Wednesday, June 9, 2010

ಆರ್ಥಿಕ ತಜ್ಞ ಆರ್.ವಿ.ದೇಶಪಾಂಡೆಗೆ ಪ್ರಧಾನಿ ಹುದ್ದೆ




ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಬದಲಿಗೆ ರಾಷ್ಠ್ರದ ಪ್ರಧಾನ ಮಂತ್ರಿಯಾಗಿ
ನೇಮಿಸಬೇಕೆಂದು ನಾನು ಈ ಮೂಲಕ ಒತ್ತಾಯ ಪಡಿಸುತ್ತೇನೆ. ಯಾಕೆಂದರೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಲ್ಲಬೇಕಾಗಿದ್ದ ಸುಮಾರು ಎಪ್ಪತ್ತೈದು ಲಕ್ಷ ರೂ ಹಣವನ್ನು


ಕೆನರಾ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಸಂಪಾದಿಸುತ್ತಿದ್ದಾರೆ. ಆ ಮೂಲಕ ನೆರೆ ಸಂತ್ರಸ್ತರ ಪಾಲಿನ ಆರಾದ್ಯ ದೈವವಾಗಿ ಹೊರ ಹೊಮ್ಮಿದ್ದಾರೆ.
ಇದೇ ಆದ ವಿಚಾರವನ್ನು ಮುಂದಿಕ್ಕಿಕೊಂಡು, ದೇಶದ ಆರ್ಥಿಕ ಪ್ರಗತಿ ಮತ್ತು ಜನತೆಯ ಭವಿಷ್ಯದ ಭದ್ರತೆ ಹಿತ-ದೃಷ್ಠಿಯಿಂದ ಆರ್ .ವಿ. ದೇಶಪಾಂಡೆ ಅವರನ್ನು ಪ್ರಧಾನಿ ಮಾಡಿ ಪ್ರತಿವರ್ಷ ಬಜೆಟ್
ಮಾಡುವ ಬದಲು ಸರ್ಕಾರದ ಸಾವಿರಾರು ಕೋಟಿ ಹಣವನ್ನು ಬಡ್ಡಿಗೆ ಬಿಟ್ಟು ದೇಶದ ಭವಿಷ್ಯ ರೂಪಿಸುವ ಕನಸುಗಾರ ನಾಯಕ ಅವರಾಗಿದ್ದಾರೆ.

ಆದೂ ಅಲ್ಲದೆ ತಿನ್ನಲು, ಉಡಲು ಬಟ್ಟೆ ಬರೆ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರಿಗೆ ಅತ್ಯಂತ ಮುತುವರ್ಜಿಯಿಂದ ನೆರೆ ಪರಿಹಾರ ನಿಧಿಯಿಂದ ಹಣ ತೆಗೆದು ಟೀಶರ್ಟ್ ಗಳನ್ನು ನೀಡಿ
ಬಡ ಕಾಂಗ್ರೇಸ್ ಸಂಸ್ತ್ರಸ್ತರಿಗೆ ನೆರವಾಗಿದ್ದಾರೆ ಆ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಪಾಲಿನ ಆಶಾಕಿರಣ ಆಗಿದ್ದಾರೆ.
ಅಲ್ಲದೆ ದೇಶದಲ್ಲೇ ಅತ್ಯಂತ ಹಳೆಯ ಮತ್ತು ಬಡ ಪಾರ್ಟಿಯಾದರೂ ಸ್ವಾಬಿಮಾನ ಬಿಡದೇ ಪಾರ್ಟಿ ಕಚೇರಿಯ
ನೌಕರರ ತಿಂಗಳ ಸಂಬಳ ಮತ್ತು ಇತರ ಬಾಬ್ತುಗಳನ್ನು ಪರಿಹಾರ ಸಂಗ್ರಹಿಸಿ ನಿಭಾಯಿಸಿ ಸ್ವಾಭಿಮಾನ ಮೆರೆದಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಪಾರ್ಟಿ ಚೆನ್ನಾಗಿದ್ದರೆ ತಾನೆ ನಾವು ಚೆಂದ, ಪಾರ್ಟಿ ಕಚೇರಿ ಚಂದ್ದಾಗಿದ್ದರೆ ತಾನೆ ಅಂದ, ಅನ್ನುವ ನಿಷ್ಕಲ್ಮಶ ಭಾವನೆಯಿಂದ ಪಾರ್ಟಿ ಕಚೇರಿಗೆ ಟೈಲ್ಸಗಳನ್ನು ಪರಿಹಾರ ನಿಧಿಯಿಂದ
ಹಾಕಿಸಿದ್ದಾರೆ.

ಕಾಂಗ್ರೇಸ ಲೀಡರುಗಳು ಉತ್ತರ ಕರ್ನಾಟಕದ ನೆರೆ ಪೀಡಿತರನ್ನು,ಹಸಿದವರನ್ನು ಖುದ್ದು ಭೇಟಿ ಮಾಡಿ ಅವರನ್ನು ತಮ್ಮ ಅಮೃತ ಹಸ್ತದಿಂದ ನೇವರಿಸಿ ಸಾಂತ್ವನ ಹೇಳಲಿಕ್ಕಾಗಿ ದಶ ದಿಕ್ಕುಗಳಲ್ಲಿ ಪ್ರಯಾಣ ಮಾಡಿದ್ದಾರೆ
ವಿಮಾನ, ಕಾರು ಇತ್ಯಾದಿಗಳಲ್ಲಿ ಸಂಚರಿಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ದೆಹಲಿಗೆ ಕರೆದೊಯ್ದು ಹಸಿದವರ ಪರವಾಗಿ ಲಾಭಿ ಮಾಡಿಸಿದ್ದಾರೆ.

ಖರ್ಚಿಗೆ ಕಾಸಿಲ್ಲದ ಕಾಂಗ್ರೆಸ್ ನಾಯಕರ ಕಿಸೆಗೆ ಭಾರ ಬೀಳಲೇ ಬಾರದು ಅಂಬೋ ಕಾರಣಕ್ಕಾಗಿ ತಾವು ಹಾಗು ತಮ್ಮ ಬಡ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ತೆರಳಿ ಸಂಗ್ರಹಿಸಿದ್ದ ಹಣವನ್ನು ಉತ್ತಮ
ಮನಸಿನಿಂದ ಬಳಸಿದ್ದಾರೆ.

ಬಿಜೆಪಿ ಸರ್ಕಾರದ ವೈಪಲ್ಯಗಳು ಏನು ಎಂಬುದನ್ನು ಯಡಿಯೂರಪ್ಪ ಅವರಿಗೆ ಹೇಳಲು ಭಯ ಪಡುವ ಸಂಸ್ತಸ್ತರಿಗೆ ವಾಕ್ ಸ್ವಾತಂತ್ರ ಇಲ್ಲವೇ ಇಲ್ಲಾ ಎಂಬುದನ್ನು ಅರಿತು ಅವರ ಧನಿಯಾಗಿ ನಿಲ್ಲಲು ತೀರ್ಮಾನಿಸಿ ರಾಜ್ಯದ
ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿ ಧನಿ ಇಲ್ಲದ ಸಂಸ್ತ್ರಸ್ತರ ಧನಿಯಾಗಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದುವರೆದು ಪರಿಹಾರ ನಿಧಿಯಿಂದ ತಾವೂ ಪರಿಹಾರ ಪಡೆದುಕೊಂಡಾಗ ಮಾತ್ರ ಪರಿಹಾರದ ಬೆಲೆ ಏನೆಂಬುದು ಅರಿವಾಗುತ್ತದೆ ಎಂಬುದನ್ನು ಮನಗಂಡು ಪರಿಹಾರದ
ಹಣವನ್ನು ತಾವೂ ಕೊಂಚ ಬಳಸಿಕೊಂಡು ತಮಗಿರುವ ಶ್ರೀಮಂತಿಕೆಯನ್ನು ಶಿಕ್ಷಿಸಿಕೊಂಡಿದ್ದಾರೆ. ಶ್ರೀಮಂತರಾಗಿದ್ದೂ ಬಡವರ ಹಣ ಬಳಸಿ ಗಾಂಧಿ ಮಾರ್ಗ ಅನುಸುರಿದ್ದಾರೆ.

ಈ ಮೇಲಿನ ಎಲ್ಲಾ ಸಾಧನೆಗಳನ್ನು ಮಾಡಿರುವ ಆರ್,ವಿ.ದೇಶಪಾಂಡೆ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೇ ರಾಷ್ಠ್ರ ರಾಜಕಾರಣದಲ್ಲೂ ತಮ್ಮ ಚಾಪನ್ನು ಮೂಡಿಸಬೇಕುಆ ಮೂಲಕ ದೇಶವನ್ನು ಅಭಿವೃದ್ದಿಯತ್ತ
ಕೊಂಡೌಯ್ಯಬೇಕು ಎಂಬುದು ನನ್ನ ಸ್ಪಷ್ಠವಾದ ಅಭಿಪ್ರಾಯ.

ಪಾಪ ಅವರನ್ನು ಕಂಡರಾಗದ ಕಿಡಿಗೇಡಿಗಳು ದೇಶಪಾಂಡೆ ಕಾಂಗ್ರೇಸ್ ಪಾರ್ಟಿಗೆ ಸಲ್ಲಿಸಿರುವ ಸೇವೆಯನ್ನು ಬಹಿರಂಗ ಗೊಳಿಸಿ ರಾಷ್ಠ್ರದ್ರೋಹ ಮಾಡಿದ್ದಾರೆ, ಯಾಕಂದರೆ ಆರ್.ವಿ, ದೇಶಪಾಂಡೆ ತಾವು ನಿಸ್ವಾರ್ಥವಾಗಿ
ಮಾಡಿರುವ ಸೇವೆಯನ್ನು ಸಮಾಜಕ್ಕೆ ತಿಳಿಯಬಾರದು, ಎಡಗೈಯಲಿ ಮಾಡಿದ ಪುಣ್ಯ ಬಲಗೈಗೆ ಗೊತ್ತಾಗಬಾರದು ಅಂತ ಯಾರಿಗೂ ತಿಳಿಯದಂತೆ ಸೇವೆ ಮಾಡಿದ್ದಾರೆ.

ಈ ಮದ್ಯೆ ತಮ್ಮ ಸೇವೆಯನ್ನೆಲ್ಲಾ ಹೊಗಳಿ ಕೊಂಡಾಡಿದ ಮಾದ್ಯಮಗಳ ಮೇಲೂ ಮುನಿಸಿಕೊಂಡಿದ್ದೂ ಅಲ್ಲದೆ, ನಾವು 10 ಸಾವಿರ. 15 ಸಾವಿರದಂತಹ ಕಾಂಜಿ, ಪೀಂಜಿ ಸೇವೆ ಮಾಡಿದ್ದಕ್ಕೆ ಹಿಂಗೆ ಆಡ್ತಾ ಇದ್ದೀರಿ ಮಾಡಿದರೆ
2 ಲಕ್ಷ 3 ಲಕ್ಷ ಸೇವೆ ಮಾಡಬೇಕೆಂದು ನನ್ನ ಮನದಾಳದ ಆಸೆ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ಅದೂ ಅಲ್ಲದೆ ತಮ್ಮ ಇಂತಹ ಸಣ್ಣ ಸಮಾಜ ಸೇವೆಯನ್ನು ಲೀಕ್ ಮಾಡಿದ್ದು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಭೇದಿಸಲು ಸದ್ಯಕ್ಕೆ ಬಳ್ಳಾರಿಯಿಂದ ಸೋತು ಕೆಲಸವಿಲ್ಲದೆ ಖಾಲಿ ಇರುವ ಇನ್ನೊಬ್ಬ
ಕಾರ್ಯಕರ್ತ ಎನ್, ವೈ, ಹನುಮಂತಪ್ಪ ಅವರನ್ನು ನೇಮಿಸಿದ್ದು ಉತ್ತರ ಕರ್ನಾಟಕದವರಾದ ಅವರಿಗೂ ನೆರವಾಗಿದ್ದಾರೆ. ಅಲ್ಲದೆ ನೆರೆಪರಿಹಾರ ಅಕೌಂಟಿನಲ್ಲಿ ಇನ್ನೂ ನಾಲ್ಕು ಲಕ್ಷ ಹಣ ಬಾಕಿ ಉಳಿದಿದೆ ಆದರಿಂದ ಎನ್,ವೈ, ಹನುಮಂತಪ್ಪ ಅವರು ತಮ್ಮ
ತನಿಕೆಯ ವೆಚ್ಚಕ್ಕಾಗಲೀ,ಓಡಾಟದ ವೆಚ್ಚಕ್ಕಾಗಲಿ ಚಿಂತಿಸಬೇಕಿಲ್ಲ ಎಂದು ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ತಾವೆ ಮಾಡಿದ ಸಮಾಜಸೇವೆಯನ್ನು ತಮ್ಮದೇ ಪಾರ್ಟಿಯ ಕಾರ್ಯಕರ್ತರಿಂದ ತನಿಗೆ
ಮಾಡಿಸುವ ನಿಷ್ಪಕ್ಷಪಾತ ನಿಲುವನ್ನು ತಳೆದ ಸತ್ಯಸಂದರ ಪಾಲಿಗೆ ಸೇರಿಹೊಗಿದ್ದಾರೆ.

ಆರ್, ವಿ, ದೇಶಪಾಂಡೆ ಅವರಿಗಿರುವ ಆರ್ಥಿಕ ಚಿಂತನೆ, ಪ್ರಾಮಾಣಿಕತೆ, ದೇಶದ ಭವಿಷ್ಯತ್ತಿನ ಕುರಿತ ದೂರದೃಷ್ಠಿ, ಮತ್ತು ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸುವ ನೈಪುಣ್ಯತೆ ಇತ್ಯಾದಿಗಳ ಆದಾರದ ಮೇಲೆ ಅವರನ್ನು
ಪ್ರಧಾನಿಯನ್ನಾಗೆ ಮಾಡಬೇಕು ಎಂಬುದು ಕನ್ನಡಿಗರ ಒಕ್ಕೊರಲಿನ ದ್ವನಿಯಾಗಿದೆ

ದೇಶ ಸಂಕಷ್ಠದಲ್ಲಿರು ಸಂದರ್ಭದಲ್ಲೂ ದೇಶಪಾಂಡೆ ಅವರ ಕುಟುಂಬ ಪ್ರತಿ ವರ್ಷ ಶೇಕಡಾ 100 ಜಿಡಿಪಿ ಕಾಯ್ದುಕೊಂಡಿದೆ ಎಂಬ ಮತ್ತೊಂದು ಸಾಧನೆಯನ್ನು ಗಮನಿಸಿ,
ಅವರು ದೇಶವನ್ನು ಅಷ್ಟೇ ಪ್ರಗತಿಯಲ್ಲಿ ಮುಂದುವರೆಸಲಿದ್ದಾರೆ ಎಂಬುದು ಗಾಂಧಿ ಕುಟುಂಬದ ಗಮನ ಸೆಳೆದಿದೆ.
ಮುಂದೆ ಕೂಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ ನಂತರ ಪ್ರಧಾನಿ ಹುದ್ದೆ ಅಲಂಕರಿಸಿ ಎಂಬ ಮನವಿ ನೀಡಬೇಕು ಎಂಬುದು ಕನ್ನಡಿಗರ ಹಕ್ಕೊತ್ತಾಯವಾಗಿದೆ.
ತಮ್ಮ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ಕೂಡ ಶುಭಕಾಮನೆಗಳನ್ನು ರವಾನಿಸಿರುವುದರಿಂದ ದೇಶಪಾಂಡೆ ರೋಮಾಂಚನಕ್ಕೆ ಒಳಗಾಗಿದ್ದಾರೆ.

2 comments:

  1. ಈ ದೇಶಪಾಂಡೆ ಮುಂತಾದವರೆಲ್ಲಾ ಜೋಕರ್‌ಗಳು. ನಮ್ಮ ದೇಶದಲ್ಲಿ ನಾವೆಲ್ಲಾ ಹೆಮ್ಮೆ ಪಡುವಂತ ಒಬ್ಬ ರಾಜಕಾರಣಿ ಇದ್ದಾನಾ ಹೇಳೀ.

    -ಶಶಿಧರ್

    ReplyDelete
  2. Everyone has to think before giving relief fund.. He teach us a lesson..

    ReplyDelete