Monday, December 14, 2009

ಮಿಸ್ ಯು, ರಾಜಶೇಖರ ರೆಡ್ಡಿ.

ಆಂದ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ್ದ ಕಾಲಕ್ಕೆ ತಣ್ಣಗಿದ್ದ ತೆಲಂಗಾಣ ರಾಜ್ಯದ ವಿಭಜನೆ ವಿಚಾರ ಈಗ ಧಿಡೀರನೆ ಎದ್ದು ಕೂತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ತಾನು ನಾಯಕರನ್ನು ಸೃಷ್ಟಿಸಬಲ್ಲೇ ಎಂಬ ಅಹಮ್ಮು ಈಗಿನ ತೆಲಂಗಾಣ ವಿಭಜನೆ ಆದ ನಂತರ ಬುಗಿಲೆದ್ದ ಪ್ರತಿಭಟನೆಗಳು, ಹಿಂಸಾಚಾರದ ನಂತರ ಕಡಿಮೆ ಆಗಿದೆ ಎನ್ನಬೇಕು. ವಿಭಜನೆ ವಿರೋಧಿಸಿ ಕಾಂಗ್ರೆಸ್ , ಮತ್ತು ಟಿಡಿಪಿಯ ಸಾಲು ಸಾಲು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೃಷ್ಠಿಸಿದ ನಾಯಕ ರೋಸಯ್ಯ ತಮ್ಮ ಅಗಾಧ ಅನುಭವದ ಮದ್ಯೆಯೂ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.

ಈ ಪ್ರಕರಣ ನಂತರವಾದರೂ ತಿಳಿಯುವ ಸಂಗತಿ ಎಂದರೆ ನಾಯಕರನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ ಅವರು ಹುಟ್ಟುತ್ತಾರೆ ಅಂತ. ನನ್ನ ಗ್ರಹಿಕೆಯಲ್ಲಿ ರಾಜಕಾರಣದಲ್ಲಿ ನಾಲ್ಕು ವರ್ಗದ ಜನ ಇರುತ್ತಾರೆ, ಅವರಲ್ಲಿ ಮೊದಲ ವರ್ಗ ರಾಜಕಾರಣಿಗಳು, ಎರಡನೇ ವರ್ಗ ಲೀಡರ್ ಗಳು ಮೂರನೆ ವರ್ಗ ಸ್ಟೇಟ್ಸ್ ಮನ್ ಗಳು ನಾಲ್ಕನೇ ವರ್ಗ ವಿಶನರಿಗಳು. ಇಂಡಿಯಾದ ರಾಜಕಾರಣದಲ್ಲಿ ಮುಕ್ಕಾಲು ಭಾಗ ರಾಜಕಾರಣಿಗಳೇ ಇದ್ದಾರೆ. ಅಲ್ಲಲ್ಲಿ ಮಾಯಾವತಿ,ರಾಜಶೇಖರರೆಡ್ಡಿ, ಅಂತ ನಾಯಕರು ಇದ್ದಾರೆ ಅವರನ್ನು ಸುಲಭವಾಗಿ ರೀಪ್ಲೇಸ್ ಮಾಡೋದಕ್ಕೆ ಸಾದ್ಯವಾಗೋಲ್ಲ, ರಾಜಕಾರಣದಿಂದ ಆಚೆಗೆ ಹೋಗಿ ರಾಷ್ಠ್ರದ ಆಸ್ತಿ ಯಂತೆ ಕಾಣಿಸಿಕೊಳ್ಳುವ ಕೆಲವರಿದ್ದಾರೆ ಮಾಜಿ ಪ್ರಧಾನಿ ವಾಜಪೇಯಿ,ನರಸಿಂಹ ರಾವ್ ಪ್ರಣಬ್ ಮುಖರ್ಜಿ,ಇಂತಹವರಿರಬಹುದು, ಇನ್ನು ವಿಶನರಿಗಳು ನಮ್ಮ ಮನಮೊಹನ್ ಸಿಂಗ್ ಅಂತಹವರಿಬಹುದು, ವಾಸ್ತವ ಅಂದರೆ ವಿಶನರಿಗಳು ಲೀಡರ್ ಆಗೋದಿಕ್ಕೆ ಸಾದ್ಯ ಇಲ್ಲ ಅದಕ್ಕೆ ಮನಮೋಹನ್ ಸಿಂಗ್ ಉದಾಹರಣೆ, ಅವರು ಈವರೆಗೆ ಯಾವ ಚುನಾವಣೆಯನ್ನೂ ಎದುರಿಸಲಿಕ್ಕೆ ಹೋಗಿಲ್ಲ. ಈ ನಾಲ್ಕು ವರ್ಗಗಳು ಒಂದಕ್ಕೊಂದು ಬಿನ್ನ ಎಲ್ಲರೂ ಎಲ್ಲರಿಗೂ ಪೂರಕವಾಗಿರುತ್ತಾರೆ, ಒಬ್ಬರಿಂದ ಸಾದ್ಯವಾದದ್ದು ಮತ್ತೊಬ್ಬರಿಂದ ಸಾದ್ಯವಾಗುವುದಿಲ್ಲ.


ಒಬ್ಬ ನಾಯಕನ ಅಗಲಿಕೆ ಏನೆಲ್ಲ ಆಗುತ್ತೆನ್ನೊದಕ್ಕೆ ಇದನ್ನ ಹೇಳಬೇಕಾಯಿತು ಒಬ್ಬ ರಾಜಶೇಕರ ರೆಡ್ಡಿ ಇದ್ದಿದ್ದರೆ ಆಂದ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ತೀರ್ವವಾಗುತ್ತಿರಲಿಲ್ಲ ಅದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗಣಿ ರೆಡ್ಡಿಗಳು ಈಗಿನ ಸ್ಥಿತಿಗೆ ತರುತ್ತಿರಲಿಲ್ಲ ರಾಜಕಾರಣದಲ್ಲಿ ಯಾವ್ಯಾವುದಕ್ಕೊ ಯಾವುದೋ ಲಿಂಕ್ ಆಗಿರುತ್ತವೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಸೃಷ್ಠಿಸುತ್ತೇವೆ ಎಂಬ ಹೇಳಿಕೆ ನಂತರ ಆಂದ್ರದಲ್ಲಿ ಉಂಟಾದ ಸಮಸ್ಯೆಗಳಿಂದ ಗಲಿಬಿಲಿಗೊಂಡ ಸೋನಿಯಾಗಾಂದಿ ತೆಲಂಗಾಣ ಬಾಗದ 11 ಮಂದಿ ಎಂಪಿಗಳನ್ನು ಕರೆದು ಹೇಳಿದರಂತೆ ನೀವು ನನ್ನ ಮಿಸ್ ಗೈಡ್ ಮಾಡಿದ್ದೀರಿ, ರಾಜಶೇಖರ ರೆಡ್ಡಿ ನನಗೆ ಒಮ್ಮೆ ಹೇಳಿದ್ದರು ನನಗೆ ಆಂದ್ರದ ಜನತೆಯ ನಾಡಿ ಮಿಡಿತ ಗೊತ್ತು, ಸದ್ಯಕ್ಕೆ ತೆಲಂಗಾಣದ ಚರ್ಚೆ ಬೇಡ ಚುನಾವಣೆಯಲ್ಲಿ ಗೆಲ್ಲೋದು ನಾವೆ ಅಂತ.

ನಾವು ಈಗ ರಾಜಶೇಖರ ರೆಡ್ಡಿ ಅವರನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ.

ರಾಜಶೇಖರ ರೆಡ್ಡಿ ಸತ್ತ ಮೇಲೆ ಅವರು ಒಳ್ಳೆಯವರಾ, ಕೆಟ್ಟವರಾ, ಬ್ರಷ್ಟರಾ ಅನ್ನೋ ನೂರಾರು ಚರ್ಚೆಗಳು ನಡೆದಿವೆ ಅದು ಬೇರೆಯದೇ ವಿಶಯ ಆದರೆ ಆಂದ್ರಪ್ರದೇಶದ ಪಾಲಿಗೆ ರಾಜಶೇಖರ ರೆಡ್ಡಿ ಒಬ್ಬ ಅನಿವಾರ್ಯ ನಾಯಕನಾಗಿದ್ದ ಅನ್ನೊದನ್ನು ಅಲ್ಲಗಳೆಯಲು ಸಾದ್ಯವಿಲ್ಲ, ನನ್ನ ಆಂದ್ರದ ಪತ್ರಕರ್ತ ಗೆಳೆಯ ಸುಧೀರ್ ಹೇಳುತ್ತಿದ್ದ, ರಾಜಶೇಖರ ರೆಡ್ಡಿ ಒಳ್ಳೆಯರ ಪಾಲಿಗೆ ಒಳ್ಳೆಯವ, ಕೆಟ್ಟವರ ಪಾಲಿಗೆ ಕೆಟ್ಟವ, ವಿರೋಧಿಗಳ ಪಾಲಿಗೆ ಕ್ರೂರಿ ಆಗಿದ್ದ ಅಂತ. ಬಹುಶ ಒಬ್ಬ ನಾಯಕ ಹುಟ್ಟೋದು ಇದೇ ಪ್ರಕ್ರಿಯೆಯಲ್ಲಿ ವಿರೋಧಿಗಳನ್ನು ಪ್ರೀತಿಸುವವನು ಸಂತ ಆಗಬೇಕಾಗುತ್ತದೆ, ರಾಜ್ಯ ಕಟ್ಟುವ ದೊರೆ ಆಳದಲ್ಲಿ ಕ್ರೂರಿ ಆಗಿರುತ್ತಾನೆ ಅದು ರಾಜಶೇಖರ ರೆಡ್ಡಿಗೆ ಇತ್ತು ಅಂತ ಕಾಣುತ್ತದೆ, ಈಗ ತೆಲಂಗಾಣ ಬೇಕು ಅನ್ನುತ್ತಿರುವ ಕಾಂಗ್ರೆಸ್ ಎಂಪಿಗಳು ಅವರಿದ್ದ ಕಾಲಕ್ಕೆ ಬಾಯಿ ಬಿಡುತ್ತಿರಲಿಲ್ಲ.

ಕರ್ನಾಟಕದಿಂದ ಕೊಡಗನ್ನೋ, ಹೈದ್ರಾಬಾದ್ ಕರ್ನಾಟಕನ್ನೋ ಒಡೆದು ಇಬ್ಬಾಗ ಮಾಡುವ ಸಂಗತಿಯನ್ನು ನೆನಸಿಕೊಳ್ಳುವುದು ಎಷ್ಟು ಕಷ್ಟವೋ ಅಂತದೇ ಕಷ್ಟ ಈಗ ಆಂದ್ರ ಪ್ರದೇಶದ ಜನ ಎದುರಿಸುತ್ತಿದ್ದಾರೆ, ಒಡೆಯುವುದು ಸುಲಭ ಒಟ್ಟಿಗೆ ಕರೆದೊಯ್ಯುವುದು ಕಷ್ಟ. ಮಿಸ್ ಯು ರಾಜಶೇಖರ ರೆಡ್ಡಿ.

ದೇವೇಗೌಡ ಮತ್ತು 'ಹಾರ್ಡ್ ಟಾಕ್'.

'ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ' ಅಂತ ದೇವೇಗೌಡರು ಅವರದೇ ವಿಶಿಷ್ಟ ಧಾಟಿಯಲ್ಲಿ ಎದುರು ಕುಳಿತಿದ್ದ ಸುವರ್ಣ ಚಾನಲ್ಲಿನ ಆ್ಯಂಕರ್ ಹಮೀದ್ ನ ಬಾಯಿ ಮುಚ್ಚಿಸುವ ಧಾಟಿಯಲ್ಲಿ ಹೇಳಿದರು.
ನೈಸ್ ಕಂಪನಿಯ ಬಗ್ಗೆ ರೊಚ್ಚಿಗೆದ್ದಿದ್ದ ದೇವೇಗೌಡರೊಂದಿಗೆ 'ಹಾರ್ಡ್ ಟಾಕ್' ಅನ್ನೊದು ಕಾರ್ಯರ್ಕಮದ ಹೆಸರು. ದೇವೇಗೌಡ ನೈಸ್ ಬಗ್ಗೆ ಕೇಳಿದ ಪ್ರಶ್ನೆಗೆ ತಾವು ಮುಖ್ಯಮಂತ್ರಿಯಾದ ದಿನಾಂಕದಿಂದ ಹಿಡಿದು ಮೊನ್ನೆಯ ಕೋರ್ಟ್ ಆದೇಶದವರೆಗೆ ದಿನಾಂಕಗಳನ್ನೂ ಬಿಡದೆ ವಿವರಿಸತೊಡಗಿದರು.ಕಾರ್ಯಕ್ರಮಕ್ಕೆ ಬರುವಾಗ ತಂದಿದ್ದ ಒಂದು ಕಂತೆ ದಾಖಲೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದರು. ಆದರೆ ಹಮೀದ್ ದೇವೇಗೌಡರನ್ನು ಮದ್ಯದಲ್ಲೇ ತಡೆದು ಬೇರೆ ಪ್ರಶ್ನೆ ಕೇಳಲು ಯತ್ನಿಸುತ್ತಾ ನೇರ ಪ್ರಶ್ನೆಗೆ ನೇರ ಉತ್ತರ ಪಡೆದು ಬಿಡುವ ಯತ್ನ ಮಾಡುತ್ತಿದ್ದರು. ಆದರೆ ದೇವೇಗೌಡರದು ಅದೇ ಧಾಟಿ ಆ್ಯಂಕರ್ ಮೇಲೆ ಸವಾರಿ ಮಾಡುತ್ತಾ 'ನಾನೇಳೋದನ್ನ ಕೇಳ್ರಿ ಇಲ್ಲಿ' ಅನ್ನುತ್ತಾ ಯ್ಯಾವ್ಯಾವುದೋ ದಾಖಲೆಗಳಲ್ಲಿ ಹುದುಗಿದ್ದ ಮಾಹಿತಿಗಳನ್ನ ಓದುತ್ತಾ, ಹಳೇ ಅಧಿಕಾರಿಗಳು ಜಡ್ಜ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಮುಂದುವರೆದರು.
ಹಮೀದ್ ಕೇಳಿದ ಮೊದಲ ಪ್ರಶ್ನೆಗೆ ದೇವೇಗೌಡರು ಕೊಟ್ಟ ಉತ್ತರದ ಸಮಯ ಬರೋಬ್ಬರಿ 40 ನಿಮಿಷ ಅದೂ ಒಂದೇ ಒಂದು ಬ್ರೇಕ್ ತೆಗೆದುಕೊಳ್ಳದೇ.ದೇವೇಗೌಡರ ಹಾರ್ಡ್ ಟಾಕ್ ನೇರ ಪ್ರಸಾರವಾಗುತ್ತಾ ಇತ್ತು.
ದೇವೇಗೌಡರೇ ಹಾಗೆ ಅವರು ನೆಡದದ್ದೇ ಹಾದಿ, ಬೇರೆಯವರ ಇಕ್ಕಳಕ್ಕೆ ಸಿಕ್ಕುವ ಆಸಾಮಿ ಅಲ್ಲ, ನಾನು ಬಹುವಾಗಿ ಮೆಚ್ಚಿಕೊಳ್ಳುವ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಒಮ್ಮೆ ಹೇಳುತ್ತಿದ್ದರು ಪರ್ತಕರ್ತರ ಪಾಲಿಗೆ ನಿಜವಾದ ಸವಾಲು ಅಂದರೆ ದೇವೇಗೌಡ ಅಂತ.
ಹಮೀದರ ಹಾರ್ಡ್ ಟಾಕ್ ನೋಡಿದಾಗ ನೆನಪಾದ ಸಂಗತಿಗಳನ್ನು ಇಲ್ಲಿ ಹೇಳಿದ್ದೇನೆ.

ನಮ್ಮ ನ್ಯೂಸ್ ರೂಂ ಗಳಲ್ಲಿ ಕುಳಿತ ಮಂದಿ ದೇವೇಗೌಡರ ಬೈಟ್ ತೆಗೆದುಕೊಂಡು ಬನ್ನಿ ಅಂತ ಹೇಳಿಬಿಡುತ್ತಾರೆ ನಿಜ, ಆದರೆ ವರದಿಗಾರರಿಗೆ ತಮಗೆ ಬೇಕಾದ್ದನ್ನು ದೇವೇಗೌಡರಿಂದ ಬಾಯಿಬಿಡಿಸುವುದು ಮಾತ್ರ ತೀರಾ ತ್ರಾಸದಾಯಕ ವಿಶಯ. ದೇವೇಗೌಡರನ್ನು ಮಾತನಾಡಿಸುವ ಮೊದಲು ಅವರ ಮೂಡ್ ಹೇಗಿದೆ ಎಂಬುದನ್ನ ಅವರ ಸುತ್ತ ಇರುವವರಿಂದ ತಿಳಿದುಕೊಂಡು ಮುಂದುವರೆಯಬೇಕಾಗುತ್ತದೆ. ಇಲ್ಲಾಂದರೆ ಕಷ್ಟ.
ಒಂದು ಘಟನೆ ಹೇಳುತ್ತೇನೆ ಕೇಳಿ, ಅದು ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೊ ವಿಶಯಕ್ಕೆ ಜಂಗಿ ಕುಸ್ತಿ ನಡೆಯುತ್ತಿದ್ದ ಕಾಲ ನಮ್ಮ ಈಟಿವಿಯ ವರದಿಗಾರ ವಿಜಯ್ ಜೆಡಿಎಸ್ ಬೀಟ್ ನೋಡಿಕೊಳ್ಳುತ್ತಿದ್ದ, ದೇವೇಗೌಡರಿಂದ ಎಂತಾ ಸಂದರ್ಭದಲ್ಲೂ ಮಾತಾಡಿಸಿಕೊಂಡು ಬಂದುಬಿಡುವ ಚಾತಿ ಆತನಿಗಿತ್ತು.
ದೇವೇಗೌಡರ ಮನೆಗೆ ನುಗ್ಗಿ ಬೈಟ್ ತರುತ್ತಾನೆ, ಈತ ದೇವೇಗೌಡರ ದತ್ತು ಪುತ್ರ ಅಂತೆಲ್ಲಾ ಪತ್ರಕರ್ತರು ರೇಗಿಸುತ್ತಿದ್ದರು, ಅದೊಂದು ದಿನ ಬೆಳ್ಳಂಬೆಳ್ಳಿಗೆ ಗೌಡರ ಹತ್ತಿರ ಬೈಟ್ ತೆಗೆದುಕೊಳ್ಳೊಕೆ ಅಂತ ವಿಜಯ ಹೋಗಿದ್ದಾನೆ, ದೇವೇಗೌಡರು ಅದ್ಯಾವ ಮೂಡಿನಲ್ಲಿದ್ದರೋ ಏನೋ, ಇವನು ಹಾಕಿದ ಪ್ರಶ್ನೆಗೆ ಕುಪಿತಕೊಂಡ ಅವರು 'ಗೆಟ್ ಔಟ್ ಪ್ರಂಮ್ ಮೈ ಹೈಸ್ ಐ ಸೇ ಅಂದಿದ್ದಾರೆ. ಪಾಪ ವಿಜಯ್ ಕಂಗಾಲಾಗಿದ್ದಾನೆ.

ಕೆಲವೊಮ್ಮೆ ಇದೇ ದೇವೇಗೌಡರು ಪತ್ರಕರ್ತರನ್ನು ಬಹಳ ಪ್ರಿತಿಯಿಂದ ನೋಡಿಕೊಳ್ಳುತ್ತಾರೆ, ಊಟ ಮಾಡಿ ಸಾರ್ ಅಂತ ಗಂಟಲು ತನಕ ತಿನ್ನಿಸುತ್ತಾ, ತಿನ್ನಿ ಸಾರ್ ನಾನೇ ಹೇಳಿ ಮಾಡಿಸಿದ್ದು ಅಂತ ನಮ್ಮಲ್ಲಿ ಗಾಭರಿ ಹುಟ್ಟಿಸುವಷ್ಟು ಸಿಂಪಲ್ಲಾಗಿರುತ್ತಾರೆ. ಅದೇ ಕೆಲವೊಮ್ಮೆ 'ಯಾರ್ರಿ ನಿಮ್ಮನ್ನ ಇಲ್ಲಿ ಕರೆದೋರು' ಅಂತ ಹೇಳಿ ಪತ್ರಕರ್ತರನ್ನು ಜಾಗ ಖಾಲಿ ಮಾಡಿಸಿದ್ದೂ ಇದೆ.
ನಾವು ಯಾವುದೋ ಪ್ರಶ್ನೆ ಕೇಳಿದ್ರೆ ಅವರು ಯಾವುದಕ್ಕೋ ಉತ್ತರ ಕೊಡುತ್ತಾ ಇರುತ್ತಾರೆ ಒಂದು ಗಂಟೆ ಮಾತಾಡಿದರೂ ಒಂದೇ ಒಂದು ಸುದ್ದಿ ಸಿಗದ ಹಾಗೆ ಮಾತಾಡಿರುತ್ತಾರೆ. ಕೆಲಮೊಂಮ್ಮೆ ಒಂದೇ ಸಾಲಿನಲ್ಲಿ ಸಿಕ್ಕಾಪಟ್ಟೆ ಅರ್ಥ ಬರುವಂತೆ ಮಾತಾಡುತ್ತಾರೆ. ಮೊನ್ನೆ ತಾನೆ ಜನಾರ್ಧನ ರೆಡ್ಡಿಯಿಂದಾಗಿ ಬಿಜೆಪಿ ಸರ್ಕಾರ ಇಕ್ಕಟ್ಚಿಗೆ ಸಿಕ್ಕಿದ್ದಾಗ ಮೊದಲ ದಿನವೇ ದೇವೇಗೌಡರು ಹೇಳಿದ ವಾಕ್ಯ ನೆನಪಿಗೆ ಬರುತ್ತೆ, 'ನೋಡ್ರಿ ಮೊದಲು ತಿಕ್ಕಾಟ ಆಗುತ್ತೆ, ಆಮೇಲೆ ಬೆಂಕಿ ಹೊತ್ತಿಕೊಳ್ಳುತ್ತೆ, ಆಮೇಲೆ ಎಲ್ಲಾ ಹಾವಿಯಾಗಿ ಮಳೆ ಬರುತ್ತೆ ಮಳೆ ಬಂದಮೇಲೆ ಎಲ್ಲಾ ತಂಪಾಗುತ್ತೆ. ಇವೆಲ್ಲ ರಾಜಕೀಯದಲ್ಲಿ ಸಮಾನ್ಯ ರೀ, ನಾನು ಬೇರೆ ಪಕ್ಷದ ಅಂತರಿಕ ಸಮಸ್ಯೆಗಳ ಬಗ್ಗೆ ಕಾಂಮೆಂಟ್ ಮಾಡಲ್ಲಾ' ಅಂದರು. ಪತ್ರಕರ್ತರಿಗೆ ಇದಕ್ಕಿಂತ ಕಾಮೆಂಟ್ ಬೇಕಾ ಹೇಳಿ. ಮರು ಕ್ಷಣ ಎಲ್ಲಾ ಚಾನಲ್ ಗಳಲ್ಲೂ ಅದೇ ಸುದ್ದಿ.

ದೇವೇಗೌಡರದು ಒಂದು ಸಂಕೀರ್ಣ ವ್ಯಕ್ತಿತ್ವ, ಅವರನ್ನು ಅರ್ಥ ಮಾಡಿಕೊಳ್ಳಲೇಬೇಕೆಂದು ಹಠ ಹಿಡಿದು ಕೂತರೆ ಅವರು ಪತ್ರಕರ್ತನಿಗೆ ಸಹ್ಯವಾಗುತ್ತಾರೆ ಇಲ್ಲ ಅಂದರೆ ಪರ್ತಕರ್ತರು ಅವರನ್ನು ದ್ವೇಷ ಮಾಡಲು ಶುರುಮಾಡುತ್ತಾರೆ. ಇನ್ನೊಂದೆಡೆ ದೇವೇಗೌಡರನ್ನು ನಾವು ಅರ್ಥಮಾಡಿಕೊಳ್ಳುತ್ತಾ ಇರುವಂತೆ ಮತ್ತಷ್ಠು ಸಂಕೀರ್ಣವಾಗುತ್ತಾ ಇರುತ್ತಾರೆ.
ದೇವೇಗೌಡರಿಗಿವ ಅಗಾದ ನೆನಪಿನ ಶಕ್ತಿ ಅವರನ್ನು ಹಾಗೆ ಸಂಕೀರ್ಣವಾಗಿಸಿದೆ ಅಂತ ನನಗೆ ಅನ್ನಿಸಿದೆ.
ಅವರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ದಿನಾಂಕದ ಸಮೇತ ಬಿಡಿ ಬಿಡಿಯಾಗಿ ಅವರು ನೆನಪಿಸಿಕೊಳ್ಳಬಲ್ಲರು, ಅವರ ತಲೆಯಲ್ಲಿ ನೂರಾರು ಮೊಬೈಲ್ ಮತ್ತು ಟಿಲಿಪೋನ್ ನಂಬರ್ ಗಳು ಅಚ್ಚೊತ್ತಿದಂತೆ ಇವೆ. ನಮ್ಮ ಹಾಗೆ ಕಾಂಟ್ಯಾಕ್ಟ್ ಬುಕ್ ಬಳಸದ ಅವರು ತಮ್ಮ ನೆನಪಿನಲ್ಲಿ ಬೇಕಾದರವರ ನಂಬರ್ ಗಳನ್ನೆಲ್ಲಾ ಇಟ್ಟುಕೊಂಡಿರುತ್ತಾರೆ. ಅವರ ಬಳಿ ಇರುವಷ್ಟು ದಾಖಲಾತಿಗಳು ಯಾರಹತ್ತಿರವೂ ಇರಲಿಕ್ಕೆ ಸಾದ್ಯವಿಲ್ಲ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಅವರೇ ಪರಮನೆಂಟ್ ವಿರೋಧಿ ಪಕ್ಷದನಾಯಕ. ಸರ್ಕಾರದ ಪ್ರತಿಯೊಂದು ಆದೇಶದ ಬಗ್ಗೆಯೂ ಈಗಲೂ ತಿಳಿದುಕೊಳ್ಳುತ್ತಾರೆ ಜೀವನದಲ್ಲಿ ಎಲ್ಲಾ ಅನುಭವಿಸಿದರೂ ಇನ್ನು ಎಡೆ ಬಿಡದ ಆಸಕ್ತಿ ಅಚ್ಚರಿ ಮೂಡಿಸುವಂತದ್ದು. ಅದೇ ನೈಸ್ ವಿಶಯದಲ್ಲಿ ದೇವೇಗೌಡರ ಹಠ ನೋಡಿ. ಇಡೀ ಸರ್ಕಾರ ಖೇಣಿ ಬೆನ್ನಿಗಿದ್ದರೂ ದೇವೇಗೌಡ ಖೇಣಿ ಕಂಪನಿಗೆ ದುಸ್ವಪ್ನ ಆಗಿಬಿಟ್ಟಿದ್ದಾರೆ. ಈಗಲೂ ಸುಪ್ರಿಂ ಕೋರ್ಟ್ ನಲ್ಲಿ ನೈಸ್ ಕೇಸ್ ವಿಚಾರಣೆಗೆ ಬರುವ ಹಿಂದಿನ ದಿನ ಅವರು ದೆಹಲಿಗೆ ಬಂದೇ ಬರುತ್ತಾರೆ ಲಾಯರ್ ಗಳೊಂದಿಗೆ ಚರ್ಚೆ ಮಾಡಿ ಹೀಗೆ ವಾಧ ಮಂಡಿಸಬೇಕು ಅಂತ ತಾಕೀತು ಮಾಡುತ್ತಾರೆ.

ಜಡ್ಜ್ ಗಳಿಗೇ ಸ್ವಾಮಿ ನಿಮ್ಮಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇಲ್ಲ, ನಮ್ಮ ಕೇಸ್ ಅನ್ನು ಬೇರೆ ಬೆಂಚ್ ಗೆ ವರ್ಗಾಯಿಸಿ ಅನ್ನುತ್ತಾರೆ. ನಿವೃತ್ತಿಗೆ ಒಂದು ವಾರ ಬಾಕಿ ಇದ್ದ ಆ ಜಡ್ಜ್ ಕಣ್ಣೀರಾಕುತ್ತಾರೆ. ನೈಸ್ ಬಗ್ಗೆ ಪುಸ್ತಕ ಬರೆದು ಜಡ್ಜ್ ಗಳಿಗೆ ಕಳಿಸುತ್ತಾರೆ, 'ಯಾಕ್ರಿ ಕಳಿಸ್ತೀರಿ ನಮಗೆ ಪುಸ್ತಕ ಅಂತ ಜರಿದು, ಬೇಕಿದ್ರೆ ಬಂದು ಸಾಕ್ಷಿ ಹೇಳಿ' ಅಂದ ಹೈಕೋರ್ಟ್ ಜಡ್ಜ್ ದಿನಕರನ್ ಜೀವಮಾನದ ಬಂಡವಾಳನ್ನೇ ಬಯಲಿಗೆ ಎಳೆದುಹಾಕುತ್ತಾರೆ. ದೇವೇಗೌಡರು ಮನಸಿಟ್ಟರೇ ಅವರಿಗೆ ದಕ್ಕದೇ ಇದ್ದದ್ದು ಇಲ್ಲ ಅನ್ನಬೇಕು. ಯಾರನ್ನು ಯಾವಾಗ ಖೆಡ್ಡಾಕ್ಕೆ ಕೆಡವಬೇಕು ಅನ್ನೊದು ಅವರಿಗೆ ತಿಳಿದಿದೆ. ಬಹುಶ ಕರ್ನಾಟಕದ ರಾಜಕಾರಣದಲ್ಲಿ ಅತೀ ದೀರ್ಘ ಕಾಲ ರಾಜಕಾರಣದಲ್ಲಿ ಮಹತ್ವ ಉಳಿಸಿಕೊಂಡು ಬಂದಿದ್ದು ಅವರೊಬ್ಬರೇ ಇರಬೇಕು.

ದೇವೇಗೌಡರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವ ವಿಶಯವೇ ಅಲ್ಲ, ಬಿಡಿ ಕಡೆಗೆ ದೇವೇಗೌಡರ ದೆಹಲಿ ಮನೆಯಲ್ಲಿ ನಡೆದ ಸಂದರ್ಭವೊಂದನ್ನು ಹೇಳಿ ಮುಗಿಸುತ್ತೇನೆ.
ಸುವರ್ಣ ಟಿವಿಯ ಪ್ರಶಾಂತ್ ನಾಥೂ ದೇವೇಗೌಡರೊಂದಿಗೆ ಸಂಭಾಷಣೆಯಲ್ಲಿದ್ದ. ಪಕ್ಕದಲ್ಲಿದ್ದ ಡ್ಯಾನಿಶ್ ಆಲಿ ಹೇಳಿದ 'ಎನೇ ಹೇಳಿ ಸಾರ್ ಪಾಲಿಟಿಕ್ಸ್ ಅನ್ನೊದು ಕೊಚ್ಚೆ, ಇಲ್ಲಿ ಬರೀ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು' ಅದಕ್ಕೆ ದೇವೇಗೌಡರು ಅವನನ್ನು ತಡೆದು ಹೇಳಿದ್ದು 'ಇಲ್ಲಾರಿ ಪಾಲಿಟಿಕ್ಸ್ ಅನ್ನೊದು ನಿರಂತರವಾಗಿ ಹರಿಯೋ ನದಿ ಇದ್ದಂಗೆ ಅದು ಕೊಚ್ಚೆ ಆಗೋದೆ ಇಲ್ಲ ಹರಿದು ಹರಿದು ಶುದ್ಧ ಆಗ್ತಾನೇ ಇರ್ತದೇ' ಅಂತ.

Monday, November 9, 2009

ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ 'ನಂಗಾ ನಾಚ್'



ಸದಾನಂದಗೌಡರು ಅವರ ಹೆಸರಿನಲ್ಲಿರುವಂತೆಯೆ ಸದಾ ನಗುತ್ತಲೇ ಇದ್ದರು, ಬಿಜೆಪಿ ಪಕ್ಷ ಇನ್ನಿಲ್ಲದ ಸಂಕಷ್ಠದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ದೆಹಲಿಯ ಮೀಡಿಯಾದವರಿಗೆ ಸದಾನಂದಗೌಡ ಯಾರೆಂದು ತಿಳಿಯದ ಕಾರಣ ವಿ.ಎಸ್. ಆಚಾರ್ಯ ಬೈಟ್ ತೆಗೆದುಕೊಳ್ಳುವ ಬರದಲ್ಲಿ ಅವರನ್ನು ಬದಿಗೆ ತಳ್ಳಿಬಿಟ್ಟರು. ತಕ್ಷಣ ಸಿಟ್ಟಿಗೆದ್ದ ಅವರು ವಾಟ್ ಈಸ್ ದಿಸ್, ಇಟ್ ಈಸ್ ವಿರಿ ಬ್ಯಾಡ್. ಐ ಯಾಮ್ ಬಿಜೆಪಿ ಪ್ರೆಸಿಡೆಂಟ್ ಸದಾನಂದ ಗೌಡ. ಯು ಆರ್ ಪೂರ್ಸಿಂಗ್ ಮಿ ಟು ಬಿಕಂಮ್ 'ಸ್ಯಾಡ್ ಆನಂದ್....! ಅಂದರು.


ನಂಬಿದವರಿಗೆ ಕೈಕೊಟ್ಟೆ, ನನ್ನ ಸ್ವಾರ್ಥಕ್ಕೆ ಅವರಿಗೆ ಅನ್ಯಾಯ ಮಾಡಿದೆ ಅಂತ ಮುಖ್ಯ ಮಂತ್ರಿಗಳು ಅವಕಾಶ ಸಿಕ್ಕಾಗಲೆಲ್ಲ ಬಿಕ್ಕುತ್ತಿದ್ದರು. ಕೆನ್ನೆಗಳು ಕೆಂಪಾಗಿದ್ದವು ಕೋಪ, ಅಸಹನೆ, ಸಿಟ್ಟಿನಿಂದ ಎದುರಿಗೆ ಸಿಕ್ಕ ಆಪ್ತ ಸಹಾಯಕರ ಮೇಲೆಲ್ಲ ಯಡಿಯೂರಪ್ಪ ರೇಗುತ್ತಿದ್ದರು, ಮೊಬೈಲ್ ಪೋನ್ ಅನ್ನು ಬಿಸಾಕುತ್ತಿದ್ದರು. ಅದೇ ಮರು ಕ್ಷಣ ನನ್ನ ಕಾರ್ಯ ಶೈಲಿ ಬದಲಿಸಿಕೊಳ್ಳುತ್ತೇನೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೊಗುತ್ತೇನೆ ಎಂದು ಮೀಡಿಯಾ ಮೂಲಕ ರಾಜ್ಯದ ಜನತೆಗೆ ತಿಳಿಸಿದರು.


ಇನ್ನೇನು ಪ್ರಕರಣ ಮುಗಿದು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಹೊತ್ತಿಗೆ ಗೃಹ ಸಚಿವ ವಿ.ಎಸ್. ಆಚಾರ್ಯ ಕರ್ಚೀಪು ತೆಗೆದುಕೊಂಡು ಕಣ್ಣಿನಲ್ಲಿ ಮೂಡಿಬಂದ ಹನಿಗಳನ್ನು ಒರೆಸಿ ಕೊಂಡದ್ದು ಕಾಣಿಸಿತು.
ಯಾರ ಮಾತಿಗೂ ಜಗ್ಗದ, ಬಗ್ಗದ ರೆಡ್ಡಿಗಳನ್ನು ಸುಷ್ಮಾ ಸ್ವರಾಜ್ 'ನನ್ನನ್ನು ನೀವು ತಾಯಿ, ತಾಯಿ ಅಂತೀರಿ. ತಾಯಿಯ ಮಾನ ಉಳಿಸೊಲ್ಲವಾ' ಅಂತ ಗಳ ಗಳ ಅತ್ತರು,'ನನ್ನ ಮಾನ ಉಳಿಸಿ' ಅಂತ ರೆಡ್ಡಿ ಕೈಹಿಡಿದರು, ತಾಯಿಯ ಕಣ್ಣೀರಿಗೆ ಬೆಲೆಕೊಟ್ಟ ರೆಡ್ಡಿ 'ಆಯ್ತು' ಅಂದರು.
ಮುಖ ನೋಡಲ್ಲ ಅಂತಾ ಅವಮಾನಿಸಿದ್ದ ರೆಡ್ಡಿಗಳನ್ನು ಯಡ್ಡಿ, 'ಸಹೋದರರು' ಅಂದರು, ಮುಖದಲ್ಲಿ ನಗುvಸಿಕ್ಕಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ರೆಡ್ಡಿ ಮತ್ತು ರಾಮುಲು ಕೈಗಳನ್ನು ಪ್ರಯತ್ನ ಪೂರ್ವಕವಾಗಿ ಮೇಲೆತ್ತಿ 'ನಾವೆಲ್ಲಾ ಒಂದು' ಅಂದರು.
ಆ ಕಡೆ ನಿಂತಿದ್ದ ಅನಂತ ಕುಮಾರ್ ತಮ್ಮ ಅಪೂರ್ವ ದಂತ ಪಂಕ್ತಿಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದರು.
ಬಿಜಿಪಿಯ ಕ್ರೈಸಿಸ್ ಮ್ಯಾನೇಜರ್ ಅಗಿದ್ದ ಅರುಣ್ ಜೇಟ್ಲಿ ಸದರಿ ಪ್ರಕರಣ ಯಾಕೋ ತನಗೆ ಕೈಗೆಟಕದೇ ಹೋದನ್ನು ಗಮನಿಸಿ ಕಡೆ ಕಡೆಗೆ ಕಾಣಿಸಿಕೊಳ್ಳದೇ ಮಾಯವಾಗಿದ್ದರು.
ಪ್ರಕರಣಕ್ಕೆ ಸಿಕ್ಕ ಮದ್ಯಂತರ ಪರಿಹಾರವನ್ನೇ ಬರ್ಥ್ ಡೇ ಬಾಯ್ ಆಡ್ವಾಣಿಗೆ ಕರ್ನಾಟಕ ಕೊಟ್ಟ ವಿಶೇಷ ಉಡುಗೊರೆ ಅಂತ ಕರೆಯಲಾಯಿತು. ಅದರ ನೆನಪಿಗೆ ಕತ್ತರಿಸಿದ ಕೇಕ್ ಅನ್ನು ಎಲ್ಲರಿಗೂ ತಿನ್ನಸಲಾಯಿತು. ಅದು ಜೀರ್ಣವಾಯಿತಾ... ಅಜೀರ್ಣವಾಗಿದೆಯಾ ಕಾದು ನೋಡಬೇಕು.
ಇನ್ನೊಂದು ಕಡೆ ಜಿನ್ನಾ ಬಗ್ಗೆ ಪುಸ್ತಕ ಬರೆದ ಒಂದೆ ಅಫರಾದಕ್ಕೆ ಪಕ್ಷದಿಂದ ಉಚ್ಚಾಟನೆ ಗೊಂಡ ಜಸ್ವಂತ್ ಸಿಂಗ್ ಸಿಕ್ಕ ಶಿಕ್ಷೆ ಮತ್ತು ಗಣಿ ರೆಡ್ಡಿಗಳು ಪಕ್ಷವನ್ನೇ ಹೈಜಾಕ್ ಮಾಡಿ ಹೈಕಮಾಂಡ್ ಬಂಡವಾಳ ಬಯಲಾಗಿಸಿ ನಂಗಾ ಮಾಡಿದ ಪ್ರಕರಣದಲ್ಲಿ ಸಿಕ್ಕ ಉಡುಗೊರೆ ಬಗ್ಗೆ ಯೋಚಿಸುತ್ತಾ ಏನೂ ಅರ್ಥವಾಗದೇ ನಾನು ದಂಗಾಗಿದ್ದೇನೆ.
ಜೈ ಬಿಜೆಪಿ.

Wednesday, September 23, 2009

'ಅರ್ಧ ದೆಲ್ಲಿಯ ಮಾಲೀಕ'

ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲಾ ಬಿಡ್ರಿ, ಅದೆಲ್ಲಾ ಯಾಕೆ ಅಂತ ಅನ್ನುತ್ತೀರೇನೋ...

ಪತ್ರಕರ್ತ, ಇತಿಹಾಸಕಾರ, ಸಾಹಿತಿ ಹೀಗೆ ಏನೆಲ್ಲಾ ಆಗಿರುವ ಖುಷ್ವಂತ್ ಸಿಂಗ್ ರ ಅಪ್ಪ ಶೋಭಾ ಸಿಂಗ್ ನ್ಯೂಡೆಲ್ಲಿ ಅಂತ ಕರೆಯಲ್ಪಡುವ ದೆಹಲಿಯ ಪ್ರಮುಖ ಆಕರ್ಷಣೆಗಳಾಗಿರುವ ರಾಷ್ಠ್ರಪತಿ ಭವನ(ಕೆಲವು ಭಾಗ), ಇಂಡಿಯಾಗೇಟ್, ಕನ್ನಾಟ್ ಪ್ಲೇಸ್ , ರೆಡ್ ಕ್ರಾಸ್ ಬಿಲ್ಡಿಂಗ್, ಸೌಥ್ ಬ್ಲಾಕ್ ಸೇರಿದಂತೆ ಹತ್ತಾರು ಹಲವು ಆಕರ್ಷಣೀಯ ಸ್ಮಾರಕಗಳು ಮತ್ತು ಕಟ್ಟಡ ನಿರ್ಮಾಣಗಳ ಕಂಟ್ರಾಕ್ಟರ್ ಆಗಿದ್ದವರು.

1911 ರಲ್ಲಿ ಆಗಿನ ವೈಸ್ ರಾಯ್ ಸರ್ಕಾರ ಕಲ್ಕತ್ತಾದಿಂದ ದೆಹಲಿಗೆ ರಾಜದಾನಿ ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಾಗ ಇಂಗ್ಲೇಂಡಿನಲ್ಲಿ ಹೆಸರುವಾಸಿಯಾಗಿದ್ದ, ಎಡ್ವಿನ್ ಲೂಟಿಯಾನ್, ಮತ್ತು ಹಬ್ಬರ್ ಬೇಕರ್ ಎಂಬ ಆರ್ಕಿಟೆಕ್ಚ್ ಗಳನ್ನು ಕರೆಸಿ ಹೊಚ್ಚ ಹೊಸ, ಅದ್ಬುತ ರಾಜಧಾನಿ ಕಟ್ಟುವ ಸೂಚನೆ ನೀಡಿದರು. ಅದರ ನಿರ್ಮಾಣದ ಗುತ್ತಿಗೆ ಸಿಕ್ಕಿದ್ದು ತಂದೆ ಮಕ್ಕಳಾದ ಸುಜಾನ್ ಸಿಂಗ್ ಮತ್ತು ಶೋಭಾ ಸಿಂಗ್ ಗೆ. ಸುಜಾನ್ ಸಿಂಗ್ ಹಿಂದಿನಿಂದಲೂ ಹೆಸರುವಾಸಿ ಕಂಟ್ರಾಕ್ಟರ್ ಆಗಿದ್ದರಂತೆ.

ಈಗಿನ ರಾಷ್ಠ್ರಪತಿ ಭವನ ಕಟ್ಟಿದ್ದು ಆಗಿನ ವೈಸ್ ರಾಯ್ ವಾಸಕ್ಕಾಗಿ, ಸೌಥ್ ಬ್ಲಾಕ್ ನಾರ್ಥ್ ಬ್ಲಾಕ್, ಎಲ್ಲವೂ ನಿರ್ಮಾಣವಾಗಿದ್ದು ಬ್ರಿಟೀಷರ ಸೌಖ್ಯಕ್ಕಾಗಿಯೇ, ರಾಷ್ಠ್ರಪತಿ ಭವನ ನಿರ್ಮಾಣಕ್ಕೆ 17 ವರ್ಷ ಹಿಡಿಯಿತು, ಬಹುಶ ಆಂಗ್ಲರಿಗೆ ತಾವು ಒಂದಲ್ಲಾ ಒಂದು ದಿನ ಭಾರತವನ್ನು ಬಿಟ್ಟು ಮನೆಗೆ ನಡೆಯಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಗುಲಾಮಿ ಬಾರತದಲ್ಲಿ ತಮ್ಮ ಅಧಿಕಾರ ನಿರಂತರ ಎಂಬ ಕಲ್ಪನೆ ಇದ್ದಿದ್ದರಿಂದಲೇ ಬ್ರಿಟೀಷರು ಇಂತಹ ನಿರ್ಮಾಣಕ್ಕೆ ಕೈ ಹಾಕಿದ್ದರು ಎನ್ನಲಾಗುತ್ತದೆ.340 ವಿವಿಧ ಹಾಲ್ ಗಳುಳ್ಳ ರಾಷ್ಠ್ರಪತಿ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ ರಾಷ್ಟ್ರಪತಿ ಭವನ ನಿರ್ಮಾಣಕ್ಕೆ ತಗುಲಿದ ವೆಚ್ಚ 14 ಮಿಲಿಯನ್ ಪೌಂಡ್ ಗಳು. ರಾಷ್ಠ್ರಪತಿ ಭವನದ ಕ್ಲೀನಿಂಗ್ ನಿಂದ ಹಿಡಿದು ಉಸ್ತುವಾರಿ ತನಕ ಎಲ್ಲಕ್ಕೂ 2000 ಮಂದಿ ಕೆಲಸಕ್ಕೆ ಇದ್ದರಂತೆ.

ರಾಷ್ಠ್ರಪತಿ ಭವನ ಮತ್ತು ಹೊಸ ದೆಹಲಿಯ ಪ್ರಮುಖ ಪ್ಲಾನರ್ ಆಗಿದ್ದ ಎಡ್ವಿನ್ ಲೂಟಿಯಾನ್ ಗೆ ವೈಸ್ ರಾಯ್ ಭವನ ನಿರ್ಮಾಣಕ್ಕೆ ಭಾರತೀಯ ಶೈಲಿ ಬಳಸಲು ಕೊಂಚವೂ ಇಷ್ಟ ಇರಲಿಲ್ಲವಂತೆ ಆದರೆ ಆಗಿನ ವೈಸ್ ರಾಯ್ ಹಾರ್ಡಿಂಗ್ ಕನಿಷ್ಠ ವೈಸ್ ರಾಯ್ ಮನೆಯ ಹೊರ ವಿನ್ಯಾಸವಾದರೂ ಭಾರತೀಯ ಶೈಲಿಯಲ್ಲಿರಬೇಕು ಎಂದು ಪಾರ್ಮಾನು ಹೊರಡಿಸಿದ್ದರಿಂದ ಹೊರವಿನ್ಯಾಸ ದೇಸಿ, ಒಳವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿದೆ.

ಖುಷ್ವಂತ್ ಸಿಂಗರ ಅಪ್ಪ ಶೋಭಾ ಸಿಂಗ್ ನನ್ನ(ಆದಾ ದಿಲ್ಲಿ ಕಾ ಮಾಲಿಕ್) ಅರ್ಧ ಡೆಲ್ಲಿಯ ಓಡೆಯ ಅಂತ ಕರೆಯುತ್ತಿದ್ದರಂತೆ, ಆಗಿನ ಕಾಲಕ್ಕೆ ದೇಶದಲ್ಲೇ ಶ್ರೀಮಂತನಾಗಿದ್ದ ಆತ ಪ್ರತಿ ಅಡಿ ಜಮೀನಿಗೆ 2 ರೂಪಾಯಿ ರೇಟಿಗೆ ಅರ್ಧ ದೆಹಲಿಯನ್ನೇ ಕೊಂಡುಕೊಂಡಿದ್ದನಂತೆ.

ನಾನು ದೆಹಲಿಗೆ ಬಂದು ಇನ್ನೇನು ಒಂದು ವರ್ಷ ಆಗುತ್ತಾ ಬರುತ್ತಿದೆ, ಬಂದ ದಿನದಿಂದ ಇಲ್ಲಿಯವರೆಗೆ ದೆಹಲಿ ಎಂಬ ಬೆಡಗನ್ನು ಬೆರಗಿನಿಂದ ನೋಡುತ್ತಾ ಇದ್ದೇನೆ, ಯಾಕಪ್ಪಾ ಇದೇ ಊರನ್ನು ಕ್ಯಾಫಿಟಲ್ ಸಿಟಿ ಮಾಡಿದರು ಅನ್ನುವುದರಿಂದ ಹಿಡಿದು. 10 ಜನಪತ್ ನ ವೈಶಿಷ್ಠ ಏನು, ಚಾಂದಿನಿ ಚೌಕ್ ನಲ್ಲಿ ವಿಶೇಷವಾಗಿ ಏನು ಸಿಗುತ್ತೆ ಅನ್ನುವ ತನಕ ಕುತೂಹಲದಿಂದ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿಕೊಂಡಿದ್ದೇನೆ. ಕೆಲವಕ್ಕೆ ಉತ್ತರ ಸಿಕ್ಕಿವೆ ಇನ್ನು ಕೆಲವಕ್ಕೆ ಸಿಕ್ಕಿಲ್ಲ
ಇಂತಹ ಹಲವು, ವೈಶಿಷ್ಠ್ಯಗಳನ್ನು, ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಿದೆ.

Sunday, September 6, 2009

ಉಳ್ಳವರು ಆಗುವರೇನಯ್ಯಾ....?



ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪತ್ರಕರ್ತರು ಜೀವಮಾನ ಪೂರ್ತಿ ಪ್ರಶ್ನೆ ಹಾಕಿಕೊಂಡೇ ಮಜವಾಗಿ ಇರ್ತಿರಿ ಅಂದ. ನಾನು ನಕ್ಕು 'ಹೌದು ಅನೀಲ್ ಪತ್ರಕರ್ತರಿಗೆ ಸಿಗೋ ಅತಿದೊಡ್ಡ ಸೌಭಾಗ್ಯವೇ ಪ್ರಶ್ನೆ ಹಾಕೋದು. ಈ ವೃತ್ತಿಯಿಂಜ ಕನಿಷ್ಟ ನಮ್ಮ 'ಇಗೋ' ನಾದರೂ ತೃಪ್ತಿಯಾಗುತ್ತೆ' ಅಂದೆ. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್ 'ಮೊನ್ನೆ ದೆಹಲಿಗೆ ಬಂದಿದ್ದಾಗ ನೋಡಿದೆ ಕಣಪ್ಪಾ, ನೀನು ಕ್ಯಾಬಿನೆಟ್ ಧರ್ಜೆಯ ಮಂತ್ರಿಯೊಬ್ಬನಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಏನ್ರೀ ಸಮಾಚಾರ ಅಂತ ಕೇಳಿದ್ದು' ಅಂದ. ಅದಕ್ಕೆ ನಾನು ಹೇಳಿದೆ. I am Journalist because I enjoy More Demacracy with in Democracy ' ಅಂಥ.

ಭಾನುವಾರದ ಮುಂಜಾನೆಯೇ ಅನಿಲ್ ನೊಂದಿಗಿನ ನನ್ನ ಸಂಭಾಷಣೆ ನನ್ನೊಳಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಕೆಲವಕ್ಕೆ ಉತ್ತರ ಸಿಗದೆ ಗೊಂದಲಕ್ಕೆ ಬಿದ್ದೆ ಅವನ್ನ ಇಲ್ಲಿ ಹರವಿದ್ದೇನೆ.

ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ?
ಯಾರಾದರೂ ರಾಜಕಾರಣಿಗಳ ಮಕ್ಕಳು ಪತ್ರಕರ್ತರು ಇದ್ದಾರಾ?
ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರು ಆಗಿದ್ದಾರಾ?
ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ ?
ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರು ಆಗಿದ್ದಾರ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆಯನ್ನನನಗೆ ನಾನೇ ಕೇಳಿಕೊಂಡೆ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಬಲ್ಲ, ನನಗೆ ಗೊತ್ತಿರುವ ವಲಯದಲ್ಲಿ ಯಾರೂ ಅಂತಹವರು ಇರುವುದು ನನಗೆ ಗುರುತು ಸಿಗಲಿಲ್ಲ.
ಕಡೆಗೆ ನಾನು ಓದಿದ ಕಾಲೇಜುಗಳಲ್ಲಿ ಜರ್ನಲಿಸಂ ಅನ್ನು ನನ್ನ ಜೊತೆಗೆ ಕಲಿತವರನ್ನು, ವೃತ್ತಿಯ ಬಗ್ಗೆ ಒಂತರಾ ಪ್ಯಾಸಿನೇಟ್ ಆಗಿದ್ದವರ ಬಗ್ಗೆ ಯೋಚಿಸಿದೆ. ಬಹುತೇಕರು ಇಲ್ಲಿ ಸಿಗುವ ಅನುಭವಕ್ಕಾಗಿ ಕೆಲಕಾಲ ಕೆಲಸ ಮಾಡಿ ಬೇರೆ ಕೆಲಸ ಹುಡುಕಿಕೊಂಡರು. ಮತ್ತೆ ಕೆಲವು ಹುಡುಗಿಯರು ವಿದೇಶಗಳಲ್ಲಿ ಕೆಲಸದಲ್ಲಿರುವ ಹುಡುಗರೊಂದಿಗೆ ಮದುವೆಯಾಗಿ ಹೋದರು.

ನನ್ನ ಖಾಸಗಿ ವಲಯದಲ್ಲಿ ಅನುಭವಕ್ಕೆ ಬಂದತೆ ಉಳ್ಳವರು ಮಾದ್ಯಮದ ಉದ್ಯೋಗಗಳಲ್ಲಿ ತೊಡಗುವುದು ಕಡಿಮೆ.
ನಿಮ್ಮ ವಲಯದಲ್ಲಿ ಅಂತವರೂ ಇದ್ದರೂ ಇರಬಹುದು. ಆದರೆ ಅಂತಹ ಉದಾಹರಣೆಗಳು ತೀರಾ ಕಡಿಮೆ ಅನ್ನೊದು ನನ್ನ ನಂಬಿಕೆ.

ಯಾಕೆ ಹೀಗೆ, ಪತ್ರಕರ್ತರು ಕೇವಲ ಬಡವರು, ಮದ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ. ವ್ಯವಸ್ಥೆಯ ಮೇಲೆ ಕೋಪ ಬೇರೆಯವರಿಗೆ ಯಾಕೆ ಬರೋದಿಲ್ಲಾ ಅಂಥ. ಈ ಸಮಾಜ ಎಲ್ಲರಿಗೂ ಸೇರಿದ್ದು ಅಲ್ಲವಾ. ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು,
ಆದರೆ ಇವರೇ ಶ್ರೀಮಂತರು, ಮಾದ್ಯಮದ ಉದ್ಯಮಿಗಳಾಗುತ್ತಾರೆ ಯಾಕೆ,

ಇವತ್ತು ಸಣ್ಣದೊಂದು ಮಾದ್ಯಮ ಸಂಸ್ಥೆಯನ್ನು ಹುಟ್ಟುಹಾಕುವುದೂ ನೂರಾರು ಕೋಟಿ ವಿಚಾರ. ಬಡ ಉದ್ಯೋಗಿಗಳು ಇಂತಹ ಸಾಹಸ ಮಾಡುವುದು ಸಾದ್ಯವಾ ಹೇಳಿ, ಸತ್ಯ, ನಿಷ್ಠೆ. ಪ್ರಾಮಾಣಿಕತೆ, ಇವೆಲ್ಲವೂ ಈಗ ಅಶಕ್ತರ ಸ್ವತ್ತುಗಳಾಗಿ ಬದಲಾಗಿದ್ದಾರೂ ಹೇಗೆ. ಯಾವ ಮಾದ್ಯಮದ ಒಡೆಯ ತನ್ನ ಪತ್ರಿಕೆಯ ನೌಕರ ಇಂತ ಕೆಲಸ ಮಾಡಿದ್ದಾನೆ, ಎಷ್ಟು ದೊಡ್ಡ ವ್ಯಕ್ತಿಗೆ ಪ್ರಶ್ನೆ ಕೇಳಿ ದಬಾಯಿಸಿದ್ದಾನೆ ಎಂಬ ಕಾರಣಕ್ಕಾಗಿ ಭಲೆ, ವರದಿಗಾರ ಭಲೆ ಅಂತ ಬೆನ್ನು ತಟ್ಟುತ್ತಾನೆ ಹೇಳಿ.

ಹಾಗೆ ನೋಡಿದರೆ ಮಾದ್ಯಮದಲ್ಲಿ ದುಡಿಯುವ ಮಂದಿಗೆ ಪತ್ರಿಕೋದ್ಯಮ ಆದರ್ಶವಾಗಿದ್ದರೂ, ಅದರ ಓಡೆಯರಿಗೆ ಅದೊಂದು ಲಾಭ ತರುವ ಉದ್ಯಮ ಮಾತ್ರ ಆಗಿರಲಿಕ್ಕೆ ಸಾಕು. ನಮ್ಮೆಲ್ಲ ಪತ್ರಕರ್ತರ ಸತ್ಯ ಆದರ್ಶ, ನಿಷ್ಟೆ, ಸಾಮಾಜಿಕ ಜವಾಬ್ಧಾರಿ, ಎಲ್ಲವೂ ಕೂಡ ಮಾದ್ಯಮ ಉದ್ಯಮಿಯೊಬ್ಬನ ಬಂಡವಾಳದ ಒಂದು ಬಾಗ ಆಗಿರುತ್ತದೆ, ಎಷ್ಟೊಂದು ಒಳ್ಳೆಯ, ಚುರಾಕಾದ, ಪ್ರಕಾಂಡ, ಬುಂದಿವಂತ ಪತ್ರಕರ್ತರು ಇದ್ದಾರೆ ಅನ್ನೊದು ಆಯಾ ಮಾದ್ಯಮದ ಬಂಡವಾಳದ ಪರಿದಿಯಲ್ಲೆ ಅಡಗಿದೆ ಅನಿಸುತ್ತದೆ.

ಕಾನೂನಿನ ಪ್ರಕಾರ ಯಾರೊಬ್ಬರಿಗೂ ಪತ್ರಿಕಾ ಉದ್ಯಮದಲ್ಲಿ ತೊಡಗುವ ಸ್ವಾತಂತ್ರ ಇದೆ, ಆದರೂ ಅದು ವಾಸ್ತವ ಸುಲಭದ ಸಂಗತಿ ಅಲ್ಲ ಅನ್ನೊದನ್ನ ಬಹುತೇಕರು ಒಪ್ಪುವ ಸಂಗತಿ. ಪತ್ರಿಕೊದ್ಯಮವನ್ನು ನೊಬೆಲ್ ಪ್ರೊಫೆಷನ್ ಅನ್ನುವ ಕಾಲ ಕಳೆದು ಹೊಗಿದೆ ಅಂತ ಅನಿಸುತ್ತೆ. ಗಾಂಧಿ, ಅಂಬೇಡ್ಕರರು ಪತ್ರಿಕೊದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡ ಕಾಲ ಮತ್ತೆ ಬರುತ್ತದಾ ಅನ್ನೊ ಅನುಮಾನಗಳು ಇವೆ.

ಸಮಾಜದ ಅಶಕ್ತರು, ಬಡವರು, ಮದ್ಯಮ ವರ್ಗದವರಿಗೆ ಮಾತ್ರ ಪತ್ರಿಕೊದ್ಯಮವೊಂದು ಪ್ರಭಾವಿ ನೌಕರಿ ಅನ್ನಿಸುತ್ತಿದೆ, ಬೇರೆ ಯಾರಿಗೂ ಅಲ್ಲ ಅನ್ನೊದು ನನ್ನ ಬಲವಾದ ನಂಬಿಕೆ, ಬಹುಶ ನಿಮಗೂ ಹಾಗೆ ಅನ್ನಿಸುತ್ತೆ ಅನ್ನೊದು ನನ್ನ ಗ್ರಹಿಕೆ.
ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ, ನಮ್ಮೊಂದಿಗೆ ನಿಂತು, ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಅವತ್ತು ಮಾದ್ಯಮ ವೃತ್ತಿಯನ್ನ ಆದರ್ಶದ ವೃತ್ತಿ ಅಂತ ನಾವೆಲ್ಲ ಒಪ್ಪಬಹುದೇನೋ......!!

Tuesday, September 1, 2009

ಕಡೇ ಗುಳಿಗಿ.



ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ಒಳಗಾದಂತೆ ಅನ್ನಿಸುವ ಸಮಯಕ್ಕೆ ಮತ್ತೆ ಬಿಜೆಪಿಯಲ್ಲಿ ಎದ್ದ ಅಂತರಿಕ ಕಲಹದಿಂದ ಮತ್ತೆ ರಾಜಕೀಯ ರಂಗೇರಿತ್ತು.

ಈಗ ಎಲ್ಲೆಲ್ಲೂ ಬಿಜೆಪಿಯದೇ ಸುದ್ದಿ, ಹೇಗಿದ್ದ ಪಕ್ಷಕ್ಕೆ ಏನಾಯ್ತಪ್ಪ ಅನ್ನೋ ಚರ್ಚೆ.

ಚುನಾವಣೆಗಳಲ್ಲಿ ಸೋತ ಪಕ್ಷದಲ್ಲಿ ಇಂತ ಪ್ರಕ್ರಿಯೆಗಳು ಆಗೋದು ಸಹಜ. ಸೋತಾಗಲೇ ವಾಸ್ತವ ಗೊತ್ತಾಗೋದು ಅನ್ನೊದಕ್ಕೆ ಈಗಿನ ಬಿಜೆಪಿಯೇ ಉದಾಹರಣೆ, ಹೊಟ್ಟೆ ಒಳಗಿನ ಕ್ಯಾನ್ಸರ್ ಎಷ್ಠು ದಿನಾ ಅಂಥ ಗೊತ್ತಾಗದೇ ಇರುತ್ತೇ ಹೇಳಿ.

ಮೊದಲೇ ಮಸಾಲ ಸುದ್ದಿಯೇ ಇಲ್ಲದೆ ಬೇಜಾರಾಗಿದ್ದ ಮೀಡಿಯಾಗಳಿಗೆ ಈಗ ಬಿಜೆಪಿ ಒಳ್ಳೇ ಅಹಾರ ಒದಗಿಸುತ್ತಿದೆ. ಸ್ವೈನ್ ಪ್ಲೂ ಭೂತವನ್ನು ಸಿಕ್ಕಾಪಟ್ಟೆ ದುರುಪಯೋಗ ಮಾಡುತ್ತಿದ್ದ ಮಾದ್ಯಮಗಳ ಕಣ್ಣು, ಜಸ್ವಂತ್ ಸಿಂಗ್ ಬಿಟ್ಟ ಜಿನ್ನಾ ಭೂತದ ಕಡೆಗೆ ಹೊರಳಿದ್ದು ಒಳ್ಳೆಯದೇ ಆಯ್ತು ಅನ್ನಿ.

ಬಿಜೆಪಿ ಚುನಾವಣೆಗಳಲ್ಲಿ ಅಕರಾಳ ವಿಕರಾಳವಾಗಿ ಸೋತಾಗಲೇ, ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನ ಟೇಕ್ ಓವರ್ ಮಾಡುತ್ತೆ ಅನ್ನೊ ಚರ್ಚೆ ಎದ್ದಿತ್ತು. ಆದರೆ ಅದನ್ನ ಈಗ ಆರ್ ಎಸ್ ಎಸ್ ಈಗ ಮಾಡುತ್ತಿದೆ. ಹಾಗೆ ಮಾಡೋದರಲ್ಲಿ ತಪ್ಪೇನು ಇರಲಾರದು. ಆದರೆ ಎಲ್ಲವನ್ನೂ ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತಲೇ, 'ಸಂಘಕ್ಕೊ ಬಿಜೆಪಿಗೂ ಸಂಭಂದವಿಲ್ಲ', 'ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ರಾಜಕೀಯ ಮಾಡೋಲ್ಲ' ಅಂತೆಲ್ಲಾ ಪುಂಗಿ ಊದಿದರೇ ಆಗೋ ಲಾಭ ಅದೇನೋ ನನಗೆ ತಿಳಿಯೋಲ್ಲ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಚುನಾವಣೆಗಳು ಮುಗಿದ ಮೂರು ತಿಂಗಳಿಗೆ ಪಕ್ಷದಲ್ಲಿ ಅಂತರಿಕ ಕಲಹ ಬೀದಿಗೆ ಬಂದಿರೋದು ಕಾಂಗ್ರೆಸ್ ಪಾಲಿಗೆ ಕೆಟ್ಟ ಬೆಳವಣಿಗೆಯೇ ಸರಿ. ಮುಂದೆ ಚುನಾವಣೆಗಳು ಬರೋದು ಐದು ವರ್ಷಕ್ಕೆ ಆದರಿಂದ ಈಗಲೇ ಅಂತರಿಕ ಬಿಕ್ಕಟ್ಟು ಶಮನವಾಗಿ ಬಿಜೆಪಿ ಪಕ್ಷ ಚೇತರಿಸಿಕೊಂಡು ಮತ್ತೆ ಪ್ರಭಲ ಆಗಬಹುದು.

ಅದೆಲ್ಲ ಒತ್ತಟ್ಟಿಗೆ ಇರಲಿ, ಬಿಜೆಪಿ ಪಕ್ಷ ಮೀಡಿಯಾ ಕ್ರಿಯೇಟೆಡ್ ಪಕ್ಷ ಅದನ್ನ ಮೀಡಿಯಾದವರೇ ಹಾಳುಮಾಡುತ್ತಾರೆ ಅಂತ ಹೇಳುತ್ತಾರೆ. ಹಿಂದೊಮ್ಮೆ ಅರುಣ್ ಶೌರಿಯೇ ಬಿಜೆಪಿ ಪಕ್ಷ ಆರು ಜನ ಪತ್ರಕರ್ತರಿಂದ ನಿಯಂತ್ರಿಸಲ್ಪಡುತ್ತಿದೆ ಅಂತ ಟೀಕೆ ಮಾಡಿದ್ದರು. ಹಾಗೆ ನೊಡಿದರೆ ಬಿಜೆಪಿಯಲ್ಲಿದ್ದಷ್ಟು ಮಾಜಿ ಪತ್ರಕರ್ತರು, ಅಥವಾ ನ್ಯೂಸ್ ರೂಂಗಳಲ್ಲಿ ಕುಳಿತೇ ಬಿಜೆಪಿಯನ್ನು ಅಂತರಸಾಕ್ಷಿಯಿಂದ ಬೆಂಬಲಿಸುವ ಪತ್ರಕರ್ತರು ದೇಶದ ಯಾವ ಪಕ್ಷಕ್ಕೂ ಇರಲಿಕ್ಕಿಲ್ಲ. ಆರ್ ಎಸ್ ಎಸ್ ಮೂಲದಿಂದ ಬಂದ ಸಾವಿರಾರು ಮಂದಿ ಸುದ್ದಿ ಮನೆಗಳಲ್ಲಿ ಕುಳಿತು ಸದ್ದಿಲ್ಲದೆ ಸುದ್ದಿ ಮಾಡುತ್ತಾರೆ.

ಅದಕ್ಕೆ ನನಗೆ ಸಿಕ್ಕ ಸಾಕ್ಷ ಏನಪ್ಪಾ ಅಂದರೆ, ಮೊನ್ನೆ ಬಿಜೆಪಿಯಲ್ಲಿ ಗದ್ದಲ ತೀರ್ವಗೊಂಡಿದ್ದಾಗ ಪತ್ರಕರ್ತ ಮಿತ್ರನೊಬ್ಬನ ಮೊಬೈಲ್ ಗೆ ಆರ್ ಎಸ್ ಎಸ್ ಕೇಂದ್ರ ಕಚೇರಿಯಿಂದ ಒಂದು ತುರ್ತು ಸಂದೇಶ ಬಂತು.
ಸಂದೇಶ ಏನಪ್ಪಾ ಅಂದರೆ. 'ಎಲ್ಲಾ ಸ್ವಯಂ ಸೇವಕ ಪತ್ರಕರ್ತರೂ ಸಂಜೆ 3 ಗಂಟೆಗೆ ಸಂಘದ ಕಚೇರಿಗೆ ಬನ್ನಿ ಬಹುಮುಖ್ಯವಾದ ವಿಷಯ ಚರ್ಚಿಸಬೇಕಿದೆ' ಅಂತ.

ನನಗಂತೂ ಸಂದೇಶ ನೋಡಿ ಅಚ್ಚರಿಯಾಯ್ತು, ಹೇಗೆ ಆರ್ ಎಸ್ ಎಸ್ ಕಬಂದಬಾಹುಗಳು ಹರಡಿವೆ ಅಂತ ಯೋಚಿಸುವಂತಾಯಿತು. 'ಸ್ವಯಂ ಸೇವಕ' ಪತ್ರಕರ್ತರಿಗೆ ಆರ್ ಎಸ್ ಎಸ್ ಪಂಡಿತರು ಏನೇನು ಹೇಳಿದರು, ಕಲಿಸಿಕೊಟ್ಟರು ಅನ್ನೊ ಕುತೂಹಲ ಈಗ ನನಗೆ ಹೆಚ್ಚಾಗಿದೆ. ಸ್ವಯಂ ಸೇವಕರು ಅದನ್ನೆಲ್ಲಾ ಬಿಚ್ಚಿ ಹೇಳುತ್ತಾರಾ ಗೊತ್ತಿಲ್ಲ.

ಕಡೇ ಗುಳಿಗಿ.
ಕೆಲವರು ಬೆಳೆಯುತ್ತಾ ಬೆಳೆಯುತ್ತಾ ಚಡ್ಡಿ ಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೇ ಹುಟ್ಟಿರುತ್ತಾರೆ...!!

Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

ಉತ್ತರ ಪ್ರದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.

ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.

ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.


ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.
ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,
ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.
ಜವಹರ್ ಲಾಲ್ ರೋಜಗಾರ್ ಯೋಜನೆ.
ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.
ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ
ಅನ್ನೊದು ಸೂರ್ಯಪ್ರಕಾಶ್ ವಾಧ.

ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.

ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.

ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.
ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.
ಲಿಂಕ್ ಇಲ್ಲಿವೆ.
http://www.asuryaprakash.com/



Wednesday, August 12, 2009

'ಡಾನ್ ಆಪ್ ಪಾವರ್ಟಿ’


ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು. ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!

ಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಏಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಭಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿಧಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ 'ಪ್ರದಾನ್' ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಬಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು. ಅವರ ಸಂದರ್ಶನವನ್ನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.

ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಖಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು. ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಆದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಬಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.

ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಬನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. 'For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.
' ಅಂತ.
ದೀಪ್ ಅವರ 'ಪ್ರದಾನ್ 'ನಲ್ಲಿ ಯಾರೂ ಸ್ವಯಂ ಸೇವಕರಲ್ಲ. ಅಲ್ಲಿ ಎಲ್ಲರೂ ನೌಕರರೇ... ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರದಾನ್ ಕ್ಯಾಂಪಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಎಂ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗಿ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ. ಸದ್ಯಕ್ಕೆ ಒಂದು ಸಾವಿರ ಮಂದಿಯನ್ನು ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ
ಅಂದರೆ ನಂಬಲಾಗುತ್ತಿದೆಯೇ...?

ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಖಂಡ್,ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಇವರ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷಧಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಗಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ವಾಸ್ತವಿಕವಾಗಿ ಉಪಯೋಗಿಸುತ್ತಾರೆ.

ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ, ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಭಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ. ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.

ಪ್ರಶಸ್ತಿ ಬಂದ ನಿಮಿಶಕ್ಕೆ ಅದನ್ನು ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ. ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹೀರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಟು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರದಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ, ಯುವಕರಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆಗೆ ಜೋಶಿ ಸಲಹೆಗಾರರು ಮಾತ್ರ.

ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.
ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು
ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ, ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ, ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದವು..

ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು. ಇಂಟರ್ನೆಟ್ ನಲ್ಲಿ ಹುಡುಕಾಡಿದೆ, ಅಲ್ಲೂ ಮಾಹಿತಿ ಇರಲಿಲ್ಲ. ಕೌಲಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು.
ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಭಾ ಪಾಟೀಲ್ ಒಂದೆರಡು ಸರ್ಕಾರಿ ಹೇಳಿಕೆ ಕೊಟ್ಟರು ಶಹಬಾಶ್ ಅಂದರು ಅಷ್ಟೇ ಮತ್ತೇನಿಲ್ಲ.

ಕಟ್ಟ ಕಡೆಗೆ ನಾನು ಸಂದರ್ಶನದಲ್ಲಿ ಕೇಳಲು ಆಗದೇ ಹೋಗಿದ್ದ, ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ. 'ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ...?' ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ' ಡಾನ್ ಆಪ್ ಪಾವರ್ಟಿ’ ಅಂದೆ. ಅವರು ನಕ್ಕರು.


ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ. www.pradan.net ಮತ್ತು
http://www.rmaf.org.ph/pdf/2-2009-Magsaysay-Awardees.pdf









Saturday, August 8, 2009

ಬಿಡಿ ಬಿಡಿ ಚಿತ್ರಗಳು.


ಮಹಾರಾಜ ಕಾಲೇಜು ಕ್ಯಾಂಟೀನಿನ ಟೆಂಡರನ್ನ ಆ ವರ್ಷ ಕನ್ನೇಗೌಡನ ಕೊಪ್ಪಲಿನ ಗಣೇಶ್ ಎಂಬುವವರೊಬ್ಬರು ಪಡೆದು ಆರಂಭಿಸಿದ್ದರು. ಕ್ಲಾಸಿಗಿಂತಲೂ ರೌಂಡ್ ಟೇಬಲ್ ಕ್ಯಾಂಟೀನಿನನ್ನೇ ಅಡ್ಡಾ ಮಾಡಿಕೊಂಡಿದ್ದ ನಾವು, ದಿನದ ಬಹುತೇಕ ಸಮಯ ಅಲ್ಲೇ ಇರುತ್ತಿದ್ದೆವು.ಕಾಲೇಜಿಗೆ ರಜಾ ಇದ್ದರೂ ಕ್ಯಾಂಟೀನಿನ ಕಡೆ ಹೋಗದೆ ಇದ್ದರೆ ಆ ದಿನ ಯಾಕೋ ಖಾಲಿ ಖಾಲಿ ಅನ್ನಿಸುತ್ತಿತ್ತು. ನಾವು ಅಲ್ಲೇ ಸಾಹಿತ್ಯದ ಚಟ ಹತ್ತಿಸಿಕೊಂಡಿದ್ದು, ಬೇರೆ ಬೇರೆ ಸಬ್ಜೆಕ್ಟ್ ಕಲಿಯುತ್ತಿದ್ದ ಸುನೀಲ್ ಬಾದ್ರಿ, ಸತೀಶ ಶಿಲೆ, ನಂದೀಶ್ ಅಂಚೆ, ವಿನಯ್ ಅವರೆಲ್ಲ ತಾವು ಓದಿಕೊಂಡು ಬಂದಿದ್ದನ್ನೆಲ್ಲಾ ನಾವೆಲ್ಲಾ ಬೆರಗಾಗುವಂತೆ ಹೇಳುತ್ತಿದ್ದರು. ನಾವು ಹುಬ್ಬೇರಿಸಿ ಕೇಳಿಸಿಕೊಳ್ಳುತ್ತಿದ್ದೆವು.

ನಾವಾದರೂ ಓದಿದ್ದಕಿಂತ ಅವರಿವರು ಹೇಳಿದ್ದನ್ನ ಕೇಳಿಯೇ ಪುಸ್ತಕ ಓದಿದ್ದೇವೆ ಅಂತ ತಿಳಿದುಕೊಳ್ಳುತ್ತಿದ್ದೆವು. ಅವರು ಕೋಟ್ ಮಾಡಿದ ವಿಶಯಗಳನ್ನೇ ಕಾಫಿ ಮಾಡಿ, ನಮಗಿಂತ ದಡ್ಡ ಶಿಕಾಮಣಿಗಳಾಗಿದ್ದ ಹಾಸ್ಟೆಲ್ ಹುಡುಗರಿಗೆ ಹೇಳಿ ಗಾಭರಿ ಹುಟ್ಟಿಸುತ್ತಿದ್ದೆವು. ನಾವು ಪ್ರಕಾಂಡ ಪಂಡಿತರೆಂಬಂತೆ ಬೀಗುತ್ತಿದ್ದೆವು.
ನಾನಂತೂ ಕ್ಯಾಂಟೀನ್ ನಡೆಸುತ್ತಿದ್ದ ಗಣೇಶ್ ಗೆ ನಮ್ಮ ಗ್ಯಾಂಗ್ ಕಾಲೇಜಿನಲ್ಲಿ ತುಂಬಾ ನಟೋರಿಯಸ್ ಜೊತೆಗೆ ನಮ್ಮ ಪ್ಯಾಮಿಲಿಯೇ ನಟೋರಿಯಸ್ ಅಂತ ನಂಬಿಸಿ, ಇಲ್ಲಸಲ್ಲದ ಕಥೆಗಳನ್ನೆಲ್ಲಾ ಹೇಳಿದ್ದೆ.. ಅವನು ನಮಗೆ ವಿಪರೀತ ಗೌರವಿಸುತ್ತಿದ್ದ . ದಿನಾಪೂರ್ತಿ ಅವನ ಕ್ಯಾಂಟೀನಿನಲ್ಲಿ ಬೇಕಾದ್ದನ್ನೆಲ್ಲಾ ತಿಂದು, ಕುಡಿದು ಇಪ್ಪತ್ತೋ ಮೂವತ್ತೊ ರೂಪಾಯಿ ಕೊಟ್ಟು ಯಾಮಾರಿಸುತ್ತಿದ್ದೆ.

ಮಹಾರಾಜ ಹಾಸ್ಟೆಲ್ ನಲ್ಲಿ ಕಿಟ್ಟಿ ಎಂಬ ಪೈಲ್ವಾನ್ ಒಬ್ಬ ಮೆಸ್ ನಡೆಸುತ್ತಿದ್ದ. ಹಾಸ್ಟೆಲ್ ನಲ್ಲಿರುತ್ತಿದ್ದ 450 ಹೆಚ್ಚು ಮಂದಿ ಹುಡುಗರನ್ನು ಸಂಬಾಳಿಸೋದು ತೀರಾ ಪ್ರಯಾಸದ ಕೆಲಸವಾಗಿತ್ತು. ಆಗಿನ ಕಾಲಕ್ಕೆ 650 ರೂಪಾಯಿ ಮೆಸ್ ಹಣ ಕಟ್ಚಬೇಕಿತ್ತು ನಾನು ಸೇರಿದಂತೆ ಬಹುತೇಕರು 300 ಅಥವಾ 350 ರೂಪಾಯಿ ಕೊಡುತ್ತಿದ್ದೆವು. ನಮ್ಮ ನಮ್ಮ ಮದ್ಯೆ ಅಗ್ರಿಮೆಂಟ್ ಏನೆಂದರೆ ಊಟ ಚೆನ್ನಾಗಿಲ್ಲಾ ಅಂತ ಗಲಾಟೆ ಎಬ್ಬಿಸಬಾರದು. ಅನ್ನ, ಸಾರು, ಪಲ್ಯಗಳನ್ನ ಚೆಲ್ಲಬಾರದು ಅನ್ನೊದು.
ಆತನ ಊಟ ಎಷ್ಟು ಭಯಾನಕ ಆಗಿರುತ್ತಿತ್ತು ಅಂದರೆ ಅನ್ನ, ಸಾರು, ಪಲ್ಯ ಉಪ್ಪಿನಕಾಯಿ, ಮಜ್ಜಿಗೆ, ಉಪ್ಪು ಎಲ್ಲವನ್ನ ಮಿಕ್ಸ್ ಮಾಡಿಕೊಂಡರೂ ಒಂಚೂರು ರುಚಿ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಯಾವತ್ತಾದರೂ ರುಚಿಯಾಗಿ ಸಾಂಬಾರ್ ಮಾಡಿದ್ದರೆ ಅಡಿಗೆ ಇನ್ ಚಾರ್ಜ್ ಹನುಮಂತನಿಗೆ ಕಿಟ್ಟಿ ಸಿಕ್ಕಾಪಟ್ಟೆ ಭೈಯುತ್ತಿದ್ದ. ಯಾಕಂದರೆ ಅವತ್ತು ಅಕ್ಕಿ ಸಿಕ್ಕಾಪಟ್ಟೆ ಖರ್ಚಾಗಿರುತ್ತಿತ್ತು.

ನಮಗೆ ಪರಿಚಯವಿದ್ದ ಗೆಳೆಯರ ಒತ್ತಾಯ ಮತ್ತು ಆಮಿಶಕ್ಕೆ ಬಿದ್ದು ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ದೃವನಾರಾಯಣ್ ಎಂಬುವರ ಪರ ಪ್ರಾಕ್ಸಿ ಓಟ್ ಹಾಕಲು ಹೋಗಿದ್ದೆವು. ರಾತ್ರಿಯೆಲ್ಲಾ ಪಾರ್ಟಿ ಮಾಡಿದ್ದ ನಮಗೆ ಬೆಳಿಗ್ಗೆ ಕಳ್ಳ ಓಟು ಹಾಕಲು ಸಿಕ್ಕಾಪಟ್ಟೆ ದಿಗಿಲಾಗಿತ್ತು. ಕರೆದುಕೊಂಡು ಹೋಗಿದ್ದ ನಾನೇ ದೈರ್ಯ ಮಾಡಿ ಯಾರೋ ನಾರಾಯಣ ಶಾಸ್ತ್ರಿ ಎಂಬುವರ ಹೆಸರಿನಲ್ಲಿ ಓಟು ಹಾಕಲು ಹೋಗಿದ್ದೆ. ನನ್ನ ಬೆರಳಿಗೆ ಇಂಕು ಹಾಕುವಾಗ ನನ್ನ ಅವರಿಗೆ ಕಾಣುವಂತೆ ಕೈಗಳು ಗಡ ಗಡ ಅಂತ ನಡುಗುತ್ತಿದ್ದವು.ಆದರೂ ಅವರು ಏನೂ ಕೇಳಲಿಲ್ಲ. ನನ್ನ ಗೆಳಯರಿಗೆಲ್ಲಾ ವಾಪಸ್ಸು ಬಂದು ಹೇಳಿದೆ 'ಯಾರೂ ಕೇಳಲ್ಲಾ, ಏನೂ ಆಗಲ್ಲಾ ತುಂಬಾ ಈಸಿ ಕಣ್ರೋ, ನೀವು ಹೋಗ್ರಿ' ಅಂತ. ಎಲ್ಲಾರು ಓಟು ಮಾಡಿ ಬಂದರು. ಅವತ್ತಿನ ಗಡಿಬಿಡಿ ಮತ್ತು ಆತಂಕದಲ್ಲಿ ಸ್ಪಲ್ಪ ದುಡ್ಡು ಕಳೆದುಕೊಂಡಿದ್ದೆ.

ಡಿಗ್ರಿಯ ಮೊದಲ
ವರ್ಷ ನಾನಿದ್ದ ರೂಂ ನಂಬರ್ 105 ರ ಪಕ್ಕ ಮಣಿಪುರದಿಂದ ಬಂದ ನಾಲ್ಕೈದು ಮಂದಿ ಸ್ನೇಹಿತರಿದ್ದರು, ಅವರ ಆಹಾರ ಪದ್ದತಿಯೇ ವಿಚಿತ್ರವಾಗಿತ್ತು, ದಿನದ ಮುಕ್ಕಾಲು ಬಾಗ ಅಡಿಗೆ ಸಿದ್ದಮಾಡಿ ತಿನ್ನೊದರಲ್ಲಿಯೇ ಕಳೆಯುತ್ತಿದ್ದರು. ಮಾಂಸಹಾರ ಅವರಿಗೆ ಸಿಕ್ಕಾಪಟ್ಟೆ ಪ್ರಿಯವಾಗಿತ್ತು. ಮಣಿಪುರಕ್ಕೆ ಹೊಗಿ ಬಂದವರು ಅದೇನೇನೂ ಹುಳಿ ಹುಳಿ ಚೀಪುವ ಕಡ್ಡಿಗಳನ್ನು ತರುತ್ತಿದ್ದರು. ನನಗೂ ಆಗಾಗ ಕೊಡುತ್ತಿದ್ದರು. ನಮ್ಮ ಹಾಸ್ಟೆಲ್ ನಲ್ಲಿರುತ್ತಿದ್ದ ಹತ್ತಾರು ನಾಯಿಮರಿಗಳಲ್ಲಿ ಕೆಲವು ಆಗಾಗ ಕಾಣೆಯಾಗುತ್ತಿದ್ದವು. ಅವು ರಾತ್ರೋರಾತ್ರಿ ಇವರ ಹೊಟ್ಟೆ ಸೇರಿದ್ದವು ಅನ್ನೊ ಗುಸು ಗುಸು ಹಬ್ಬಿತ್ತು.

ಹಾಸ್ಟೆಲ್ಲಿನ ರೂಮುಗಳಲ್ಲಿ ಸೋಪು, ಪೌಡರು, ಪೆನ್ನು, ನೋಟ್ ಬುಕ್ಕು, ಪೇಸ್ಟು ಇಂತಹ ವಸ್ತುಗಳ ಯಾವಾಗಲೂ ಕಾಣೆಯಾಗುತ್ತಿದ್ದವು. ಅವರ ಬಗ್ಗೆ ಇವರು ಇವರ ಬಗ್ಗೆ ಅವರಿಗೆ ಡೌಟು ಬರುವಂತಾಗಿತ್ತು. ರೂಮಿನ ಸಹಬಾಗಿಗಳೇ ಅನುಮಾನ ಪಡುವಂತಾಗಿತ್ತು. ಕಡೆಗೆ ಸೈಕಾಲಜಿ, ಕ್ರಿಮಿನಾಲಜಿ ಓದುತ್ತಿದ್ದ ಸುದಾಕರ್ ಎಂಬ ಹುಡುಗನ ಸೂಟ್ ಕೇಸ್ ನಲ್ಲಿ ಎಲ್ಲಾ ವಸ್ತುಗಳು ಪತ್ತೆಯಾದವು. ಆತ ಅವನ್ನೆಲ್ಲಾ ಊರಿಗೆ ಹೋದಾಗ ತೆಗೆದುಕೊಂಡು ಹೊಗುತ್ತಿದ್ದನಂತೆ. ಒಂದು ಬಾರಿ ಸಿಕ್ಕಿಕೊಂಡಮೇಲೂ ಸುಮ್ಮನಾಗದ ಅವನು ಮತ್ತೊಮ್ಮೆ ಹಾಗೆ ಕದ್ದು ಸಿಕ್ಕಿಕೊಂಡಿದ್ದ.

ಮಹಾರಾಜ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ತುಂಬಾ ಕಮ್ಮಿ ಇತ್ತು 3000 ಹುಡುಗರು 20 ಹುಡುಗಿಯರು ಇರಬೇಕೇನೋ ಕೆಲವೇ ಕೆಲವು ವಿಶಯಗಳಿಗೆ ಮಾತ್ರ ಅಡ್ಮೀಷನ್ ಕೊಡುತ್ತಿದ್ದರು. ಪಾಪ ಆ ಹುಡುಗಿಯರ ಮೇಲೆ ಕಾಲೇಜಿನ ಹುಡುಗರು ಸಿಕ್ಕಾಪಚಟ್ಟೆ ರೂಮರುಗಳನ್ನು ಹಬ್ಬಿಸೋರು, ಗೋಡೆಗಳ ಮೇಲೆ ಏನೇನೋ ಬರೆಯುತ್ತಿದ್ದರು. ಒಬ್ಬೆ ಒಬ್ಬ ಹುಡುಗಿಯನ್ನ ನೂರಾರು ಜನ ಪ್ರೀತಿಸೋರು, ಒನ್ ಸೈಡ್. ಆ ಹುಡುಗಿಯರೆಲ್ಲ ಕಾಲೇಜು ಬಿಡುವಹೊತ್ತಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ಗಟ್ಟಿ ಆಗಿರುತ್ತಿದ್ದರು ಅಂತ ನಂಗೆ ಈಗಲೂ ಅನಿಸುತ್ತೆ.

ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದ ರಘು ಎಂಬ ಗೆಳೆಯನೊಬ್ಬ ಗಣಿತ ಮತ್ತು ಕೆಮಿಸ್ಟ್ರಿಯಲ್ಲಿ ಯಾವಾಗಲೂ 90 ಕ್ಕೂ ಕಡಿಮೆ ಅಂಕ ಪಡೆಯುತ್ತಿರಲಿಲ್ಲ. ಆದ ದಿನಪೂರ್ತಿ ಓದುತ್ತಲೇ ಇರುತ್ತಿದ್ದ. ಆ ವರ್ಷದ ಬೇಸಿಗೆ ರಜಕ್ಕೆ ಆತ ಊರಿಗೇ ಹೋಗಿರಲ್ಲ. ನಾನು ವಾಪಸ್ಸು ಬಂದ ಮೇಲೆ ಆತನನ್ನ ಊಟಕ್ಕೆ ಏನು ಮಾಡ್ತಾ ಇದ್ದೆಯೋ ಅಂತ
ಕೇಳಿದೆ, ಅದಕ್ಕೆ ಅವನು ಹೆಚ್ಚು ಮಾತನಾಡದೇ ಅವನ ಮಂಚದ ಕೆಳಗೆ ನೋಡು ಅಂತ ಸನ್ನೆ ಮಾಡಿದ. ಬಗ್ಗಿ ನೋಡಿದಾಗ ಅಲ್ಲಿ ತಾಂಬೂಲಕ್ಕೆ ಕೊಡುವ ತೆಂಗಿನಕಾಯಿಗಳಿದ್ದವು. ನನಗೆ ಅರ್ಥ ಆಗಲಿಲ್ಲ. ಕಡೆಗೆ ಗೊತ್ತಾಯಿತು, ಅತ ಹುಡುಕಿ ಹುಡುಕಿ ಮದುವೇ ಛತ್ರಗಳಿಗೆ ಹೋಗ್ತಾ ಇದ್ದನಂತೆ... 'ಯಾರಿಗೂ ಸಿಕ್ಕಕೊಳ್ಳಲಿಲ್ಲವೇನೋ. ಅಂದೆ ಅದಕ್ಕೆ ಅವನು 'ಇಲ್ಲ ಕಣಮ್ಮಾ ಗಂಡಿನ ಕಡೆಯವನೂ ಅಂಥ ಹೆಣ್ಣಿನ ಕಡೆಯವರು. ಹೆಣ್ಣಿನ ಕಡೆಯವರು ಗಂಡಿನಕಡೆಯವರೂ ಅಂಥ ಸುಮ್ಮನೇ ಇರ್ತಾರೆ ಯಾರನ್ನೂ ಕೇಳಲ್ಲಾ' ಅಂದ. ನಾನು 'ಯಲಾ ಇವನಾ' ಅಂದು ಕೊಂಡೆ.
ಹೀಗೆ ಮಹಾರಾಜ ಕಾಲೇಜೆಂಬುದು ನನ್ನ ನೆನಪಿನ ಪುಟಗಳಲ್ಲಿ ಹಲವು ಬಿಡಿ ಬಿಡಿ ದಾಖಲಾಗಿ ಹೋಗಿವೆ. ಅವನ್ನ ಆಗಾಗ ಬರೆಯೋಣ ಅಂತ.