂಗವಾಗಿದೆ.
ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನಡುವಿನ ವ್ಯತ್ಯಾಸವೇ ಬೇರೆ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾದರು ಚಾಲಾಕುತನ ಕಲಿತಿಲ್ಲ, ರಾಜಕೀಯ ಪ್ರಭುದ್ದತೆ ಕಲಿತಿಲ್ಲ, ಇನ್ನೂ ಹುಡುಗುತನ ಹೋಗಿಲ್ಲ ಮೊನ್ನೆ ನಡೆದ ಪ್ರಕರಣದಲ್ಲೂ ಆಗಿದ್ದು ಅದೇ...
ಕುಮಾರಸ್ವಾಮಿಗೆ ಲೆಪ್ಚ್ ಪ್ರಂಟ್ ಬಗ್ಗೆ ಮೊದಲಿಂದಲೂ ಅಷ್ಟಕ್ಕೆ ಅಷ್ಟೇ... ಕಾಂಗ್ರೇಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಹೋದರೆ ಕಷ್ಠ , ಲೆಪ್ಟು, ರೈಟು, ಪ್ರಂಟೂ ಅಂತ ಕಮ್ಯುನಿಷ್ಠರ ಜೊತೆಯಲ್ಲಿ ಹೋದರೆ ರಾಜ್ಯದಲ್ಲಿ ಏನೂ ಮಾಡಕ್ಕೆ ಆಗಲ್ಲ, ಅಧಿಕಾರದಲ್ಲಿರೋ ಬಿಜೆಪಿಯನ್ನೂ ಭೀತಿಯಲ್ಲಿ ಇಡಲಿಕ್ಕೆ ಕಾಂಗ್ರೇಸ್ ಬೇಕೆ ಬೇಕು. ಕಮ್ಯುನಿಷ್ಟ್ ಪಕ್ಷ ರಾಜ್ಯದಲ್ಲಿ ಎಲ್ಲಿದೆ ಅನ್ನೋದು ಪ್ರಶ್ನೆ, ಕುಮಾರಸ್ವಾಮಿದು ಪ್ರಾಕ್ಟಿಕಲ್ ಲೆಕ್ಕಾಚಾರ.
ಆದರೆ ದೇವೇಗೌಡರ ವಿಚಾರ ಬೇರೆ ಇದೆ ರಾಜ್ಯದಲ್ಲಿ ಜೆಡಿಎಸ್ ಗೆಲ್ಲೋದು ಅಮ್ಮಮ್ಮಾ ಅಂದ್ರೂ 6ರಿಂದ 7 ಸೀಟು, ಅದನ್ನ ಜೆಡಿಎಸ್ ಏಕಾಂಗಿಯಾಗಿಯೇ ಗೆಲ್ಲಬಹುದು, ರಾಷ್ಠ್ರ ಮಟ್ಟದಲ್ಲಿ ಲೆಪ್ಟ್ ಪ್ರಂಟ್ ಅನ್ನೋ ವೇದಿಕೆಯಲ್ಲಿದ್ದರೇ ಅವಕಾಶ ಹೆಚ್ಚು, ಬಾರ್ಗೈನ್ ಪವರ್ ಜಾಸ್ತಿ... ಹಣೆಬರ ಚೆನ್ನಾಗಿದ್ದರೆ ಏನೂ ಆಗಬಹುದು, ಕಾಂಗ್ರೆಸ್ ಅನ್ನೋ ಅಧಿಕಾರ ಧಾಹಿಗಳ ಮನೆ ಬಾಗಿಲು ಯಾವಾಗಲು ತೆರೆದೇ ಇರುತ್ತೇ ಅನ್ನೋದು ದೇವೇಗೌಡರ ಐಡಿಯಾ, ಈಗ ಲೆಪ್ಚ್ ಪ್ರಂಟ್ ಇದೆಯೋ, ಇಲ್ಲವೋ ಅನ್ನೋದು ಬೇರೆ ಪ್ರಶ್ನೆ, ಇದೆ ರೀ ಇದೆ ಅಂತ ಮಂತ್ರ ಹಾಕಿದರೆ ಲಾಭ.

ಆದರೆ heliddu ದೇವೇಗೌಡರಿಗೆ "ಇಲ್ಲದೆ ಇರೋದನ್ನು ಇದೇ" ಎಂದು ಬಿಂಬಿಸುವ ಭೂತದ ಮಂತ್ರ ಗೊತ್ತು ಅದು ಕುಮಾರಸ್ವಾಮಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರೋ ರಾಜಕೀಯ "ಮೊದಲೇ ಡೀಲ್ ಮಾಡಿಬಿಟ್ರೆ ಒಳ್ಳೇದು, ಆಮೇಲೆ ಹೆಂಗೋ ಏನೋ" ಅನ್ನೋ ಟಿಪಿಕಲ್ ಹುಡುಗು ಬುದ್ಧಿ.

ಸೋನಿಯಾ ಗಾಂಧಿ ಮನೆ ಹತ್ರ hodaaga ಆಗಿದ್ದು ade ಯಾರೋ ಕಾಂಗ್ರೇಸ್ ಸ್ನೇಹಿತರನ್ನ ಕರೆದುಕೊಂಡು ಯಾವತ್ತೂ ಹೋಗುವಂತೆ ಸೋನಿಯಾ ಗಾಂಧಿ ಕುಮಾರಸ್ವಾಮಿ ಮನೆಗೆ ಬಂದಿದ್ದಾರೆ, ಅವರ ಮನೆ ಬಾಗಿಲಲ್ಲಿ ಬೇರೆ ಯಾರಿಗೋ ಕಾಯುತ್ತಿದ್ದ ಕ್ಯಾಮರಾದವರು ನನಗೇ ಕಾಯುತ್ತಿದ್ದಾರೆ ಅಂತ ತಪ್ಪುತಿಳಿದುಕೊಂಡು ಇಕ್ಕಟ್ಟಿಟ್ಟಿಗೆ skkikondiddare ದೇವರೇ ನಮ್ಮಪ್ಪ ದೇವೇಗೌಡರಿಗೆ ಗೊತ್ತಾದ್ದರೆ ಏನು ಗತಿ ಅಂತ ಹೆದರಿ ಒಂದು ಕೈಯಲ್ಲಿ ಮುಖ ಮುಚ್ಚಿಕೊಂಡಿದ್ದಾರೆ, ಆ ಕ್ಷಣಕ್ಕೆ ಮುಖ ಮಚ್ಚಿಕೊಂಡವರೇ ಯಾರಿಗೂ ಕಾಣಲ್ಲ ಅನ್ನೂ ಮನುಷ್ಯ ಸಹಜ ದಿಡೀರ್ ನಿರ್ಧಾರkke bandiddaare...
ಅದು ಹೋದರೇ ಹೋಗಲಿ ಮತ್ತೆ ಹೋದ ದಾರಿಯಲ್ಲಾದರೂ ವಾಪ್ಪಸ್ಸು ಬಂದು ಮಾದ್ಯಮಗಳ ಎದುರು ಮಾತನಾಡಿ ಹೌದು ಕರ್ನಾಟಕ ರಾಜಕಾರಣದ ಬಗ್ಗೆ ಚರ್ಚೆ ಮಾಡಕ್ಕೆ ಹೋಗಿದ್ದೆ , ಬೇಟಿಗೆ ಮಹತ್ವ ಏನಿಲ್ಲ ಅಂತ ಹೇಳಬಹುದಿತ್ತು, ಆದರೆ ನಾವೆಲ್ಲಾ ಹುಡುಕುತ್ತಲೇ ಇರುವಾಗಲೇ 11 ಜನಪತ್ ನ ಹಿಂದಿನ ರಸ್ತೆಯಿಂದ ಆಸಾಮಿ ಪರಾರಿಯಾಗಿದ್ದರು, ಪ್ರಳಯಾಂತಕರಾದ ದೆಹಲಿ ಪತ್ರಕರ್ತರು ಹಿಂದಿನ ಬಾಗಿಲಿನಿಂದಲೂ ಕುಮಾರಸ್ವಾಮಿ ಅವರನ್ನು ಬೆನ್ನು ಹತ್ತಿದ್ದಾರೆ, ಮಸಾಲಾ ಸುದ್ದಿ ಸಿಕ್ಕರೆ ಮುಕ್ಕಿ ಮುಕ್ಕಿ ತಿನ್ನವ ದೆಹಲಿ ಪತ್ರಕರ್ತರು ಆಗಲೆ ದೇಶಕ್ಕೆಲ್ಲ ತೋರಿಸಿ ಆಗಿತ್ತು.
ಆ ಹೊತ್ತಿಗೆ ದೇವೇಗೌಡರಿಗೂ ಸುದ್ದಿ ಮುಟ್ಟಿ ರೊಚ್ಚಿಗೆದ್ದಾರೆ, ಅಷ್ಠರಲ್ಲಿ ಟಿ.ವಿಗಳನ್ನು ನೋಡಿ ಬೆಚ್ಚಿದ ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡಿ ಸಮರ್ಥನೆ ನೀಡಬೇಕಾಯಿತು..

ಅದೆಲ್ಲ ಎಲ್ಲಾರಿಗೂ ಗೊತ್ತಿರೋ ವಿಚಾರ ಬಿಡಿ, ಪ್ರೆಸ್ ಮೀಟ್ ನಲ್ಲಿ 'ಮಿಸ್ಟರ್ ಕುಮಾರ ಸ್ವಾಮಿ ವೈ ಯು ಸ್ನೀಕಡ್ ಇನ್ ಟು ಸೋನಿಯಾಸ್ ಹೌಸ್ ವಿಥ್ ಹೈಡಿಂಗ್ ಪೇಸ್...' ಅಂತ ಸಿಎನ್ಎನ್ ಐಬಿಎನ್ ನ ಪಲ್ಲವಿ ಘೋಷ್ ಪ್ರಶ್ನೆ ಕೇಳಿದಾಗ ಕುಮಾರಸ್ವಾಮಿ ಹೇಳಿದ ಉತ್ತರ ಏನು ಗೊತ್ತಾ ನನಗೆ ಸೆಕೆ ಆಗ್ತಾ ಇತ್ತು ಬೆವರಿದ್ದೆ ಅದಕ್ಕೆ ಮುಖ ಒರೆಸಿಕೊಳ್ಳಾ ಇದ್ದೆ antta...ಮತ್ತೊಮ್ಮೆ ಅವಳು ಕೇಳಿದ ಪ್ರಶ್ನೆ ಎಸಿ ಇರೋ ಕಾರಲ್ಲಿ ಸೆಕೆ ಆಗುತ್ತಾ ಕುಮಾರಸ್ವಾಮಿ....!
ಅದೇ ದೇವೇಗೌಡರನ್ನು ನೋಡಿ ಮಾರನೇ ದಿನ ಕರೆದ ಪ್ರೆಸ್ ಕಾನ್ಪರೆನ್ಸ್ ನಲ್ಲಿ ಅವರು ಮಗನ ಕೃತ್ಯ ಸಮರ್ಥಿಸಿಕೊಂಡು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ತೆಗೆಯುವುದೇ ನಮ್ಮ ಗುರಿ ಅದಕ್ಕಾಗೆ ಕುಮಾರಸ್ವಾಮಿ ಸೋನಿಯಾಗಾಂಧಿ ಅವರನ್ನು ಭೇಟಿ ಆಗಿ ಮಾತುಕತೆ ಮಾಡಿದ್ದಾರೆ ಅದರಲ್ಲಿ ಏನೂ ತಪ್ಪಿಲ್ಲ, ಪಕ್ಷವೂಂದರ ರಾಜ್ಯಾದ್ಯಕ್ಷರಿಗೆ ಇಂತಹ ಜನಾವ್ದಾರಿಗಳಿರುತ್ತವೆ ಅನ್ನುತ್ತಾ ಘಟನೆ ಅಳಿಸಿಹಾಕಿದರು, ಕೊನೆಗೆ ನಾವು ಈಗಲೂ ಥರ್ಡ್ ಪ್ರಂಟ್ ನಲ್ಲೇ ಇದ್ದೇವೆ
ಅದರ ಬಗ್ಗೆ ಯಾರಿಗೂ ಅನುಮಾನ ಬೇಡವೇ ಬೇಡ ಅಂತ ತಮ್ಮ ಚಾಣಾಕ್ಯತೆ ಪ್ರದರ್ಶಿಸಿದರು.
ಆದರೆ ಕುಮಾರಸ್ವಾಮಿಗೆ ಚಾಣಾಕ್ಷತೆ ಇಲ್ಲದೇ ಹೋದರೂ ಪ್ರಾಮಾಣಿಕತೆ ಇದೆ, ಅವರನ್ನು ಹುಡುಕಿಕೊಂಡು ಮನೆಗೆ ಹೋದ ಪತ್ರಕರ್ತರಿದೆ ಆದ ಪ್ರಕರಣದ ಬಗ್ಗೆ ಒಂದು ಚೂರು ಸುಳ್ಳು ಹೇಳದೇ 'ಹಿಂಗೆ ಆಗೋಯ್ತಲ್ಲ ಸರ್ ಏನ್ ಮಾಡೋದು' ಅಂತ ಆಪ್ ದ ರೆಕಾರ್ಡ್ ಹೇಳಿಕೊಂಡಿದ್ದಾರೆ ಕುಮಾರಸ್ವಾಮಿ, ಪರಿಚಯವೇ ಇಲ್ಲದ ಕೆಲ ಪತ್ರಕರ್ತರು ಎಷ್ಠು ಒಳ್ಳೇ ಮನುಷ್ಯ ರೀ ಕುಮಾರಸ್ವಾಮಿ ಅಂತ ತಲೆದೂಗಿದ್ದಾರೆ.
ಅದೇ ದೇವೇಗೌಡರು ಒಬ್ಬರೇ ಇದ್ದಾಗ ಹೇಳೋ ಆಪ್ ದ ರೆಕಾರ್ಡ್ ವಿಷಯಗಳನ್ನು ಅರ್ಥ ಮಾಡಿಕೊಳ್ಳೊ ಜಾಣನನ್ನ ಇಲ್ಲಿವರಗೆ ನಾನು ಕಂಡಿಲ್ಲ, ನಾಂನಂತೂ ಅಲ್ಲ ಅವು ಅರ್ಥ ಅಗೂದೆ ಕಷ್ಟ.

3 comments:

  1. lekhana chennagittu adre huduga kumaraswamy appi tappi devegowdana maganagi huttbittidane.wrong bread.adre devegowda mado kelsagalana buddivantike andre hege.avano purti slum papa kumaraswamy dollar's colony.yaro hassan ali heltidru devegowdana buddivantike sayovargu karnataka uddaraagalla anta.adu nija adre valledu alva.

    ReplyDelete
  2. ಕುಮಾರಸ್ವಾಮಿ ದೀಡಿರ್ ಬೆಳವಣಿಗೆಗಳಲಿ ಬಾರಿ ನಂಬಿಕೆ ಅನ್ನಿಸುತ್ತೆ ಎಲ್ಲೋ ಒಂದು ಭಾರಿ ಅಂತ ಬೆಳವಣಿಗೆ ಕೈಗೂಡಿ ರಾತ್ರೋರಾತ್ರಿ lime light ಗೆ ಬಂದೆ ಅನ್ನೋ ಲೆಕ್ಕಾಚಾರದಲ್ಲೇ ಇನ್ನು ರಾಜಕೀಯ ಮಾಡಲು ನಿಂತಿರಿವ ಮಾಜಿ ಮುಖ್ಯ ಮಂತ್ರಿಯ ಕೆಲಸಕ್ಕೆ ಏನು ಹೇಳುವುದೋ ಇದೊಂದು ರೀತಿಯ ಪೆದ್ದು ಜಾಣತನ ಅಸ್ಟ್ಟೆ.

    ReplyDelete
  3. ಆ ದಿನ ನಿನ್ನ Byte ನ ಈ ಟಿವಿ ಯಲ್ಲಿ ನೋಡಿದ್ದೇ. ಇಟ್ ವಾಸ್ ಗುಡ್.
    In CNN-IBN when she asked how come sweating in Benz A/C car. He was stun.
    Good article dude.Keep going..

    ReplyDelete