Friday, October 1, 2010

ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..




ಶಂಕರಲಿಂಗೇಗೌಡರಿಗೆ ನಕಶಿಕಾಂತ ಕೋಪ ಬಂದಾಗ ಇಲ್ಲಾ ನಕಶಿಕಾಂತ ಮೂಡಿನಲ್ಲಿದ್ದಾಗ ಸಂಸ್ಕೃತ ಬಾಷೆ ಹೊರಡುತ್ತದೆ ಅಂತ ಶಂಕರಲಿಂಗೇಗೌಡರನ್ನು ಬಲ್ಲವರಿಗೆಲ್ಲಾ ಗೊತ್ತು, ಮೊನ್ನೆ ತಮಗೆ ಸಚಿವ ಸ್ಥಾನ ಸಿಕ್ಕದೇ ಹೋದಾಗ ಮಾತನಾಡಿದರಲ್ಲ ಅದು ಆದುನಿಕ ಸಂಸ್ಕೃತ.
ಕಳ್ಳರು, ಸುಳ್ಳರು ಲೋಪರ್ ಗಳಿಗೆ ಇದು ಕಾಲ ನನ್ನ ಬಳಿ ಸೂಟ್ ಕೇಸ್ ಇಲ್ಲ, ಅದಕ್ಕೆ ನನಗೆ ಮಂತ್ರಿಗಿರಿ ಸಿಕ್ಕಿಲ್ಲ. ಅಂತ ಒಳ್ಳೇ ಸಂಸ್ಕೃತ ಶ್ಲೋಕದ ಧಾಟಿಯಲ್ಲಿ ಶಂಕರಲಿಂಗೇಗೌಡರು ತಮ್ಮ ಆಕ್ರೋಶ ಹೊರಹಾಕಿದ್ದು ಟಿವಿಯಲ್ಲಿ ಕಂಡೊಡನೆ ಎಲ್ಲರಿಗೂ ಅಹುದಹುದು ಅಂತ ಅನ್ನಿಸಿರಲಿಕ್ಕೆ ಸಾಕು.

ಹಾಗೆ ನೋಡಿದರೆ ಎಲ್ಲಾ ಕಾಲದಲ್ಲೂ ಕರ್ನಾಟಕದ ರಾಜಕಾರಣಿಗಳು ಭ್ರಷ್ಠಾಚಾರವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಮಾಡಿಕೊಂಡು ಬಂದವರೇ ಇಲ್ಲಿ.. ಯಾರೂ ಸಾಚಾಗಳಲ್ಲ ಅಥವಾ ಅಂತ ಶೀಲವಂತ ರಾಜಕಾರಣ ಜಗತ್ತಿನಲ್ಲಿ ಎಲ್ಲಿಯಾದರೂ ಇದೆ ಅಂತಲೂ ಅನಿಸುವುದಿಲ್ಲ,

ಆದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಈಗಿನ ಸರ್ಕಾರ ಅದ್ಯಾವ ರೀತಿಯಲ್ಲಿ ಜನರ ಮದ್ಯೆ ನಗ್ನವಾಗುತ್ತಿದೆ ಅನ್ನೊದು ಕುತೂಹಲ ಹುಟ್ಟಿಸುತ್ತಿರುವ ಸಂಗತಿ.

ಮೊನ್ನೆ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತನೊಬ್ಬ ತೀರಾ ತಮಾಶಿ ದನಿಯಲ್ಲಿ ಹೇಳುತ್ತಿದ್ದ ಸಾರ್ ದೇವರಾಣೆಗೂ ಮುಂದೆ ಬರೋ ಇನ್ನು ಮೂರು ಸರ್ಕಾರಗಳಿಗೂ ಒಂದೇ ಒಂದು ಕೆಲಸ ಅಂತ ಉಳಿಸ್ತಾ ಇಲ್ಲಾ ಸಾರ್ ಎಲ್ಲಾ ಬಳಿದು ಬಾಯ್ಗೆ ಹಾಕ್ಕೊಂತಾವರೆ, ಯಾವ ಸರ್ಕಾರಿ ಕಚೇರಿಯನ್ನು ರಿನೋವೇಟ್ ಮಾಡದೆ ಬಿಡ್ತಾ ಇಲ್ಲಾ ಸಾರ್, ಕಾಸು ಕಸದಲ್ಲಿ ಇದೆ ಅಂದ್ರೂ ಬಿಡದೇ ಬಾಯಿ ಹಾಕ್ತಾ ಇದಾರೆ. ಕಾಸು ಕೊಟ್ರೆ ಸಿಎಂ ಮನೇಲಿ ನಡೀದಿರೋ ಕೆಲಸನೇ ಇಲ್ಲ.
ನಿಮ್ಗೆ ಯಾವ ಜಾಗ ಬೇಕು ಹೇಳಿ ಡೀ ನೋಟಿಪೈ ಮಾಡಿಸಿಕೊಡ್ತಾರೇ ಅಂದ, ನಾನು ಹೌದಾ ಹಾಗಾದ್ರೆ ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ ಅಂದೆ ಆತ ಸುಮ್ಮನಾದ.

ಸಾಮಾನ್ಯ ಜನರಿಗೆ ಯಾವ ಸರ್ಕಾರದ ಬಗ್ಗೆ ಆದರೂ ಸಣ್ಣ ಕೋಪ, ಅಕ್ರೋಶ ಯಾವಾಗಲೂ ಚಾಲ್ತಿಯಲ್ಲಿರುವುದು ಸಹಜ ಆದರೆ ಈಗಿನ ಸರ್ಕಾರದ ಬಗ್ಗೆ ಸಣ್ಣ ಅಕ್ರೋಶಕ್ಕಿಂತಲೂ ಅಸಹನೆ ಮೂಡುತ್ತ್ರಿದೆ, ಮುಖ್ಯಮಂತ್ರಿಯಾದಿಯಾಗಿ ಕ್ಯಾಬಿನೆಟ್ ನಲ್ಲಿ ಕಳಂಕ ಇಲ್ಲದವರೇ ಇಲ್ಲ ಅನ್ನಬೇಕು ಕಳಂಕ ಹೊತ್ತುಕೊಳ್ಳದೇ ಹೋದವರು ಯೂಸ್ ಲೆಸ್ ಎಂಬ ಪಟ್ಟವನ್ನು ಭದ್ರವಾಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅವರ ಸಹೋದ್ಯೋಗಿಗಳ ಬಗ್ಗೆ ಇರುವ ಸಹನೆ ಕಂಡರೆ ಮುಖ್ಯಮಂತ್ರಿಗಳೂ ಎಲ್ಲದರಲ್ಲೂ ಪಾಲುದಾರರೇ ಇದ್ದಾರೆ ಅಂತ ಡಾಳಾಗಿ ಕಾಣುತ್ತಿದೆ, ಮುಖ್ಯಮಂತ್ರಿಗಳ ಇಬ್ಬರು ಗಂಡು ಮಕ್ಕಳು ಗಾಂಧಿನಗರ, ಕುಮಾರಪಾರ್ಕ್ ನ ಕೆಲವು ಹೋಟೆಲ್ ಗಳಲ್ಲಿ ಟಿಕಾಣಿ ಹೂಡಿ ಸಂಪೂರ್ಣ ಡೀಲಿಂಗ್ ಗಳಲ್ಲಿ ಬಾಗಿಯಾಗಿದ್ದಾರೆ ಎಂಬುದು ರಾಜಕಾರಣಿಗಳ ವಲಯದಲ್ಲಿ ಬಾಯಿಮಾತಿನ ವಸ್ತುವಾಗಿದೆ, ಪಕ್ಷಾತೀತವಾಗಿ ಯಾವ ಪಕ್ಷದವರ ಕೆಲಸಗಳಾದರು ದುಡ್ಡುಕೊಟ್ಟರೆ ಸರಾಗ ಎಂಬುದು ರಾಜಕೀಯದಲ್ಲಿರುವರಿಗೆ ನಿರಾಳ ತರಿಸುತ್ತಿರುವ ವಿಶಯ.

ರಾಜಕಾರಣಿಗೆ ಎಮ್ಮೆ ಚರ್ಮ ಇರುತ್ತೆ ನಿಜ ಆದರೆ ಲೋಕಾಯುಕ್ತರ ಕೈಗೆ ಸಿಕ್ಕಿಕೊಂಡರೂ ನೈತಿಕ ಹೊಣೆ ಅಂತ ಒಂದು ಇದೆ ಎಂಬುದು ಬಿಜೆಪಿಯ ಜನಕ್ಕೆ ಅರ್ಥ ಆಗುವುದಿಲ್ಲ ಅಂದರೆ ಅಚ್ಚರಿಯ ಸಂಗತಿ, ಬಹುಷ ಆರಂಭದಿದಲೂ ಗಣಿ ರೆಡ್ಡಿಗಳಿಂದ ಪ್ರಭಾವಿತರಾಗಿರುವ ಯಡಿಯೂರಪ್ಪ ಸರ್ಕಾರದ ಶಾಸಕರು ಹಣವಿದ್ದರೆ ನಮ್ಮನ್ನು ಯಾರೂ ಏನೂ ಮಾಡುವುದಕ್ಕೆ ಸಾದ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದ್ದಾರೆ, ಅಧಿಕಾರ ಇರುವಷ್ಠು ದಿನ ಆದಷ್ಟು ಲಪಟಾಯಿಸಿ ನಂತರ ಅದೇ ಹಣದಲ್ಲಿ ಚುನಾವಣೆ ಗೆದ್ದರೆ ಆಯಿತಲ್ಲ ಎಂಬ ನಿರ್ದಾರಕ್ಕೆ ಬಂದಂತೆ ಕಾಣುತ್ತೇ, ಯಾಕಂದರೆ ಮಾರ್ಗದರ್ಶನ ಮಾಡಬೇಕಾದವರೇ ಮಾರ್ಗ ಬಿಟ್ಟರೆ ಆಗುವ ಅಪಾಯ ಇಂದು ನಮ್ಮ ಕಣ್ಣ ಮುಂದೇ ಇದೆ. ಕಟ್ಟಾಸುಬ್ರಮಣ್ಯ ನಾಯ್ಡು ಮತ್ತು ಅವರ ಮಗ ನೇರಾ ನೇರಾ ಸಿಕ್ಕಿಕೊಂಡರೂ ಮರ್ಯಾದೆ ಬಿಟ್ಟಂತೆ ಓಡಾಡುತ್ತಿದ್ದಾರೆ.

ಮುಖ್ಯಮಂತ್ರಿಗಳ ಮಗ ಬಿ.ವೈ.ರಾಘವೇಂದ್ರ ಡಿನೋಟಿಪಿಕೇಷನ್ ಹಗರಣದಲ್ಲಿ ಸಿಕ್ಕಿಕೊಂಡರೇ ಅದು ಮುಖ್ಯಮಂತ್ರಿಗಳಿಗೆ ಒಡ್ಡಿರುವ ಅಗ್ನಿ ಪರೀಕ್ಷೆಯಂತೆ, ಇಂತಾ ಅಗ್ನಿ ಪರೀಕ್ಷೆಗಳನ್ನು ಎದುರಿಸೋದು ಅವರಿಗೆ ವಾಡಿಕೆ ಆಗಿರೋದರಿಂದ ಈ ಪರೀಕ್ಷೆಯಿಂದ ಜಯಬೇರಿ ಬಾರಿಸಿಕೊಂಡೇ ಬರತ್ತಾರಂತೆ.ಅಬ್ಬಾಬ್ಬಾ ಕಳೆದ ಮೂರು ವರ್ಷಗಳಿಂದ ನಡೆದ ಸರ್ಕಾರದ ಡ್ರಾಮಾಗಳನ್ನೆಲ್ಲಾ ಯಥಾವತ್ತಾಗಿ ದಾಖಲು ಮಾಡಿದರೆ. ಕೆಲ ವರ್ಷಗಳನಂತರ ಕಾರ್ಟೂನ್ ನೆಟ್ ವರ್ಕ್ಗ್ ಗಳಿಗೆ ಸಕ್ಕತ್ ವಸ್ತುಗಳು,

ಸರ್ಕಾರದಲ್ಲಿ ಯಾರಿಲ್ಲ ಹೇಳಿ, ಮುತ್ತು ಕೊಟ್ಟರೂ ಮಂತ್ರಿಗಳಾದವರು, ರೇಪು ಮಾಡಿದರೂ ಆಸ್ಪತ್ರ್ಯೆಲ್ಲಿ ಇರುವವರು, ಕೈ ಕತ್ತರಿಸುವವರು, ರೌಡಿಗಳು, ಡಾನ್ ಗಳು, ಡೋಂಗಿಗಳು, ಸುಳ್ಳರು, ಸಂಸ್ಕೃತ ಪಂಡಿತರು,ಸಾದ್ವಿಗಳು, ಪುತ್ರ ವ್ಯಾಮೋಹಿಗಳು, ಪರಸ್ತ್ರಿ ಪೀಡಕರು, ಕಳ್ಳರು, ಲೂಟಿಕೋರರು ಎಲ್ಲಾ ಕಲೆಗಳಲ್ಲಿ ಪಾರಂಗತ ರಾದ ಮಂದಿಯ ಒಟ್ಟು ಮೊತ್ತವೇ ಬಿಜೆಪಿ ಸರ್ಕಾರ.

ಆಳುವ ಮಂದಿಯಲ್ಲಿ ಇದ್ದವರೆಲ್ಲ ಬಂಢರಾದರೆ ಪರಿಸ್ಥಿತಿ ಹೇಗಿರುತ್ತೆ ಅನ್ನೊದಕ್ಕೆ ಈ ಸರ್ಕಾರವೇ ಹಸಿ ಹಸಿ ಉದಾಹರಣೆ ವಂಡರ್ ಲ್ಯಾಂಡ್ ಡಿಸ್ನಿಲ್ಯಾಂಡ್ ಎಲ್ಲಾ ಲ್ಯಾಂಡ್ ಇಲ್ಲೇ ಇದೆಯಲ್ಲಾ.

Wednesday, June 9, 2010

ಆರ್ಥಿಕ ತಜ್ಞ ಆರ್.ವಿ.ದೇಶಪಾಂಡೆಗೆ ಪ್ರಧಾನಿ ಹುದ್ದೆ




ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಬದಲಿಗೆ ರಾಷ್ಠ್ರದ ಪ್ರಧಾನ ಮಂತ್ರಿಯಾಗಿ
ನೇಮಿಸಬೇಕೆಂದು ನಾನು ಈ ಮೂಲಕ ಒತ್ತಾಯ ಪಡಿಸುತ್ತೇನೆ. ಯಾಕೆಂದರೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಲ್ಲಬೇಕಾಗಿದ್ದ ಸುಮಾರು ಎಪ್ಪತ್ತೈದು ಲಕ್ಷ ರೂ ಹಣವನ್ನು


ಕೆನರಾ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಸಂಪಾದಿಸುತ್ತಿದ್ದಾರೆ. ಆ ಮೂಲಕ ನೆರೆ ಸಂತ್ರಸ್ತರ ಪಾಲಿನ ಆರಾದ್ಯ ದೈವವಾಗಿ ಹೊರ ಹೊಮ್ಮಿದ್ದಾರೆ.
ಇದೇ ಆದ ವಿಚಾರವನ್ನು ಮುಂದಿಕ್ಕಿಕೊಂಡು, ದೇಶದ ಆರ್ಥಿಕ ಪ್ರಗತಿ ಮತ್ತು ಜನತೆಯ ಭವಿಷ್ಯದ ಭದ್ರತೆ ಹಿತ-ದೃಷ್ಠಿಯಿಂದ ಆರ್ .ವಿ. ದೇಶಪಾಂಡೆ ಅವರನ್ನು ಪ್ರಧಾನಿ ಮಾಡಿ ಪ್ರತಿವರ್ಷ ಬಜೆಟ್
ಮಾಡುವ ಬದಲು ಸರ್ಕಾರದ ಸಾವಿರಾರು ಕೋಟಿ ಹಣವನ್ನು ಬಡ್ಡಿಗೆ ಬಿಟ್ಟು ದೇಶದ ಭವಿಷ್ಯ ರೂಪಿಸುವ ಕನಸುಗಾರ ನಾಯಕ ಅವರಾಗಿದ್ದಾರೆ.

ಆದೂ ಅಲ್ಲದೆ ತಿನ್ನಲು, ಉಡಲು ಬಟ್ಟೆ ಬರೆ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರಿಗೆ ಅತ್ಯಂತ ಮುತುವರ್ಜಿಯಿಂದ ನೆರೆ ಪರಿಹಾರ ನಿಧಿಯಿಂದ ಹಣ ತೆಗೆದು ಟೀಶರ್ಟ್ ಗಳನ್ನು ನೀಡಿ
ಬಡ ಕಾಂಗ್ರೇಸ್ ಸಂಸ್ತ್ರಸ್ತರಿಗೆ ನೆರವಾಗಿದ್ದಾರೆ ಆ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಪಾಲಿನ ಆಶಾಕಿರಣ ಆಗಿದ್ದಾರೆ.
ಅಲ್ಲದೆ ದೇಶದಲ್ಲೇ ಅತ್ಯಂತ ಹಳೆಯ ಮತ್ತು ಬಡ ಪಾರ್ಟಿಯಾದರೂ ಸ್ವಾಬಿಮಾನ ಬಿಡದೇ ಪಾರ್ಟಿ ಕಚೇರಿಯ
ನೌಕರರ ತಿಂಗಳ ಸಂಬಳ ಮತ್ತು ಇತರ ಬಾಬ್ತುಗಳನ್ನು ಪರಿಹಾರ ಸಂಗ್ರಹಿಸಿ ನಿಭಾಯಿಸಿ ಸ್ವಾಭಿಮಾನ ಮೆರೆದಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಪಾರ್ಟಿ ಚೆನ್ನಾಗಿದ್ದರೆ ತಾನೆ ನಾವು ಚೆಂದ, ಪಾರ್ಟಿ ಕಚೇರಿ ಚಂದ್ದಾಗಿದ್ದರೆ ತಾನೆ ಅಂದ, ಅನ್ನುವ ನಿಷ್ಕಲ್ಮಶ ಭಾವನೆಯಿಂದ ಪಾರ್ಟಿ ಕಚೇರಿಗೆ ಟೈಲ್ಸಗಳನ್ನು ಪರಿಹಾರ ನಿಧಿಯಿಂದ
ಹಾಕಿಸಿದ್ದಾರೆ.

ಕಾಂಗ್ರೇಸ ಲೀಡರುಗಳು ಉತ್ತರ ಕರ್ನಾಟಕದ ನೆರೆ ಪೀಡಿತರನ್ನು,ಹಸಿದವರನ್ನು ಖುದ್ದು ಭೇಟಿ ಮಾಡಿ ಅವರನ್ನು ತಮ್ಮ ಅಮೃತ ಹಸ್ತದಿಂದ ನೇವರಿಸಿ ಸಾಂತ್ವನ ಹೇಳಲಿಕ್ಕಾಗಿ ದಶ ದಿಕ್ಕುಗಳಲ್ಲಿ ಪ್ರಯಾಣ ಮಾಡಿದ್ದಾರೆ
ವಿಮಾನ, ಕಾರು ಇತ್ಯಾದಿಗಳಲ್ಲಿ ಸಂಚರಿಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ದೆಹಲಿಗೆ ಕರೆದೊಯ್ದು ಹಸಿದವರ ಪರವಾಗಿ ಲಾಭಿ ಮಾಡಿಸಿದ್ದಾರೆ.

ಖರ್ಚಿಗೆ ಕಾಸಿಲ್ಲದ ಕಾಂಗ್ರೆಸ್ ನಾಯಕರ ಕಿಸೆಗೆ ಭಾರ ಬೀಳಲೇ ಬಾರದು ಅಂಬೋ ಕಾರಣಕ್ಕಾಗಿ ತಾವು ಹಾಗು ತಮ್ಮ ಬಡ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ತೆರಳಿ ಸಂಗ್ರಹಿಸಿದ್ದ ಹಣವನ್ನು ಉತ್ತಮ
ಮನಸಿನಿಂದ ಬಳಸಿದ್ದಾರೆ.

ಬಿಜೆಪಿ ಸರ್ಕಾರದ ವೈಪಲ್ಯಗಳು ಏನು ಎಂಬುದನ್ನು ಯಡಿಯೂರಪ್ಪ ಅವರಿಗೆ ಹೇಳಲು ಭಯ ಪಡುವ ಸಂಸ್ತಸ್ತರಿಗೆ ವಾಕ್ ಸ್ವಾತಂತ್ರ ಇಲ್ಲವೇ ಇಲ್ಲಾ ಎಂಬುದನ್ನು ಅರಿತು ಅವರ ಧನಿಯಾಗಿ ನಿಲ್ಲಲು ತೀರ್ಮಾನಿಸಿ ರಾಜ್ಯದ
ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿ ಧನಿ ಇಲ್ಲದ ಸಂಸ್ತ್ರಸ್ತರ ಧನಿಯಾಗಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದುವರೆದು ಪರಿಹಾರ ನಿಧಿಯಿಂದ ತಾವೂ ಪರಿಹಾರ ಪಡೆದುಕೊಂಡಾಗ ಮಾತ್ರ ಪರಿಹಾರದ ಬೆಲೆ ಏನೆಂಬುದು ಅರಿವಾಗುತ್ತದೆ ಎಂಬುದನ್ನು ಮನಗಂಡು ಪರಿಹಾರದ
ಹಣವನ್ನು ತಾವೂ ಕೊಂಚ ಬಳಸಿಕೊಂಡು ತಮಗಿರುವ ಶ್ರೀಮಂತಿಕೆಯನ್ನು ಶಿಕ್ಷಿಸಿಕೊಂಡಿದ್ದಾರೆ. ಶ್ರೀಮಂತರಾಗಿದ್ದೂ ಬಡವರ ಹಣ ಬಳಸಿ ಗಾಂಧಿ ಮಾರ್ಗ ಅನುಸುರಿದ್ದಾರೆ.

ಈ ಮೇಲಿನ ಎಲ್ಲಾ ಸಾಧನೆಗಳನ್ನು ಮಾಡಿರುವ ಆರ್,ವಿ.ದೇಶಪಾಂಡೆ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೇ ರಾಷ್ಠ್ರ ರಾಜಕಾರಣದಲ್ಲೂ ತಮ್ಮ ಚಾಪನ್ನು ಮೂಡಿಸಬೇಕುಆ ಮೂಲಕ ದೇಶವನ್ನು ಅಭಿವೃದ್ದಿಯತ್ತ
ಕೊಂಡೌಯ್ಯಬೇಕು ಎಂಬುದು ನನ್ನ ಸ್ಪಷ್ಠವಾದ ಅಭಿಪ್ರಾಯ.

ಪಾಪ ಅವರನ್ನು ಕಂಡರಾಗದ ಕಿಡಿಗೇಡಿಗಳು ದೇಶಪಾಂಡೆ ಕಾಂಗ್ರೇಸ್ ಪಾರ್ಟಿಗೆ ಸಲ್ಲಿಸಿರುವ ಸೇವೆಯನ್ನು ಬಹಿರಂಗ ಗೊಳಿಸಿ ರಾಷ್ಠ್ರದ್ರೋಹ ಮಾಡಿದ್ದಾರೆ, ಯಾಕಂದರೆ ಆರ್.ವಿ, ದೇಶಪಾಂಡೆ ತಾವು ನಿಸ್ವಾರ್ಥವಾಗಿ
ಮಾಡಿರುವ ಸೇವೆಯನ್ನು ಸಮಾಜಕ್ಕೆ ತಿಳಿಯಬಾರದು, ಎಡಗೈಯಲಿ ಮಾಡಿದ ಪುಣ್ಯ ಬಲಗೈಗೆ ಗೊತ್ತಾಗಬಾರದು ಅಂತ ಯಾರಿಗೂ ತಿಳಿಯದಂತೆ ಸೇವೆ ಮಾಡಿದ್ದಾರೆ.

ಈ ಮದ್ಯೆ ತಮ್ಮ ಸೇವೆಯನ್ನೆಲ್ಲಾ ಹೊಗಳಿ ಕೊಂಡಾಡಿದ ಮಾದ್ಯಮಗಳ ಮೇಲೂ ಮುನಿಸಿಕೊಂಡಿದ್ದೂ ಅಲ್ಲದೆ, ನಾವು 10 ಸಾವಿರ. 15 ಸಾವಿರದಂತಹ ಕಾಂಜಿ, ಪೀಂಜಿ ಸೇವೆ ಮಾಡಿದ್ದಕ್ಕೆ ಹಿಂಗೆ ಆಡ್ತಾ ಇದ್ದೀರಿ ಮಾಡಿದರೆ
2 ಲಕ್ಷ 3 ಲಕ್ಷ ಸೇವೆ ಮಾಡಬೇಕೆಂದು ನನ್ನ ಮನದಾಳದ ಆಸೆ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ಅದೂ ಅಲ್ಲದೆ ತಮ್ಮ ಇಂತಹ ಸಣ್ಣ ಸಮಾಜ ಸೇವೆಯನ್ನು ಲೀಕ್ ಮಾಡಿದ್ದು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಭೇದಿಸಲು ಸದ್ಯಕ್ಕೆ ಬಳ್ಳಾರಿಯಿಂದ ಸೋತು ಕೆಲಸವಿಲ್ಲದೆ ಖಾಲಿ ಇರುವ ಇನ್ನೊಬ್ಬ
ಕಾರ್ಯಕರ್ತ ಎನ್, ವೈ, ಹನುಮಂತಪ್ಪ ಅವರನ್ನು ನೇಮಿಸಿದ್ದು ಉತ್ತರ ಕರ್ನಾಟಕದವರಾದ ಅವರಿಗೂ ನೆರವಾಗಿದ್ದಾರೆ. ಅಲ್ಲದೆ ನೆರೆಪರಿಹಾರ ಅಕೌಂಟಿನಲ್ಲಿ ಇನ್ನೂ ನಾಲ್ಕು ಲಕ್ಷ ಹಣ ಬಾಕಿ ಉಳಿದಿದೆ ಆದರಿಂದ ಎನ್,ವೈ, ಹನುಮಂತಪ್ಪ ಅವರು ತಮ್ಮ
ತನಿಕೆಯ ವೆಚ್ಚಕ್ಕಾಗಲೀ,ಓಡಾಟದ ವೆಚ್ಚಕ್ಕಾಗಲಿ ಚಿಂತಿಸಬೇಕಿಲ್ಲ ಎಂದು ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ತಾವೆ ಮಾಡಿದ ಸಮಾಜಸೇವೆಯನ್ನು ತಮ್ಮದೇ ಪಾರ್ಟಿಯ ಕಾರ್ಯಕರ್ತರಿಂದ ತನಿಗೆ
ಮಾಡಿಸುವ ನಿಷ್ಪಕ್ಷಪಾತ ನಿಲುವನ್ನು ತಳೆದ ಸತ್ಯಸಂದರ ಪಾಲಿಗೆ ಸೇರಿಹೊಗಿದ್ದಾರೆ.

ಆರ್, ವಿ, ದೇಶಪಾಂಡೆ ಅವರಿಗಿರುವ ಆರ್ಥಿಕ ಚಿಂತನೆ, ಪ್ರಾಮಾಣಿಕತೆ, ದೇಶದ ಭವಿಷ್ಯತ್ತಿನ ಕುರಿತ ದೂರದೃಷ್ಠಿ, ಮತ್ತು ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸುವ ನೈಪುಣ್ಯತೆ ಇತ್ಯಾದಿಗಳ ಆದಾರದ ಮೇಲೆ ಅವರನ್ನು
ಪ್ರಧಾನಿಯನ್ನಾಗೆ ಮಾಡಬೇಕು ಎಂಬುದು ಕನ್ನಡಿಗರ ಒಕ್ಕೊರಲಿನ ದ್ವನಿಯಾಗಿದೆ

ದೇಶ ಸಂಕಷ್ಠದಲ್ಲಿರು ಸಂದರ್ಭದಲ್ಲೂ ದೇಶಪಾಂಡೆ ಅವರ ಕುಟುಂಬ ಪ್ರತಿ ವರ್ಷ ಶೇಕಡಾ 100 ಜಿಡಿಪಿ ಕಾಯ್ದುಕೊಂಡಿದೆ ಎಂಬ ಮತ್ತೊಂದು ಸಾಧನೆಯನ್ನು ಗಮನಿಸಿ,
ಅವರು ದೇಶವನ್ನು ಅಷ್ಟೇ ಪ್ರಗತಿಯಲ್ಲಿ ಮುಂದುವರೆಸಲಿದ್ದಾರೆ ಎಂಬುದು ಗಾಂಧಿ ಕುಟುಂಬದ ಗಮನ ಸೆಳೆದಿದೆ.
ಮುಂದೆ ಕೂಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ ನಂತರ ಪ್ರಧಾನಿ ಹುದ್ದೆ ಅಲಂಕರಿಸಿ ಎಂಬ ಮನವಿ ನೀಡಬೇಕು ಎಂಬುದು ಕನ್ನಡಿಗರ ಹಕ್ಕೊತ್ತಾಯವಾಗಿದೆ.
ತಮ್ಮ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ಕೂಡ ಶುಭಕಾಮನೆಗಳನ್ನು ರವಾನಿಸಿರುವುದರಿಂದ ದೇಶಪಾಂಡೆ ರೋಮಾಂಚನಕ್ಕೆ ಒಳಗಾಗಿದ್ದಾರೆ.

Sunday, April 11, 2010

ಸುಡಲಿ ಬಿಡು


ನೀನು ಹಚ್ಚಿದ ಕಿಚ್ಚು
ಎದೆಯ ಒಡಲೊಳಗೆ ಸುಡುತಿರುವ
ನೋವು.

ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ
ಒಡಲಿಗೆ ನಿಟ್ಟುಸಿರ
ಭಾಗ್ಯ.

ನೀನು ಕೊಟ್ಟ ಮುತ್ತು
ಎದೆಯ ಕಾವಲಿ ಒಳಗೆ
ಹೂತಿಟ್ಟ ರಕ್ತದ
ಬೀಜ.

ನಿನ್ನ ನೆನಪುಗಳೆಲ್ಲ
ಬರದ ಭಾಗ್ಯವ ನೆನೆದು
ಮರುಗುವ
ಮುಳ್ಳು.

ನಿನ್ನ ಮಾಯದ ಮೋಡಿಗೆ
ಸಿಕ್ಕ ಜೀವಕ್ಕೆ, ನದಿಯ ಸುಳಿಗೆ
ಸಿಕ್ಕು ನಾಶವಾದ
ಭಾವ.

ನಿನ್ನ ನೆನಪುಗಳೆಲ್ಲ
ಎದೆಯೊಳಗೆ
ಕೆಂಪು ಕೆಂಪಾಗಿ
ರಕ್ತ ಸ್ತ್ರಾವ.

ನೀನೆ ಕಳಿಸಿದ್ದ ಪ್ರೀತಿಯ ಹಾಡಿಗೆ
ಯಾಕೆ ಬರಲಿಲ್ಲ
ಹೂ ಬಿಡುವ
ಕಾಲ.

ನಾವು ನಿಲ್ಲುತ್ತಿದ್ದ
ಕಾನನದ ಮರ ಕೂಡ
ಸತ್ತು ಹೋದ ಸುದ್ದಿ
ನಿನ್ನವರೆಗೂ
ಬಂತಾ.

ಇರಲಿ ಇರಲಿ ಬಿಡು
ಸುಡಲಿ ಸುಡಲಿ ಬಿಡು
ನನ್ನ ಬದುಕ ದಾರಿಯ ಗುಂಟಾ
ಕೆಂಡ.




Saturday, January 23, 2010

ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.

ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತಾರು, ತೆಲಂಗಾಣ ಏಮನ್ನಾ ಇಸ್ತೆ ಇಪ್ಪಡೇ ಇವ್ವಾಲಿ ಲೇಕ ಪೋತೆ ಎಪ್ಪಡು ಇವ್ವರು, ಇದಿ ಪೈನಲ್ ಬ್ಯಾಟಲ್ ಅನ್ನ. ಆಂಧ್ರ ಪ್ರದೇಶದ ಎನ್.ಟಿ.ವಿ ತೆಲುಗು ಚಾನಲ್ಲಿನ ವರದಿಗಾರ ಸುರೇಶ್ ಬಾಬು ನನಗೆ ಹೇಳುತ್ತಿದ್ದ ಅವನು ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ನಾನು ಗವನಿಸಿದೆ. ಅವನ ಮಾತಿನ ಅರ್ಥ ಏನಪ್ಪಾ ಅಂದರೆ ಇಲ್ಲಾಣ್ಣಾ ನಮಗೆ ಬಾಳಾ ನೋವಿದೆ, ನಮ್ಮನ್ನಾ ಈ ಆಂಧ್ರದವರು ಬಾಳಾ ಕೆಟ್ಟದಾಗಿ ನಡೆಸಿಕೊಂಡಿದಾರೆ, ನಾವು ತೆಲಂಗಾಣದವರು ಮಾತಾಡೋ ಭಾಷೆಯನ್ನ ಸಿನಿಮಾದಲ್ಲಿ ವಿಲನ್ ಗಳ ಬಾಯಲ್ಲಿ ಹೇಳಿಸಿ ಅವಮಾನ ಮಾಡ್ತಾರೆ, ತೆಲಂಗಾಣಾ ಏನಾದ್ರೂ ಕೊಟ್ರೇ ಈಗಲೇ ಆಗಬೇಕು, ಇಲ್ಲಾಂದ್ರೆ ಮತ್ತೆ ಯಾವತ್ತೂ ಕೊಡಲ್ಲಾ. ಅಂತ.

ಇನ್ನೊಬ್ಬ ಇದಾನೆ ಸಾಕ್ಷಿ ತೆಲುಗು ಚಾನಲ್ಲಿನ ದೆಹಲಿ ವರದಿಗಾರ ಸುಧೀರ್, ಆತ ಹೇಳುತ್ತಿದ್ದ ಡೇ ಗೌಡ ಈ ಕಾಂಗ್ರೆಸ್ ಗೌರ್ನಮೆಂಟ್ ವಾಳ್ಳನ್ನಿ ಚಪ್ಪುತೋ ಕೊಟ್ಟಾಲ್ರಾ, ತೆಲಂಗಾಣ ಇಚ್ಚೇಸ್ತಾರಂಟ. ಮಾ ರಾಜಶೇಖರ ರೆಡ್ಡಿ ಉಂಡಿ ಉಂಟೆ ವೀಳ್ಳಿನಂತಾ ದೆಂಗೇಸೇ ವಾಡು ಅಂದ. ಹಾಗಂದರೆ ಲೋ ಗೌಡ,ಈ ಕಾಂಗ್ರೆಸ್ ಗೌರ್ನಮೆಂಟ್ ನ್ನ ಚಪ್ಪಲೀಲಿ ಹೊಡಿಬೇಕು, ತೆಲಂಗಾಣ ಕೊಡ್ತಾರಂತೆ ಅದೇ ರಾಜಶೇಖರ ರೆಡ್ಡಿ ಇದ್ದಿದ್ದರೆ ಎಲ್ಲಾರ ಬಾಯಿ ಮುಚ್ಚಿಸಿಬಿಡ್ತಾ ಇದ್ದ. ಅಂತ. ಈ ಸುರೇಶ ಮತ್ತು ಸುಧೀರ್ ಇಬ್ಬರೂ ನನಗೆ ದೆಹಲಿಯಲ್ಲಿ ನನಗೆ ತೀರಾ ತಿಳಿದ ಸ್ನೇಹಿತರು ಮತ್ತು ಆ ಇಬ್ಬರೂ ಪರಸ್ಪರ ಗೆಳಯರು. ಸಾಮಾನ್ಯವಾಗಿ ನಾನು ಅವರನ್ನು ಒಟ್ಟೊಟ್ಟಿಗೆ ಇರುತ್ತಿದ್ದನ್ನು ನೋಡುತ್ತಿದ್ದೆ. ಆದರೆ ಯಾವಾಗ ಆಂಧ್ರಪ್ರದೇಶದಲ್ಲಿ ತೆಂಲಗಾಣ ವಿಷಯ ಭುಗಿಲೆದ್ದಿತೋ ಆವಾಗಲಿಂದ ಈ ಇಬ್ಬರು ಗೆಳಯರು ಪರಸ್ಪರ ಮುಖ ತಿರುಗಿಸಿಬಿಟ್ಟಿದ್ದಾರೆ. ಮಾತನಾಡುತ್ತಾರಾದರೂ ಮೊದಲಿನ ಆತ್ಮೀಯತೇ ಇಲ್ಲ ಸಹಜತೆ ಇಲ್ಲ. ಈ ಇಬ್ಬರನ್ನು ಬಲ್ಲ ನನಗೆ ತೆಲಂಗಾಣ ವಿಷಯಕ್ಕಾಗಿ ಇಬ್ಬರು ಗೆಳೆಯರಲ್ಲಿ ಉಂಟಾಗಿದ್ದ ಬಿರುಕು ನನ್ನಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಇದೇನಪ್ಪಾ ಆಗಿದೆ ಅಂತ ನಾನು ನನಗೆ ತಿಳಿದ ಇತರ ಸ್ನೇಹಿತರಲ್ಲಿ ವಿಚಾರಿಸಿದೆ ಆಗ ಗೊತ್ತಾಗಿದ್ದೇ ಬೇರೆ. ತೆಲಂಗಾಣ ಮತ್ತು ಸಮೈಕ್ಯ ಆಂಧ್ರಪ್ರದೇಶ ಎಂಬ ಎರಡು ಪತ್ರಕರ್ತರ ಬಣಗಳೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಆದರೆ ತಮಿಳು ಮತ್ತು ತೆಲುಗಿನವರದು ತೀರಾ ದೊಡ್ಡ ಸಂಖ್ಯೆ, ಕಡಿಮೆ ಅಂದರೂ ನೂರು ಮಂದಿ ಇದ್ದಾರೆ. ಪ್ರತಿ ತೆಲುಗು ಚಾನಲ್ಲಿಗೂ ಇಬ್ಬರಿಂದ ಮೂರು ಮಂದಿ ವರದಿಗಾರರಿದ್ದಾರೆ. ಬಹುತೇಕ ತೆಲುಗು ಪತ್ರಿಕೆಗಳ ಎಡಿಷನ್ ಗಳು ದೆಹಲಿಯಿಂದ ಪ್ರಕಟ ಆಗುತ್ತವೆ.

ಈ ಎರಡೂ ಬಣಗಳು ತಮ್ಮ ತಮ್ಮ ಆಸಕ್ತಿಗಳ ಪರವಾಗಿ ಕೆಲಸ ಮಾಡುತ್ತವೆ. ತೆಲಂಗಾಣದ ಪರ ಇದ್ದವರು ಅದರ ಪರವಾದ ರಾಜಕಾರಣಿಗಳನ್ನು ವೈಭವೀಕರಿಸುತ್ತಾರೆ ಅದು ಇನ್ನೊಂದು ಬಣವನ್ನು ಚುಚ್ಟುತ್ತದೆ. ಇನ್ನೊಂದು ಬಣದವರು ಮಾತೆತ್ತಿದರೆ ಸಮೈಕ್ಯ ಆಂಧ್ರಪ್ರದೇಶ ಅಂತ ಬೊಬ್ಬೆಹಾಕುತ್ತಾರೆ. ಒಟ್ಟಿನಲ್ಲಿ ಎರಡೂ ಒತ್ತಡ ಗುಂಪುಗಳು ಅವುಗಳಿಗೆ ಬೇಕಾದಂತೆ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕಗಳಾದ ರೆಡ್ಡಿ, ಚೌದುರಿ, ರಾವ್, ಇತ್ಯಾದಿಗಳು ಅವರಿಗೆ ಹಿಂದಿನಷ್ಠು ಈಗ ಬೇಕಾಗಿಲ್ಲ. ಈಗ ನೀವು ಆಂಧ್ರದವರ ಜೊತೆ ಮಾತಾಡುವಾಗ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡೇ ಮಾತಾಡಿದರೆ ತುಂಬಾ ಒಳ್ಳೆಯದು, ಇಲ್ಲಾ ಅಂದರೆ ಅಪಾಯ ಇದೆ. ನೀವೇನಾದರೂ ಅವರ ಬಾವನೆಗಳನ್ನು ನೋಯಿಸುವಂತೆ ಅವರ ವಿರುದ್ಧವಾಗಿ ಮಾತಾಡಿದರೆ ಕಷ್ಠ. ಅದೂ ಅಲ್ಲದೇ ಈ ಆಂಧ್ರ ದ ರಾಜಕಾರಣಿಗಳು ಎಷ್ಟು ಖದೀಮರಿದ್ದಾರೆ ಅಂದರೆ ತಮ್ಮ ಪರ ಮತ್ತು ವಿರುದ್ಧ ಯಾರಿದ್ದಾರೆ ಅಂತ ಗುರುತು ಮಾಡಿಕೊಂಡು ಅವರನ್ನೇ ಕರೆದು ಬೈಟ್ ಗಳು, ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಡಿವೈಡ್ ಮಾಡಿದರೆ ತಾನೆ ಅವರಿಗೆ ಲಾಭ.

ನ್ಯೂಸ್ ರೂಂಗಳವರೆಗೆ ಹಬ್ಬಿಹೋಗಿರುವ ಈ ಜಾಡ್ಯ ಅಲ್ಲಿನ ಮನಸುಗಳನ್ನು ಮುರಿದು ಹಾಕಿರೋದಂತೂ ಸತ್ಯ.

ಆದರೆ ಬೇಸರದ ಸಂಗತಿ ಏನಪ್ಪಾ ಅಂದರೆ ವಸ್ತುನಿಷ್ಠವಾಗಿ ವಿಚಾರಗಳನ್ನು ಜನರ ಮುಂದೆ ಇಡಬೇಕಾದವರೇ ಹೀಗೆ ಕಚ್ಚಾಡಿ ಬಣಗಳಲ್ಲಿ ಕೆಲಸ ಮಾಡಿದರೆ ಆಗುವ ಗತಿ ಏನಪ್ಪಾ ಅಂತ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅವನ ವಿಚಾರವೇ ಸರಿಯಿಲ್ಲ ಅಂತ ಯೋಚಿಸೋದು ತಪ್ಪಾಲ್ಲವಾ…?

ಇವತ್ತು ಕೇಂದ್ರದ ಸರ್ಕಾರಕ್ಕೂ ತೆಲಂಗಾಣ ಒಂದು ಬಿಡಿಸಲಾರದ ಕಗ್ಗಂಟಾಗಿದೆ. ಸೋನಿಯಾಗಾಂಧಿ ಕೊಟ್ಟ ಮಾತನ್ನು ತಪ್ಪೊಲ್ಲ, ಈವರಗೂ ಕೊಟ್ಟ ಮಾತುಗಳನ್ನು ನಡೆಸಿಕೊಂಡಿದ್ದಾರೆ ಅಂತ ತೆಲಂಗಾಣ ವಾಧಿಗಳು ಹೇಳುತ್ತಾರೆ. ಅದೇ ಸಮೈಖ್ಯ ಆಂಧ್ರದವರು ಅದು ಇನ್ನು ಮುಗಿದ ಕತೆ. ಮುಗಿದ ಅದ್ಯಾಯ, ಹಂಗೇನಾದರೂ ಕೊಟ್ಟರೆ ಏನಾಗುತ್ತೋ ನೋಡ್ತಾ ಇರಿ ಅಂತ ಹೆದರಿಸುತ್ತಾ ಇದ್ಧಾರೆ.

.

ಹಾಗೆ ನೋಡಿದರೆ ಒಂದೇ ಭಾಷೆ ಮಾತಾಡೋ ಮಂದಿ ಯಾಕೆ ದೂರಾಗಬೇಕು ಅನ್ನೊದನ್ನು ಅರ್ಥಮಾಡಿಕೊಳ್ಳೊದೇ ಕಷ್ಠದ ವಿಚಾರ. ನಿನ್ನೆ ಮೊನ್ನೆವರೆಗೆ ಒಟ್ಟಿಗಿದ್ದವರು ಬೇರೆ ಆಗೋ ಕಾಲ ಬಂದಂತೆ ಕಾಣ್ತಾ ಇದೆ. ಅಲ್ಲಿ ಮನೆಗಳೂ ಮುರಿದಿವಂ ಮನಗಳೂ ಮುರಿದಿವೆ.