Friday, October 1, 2010

ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..




ಶಂಕರಲಿಂಗೇಗೌಡರಿಗೆ ನಕಶಿಕಾಂತ ಕೋಪ ಬಂದಾಗ ಇಲ್ಲಾ ನಕಶಿಕಾಂತ ಮೂಡಿನಲ್ಲಿದ್ದಾಗ ಸಂಸ್ಕೃತ ಬಾಷೆ ಹೊರಡುತ್ತದೆ ಅಂತ ಶಂಕರಲಿಂಗೇಗೌಡರನ್ನು ಬಲ್ಲವರಿಗೆಲ್ಲಾ ಗೊತ್ತು, ಮೊನ್ನೆ ತಮಗೆ ಸಚಿವ ಸ್ಥಾನ ಸಿಕ್ಕದೇ ಹೋದಾಗ ಮಾತನಾಡಿದರಲ್ಲ ಅದು ಆದುನಿಕ ಸಂಸ್ಕೃತ.
ಕಳ್ಳರು, ಸುಳ್ಳರು ಲೋಪರ್ ಗಳಿಗೆ ಇದು ಕಾಲ ನನ್ನ ಬಳಿ ಸೂಟ್ ಕೇಸ್ ಇಲ್ಲ, ಅದಕ್ಕೆ ನನಗೆ ಮಂತ್ರಿಗಿರಿ ಸಿಕ್ಕಿಲ್ಲ. ಅಂತ ಒಳ್ಳೇ ಸಂಸ್ಕೃತ ಶ್ಲೋಕದ ಧಾಟಿಯಲ್ಲಿ ಶಂಕರಲಿಂಗೇಗೌಡರು ತಮ್ಮ ಆಕ್ರೋಶ ಹೊರಹಾಕಿದ್ದು ಟಿವಿಯಲ್ಲಿ ಕಂಡೊಡನೆ ಎಲ್ಲರಿಗೂ ಅಹುದಹುದು ಅಂತ ಅನ್ನಿಸಿರಲಿಕ್ಕೆ ಸಾಕು.

ಹಾಗೆ ನೋಡಿದರೆ ಎಲ್ಲಾ ಕಾಲದಲ್ಲೂ ಕರ್ನಾಟಕದ ರಾಜಕಾರಣಿಗಳು ಭ್ರಷ್ಠಾಚಾರವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಮಾಡಿಕೊಂಡು ಬಂದವರೇ ಇಲ್ಲಿ.. ಯಾರೂ ಸಾಚಾಗಳಲ್ಲ ಅಥವಾ ಅಂತ ಶೀಲವಂತ ರಾಜಕಾರಣ ಜಗತ್ತಿನಲ್ಲಿ ಎಲ್ಲಿಯಾದರೂ ಇದೆ ಅಂತಲೂ ಅನಿಸುವುದಿಲ್ಲ,

ಆದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಈಗಿನ ಸರ್ಕಾರ ಅದ್ಯಾವ ರೀತಿಯಲ್ಲಿ ಜನರ ಮದ್ಯೆ ನಗ್ನವಾಗುತ್ತಿದೆ ಅನ್ನೊದು ಕುತೂಹಲ ಹುಟ್ಟಿಸುತ್ತಿರುವ ಸಂಗತಿ.

ಮೊನ್ನೆ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತನೊಬ್ಬ ತೀರಾ ತಮಾಶಿ ದನಿಯಲ್ಲಿ ಹೇಳುತ್ತಿದ್ದ ಸಾರ್ ದೇವರಾಣೆಗೂ ಮುಂದೆ ಬರೋ ಇನ್ನು ಮೂರು ಸರ್ಕಾರಗಳಿಗೂ ಒಂದೇ ಒಂದು ಕೆಲಸ ಅಂತ ಉಳಿಸ್ತಾ ಇಲ್ಲಾ ಸಾರ್ ಎಲ್ಲಾ ಬಳಿದು ಬಾಯ್ಗೆ ಹಾಕ್ಕೊಂತಾವರೆ, ಯಾವ ಸರ್ಕಾರಿ ಕಚೇರಿಯನ್ನು ರಿನೋವೇಟ್ ಮಾಡದೆ ಬಿಡ್ತಾ ಇಲ್ಲಾ ಸಾರ್, ಕಾಸು ಕಸದಲ್ಲಿ ಇದೆ ಅಂದ್ರೂ ಬಿಡದೇ ಬಾಯಿ ಹಾಕ್ತಾ ಇದಾರೆ. ಕಾಸು ಕೊಟ್ರೆ ಸಿಎಂ ಮನೇಲಿ ನಡೀದಿರೋ ಕೆಲಸನೇ ಇಲ್ಲ.
ನಿಮ್ಗೆ ಯಾವ ಜಾಗ ಬೇಕು ಹೇಳಿ ಡೀ ನೋಟಿಪೈ ಮಾಡಿಸಿಕೊಡ್ತಾರೇ ಅಂದ, ನಾನು ಹೌದಾ ಹಾಗಾದ್ರೆ ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ ಅಂದೆ ಆತ ಸುಮ್ಮನಾದ.

ಸಾಮಾನ್ಯ ಜನರಿಗೆ ಯಾವ ಸರ್ಕಾರದ ಬಗ್ಗೆ ಆದರೂ ಸಣ್ಣ ಕೋಪ, ಅಕ್ರೋಶ ಯಾವಾಗಲೂ ಚಾಲ್ತಿಯಲ್ಲಿರುವುದು ಸಹಜ ಆದರೆ ಈಗಿನ ಸರ್ಕಾರದ ಬಗ್ಗೆ ಸಣ್ಣ ಅಕ್ರೋಶಕ್ಕಿಂತಲೂ ಅಸಹನೆ ಮೂಡುತ್ತ್ರಿದೆ, ಮುಖ್ಯಮಂತ್ರಿಯಾದಿಯಾಗಿ ಕ್ಯಾಬಿನೆಟ್ ನಲ್ಲಿ ಕಳಂಕ ಇಲ್ಲದವರೇ ಇಲ್ಲ ಅನ್ನಬೇಕು ಕಳಂಕ ಹೊತ್ತುಕೊಳ್ಳದೇ ಹೋದವರು ಯೂಸ್ ಲೆಸ್ ಎಂಬ ಪಟ್ಟವನ್ನು ಭದ್ರವಾಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅವರ ಸಹೋದ್ಯೋಗಿಗಳ ಬಗ್ಗೆ ಇರುವ ಸಹನೆ ಕಂಡರೆ ಮುಖ್ಯಮಂತ್ರಿಗಳೂ ಎಲ್ಲದರಲ್ಲೂ ಪಾಲುದಾರರೇ ಇದ್ದಾರೆ ಅಂತ ಡಾಳಾಗಿ ಕಾಣುತ್ತಿದೆ, ಮುಖ್ಯಮಂತ್ರಿಗಳ ಇಬ್ಬರು ಗಂಡು ಮಕ್ಕಳು ಗಾಂಧಿನಗರ, ಕುಮಾರಪಾರ್ಕ್ ನ ಕೆಲವು ಹೋಟೆಲ್ ಗಳಲ್ಲಿ ಟಿಕಾಣಿ ಹೂಡಿ ಸಂಪೂರ್ಣ ಡೀಲಿಂಗ್ ಗಳಲ್ಲಿ ಬಾಗಿಯಾಗಿದ್ದಾರೆ ಎಂಬುದು ರಾಜಕಾರಣಿಗಳ ವಲಯದಲ್ಲಿ ಬಾಯಿಮಾತಿನ ವಸ್ತುವಾಗಿದೆ, ಪಕ್ಷಾತೀತವಾಗಿ ಯಾವ ಪಕ್ಷದವರ ಕೆಲಸಗಳಾದರು ದುಡ್ಡುಕೊಟ್ಟರೆ ಸರಾಗ ಎಂಬುದು ರಾಜಕೀಯದಲ್ಲಿರುವರಿಗೆ ನಿರಾಳ ತರಿಸುತ್ತಿರುವ ವಿಶಯ.

ರಾಜಕಾರಣಿಗೆ ಎಮ್ಮೆ ಚರ್ಮ ಇರುತ್ತೆ ನಿಜ ಆದರೆ ಲೋಕಾಯುಕ್ತರ ಕೈಗೆ ಸಿಕ್ಕಿಕೊಂಡರೂ ನೈತಿಕ ಹೊಣೆ ಅಂತ ಒಂದು ಇದೆ ಎಂಬುದು ಬಿಜೆಪಿಯ ಜನಕ್ಕೆ ಅರ್ಥ ಆಗುವುದಿಲ್ಲ ಅಂದರೆ ಅಚ್ಚರಿಯ ಸಂಗತಿ, ಬಹುಷ ಆರಂಭದಿದಲೂ ಗಣಿ ರೆಡ್ಡಿಗಳಿಂದ ಪ್ರಭಾವಿತರಾಗಿರುವ ಯಡಿಯೂರಪ್ಪ ಸರ್ಕಾರದ ಶಾಸಕರು ಹಣವಿದ್ದರೆ ನಮ್ಮನ್ನು ಯಾರೂ ಏನೂ ಮಾಡುವುದಕ್ಕೆ ಸಾದ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದ್ದಾರೆ, ಅಧಿಕಾರ ಇರುವಷ್ಠು ದಿನ ಆದಷ್ಟು ಲಪಟಾಯಿಸಿ ನಂತರ ಅದೇ ಹಣದಲ್ಲಿ ಚುನಾವಣೆ ಗೆದ್ದರೆ ಆಯಿತಲ್ಲ ಎಂಬ ನಿರ್ದಾರಕ್ಕೆ ಬಂದಂತೆ ಕಾಣುತ್ತೇ, ಯಾಕಂದರೆ ಮಾರ್ಗದರ್ಶನ ಮಾಡಬೇಕಾದವರೇ ಮಾರ್ಗ ಬಿಟ್ಟರೆ ಆಗುವ ಅಪಾಯ ಇಂದು ನಮ್ಮ ಕಣ್ಣ ಮುಂದೇ ಇದೆ. ಕಟ್ಟಾಸುಬ್ರಮಣ್ಯ ನಾಯ್ಡು ಮತ್ತು ಅವರ ಮಗ ನೇರಾ ನೇರಾ ಸಿಕ್ಕಿಕೊಂಡರೂ ಮರ್ಯಾದೆ ಬಿಟ್ಟಂತೆ ಓಡಾಡುತ್ತಿದ್ದಾರೆ.

ಮುಖ್ಯಮಂತ್ರಿಗಳ ಮಗ ಬಿ.ವೈ.ರಾಘವೇಂದ್ರ ಡಿನೋಟಿಪಿಕೇಷನ್ ಹಗರಣದಲ್ಲಿ ಸಿಕ್ಕಿಕೊಂಡರೇ ಅದು ಮುಖ್ಯಮಂತ್ರಿಗಳಿಗೆ ಒಡ್ಡಿರುವ ಅಗ್ನಿ ಪರೀಕ್ಷೆಯಂತೆ, ಇಂತಾ ಅಗ್ನಿ ಪರೀಕ್ಷೆಗಳನ್ನು ಎದುರಿಸೋದು ಅವರಿಗೆ ವಾಡಿಕೆ ಆಗಿರೋದರಿಂದ ಈ ಪರೀಕ್ಷೆಯಿಂದ ಜಯಬೇರಿ ಬಾರಿಸಿಕೊಂಡೇ ಬರತ್ತಾರಂತೆ.ಅಬ್ಬಾಬ್ಬಾ ಕಳೆದ ಮೂರು ವರ್ಷಗಳಿಂದ ನಡೆದ ಸರ್ಕಾರದ ಡ್ರಾಮಾಗಳನ್ನೆಲ್ಲಾ ಯಥಾವತ್ತಾಗಿ ದಾಖಲು ಮಾಡಿದರೆ. ಕೆಲ ವರ್ಷಗಳನಂತರ ಕಾರ್ಟೂನ್ ನೆಟ್ ವರ್ಕ್ಗ್ ಗಳಿಗೆ ಸಕ್ಕತ್ ವಸ್ತುಗಳು,

ಸರ್ಕಾರದಲ್ಲಿ ಯಾರಿಲ್ಲ ಹೇಳಿ, ಮುತ್ತು ಕೊಟ್ಟರೂ ಮಂತ್ರಿಗಳಾದವರು, ರೇಪು ಮಾಡಿದರೂ ಆಸ್ಪತ್ರ್ಯೆಲ್ಲಿ ಇರುವವರು, ಕೈ ಕತ್ತರಿಸುವವರು, ರೌಡಿಗಳು, ಡಾನ್ ಗಳು, ಡೋಂಗಿಗಳು, ಸುಳ್ಳರು, ಸಂಸ್ಕೃತ ಪಂಡಿತರು,ಸಾದ್ವಿಗಳು, ಪುತ್ರ ವ್ಯಾಮೋಹಿಗಳು, ಪರಸ್ತ್ರಿ ಪೀಡಕರು, ಕಳ್ಳರು, ಲೂಟಿಕೋರರು ಎಲ್ಲಾ ಕಲೆಗಳಲ್ಲಿ ಪಾರಂಗತ ರಾದ ಮಂದಿಯ ಒಟ್ಟು ಮೊತ್ತವೇ ಬಿಜೆಪಿ ಸರ್ಕಾರ.

ಆಳುವ ಮಂದಿಯಲ್ಲಿ ಇದ್ದವರೆಲ್ಲ ಬಂಢರಾದರೆ ಪರಿಸ್ಥಿತಿ ಹೇಗಿರುತ್ತೆ ಅನ್ನೊದಕ್ಕೆ ಈ ಸರ್ಕಾರವೇ ಹಸಿ ಹಸಿ ಉದಾಹರಣೆ ವಂಡರ್ ಲ್ಯಾಂಡ್ ಡಿಸ್ನಿಲ್ಯಾಂಡ್ ಎಲ್ಲಾ ಲ್ಯಾಂಡ್ ಇಲ್ಲೇ ಇದೆಯಲ್ಲಾ.

2 comments:

  1. ಶ್ರೀನಿವಾಸ್ ಬಹಳ ದಿನಗಳ ನಂತರ ಬರೆದರೂ ಚರ್ಚೆಗೆ ಅರ್ಹವಾಗುವಂತಹ ವಿಚಾರ ತಂದಿದ್ದೀರಿ, ಲಘು ಹಾಸ್ಯ ಬೆರೆತ ಬರಹ ಚೆನ್ನಾಗಿದೆ ಅಷ್ಟೆ ದಿಟವೂ ಆಗಿದೆ. ಭ್ರಷ್ಟಾಚಾರದ ವಂಡರ್ ಲ್ಯಾಂಡ್, ಡಿಸ್ನಿಲ್ಯಾಂಡ್ ಎಲ್ಲಾ ಇವತ್ತಿನ ರಾಜಕಾರಣದಲ್ಲಿ ಹಸಿಹಸಿಯಾಗಿ ಕಾಣಸಿಗುತ್ತಿದೆ. ರಾಜಕಾರಣದಲ್ಲಿ ಸೂಕ್ಷ್ಮ ಪ್ರಜ್ಞೆಯ ಕೊರತೆ ಇದೆ ಅದು ನೈತಿಕವಾಗಿಯೂ ಅವರನ್ನು ಹಾಳುಗೆಡವಿರುವುದರಿಂದ ಮರ್ಯಾದೆ ಪದಕ್ಕೆ ಅರ್ಥ ಕಳೆದುಹೋಗಿದೆ, ನಿರ್ಲಜ್ಜ ರಾಕಾರಣಿಗಳು ಆ ಮೂಲಕ ಪ್ರಜಾತಾಂತ್ರಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಇದರಲ್ಲಿ ಪ್ರಜೆಗಳ ಪಾಲು ಪ್ರಮುಖವಾಗಿದೆಯಲ್ಲವೇ ?

    ReplyDelete
  2. ಗೌಡ್ರೇ, ಅಂತು ಬರದ್ರಿ...
    ಜಯಕುಮಾರ್ ಹೇಳ್ದಂಗೆ ಚರ್ಚೆ ಆಗೋಂಥ ವಿಷ್ಯಾನೆ ಬರ್ದಿರಿ.ಮೂರು ಬಿಟ್ಟವರ ಸರ್ಕಾರ ನೋಡಿ ಓಟು ಹಾಕಿದವನು ತಲೆ ಚಚ್ಚಿಕೊಂಡಿದ್ರೆ ಸಾಕು.
    ಜನ್ಮೇಪಿ ಈ ಸರ್ಕಾರ ಮತ್ತೆ ಬರೊಲ್ಲ.
    ನಿನ್ನೆ ವಿಧಾನ ಸೌಧದ ಮುಂದೆ ಮಾಟ ಮಾಡಿಸಿದಾರೆ ಅನ್ನೋ ಸುದ್ದಿ ತಿಳಿದ ಮೇಲಂತು ಈ ಜನ ರಾಜಕೀಯ ಶಕ್ತಿ ಕೇಂದ್ರಕ್ಕೆ, ಜನರಿಗೆ ಅವಮಾನ ಮಾಡಿ ಬಿಟ್ರು ಅನಿಸಿತು. ನೀವು "ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ " ಅನ್ನೋ ಮಾತು ನೂರಕ್ಕೆ ನೂರು ಸತ್ಯ.
    -ಕುಮಾರ್

    ReplyDelete