Monday, December 14, 2009

ಮಿಸ್ ಯು, ರಾಜಶೇಖರ ರೆಡ್ಡಿ.

ಆಂದ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ್ದ ಕಾಲಕ್ಕೆ ತಣ್ಣಗಿದ್ದ ತೆಲಂಗಾಣ ರಾಜ್ಯದ ವಿಭಜನೆ ವಿಚಾರ ಈಗ ಧಿಡೀರನೆ ಎದ್ದು ಕೂತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ತಾನು ನಾಯಕರನ್ನು ಸೃಷ್ಟಿಸಬಲ್ಲೇ ಎಂಬ ಅಹಮ್ಮು ಈಗಿನ ತೆಲಂಗಾಣ ವಿಭಜನೆ ಆದ ನಂತರ ಬುಗಿಲೆದ್ದ ಪ್ರತಿಭಟನೆಗಳು, ಹಿಂಸಾಚಾರದ ನಂತರ ಕಡಿಮೆ ಆಗಿದೆ ಎನ್ನಬೇಕು. ವಿಭಜನೆ ವಿರೋಧಿಸಿ ಕಾಂಗ್ರೆಸ್ , ಮತ್ತು ಟಿಡಿಪಿಯ ಸಾಲು ಸಾಲು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೃಷ್ಠಿಸಿದ ನಾಯಕ ರೋಸಯ್ಯ ತಮ್ಮ ಅಗಾಧ ಅನುಭವದ ಮದ್ಯೆಯೂ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.

ಈ ಪ್ರಕರಣ ನಂತರವಾದರೂ ತಿಳಿಯುವ ಸಂಗತಿ ಎಂದರೆ ನಾಯಕರನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ ಅವರು ಹುಟ್ಟುತ್ತಾರೆ ಅಂತ. ನನ್ನ ಗ್ರಹಿಕೆಯಲ್ಲಿ ರಾಜಕಾರಣದಲ್ಲಿ ನಾಲ್ಕು ವರ್ಗದ ಜನ ಇರುತ್ತಾರೆ, ಅವರಲ್ಲಿ ಮೊದಲ ವರ್ಗ ರಾಜಕಾರಣಿಗಳು, ಎರಡನೇ ವರ್ಗ ಲೀಡರ್ ಗಳು ಮೂರನೆ ವರ್ಗ ಸ್ಟೇಟ್ಸ್ ಮನ್ ಗಳು ನಾಲ್ಕನೇ ವರ್ಗ ವಿಶನರಿಗಳು. ಇಂಡಿಯಾದ ರಾಜಕಾರಣದಲ್ಲಿ ಮುಕ್ಕಾಲು ಭಾಗ ರಾಜಕಾರಣಿಗಳೇ ಇದ್ದಾರೆ. ಅಲ್ಲಲ್ಲಿ ಮಾಯಾವತಿ,ರಾಜಶೇಖರರೆಡ್ಡಿ, ಅಂತ ನಾಯಕರು ಇದ್ದಾರೆ ಅವರನ್ನು ಸುಲಭವಾಗಿ ರೀಪ್ಲೇಸ್ ಮಾಡೋದಕ್ಕೆ ಸಾದ್ಯವಾಗೋಲ್ಲ, ರಾಜಕಾರಣದಿಂದ ಆಚೆಗೆ ಹೋಗಿ ರಾಷ್ಠ್ರದ ಆಸ್ತಿ ಯಂತೆ ಕಾಣಿಸಿಕೊಳ್ಳುವ ಕೆಲವರಿದ್ದಾರೆ ಮಾಜಿ ಪ್ರಧಾನಿ ವಾಜಪೇಯಿ,ನರಸಿಂಹ ರಾವ್ ಪ್ರಣಬ್ ಮುಖರ್ಜಿ,ಇಂತಹವರಿರಬಹುದು, ಇನ್ನು ವಿಶನರಿಗಳು ನಮ್ಮ ಮನಮೊಹನ್ ಸಿಂಗ್ ಅಂತಹವರಿಬಹುದು, ವಾಸ್ತವ ಅಂದರೆ ವಿಶನರಿಗಳು ಲೀಡರ್ ಆಗೋದಿಕ್ಕೆ ಸಾದ್ಯ ಇಲ್ಲ ಅದಕ್ಕೆ ಮನಮೋಹನ್ ಸಿಂಗ್ ಉದಾಹರಣೆ, ಅವರು ಈವರೆಗೆ ಯಾವ ಚುನಾವಣೆಯನ್ನೂ ಎದುರಿಸಲಿಕ್ಕೆ ಹೋಗಿಲ್ಲ. ಈ ನಾಲ್ಕು ವರ್ಗಗಳು ಒಂದಕ್ಕೊಂದು ಬಿನ್ನ ಎಲ್ಲರೂ ಎಲ್ಲರಿಗೂ ಪೂರಕವಾಗಿರುತ್ತಾರೆ, ಒಬ್ಬರಿಂದ ಸಾದ್ಯವಾದದ್ದು ಮತ್ತೊಬ್ಬರಿಂದ ಸಾದ್ಯವಾಗುವುದಿಲ್ಲ.


ಒಬ್ಬ ನಾಯಕನ ಅಗಲಿಕೆ ಏನೆಲ್ಲ ಆಗುತ್ತೆನ್ನೊದಕ್ಕೆ ಇದನ್ನ ಹೇಳಬೇಕಾಯಿತು ಒಬ್ಬ ರಾಜಶೇಕರ ರೆಡ್ಡಿ ಇದ್ದಿದ್ದರೆ ಆಂದ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ತೀರ್ವವಾಗುತ್ತಿರಲಿಲ್ಲ ಅದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗಣಿ ರೆಡ್ಡಿಗಳು ಈಗಿನ ಸ್ಥಿತಿಗೆ ತರುತ್ತಿರಲಿಲ್ಲ ರಾಜಕಾರಣದಲ್ಲಿ ಯಾವ್ಯಾವುದಕ್ಕೊ ಯಾವುದೋ ಲಿಂಕ್ ಆಗಿರುತ್ತವೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಸೃಷ್ಠಿಸುತ್ತೇವೆ ಎಂಬ ಹೇಳಿಕೆ ನಂತರ ಆಂದ್ರದಲ್ಲಿ ಉಂಟಾದ ಸಮಸ್ಯೆಗಳಿಂದ ಗಲಿಬಿಲಿಗೊಂಡ ಸೋನಿಯಾಗಾಂದಿ ತೆಲಂಗಾಣ ಬಾಗದ 11 ಮಂದಿ ಎಂಪಿಗಳನ್ನು ಕರೆದು ಹೇಳಿದರಂತೆ ನೀವು ನನ್ನ ಮಿಸ್ ಗೈಡ್ ಮಾಡಿದ್ದೀರಿ, ರಾಜಶೇಖರ ರೆಡ್ಡಿ ನನಗೆ ಒಮ್ಮೆ ಹೇಳಿದ್ದರು ನನಗೆ ಆಂದ್ರದ ಜನತೆಯ ನಾಡಿ ಮಿಡಿತ ಗೊತ್ತು, ಸದ್ಯಕ್ಕೆ ತೆಲಂಗಾಣದ ಚರ್ಚೆ ಬೇಡ ಚುನಾವಣೆಯಲ್ಲಿ ಗೆಲ್ಲೋದು ನಾವೆ ಅಂತ.

ನಾವು ಈಗ ರಾಜಶೇಖರ ರೆಡ್ಡಿ ಅವರನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ.

ರಾಜಶೇಖರ ರೆಡ್ಡಿ ಸತ್ತ ಮೇಲೆ ಅವರು ಒಳ್ಳೆಯವರಾ, ಕೆಟ್ಟವರಾ, ಬ್ರಷ್ಟರಾ ಅನ್ನೋ ನೂರಾರು ಚರ್ಚೆಗಳು ನಡೆದಿವೆ ಅದು ಬೇರೆಯದೇ ವಿಶಯ ಆದರೆ ಆಂದ್ರಪ್ರದೇಶದ ಪಾಲಿಗೆ ರಾಜಶೇಖರ ರೆಡ್ಡಿ ಒಬ್ಬ ಅನಿವಾರ್ಯ ನಾಯಕನಾಗಿದ್ದ ಅನ್ನೊದನ್ನು ಅಲ್ಲಗಳೆಯಲು ಸಾದ್ಯವಿಲ್ಲ, ನನ್ನ ಆಂದ್ರದ ಪತ್ರಕರ್ತ ಗೆಳೆಯ ಸುಧೀರ್ ಹೇಳುತ್ತಿದ್ದ, ರಾಜಶೇಖರ ರೆಡ್ಡಿ ಒಳ್ಳೆಯರ ಪಾಲಿಗೆ ಒಳ್ಳೆಯವ, ಕೆಟ್ಟವರ ಪಾಲಿಗೆ ಕೆಟ್ಟವ, ವಿರೋಧಿಗಳ ಪಾಲಿಗೆ ಕ್ರೂರಿ ಆಗಿದ್ದ ಅಂತ. ಬಹುಶ ಒಬ್ಬ ನಾಯಕ ಹುಟ್ಟೋದು ಇದೇ ಪ್ರಕ್ರಿಯೆಯಲ್ಲಿ ವಿರೋಧಿಗಳನ್ನು ಪ್ರೀತಿಸುವವನು ಸಂತ ಆಗಬೇಕಾಗುತ್ತದೆ, ರಾಜ್ಯ ಕಟ್ಟುವ ದೊರೆ ಆಳದಲ್ಲಿ ಕ್ರೂರಿ ಆಗಿರುತ್ತಾನೆ ಅದು ರಾಜಶೇಖರ ರೆಡ್ಡಿಗೆ ಇತ್ತು ಅಂತ ಕಾಣುತ್ತದೆ, ಈಗ ತೆಲಂಗಾಣ ಬೇಕು ಅನ್ನುತ್ತಿರುವ ಕಾಂಗ್ರೆಸ್ ಎಂಪಿಗಳು ಅವರಿದ್ದ ಕಾಲಕ್ಕೆ ಬಾಯಿ ಬಿಡುತ್ತಿರಲಿಲ್ಲ.

ಕರ್ನಾಟಕದಿಂದ ಕೊಡಗನ್ನೋ, ಹೈದ್ರಾಬಾದ್ ಕರ್ನಾಟಕನ್ನೋ ಒಡೆದು ಇಬ್ಬಾಗ ಮಾಡುವ ಸಂಗತಿಯನ್ನು ನೆನಸಿಕೊಳ್ಳುವುದು ಎಷ್ಟು ಕಷ್ಟವೋ ಅಂತದೇ ಕಷ್ಟ ಈಗ ಆಂದ್ರ ಪ್ರದೇಶದ ಜನ ಎದುರಿಸುತ್ತಿದ್ದಾರೆ, ಒಡೆಯುವುದು ಸುಲಭ ಒಟ್ಟಿಗೆ ಕರೆದೊಯ್ಯುವುದು ಕಷ್ಟ. ಮಿಸ್ ಯು ರಾಜಶೇಖರ ರೆಡ್ಡಿ.

4 comments:

  1. ಚೆನ್ನಾಗಿದೆ ಲೇಖನ. ಅದರೇ ನನಗೇನೋ ವೈಎಸ್ಸಾರ್ ಆ೦ಧ್ರಕ್ಕೆ ಅನಿವಾರ್ಯ ಅ೦ಥಾ ಅನ್ನಿಸುತ್ತಾ ಇಲ್ಲ.

    ReplyDelete
  2. Days are not far away that people of Kodagu and Huderabad Karnataka may swing into action for separate state, if at all Telangana is made a state. But, it is even too immeture to state that the Congress government in Andhra would do so. But, there a sign in the incident that unfolds that YSR would have brilliantly tackled the incident if he were alive. No second thought in declaring that YSR knew what to do when, if necessary: like a typical Indian politician. Let Andhra bounce back to normalcy at least for the poeple's sake. An Andhra citizen really misses YSR. We too .

    ReplyDelete
  3. YSR as all Andhra People used to call him,is a true leader as you said. This Telangana issue is really a tricky issue in front of both governments (state and central). if he had been alive KCR would-not have raised this Telangana topic. One can see clips of YSR attacking KCRs statements over telangana in You Tube by typing "YSRs comments KCR telangana issue". He is one of the powerful leaders I have seen in my life....

    ReplyDelete